Friday, September 10, 2010

ಮಾಧ್ಯಮಗಳ ಪ್ರಭಾವ

ಇತ್ತೀಚೆಗೆ ನಮ್ಮ ಸಮಾಜಲ್ಲಿ ಮಾಧ್ಯಮದ ಮಹತ್ವ  ಯಾವಗಂದಲೂ ಹೆಚ್ಚಾವುತ್ತಾ ಇಪ್ಪದರ  ನಾವು ಗಮನಿಸಿಕ್ಕು.  ಸಮಾಜದ ಮೇಲೆ ಮಾಧ್ಯಮಂಗಳ ಪ್ರಭಾವ  ಯಾವಾಗಲೂ ಸಕಾರಾತ್ಮಕವಾಗಿಯೇ ಇರ್ತಿಲ್ಲೆ. ಹಾಂಗಾಗಿ  ಈ ಬಗ್ಗೆ ಒಂದು ಅಭಿಪ್ರಾಯ  ವ್ಯಕ್ತಪಡಿಸುದು ಅಗತ್ಯ ಹೇಳಿ ಕಾಣ್ತು.
 
ಮಾಧ್ಯಮಂಗಳ ಪ್ರಯತ್ನಂದಾಗಿ  ಸುಮಾರು ಸಾಮಾಜಿಕ  ಮಹತ್ವದ ವಿಷಯಂಗೊ ಗಮನಾರ್ಹ ಪ್ರಾಧಾನ್ಯ ಪಡದು ಸುಖಾಂತ ಕಂಡದು ಸಮಾಧಾನಕರ ಬೆಳವಣಿಗೆ.    ಪ್ರಭಾವಿ ವ್ಯಕ್ತಿಗಳ ಕೈವಾಡಂದ ನಡೆದ ಕೆಲವು ಕೊಲೆ ಪ್ರಕರಣಂಗೊ ಮಾಧ್ಯಮಂಗಳ ಒತ್ತಡಂದಾಗಿ ನ್ಯಾಯಾಲಯಂಗಳಲ್ಲಿ ಹೊಸ ತಿರುವು  ಪಡದು ನಿಜವಾದ ಅಪರಾಧಿಗೊಕ್ಕೆ ಶಿಕ್ಷೆ ಆಗಿ ನ್ಯಾಯ ಸಿಕ್ಕುವ ಹಾಂಗೆ ಆದ್ದದೂ ಸಕಾರಾತ್ಮಕ ಪ್ರಭಾವ.   ಇಷ್ಟೆಲ್ಲಾ ಧನಾತ್ಮಕ ಬೆಳವಣಿಗೆಗಳೊಟ್ಟಿಂಗೇ,  ಮಾಧ್ಯಮ ಸಮೂಹದ  ವಾಹಿನಿಗಳ  ಮಧ್ಯೆ  ಮೇಲಾಟದ ಕುಚೇಷ್ಟೆಯನ್ನೂ ನೋಡ್ತಾ  ಇದ್ದು.  ಕೇವಲ ಸಾಧಾರಣ ಸುದ್ದಿಗಳನ್ನೂ  "ಸ್ಪೋಟಕ ವಾರ್ತೆ"ಗಳಾಗಿ ಪ್ರಸಾರ  ಮಾಡಿ ವೀಕ್ಷಕರ ಸಂಖ್ಯೆಯ  ಹೆಚ್ಚುಮಾಡಿಗೊಂಬ  ಹುನ್ನಾರದ  ಬಗ್ಗೆಯೂ ಬೇಕಾದಷ್ಟು ಚರ್ಚೆ ನಡದ್ದು. ಮುಂಬೈಲಿ   ನಡದ ಭಯೋತ್ಪಾದಕರ  ಧಾಳಿಯಂತಹ  ಗಂಭೀರ ಸಂದರ್ಭಲ್ಲಿ  ಘಟನಾ ಸ್ಥಳಂದಲೇ  ನೇರ ಪ್ರಸಾರ ಮಾಡಿ   ರಾಷ್ಟ್ರೀಯ  ಹಿತವ ಕಡೆಗಣಿಸಿದ ವಾಹಿನಿಗಳ ಅಪಚಾರವನ್ನೂ ಸಾರ್ವಜನಿಕರು ಖಂಡಿಸಿದ್ದವು.  ಸರಿಯಾದ ವಾರ್ತೆಯ ಸಮಾಜಕ್ಕೆ ಒದಗಿಸುವ   ಪ್ರಾಥಮಿಕ  ಕರ್ತವ್ಯವ ಬದಿಗೊತ್ತಿ, ಮಾಧ್ಯಮದ ಪ್ರಭಾವವನ್ನೇ  ವ್ಯವಹಾರದ ಭಂಡವಾಳವಾಗಿ ಉಪಯೋಗಿಸುದು  ಸಾಮಾನ್ಯ ಪ್ರಕ್ರಿಯೆ ಆಗಿಬಿಟ್ರೆ,  ಅದು ಸಮಾಜಕ್ಕೆ ಹಾನಿಕಾರಕವೇ ಸರಿ.  ಇಂತ ಸಂದರ್ಭಲ್ಲಿ  ಮಾಧ್ಯಮದ ಪ್ರಾಮಾಣಿಕತೆ ಪ್ರಶ್ನಾರ್ಹ ಆವುತ್ತು.   ಅಮಿತಾಭ್  ಬಚ್ಚನ್  ನಟಿಸಿದ್ದ  ರಣ್ ಚಿತ್ರ ಇದೇ ಸಂದೇಶವ ಒಳಗೊಂಡಿತ್ತು.  ಹಾಂಗಾರೆ ಮಾಧ್ಯಮಂಗೊ ತಮ್ಮ ಪ್ರಭಾವಂದ  ಸಮಾಜದ ಚಿಂತನೆಲಿ ಧನಾತ್ಮಕತೆಯನ್ನೂ ದೇಶಪ್ರೇಮವನ್ನೂ  ಹೆಚ್ಚಿಸುಲೆ ಎಡಿಗೋ ?
 
ಕೊಲೆ, ಸುಲಿಗೆ, ಭಯೋತ್ಪಾದನೆ, ಸಂಸತ್ತು - ವಿಧಾನ ಮಂಡಲಂಗಳಲ್ಲಿ  ಕೋಲಾಹಲ, ಡೆಂಗು, ಅತ್ಯಾಚಾರ, ನಕ್ಷಲ್ ವಾದ ಇತ್ಯಾದಿಗಳೇ ಮುಖಪುಟದ ಸಾಮಾನ್ಯ  ಸುದ್ದಿಗಳಾಗಿಪ್ಪಗ  ಉದಿಯಪ್ಪಗ ಎದ್ದು ಪತ್ರಿಕೆ ಓದುದೇ ಬೇಡ ಹೇಳಿ ಆವುತ್ತಿಲ್ಯೋ ?   ಈ ಸಮಸ್ಯೆ ತಪ್ಪುಸಲೆ  ಹೇಳಿಯೇ  ಪತ್ರಿಕೆಗಳ  ಹಿಂದಾಣ ಪುಟಂದ ಓದುವ ಅಭ್ಯಾಸ ಬೆಳೆಸಿಗೊಂಡ ಎಷ್ಟೋ ಜನ ವಾಚಕರಿರವೋ ?  ಆ  ಪುಟಗಳಲ್ಯಾದರೂ  ಒಬ್ಬ ಕ್ರೀಡಾಪಟುವೋ, ಕೈಗಾರಿಕೋದ್ಯಮಿಯೋ, ಸಂಗೀತಗಾರನೋ  ಮಾಡಿದ ಸಾಧನೆಯ ಸುದ್ದಿಯ ಓದಿ  ಸ್ಪೂರ್ತಿ  ಪಡವ ಅವಕಾಶ ಸಿಕ್ಕಲಿ ಹೇಳಿ ಹಂಬಲಿಸಿದರೆ ಎಂತ ತಪ್ಪು ?  ನಕಾರಾತ್ಮಕ ಪ್ರಭಾವಂಗಳೇ ಹೆಚ್ಚಾಗಿಪ್ಪ ಇಂದ್ರಾಣ  ಸಮಾಜಲ್ಲಿ  ಸ್ಪೂರ್ತಿದಾಯಕ ವಾತಾವರಣದ ಸೃಷ್ಟಿ ಮಾಡುದು ಹೇಂಗೆ ? ಮಾಧ್ಯಮಂಗೊ ಸಾಮೂಹಿಕವಾಗಿ ದೃಢ ಮನಸ್ಸು ಮಾಡಿರೆ ಈ ವಿಷಯಲ್ಲಿ ಖಂಡಿತವಾಗಿ ಅಪಾರ ಕೊಡುಗೆ  ಕೊಡ್ಳೆಡಿಗು.
ದುಷ್ಟ ರಾಜಕಾರಣಿಗೊ, ಭ್ರಷ್ಟ ವ್ಯವಸ್ಥೆ, ಕುಲಗೆಟ್ಟ ಮಾರ್ಗಂಗೊ, ವಾಹನ ದಟ್ಟಣೆ, ಪರಿಸರ ಮಾಲಿನ್ಯ, ವಿದ್ಯುತ್  ಕಡಿತ ಇತ್ಯಾದಿ   ಹೊಲಸುಗಳ ಹೊರತಾಗಿಯೂ   ಸ್ವಂತ ಜೀವನ ಸಂಗ್ರಾಮಲ್ಲಿ   ವಿಜಯಿಗಳಾಗಿ  ಇತರರಿಗೆ ಮಾರ್ಗದರ್ಶಿಗ ಹಾಂಗಿಪ್ಪ    ವ್ಯಕ್ತಿಗೊ    ನಮ್ಮ ಮಧ್ಯೆ ಬೇಕಾದಷ್ಟಿದ್ದವು. ಇಂತ ವ್ಯಕ್ತಿಗಳ ಭಾವಂಚಿತ್ರಂಗೊ ನಮ್ಮ ಪತ್ರಿಕೆಗಳಲ್ಲಿ ರಾರಾಜಿಸುವ  ಹಾಂಗಾಗಲಿ.  ಒಳ್ಳೆ ಕೆಲಸ ಮಾಡುವ ಮಂತ್ರಿಗಳ ಹೆಸರು ಮಾಂತ್ರ ಎದುರಾಣ ಪುಟಲ್ಲಿ ಬರಲಿ.  ಹೀಂಗೆ  ಧನಾತ್ಮಕ ವಾರ್ತೆಗಳ ಮುಖಪುಟಲ್ಲಿ ಓದುವ ಅವಕಾಶ ಹೆಚ್ಚು ಸಿಕ್ಕುವ ಹಾಂಗಾದರೆ, ಕರ್ನಾಟಕದ ಮುಕ್ಕೋಟಿ ಜನರಿಂಗೆ  ಅತ್ಯಗತ್ಯವಾದ  ಹೊಸ ಸುಪ್ರಭಾತ  ಕೇಳಿಸಿದ ಪುಣ್ಯ  ಬಕ್ಕು.  ಮತ್ತೆ, ಕೇವಲ ಮುಖಪುಟಲ್ಲಿ ಶುದ್ದಿ ಮಾಡುದಕ್ಕಾಗಿಯೇ ಬಡಬಡಿಸಿ, ಗುಲ್ಲು ಎಬ್ಬಿಸುವ ರೌಡಿ ರಾಜಕಾರಣಿಗೊಕ್ಕೆ  ಸಂಬಂಧಿಸಿದ ವಾರ್ತೆಗಳ ಹಿಂದಿನ ಪುಟಂಗೊಕ್ಕೆ ವರ್ಗಾವಣೆ ಮಾಡಿರೆ ಅಂತಹವಕ್ಕೆ  ಪಾಠ ಕಲಿಸಿದ ಹಾಂಗಕ್ಕು.
 
ಆದರೆ, ಪುಚ್ಚೆಯ ಕೊರಳಿಂಗೆ ಘಂಟೆ ಕಟ್ಟುವ ಕೆಲಸ ಮಾಡುದು ಆರು ? ಸುದ್ದಿ ಮಾಧ್ಯಮ ವ್ಯವಹಾರದ ಸಂತೆ ಆಗಿಪ್ಪಗ ಎಲ್ಲೋರಿಂಗೂ ಸ್ಪರ್ಧೆಲಿ ಮುಂದೆ ಹೋಪ ಚಾಳಿಯೇ ಹೊರತು, ಸಮಾಜದ  ಚಿಂತೆ ಇಪ್ಪ ಹಾಂಗೆ ಕಾಣ್ತಿಲ್ಲೆ.  ಆದಷ್ಟು ಬೇಗ ಇನ್ನೊಬ್ಬ ರಾಮನಾಥ ಗೋಯೆಂಕ ಹುಟ್ಟಿ ಬರಲಿ.
 
-ಬಾಪಿ
 
 
 
 
 

Saturday, July 31, 2010

ಮೈ ನೇಮ್ ಈಸ್ ಖಾನ್

ರಜ ಸಮಯ ಮದಲು ಹೀಂಗಿಪ್ಪ ಹೆಸರಿನ ಒಂದು ಸಿನೆಮಾ ಬಂದಿತ್ತು ಹೇಳಿ ಶುದ್ದಿ.  ಅಲ್ಲಿಲ್ಲಿ ಕೇಳಿ ತಿಳುದ ಮಟ್ಟಿಂಗೆ "ಮುಸ್ಲಿಮರೆಲ್ಲೋರೂ ಆತಂಕವಾದಿಗೊ ಅಲ್ಲ" ಹೇಳುವ ಹಳಸಲು ವಾದವ ಮಂಡಿಸುವ ಪ್ರಯತ್ನ ಮಾಡಿದ ಹಾಂಗೆ ಕಾಣ್ತು.  ಅಲ್ಲಾಹುವಿನ ಲೀಲೆಯೋ ಏನೋ, ಈ ಸಿನೆಮಾ ಬಿಡುಗಡೆ ಆದ ಶುಭ ಸಂದರ್ಭಲ್ಲಿಯೇ ಪೂನಾದ ಓಶೋ ಆಶ್ರಮದ ಹತ್ತರೆ ಇಪ್ಪ ಜರ್ಮನ್ ಬೇಕರಿಲಿ  ಒಂದು  ವಿಧ್ವಂಸಕ ಕೃತ್ಯ ನಡದತ್ತು.  ಇದು ತಿರುಗ ಯಥಾಪ್ರಕಾರ, ಮುಸ್ಲಿಮ್  ಆತಂಕವಾದಿಗಳದ್ದೇ ದುಷ್ಕೃತ್ಯ ಹೇಳಿಯೂ ಈಗಾಗಲೇ ಗೊಂತಾಯಿದು.
 
ಅಮೇರಿಕಕ್ಕೆ ಹೋಗಿಪ್ಪಗ ಶೂ ಕಳಚ್ಚುಲೆ ಹೇಳಿ ತಪಾಸಣೆ ಮಾಡಿದ್ದಲ್ಲದ್ದೆ ಪ್ರತ್ಯೇಕ  ವಿಚಾರಣೆಗೆ ಒಳಪಡಿಸಿದ್ದದು  ಶಾರುಖ್  ಖಾನಿಂಗೆ ಭಾರೀ ಅವಮಾನದ ಸಂಗತಿ ಆಗಿ ಹೋತು ಹೇಳಿ ಕಾಣ್ತು.  ಇದರ ಹಿಡ್ಕೊಂಡು ಅವನ ಆಪ್ತ ಸ್ನೇಹಿತರಲ್ಲಿ ಒಬ್ಬನಾದ ಕರಣ್  ಜೋಹರ್ ಹೇಳುವವ ದೊಡ್ಡ ಸಿನೆಮಾವನ್ನೇ ಮಾಡಿ ಬಿಟ್ಟ.  ಸಾವಿರಾರು ಹಿಂದುಗೊ  ಮುಸ್ಲಿಮರ ಉಗ್ರವಾದಂದಾಗಿ ಸತ್ತದು, ಲಕ್ಷಾಂತರ ಜನ ಹಿಂದೂಗೊ ಜಮ್ಮೂವಿಂದ ಜೀವಭಯಂದ ಓಡಿ ಹೋಗಿ ನಿರಾಶ್ರಿತರಾಗಿ ಬದುಕ್ಕೆಕ್ಕಾಗಿ ಬಂದದು ಇತ್ಯಾದಿಗಳ ಬಗ್ಗೆ ಇಷ್ಟರವರೆಗೆ ಯಾರಿಂಗೂ ಸಿನೆಮಾ ಮಾಡೆಕ್ಕು ಹೇಳಿ ಕಂಡಿದಿಲ್ಲೆ !
 
ಅಮೇರಿಕ ಮತ್ತು ಭಾರತ ದೇಶಂಗಳಲ್ಲಿ ಭಯೋತ್ಪಾದನೆಗೆ ಸಂಬಂಧಿಸಿದ ಧೋರಣೆಗಳ ತುಲನೆ ಮಾಡಿರೆ, ಈ ಗಂಭೀರ ವಿಷಯಕ್ಕೆ  ಸಂಬಂಧಿಸಿ ನಮ್ಮ ಮನೋಸ್ಥಿತಿಲಿಪ್ಪ ಇಪ್ಪ ವ್ಯತ್ಯಾಸ  ಸ್ಪಷ್ಟವಾಗಿ ಗೊಂತಾವುತ್ತು.  ೯/೧೧ ಘಟನೆಯ ನಂತರ ಅಮೇರಿಕಲ್ಲಿ ಒಂದುದೇ ಹಾಂಗಿಪ್ಪ ದುಷ್ಕೃತ್ಯ ಮರುಕಳಿಸಿದ್ದಿಲ್ಲೆ.  ಅದೇ ನಮ್ಮಲ್ಲಿ ೨೬/೧೧ ರ ಮೊದಲೂ, ಮತ್ತೆಯೂ ಯಥಾಪ್ರಕಾರ  ಬಾಂಬುಗೊ ಹೊಟ್ಟುತ್ತಲೇ ಇದ್ದು.  ಅಲ್ಲಿ ಸಂಶಯ ಇಪ್ಪವರ ನಿರ್ದಾಕ್ಷಿಣ್ಯವಾಗಿ ತಪಾಸಣೆ ಮಾಡ್ತವು.  ಇಲ್ಲಿ ಭಯೊತ್ಪಾದನೆಗೆ ಸಂಬಂಧಿಸಿದ ವಿಷಯಲ್ಲಿ ನ್ಯಾಯಾಲಯಲ್ಲಿ ಶಿಕ್ಷೆ ಘೋಷಣೆ ಆದವರ ಮೇಲುದೇ - ಅವು ಮುಸ್ಲಿಮರಾಗಿದ್ದರೆ - ಯಾವ  ಕಾರ್ಯಾಚರಣೆಯುದೇ ಆವುತ್ತಿಲ್ಲೆ.   ಹೀಂಗಿಪ್ಪ ಘಟನೆಗೊ ಆದ ನಂತ್ರ ಇದರ ಮಾಡಿದವು ಮುಸ್ಲಿಮ್  ಉಗ್ರವಾದಿಗೊ ಹೇಳಿ ಗೊಂತಾದ ಮೇಲುದೇ, ಮುಸ್ಲಿಮ್  ಧರ್ಮ ಮತ್ತು ಆತಂಕವಾದಕ್ಕೆ ಯಾವುದೇ ಶಾಶ್ವತವಾದ ಕೊಂಡಿಯ ಗೆಂಟು ಬೀಳದ್ದ ಹಾಂಗೆ ಕೋಂಗ್ರೇಸು ಸರ್ಕಾರ ಮತ್ತು ಅವರ ಕೃಪಾಪೋಷಿತ ಮಾಧ್ಯಮದವು ಭಾರೀ ಜಾಗ್ರತೆ ಮಾಡ್ತವು.  ನಮ್ಮ ದೇಶಲ್ಲಿ ಇಷ್ಟು ಸರ್ತಿ ಬಾಂಬು ಹೊಟ್ಟುಸಿದ  ಮುಸ್ಲಿಮ್  ಉಗ್ರವಾದಿಗಳ   ಹಿಡಿವ ಕೆಲಸಲ್ಲಿ ಆಗಲೀ, ಕಾಶ್ಮೀರಲ್ಲಿ ನುಸುಳಿ ಬಪ್ಪವರ ತಡವ ವಿಷಯಲ್ಲಿ  ಆಗಲೀ ಕೇಂದ್ರ ಸರಕಾರಕ್ಕೆ ಯಾವ   ಆಸಕ್ತಿಯುದೇ ಇಪ್ಪ ಹಾಂಗೆ  ಕಾಣ್ತಿಲ್ಲೆ.  ಸದ್ಯಕ್ಕೆ ಸರಕಾರದ ವತಿಂದ ಅತಿ ಅಂಬ್ರೆಪ್ಪಿಲ್ಲಿ ಆವುತ್ತಾ ಇಪ್ಪ ಕೆಲಸ ಎಂತ ಹೇಳಿರೆ, ಗುಜರಾತಿಲ್ಲಿ ಪೋಲೀಸರ ಗುಂಡಿಂಗೆ ಬಲಿಯಾಗಿ ಸತ್ತ ಸೋರಾಬುದ್ದೀನ್  ಹೇಳುವ ಬ್ಯಾರಿ ಭಾರೀ ಒಳ್ಳೆ ಜನ, ಅವನ ಮೋದಿ ಸರಕಾರದವು ಕೊಲೆ ಮಾಡಿಸಿದ್ದದು ಹೇಳುದಕ್ಕೆ  ಸಾಕ್ಷಿ  ತಯಾರು ಮಾಡುದು !   
 
ಪ್ರಶ್ನಾತೀತ ರಾಷ್ಟ್ರ ಪ್ರೇಮ ಮತ್ತು  ದೇಶದ ವಿಷಯಲ್ಲಿ ಸಂಪೂರ್ಣ ಬದ್ಧತೆ ಇಪ್ಪ ಅಬ್ದುಲ್ ಕಲಾಂ ನ ಹಾಂಗಿಪ್ಪ ಎಷ್ಟು ಜನ ಮುಸ್ಲಿಮರು ಎಣುಸಲೆ ಸಿಕ್ಕುಗು ?  ಜನಸಂಖ್ಯೆಯ ೨೦%ದಷ್ಟು ಇಪ್ಪ ಮುಸ್ಲಿಮರಲ್ಲಿ ಎಷ್ಟು ಜನ  ವರಮಾನ ತೆರಿಗೆ ಕಟ್ಟುತ್ತವು ?  ಎಷ್ಟು ಜನ   ಸೈನ್ಯಲ್ಲಿ ಸೇವೆ ಸಲ್ಲಿಸುತ್ತವು ? ಎಷ್ಟು ಜನ  ಶಿಕ್ಷಕರಾಗಿ ಕೆಲಸ ಮಾಡ್ಳೆ  ಹೋವುತ್ತವು ? ಮುಸ್ಲಿಮ್  ಜನಾಂಗದ ಹೆಚ್ಚಿನವು ಕೋಕದ ಕಚ್ಚೋಡ, ಮೀನು ವ್ಯಾಪಾರ, ಪಂಕ್ಚರ್  ಅಂಗಡಿ, ಹಳೇ ಪೇಪರ್-ಖಾಲಿ ಸೀಸ  ಇತ್ಯಾದಿ ನಗದು ವ್ಯಾಪಾರಲ್ಲಿಯೇ ಇಪ್ಪವು.   ಇದಕ್ಕೆ ಅವು ಅಶಿಕ್ಷಿತರಾಗಿಪ್ಪದಷ್ಟೇ ಕಾರಣ ಅಲ್ಲ. ಅವಕ್ಕುದೇ ಇಂತ ನೋಡ್ಳೆ "ಪಾಪದವ" ಹೇಳಿ ಕಾಣ್ಸಿಗೊಂಬ,  ಆದರೆ ಹೆಚ್ಚು ಕಮಾಯಿ ಇಪ್ಪ, ತೆರಿಗೆ ಲೆಕ್ಕ ಹಾಕ್ಲೆಡಿಯದ್ದ ಹಾಂಗಿಪ್ಪ  ಕೆಲಸಂಗಳೇ ಬೇಕು.   
 
ಮುಸ್ಲಿಮ್ ಹುಡುಗಿಯರಿಂಗೆ  ವಿದ್ಯಾಭ್ಯಾಸ  ಖಡ್ಡಾಯ ಹೇಳಿ ಮಾಡಿದರೆ   ಆ  ಜನಾಂಗದ  ಧೋರಣೆ ಕ್ರಮೇಣ ಬದಲಪ್ಪಲೂ ಸಾಕು.  ಸುಶಿಕ್ಷಿತ ಮುಸ್ಲಿಮ್ ಮಹಿಳೆ ತನ್ನ ಕುಟುಂಬವನ್ನೂ, ಮುಂದಿನ ತಲೆಮಾರನ್ನೂ ಸರಿಯಾಗಿ ನಡೆಶುಗು.  ಆದರೆ ಇದಕ್ಕೆ ಮುಸ್ಲಿಮರ ಧರ್ಮಗುರುಗಳ ಆಕ್ಷೇಪ ಬಕ್ಕು-  ಜನರಲ್ಲಿ  ವೈಜ್ಞಾನಿಕ  ಚಿಂತನೆ  ಹೆಚ್ಚಾದಷ್ಟೂ   ತಮ್ಮ  ಕಾರುಬಾರು ಕಮ್ಮಿ ಅಕ್ಕು ಹೇಳುವ ಹೆದರಿಕೆಂದ ! ಹಾಂಗಾಗಿ ಸರಕಾರಕ್ಕೆ ಈ ಕೆಲಸವ   ಭಾರೀ ಜಾಣತನಂದ ಮಾಡೆಕ್ಕಾಗಿ ಬಕ್ಕು. ಉದಾಹರಣೆಗೆ, ಪದವಿ ಹಂತದ ಪರೀಕ್ಷೆ     ಮುಗುಶುವ ಮುಸ್ಲಿಮ್  ಹುಡುಗಿಯರಿಂಗೆ  ಸರಕಾರದವು  ಎಂತಾರು ಒಳ್ಳೆ ಮೊತ್ತದ ಬಹುಮಾನ ಘೋಷಣೆ  ಮಾಡಿರೆ, ಸ್ವಪ್ರೇರಣೆಂದ ಹೆಚ್ಚು ಜನ  ಉನ್ನತ ವಿದ್ಯಾಭ್ಯಾಸಕ್ಕೆ ಹೋಕು.    ಕೋಂಗ್ರೇಸಿನವಕ್ಕೆ ೬೦ ವರ್ಷಲ್ಲಿ   ಹೀಂಗಿಪ್ಪ ಸಮಾಜವ ಉದ್ಧಾರ ಮಾಡುವ ಕೆಲಸ ಮಾಡ್ಳೆ ಎಡಿಗಾಯಿದಿಲ್ಲೆ.   ಇನ್ನುದೇ  ಮಾಡುಗು ಹೇಳುವ ಆಶೆ ಖಂಡಿತಾ ಬೇಡ.   ಭಾಜಪ ಅಧಿಕಾರಲ್ಲಿಪ್ಪ ರಾಜ್ಯಂಗಳಲ್ಲಿ ಆದರೂ  ಇಂತಹ  ದೂರಗಾಮಿ ಯೋಜನೆಗೊ  ಜ್ಯಾರಿಗೆ ಬರಲಿ ಹೇಳಿ ಆಶಿಸುತ್ತೆ.

-ಬಾಪಿ
 
 
 
 
 

Tuesday, January 26, 2010

ನೆರೆಕರೆ

"ಸ್ನೇಹಿತರ ಬೇಕಾರೆ ಬದಲುಸಲಕ್ಕು ಆದರೆ ನೆರೆಕರೆಯವರ ಬದಲುಸುಲೆಡಿಯ" ಹೇಳುದು ವಾಜಪೇಯಿಯ ಪ್ರಸಿದ್ಧ ಹೇಳಿಕೆಗಳಲ್ಲಿ ಒಂದು. ಇದು ರಜ ಅನುಸರಿಸಿಗೊಂಡು ಹೋಯೆಕ್ಕು ಹೇಳುವ ಧೋರಣೆ. ಆದರೆ, ಪಾಕಿಸ್ತಾನದ ವಿಷಯಲ್ಲಿ "ಶಠಂ ಪ್ರತಿ ಶಾಠ್ಯಂ" ಹೇಳುದು ಆರೆಸ್ಸೆಸ್ಸಿನ ಸಿದ್ಧಾಂತ.  ಈ ಎರಡು ದೃಷ್ಟಿಕೋಣಂಗಳ ಸಮತೋಲನಕ್ಕಾಗಿ ವಾಜಪೇಯಿ  ಯಾವಾಗಳೂ ಬಾಯಿಲಿ "ನ ದೈನ್ಯಂ ನ ಪಲಾಯನಂ" ಹೇಳುವ ವೀರಮಂತ್ರವ ಹೇಳಿಗೊಂಡೇ ಲಾಹೋರಿಂಗೆ ಐತಿಹಾಸಿಕ  ಬಸ್ಸು ಯಾತ್ರೆ ಮಾಡಿ ಶಾಂತಿ ಪ್ರಸ್ತಾಪ ಮಾಡಿದ.   (ಇದರೆಡೆಲಿ ಜಿನ್ನಾನ ಹೊಗಳುಲೆ ಹೋಗಿ ಭಾಜಪದ ಅವಕೃಪೆಗೆ ಒಳಗಾದ ಜಸ್ವಂತ ಸಿಂಗ್  ಈ ಬಸ್ ಯಾತ್ರೆ ಎನ್ನದೇ ಯೋಚನೆ ಹೇಳಿ ಇತ್ತೀಚೆಗೆ ತನ್ನ  ಬೆನ್ನು ತಾನೇ ತಟ್ಟಿಗೊಂಡ).   ವಾಜಪೇಯಿ ಅಲ್ಲಿಪ್ಪಗ  ನವಾಜ್  ಶರೀಫ್  ಲಾಯಿಕ ಶರ್ಬತ್ತು, ಬಿರ್ಯಾನಿ ಎಲ್ಲಾ ಕೊಟ್ಟು ಸತ್ಕಾರ ಮಾಡಿಕ್ಕು. ಆದರೆ, ವಾಜಪೇಯಿಗೆ ಅಲ್ಲಿಗೆ ಹೋಗಿ ಬಂದ ಬಚ್ಚೆಲು ತಣಿವಂದ ಮೊದಲೇ   ಪಾಕಿಸ್ತಾನದ ದ್ವಂದ್ವ ನೀತಿ ಅರ್ಥ ಅಪ್ಪ ಹಾಂಗಿಪ್ಪ ಘಟನೆ ನಡದತ್ತು.  ಶಾಂತಿಯ ವಾತಾವರಣ ಇದ್ದರೆ ತಾನು ಖುದ್ದು ಚಲಾವಣೆಲಿ ಇಪ್ಪಲೆ ಎಡಿತ್ತಿಲ್ಲೆ ಹೇಳಿ ಯೋಚನೆ ಮಾಡಿದ ಮುಶಾರಫ್  ಕಾರ್ಗಿಲಿನ ಅಧ್ಯಾಯಕ್ಕೆ ನಾಂದಿ ಹಾಡಿದ. 

ಊರಿಲ್ಲಿ ಅವರವರ ತೋಟದ ಕರೆಲಿ ಬ್ಯಾರಿಗಳ ಮನೆ ಇದ್ದು ಅನುಭವಿಸಿದವಕ್ಕೆ ಇದು ದೊಡ್ಡ ಸಂಗತಿ ಹೇಳಿಯೇ ಕಾಣ.  ದಿನ ನಿತ್ಯ ಬೇಲಿ ನುಗ್ಗಿ ತೋಟಕ್ಕೆ ಬಪ್ಪ ಏಡುಗೊ,  ಹೊಳೆಲಿ ಹೊಯಿಗೆ ತೋಡಿ ಸಿಕ್ಕಿದ  ತತ್ವಾರದ ನೀರಿನ  ಕಷ್ಟಪಟ್ಟು ತೋಕಿ ಬೆಳೆಶಿದ ಬಾಳೆ, ಮುಂಡಿಸೆಸಿ ಇತ್ಯಾದಿಗಳ ಲಗಾಡಿ ಕೊಟ್ಟುಗೊಂಡಿತ್ತದರ ಸಹಿಸಿಗೊಂಡವಕ್ಕೆ  "ಏಡು ಮುಟ್ಟದ್ದ ಸೊಪ್ಪಿಲ್ಲೆ" ಹೇಳುವ ಗಾದೆಯ ಯಾವಗಂಗೂ ಮರವಲೆ ಸಾಧ್ಯ ಇಲ್ಲೆ.    ಉಪದ್ರ ಕೊಡುದು ಬ್ಯಾರಿಗಳ ಹುಟ್ಟು ಗುಣ.  ಹಾಂಗಾರೆ, ನಾವು ಯಾವಗಂಗೂ ಉಪದ್ರವ ಸಹಿಸಿಗೊಂಡೇ ಬದುಕ್ಕೆಕ್ಕೋ ? ಸಹಿಸುದಾದರೆ, ಎಷ್ಟರವರೆಗೆ ಸಹಿಸೆಕ್ಕು ?  ಉಪದ್ರ ತಡೆತ್ತಿಲ್ಲೆ ಹೇಳಿ ಆಸ್ತಿಯನ್ನೇ ಮಾರಾಟ ಮಾಡುದೋ ?  ಅಥವಾ ಬ್ಯಾರಿಯ ದರ್ಖಾಸ್ತಿನ  ಕ್ರಯಕ್ಕೆ ತೆಕ್ಕೊಂಡು  ಉಪದ್ರ ಇಲ್ಲದ್ದ ಹಾಂಗೆ ಮಾಡಿಗೊಂಬದೋ ? ಏಡುಗಳ ಕಟ್ಟಿ ಹಾಕಿರೆ ಅಥವಾ ವಿಷ ಕೊಟ್ಟು ಸಾಯಿಸಿರೆ ಹೇಂಗೆ ? ಇಲ್ಲವೇ, ಏಡುಗಳಿಂದ ಪೀಡೆ ಅನುಭವಿಸುತ್ತಾ ಇಪ್ಪ ಸಮಾನ ದುಃಖಿಗಳ ಎಲ್ಲಾ  ಒಟ್ಟುಗೂಡಿಸಿ ಸಂಘಟನೆಯ ಬಲಲ್ಲಿ ಅವರ ಬಗ್ಗುಬಡಿವದೋ ?  ಅಂತೂ, ಜೀವನಲ್ಲಿ ಈ ರೀತಿಯ  ಅನುಭವಂಗೊಕ್ಕೆ ಬೆಲೆ ಕಟ್ಟುಲೆಡಿಯ. ಒಟ್ಟಿಲ್ಲಿ, ಹೀಂಗಿಪ್ಪ ಏಡುಗಳ ಪೀಡೆಯ ಸಮರ್ಥವಾಗಿ ಎದುರಿಸಿ ಗೆದ್ದ  ಹಿನ್ನೆಲೆ ಇಪ್ಪ ಹವ್ಯಕ ಬ್ರಾಹ್ಮಣರಲ್ಲಿ ಯಾರಾರೂ ಒಬ್ಬ ಭಾರತದ ಪ್ರಧಾನ ಮಂತ್ರಿ ಅಪ್ಪಲ್ಲಿ ವರೆಗೆ ಪಾಕಿಸ್ತಾನದ ಸಮಸ್ಯೆ ಪರಿಹಾರ ಆಗ ಹೇಳುವ ಖಡಾಖಂಡಿತ ನಂಬಿಕೆ ಎನ್ನದು. 

ಪಾಕಿಸ್ತಾನದವು ಕಾಶ್ಮೀರದ ವಿಷಯವ ದೊಡ್ಡ ಸಮಸ್ಯೆಯಾಗಿ ಬಿಂಬಿಸಿ ಅಂತರರಾಷ್ಟ್ರೀಯ ಮಟ್ಟಲ್ಲಿ ಯಾವಾಗಲೂ ಶುದ್ದಿ ಮಾಡಿಗೊಂಡಿಪ್ಪವು. ಮತ್ತೆ  ಚೀನಾದಂತಹ ನಮ್ಮ ವೈರಿಗಳೊಟ್ಟಿಂಗೆ ಸೇರಿ ಕುತಂತ್ರ ಮಾಡಿಗೊಂಡಿಪ್ಪವು.  ದುರದೃಷ್ಟ ಎಂತ ಹೇಳಿರೆ,  ನಮ್ಮ ರಾಜಕಾರಣಿಗೊಕ್ಕೆ  ಪಾಕಿಸ್ತಾನದವು ಹೇಳಿದ್ದಕ್ಕೆ, ಮಾಡಿದ್ದಕ್ಕೆಲ್ಲಾ ಉತ್ತರ, ಪ್ರತಿತಂತ್ರ ಮಾಡುದೇ ಉದ್ಯೋಗ ಆಗಿ ಹೋಯಿದು.  ವಾಸ್ತವ ಎಂತ ಹೇಳಿರೆ, ಪಾಕಿಸ್ತಾನ್  ಒಂದು ಯಕಃಶ್ಚಿತ್  ದೇಶ.   ವಿಸ್ತೀರ್ಣಲ್ಲಿ ನಮ್ಮ ೨೫% ಇದ್ದುಗೊಂಡು (ಭಾರತ : ೩.೩ ಮಿಲಿಯ ಚದರ ಕಿ.ಮಿ, ಪಾಕಿಸ್ತಾನ :  ೮ ಲಕ್ಷ ಚದರ ಕಿ.ಮಿ.),   ಜನಸಂಖ್ಯೆಲಿ ಕೇವಲ ೧೬% (ನಮ್ಮದು ೧೦೮ ಕೋಟಿ, ಅವರದ್ದು ೧೬ ಕೋಟಿ) ಇಪ್ಪ ಸಣ್ಣ ದೇಶ.  ಹೇಳಿರೆ, ನಮ್ಮ  ಕಾಶ್ಮೀರ, ಉತ್ತರಪ್ರದೇಶ ಮತ್ತು ಬಿಹಾರಂಗಳ ಸೇರಿಸಿರೆ ಅಪ್ಪಷ್ಟು ದೊಡ್ಡ  ಅಷ್ಟೇ ! ಇನ್ನು ಜನಸಂಖ್ಯೆಲಿ ಭಾರತದ ಉತ್ತರಪ್ರದೇಶ ಒಂದೇ ಇಡೀ ಪಾಕಿಸ್ತಾನಕ್ಕೆ ಸಮ ! ನಾವು ಪಾಕಿಸ್ತಾನವ ಗಣ್ಯ ಮಾಡದ್ದರೆ ಅಲ್ಯಾಣವರ ಹೇಳಿಕೆಗೊ ವಿಶೇಷ ದೊಡ್ಡ ಶುದ್ದಿ ಅಪ್ಪಲೆ ಸಾಧ್ಯವೇ ಇಲ್ಲೆ. ಎಷ್ಟೋ ಸರ್ತಿ ನಾವೇ ಅವರ ದೊಡ್ಡ ಮಾಡುದು. ನೇಪಾಳ, ಅಫ್ಘಾನಿಸ್ತಾನ್,  ಬಾಂಗ್ಲಾದೇಶ, ಶ್ರೀಲಂಕಾ, ಮಾಯನ್ಮಾರ್  ಎಲ್ಲಾ ಇಪ್ಪ ಹಾಂಗೆ ಪಾಕಿಸ್ತಾನವುದೇ ನಮ್ಮ ಒಂದು ಸಣ್ಣ ನೆರೆಕರೆಯ ದೇಶ ಅಷ್ಟೇ ಹೇಳುವ ಧೋರಣೆ ತಾಳಿದರೆ,  ಅವರ ಹಾಂಕಾರ ರಜ ಕಮ್ಮಿ ಅಕ್ಕು.  ಈ ವಿಷಯವ ರಾಹುಲ್  ಗಾಂಧಿ ಅತ್ಯಂತ ಸಮರ್ಪಕವಾಗಿ ಪ್ರಸ್ತಾಪ ಮಾಡಿದ್ದ. ಇದು ಅವ ರಾಜಕೀಯವಾಗಿ ಪ್ರಬುದ್ಧ ಆವುತ್ತಾ ಇಪ್ಪದಕ್ಕೆ ಸಾಕ್ಷಿ.

ಸ್ವಾತಂತ್ರ್ಯಾನಂತರ ನೆಹರೂವಿನ ವಿದೇಶ ನೀತಿಯ ಫಲವಾಗಿ ಭಾರತಕ್ಕೆ ಅಮೇರಿಕಾದ ಸ್ನೇಹದ ಲಾಭ ಸಿಕ್ಕಿತ್ತಿಲ್ಲೆ. ಇದರ ಪಾಕಿಸ್ತಾನದವು ಲಾಯಿಕಲ್ಲಿ ಉಪಯೋಗಿಸಿಗೊಂಡವು.   ನಮ್ಮದು ತಟಸ್ಥ ಧೋರಣೆ ಹೇಳಿ ಲೆಕ್ಕ ಆದರೂ, ಯಾವಾಗಲೂ ರಶ್ಯಾದ ಹೊಡೆಂಗೆ ಮಾಲಿಗೊಂಡಿತ್ತ  ರಾಜಕೀಯ, ಸಾಮಾಜಿಕ  ವ್ಯವಸ್ಥೆ.  ಹಾಂಗಾಗಿ  ನವಗೆ ಆದರ್ಶಪ್ರಾಯರಾಗಿತ್ತ  ರಶ್ಯಾದ ಹಾಂಗೇ,  ದೇಶಲ್ಲಿ ಸಂಪತ್ತಿನ ಸೃಷ್ಟಿ ಮಾಡುವ ಬದಲು ಬಡತನವನ್ನೇ ಹಂಚಿಗೊಂಬ ಹಾಂಗಾತು.  ಅವರ ಹಾಂಗೇ  ನಮ್ಮದೂ ಅವ್ಯವಸ್ಥೆಯ ದಾರಿಲೇ ಹೋತು.  ಕೈಗಾರಿಕೆ ಮತ್ತು ವ್ಯಾಪಾರ-ವ್ಯವಹಾರ ಸರಕಾರದ ಬಿಗಿಮುಷ್ಟಿಲಿ ಇಪ್ಪವರೆಗೆ,  ನಮ್ಮ ವಾರ್ಷಿಕ ಬೆಳವಣಿಗೆ ೩% ದಾಂಟಿತ್ತಿದ್ದಿಲ್ಲೆ.  ಈ ಧೋರಣೆಯ ಸಡಿಲಿಸಿ ಖಾಸಗಿಯವಕ್ಕೆ ಹೆಚ್ಚಿನ ಅವಕಾಶ, ಆದ್ಯತೆ ಸಿಕ್ಕಿದ ಮೇಲೆಯೇ  ಈ ಸಂಖ್ಯೆ ೮ - ೧೦% ವರೆಗೆ ಬಂದು ನಿಂದದು. ನಮ್ಮ ಕಣ್ಣ ಮುಂದೆಯೇ ಹಾಂಕಾಂಗ್, ಸಿಂಗಾಪುರ, ಮಾಲ್ಡೀವ್ಸ್  ಇತ್ಯಾದಿ ದ್ವೀಪ-ದೇಶಂಗೊ ಅಭಿವೃದ್ಧಿ ಆವುತ್ತಾ ಇಪ್ಪಗ, ಪ್ರಾಯೋಗಿಕವಾಗಿಯಾದರೂ, ನಮ್ಮ ಅಂಡಮಾನ ಅಥವಾ ಲಕ್ಷದ್ವೀಪವ ಒಂದು ಮುಕ್ತ ಮಾರುಕಟ್ಟೆಯಾಗಿ ಮಾಡಿ ನೋಡುವೋ ಹೇಳಿ ನಮ್ಮ ರಾಜಕೀಯ, ಆರ್ಥಿಕ ನೇತಾರರಿಂಗೆ ಇಷ್ಟು ವರ್ಷಲ್ಲಿ ಕಾಣದ್ದದು ಭಯಂಕರ ಆಶ್ಚರ್ಯದ ಸಂಗತಿ.  ಇಲ್ಲದ್ರೆ ಇಷ್ಟು ಹೊತ್ತಿಂಗೆ ನಮ್ಮ ದೇಶದ ಸ್ವಾಧೀನಲ್ಲಿಯೇ ಇಪ್ಪ ಒಂದು ದುಬೈ ಅಥವಾ ಸಿಂಗಾಪುರವ ಸೃಷ್ಟಿ ಮಾಡ್ಳೆ ಎಡಿತ್ತೀತು.  ಒಟ್ಟಿಲ್ಲಿ, ಸಮೃದ್ಧ ಅಮೇರಿಕಾದ ಗೆಳೆತನಂದಾಗಿ ಪಾಕಿಸ್ತಾನದವು ಉದ್ಧಾರ ಆಗದ್ದದು ಮಾತ್ರ ದೇವರ ದಯೆ ! ಸದ್ಯಕ್ಕೆ ಇದೊಂದೇ ಸಮಾಧಾನ.

-ಬಾಪಿ





Wednesday, January 6, 2010

ಮತದಾನ

ಜಗತ್ತಿನ ಬೇರೆ ಬೇರೆ ದೇಶಂಗಳಲ್ಲಿಪ್ಪ ವಿವಿಧ ರಾಜಕೀಯ ವ್ಯವಸ್ಥೆಗಳಲ್ಲಿ ಪ್ರಜಾಪ್ರಭುತ್ವವೇ ಶ್ರೇಷ್ಠ ಹೇಳುದು ಸಾಮಾನ್ಯ ನಂಬಿಕೆ. ಇಲ್ಲಿ ಪ್ರಜೆಗಳೇ ಅವರವರ ಪ್ರತಿನಿಧಿಗಳ ಆಯ್ಕೆ ಮಾಡುವ ಕಾರಣ ತಮಗೆ ತಾವೇ ಧನಿಗೊ ಹೇಳುವ ವಾದ. ನಮ್ಮದು ಜಗತ್ತಿನ ಅತಿ ದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರ ಹೇಳುವ ಹೆಗ್ಗಳಿಕೆ ಬೇರೆ ಭಾರತೀಯರಾದ ನವಗಿದ್ದು.


ಪ್ರಜಾಪ್ರಭುತ್ವ ಹೇಳುದು ಬಹುಮತದ ಆಧಾರದ ಮೇಲೆ ನಡವ ವ್ಯವಸ್ಥೆ ಆದ ಕಾರಣ, ಇಲ್ಲಿ ಚುನಾವಣೆ ಒಂದು ಮಾಮೂಲು ಪ್ರಕ್ರಿಯೆ. ಇದರಿಂದಾಗಿ ಮತದಾನಕ್ಕೆ ಅಮೂಲ್ಯವಾದ ಮೂಲಭೂತ ಹಕ್ಕು ಹೇಳುವ ಹೆಸರು ಬಂತು. ಚುನಾವಣೆಲಿ ನಮ್ಮ ಮತಂಗಳ ಅತಿ ಯೋಗ್ಯ (ಇಪ್ಪವರಲ್ಲಿ) ಪ್ರತಿನಿಧಿಗೆ ಕೊಡೆಕ್ಕಾದ್ದು ಪ್ರಜೆಗಳ ಕರ್ತವ್ಯ. ಆದರೆ, ಮತಂಗಳ ಮಾರಾಟ ಅಥವಾ ಖರೀದಿ ಆದರೆ, ಪ್ರಜಾಪ್ರಭುತ್ವ ಕಂಗಾಲಾವುತ್ತು. ನಮ್ಮ ದೇಶದ ಪ್ರಜಾಪ್ರಭುತ್ವಕ್ಕೆ ಹೀಂಗಿಪ್ಪ ಒಂದು ಕಪ್ಪು ಚುಕ್ಕೆ ಇದ್ದು. ಸಮಾಜಲ್ಲಿ ವ್ಯಾಪಕವಾಗಿಪ್ಪ ಭ್ರಷ್ಟಾಚಾರದ ಪಿಡುಗು ಚುನಾವಣೆಯನ್ನೂ ಬಿಟ್ಟಿದಿಲ್ಲೆ. ಕಾಲಕ್ರಮೇಣ ಚುನಾವಣೆಗೆ ಒಂದು "ವ್ಯವಹಾರದ" ದೃಷ್ಟಿಕೋನ ಬಂತು. "ಎಷ್ಟು ಪೈಸೆ ಭಂಡವಾಳ ಹಾಕಿರೆ ಎಷ್ಟು ತೆಗವಲಕ್ಕು" ಹೇಳುವ ಲೆಕ್ಕಾಚಾರ ಸುರುವಾತು. ಮತದಾರರ ಮುಗ್ಧತೆಯ ದುರುಪಯೋಗ ಪಡಿಸಿಗೊಂಡು ರಾಜಕಾರಣಿಗೊ ಬರೀ ಆಶ್ವಾಸನೆ ಮಾತ್ರ ಕೊಟ್ಟು ಬದುಕ್ಕುದು ಕಲ್ತುಗೊಂಡವು. ತಿರುಗ ಚುನಾವಣೆ ಬಪ್ಪಗ ಇನ್ನೊಂದೆಂತಾರೂ ನಾಟಕ ಮಾಡುವ ಅಥವಾ ಪಕ್ಷ ಬದಲಿಸಿ ಚುನಾವಣೆಯ ಕಣಕ್ಕಿಳಿವ ವಿದ್ಯೆಲಿ ಪಳಗಿದವು. ಎಷ್ಟೋ ವರ್ಷ "ಪೆತ್ತ ಕಂಜಿ" ಚುನಾವಣಾ ಚಿಹ್ನೆ ಆಗಿತ್ತ ಒಂದು ಪಕ್ಷದವು ಮಾಡಿಗೊಂಡು ಬಂದದು ಇದನ್ನೇ. ಒಟ್ಟಾರೆ ಗೆದ್ದರೆ ಆತನ್ನೆ ? ನಿಜವಾಗಿ ಹೇಳ್ತರೆ, ನಮ್ಮ ಸಂಸತ್ತಿಲ್ಲಿ ಅರ್ಹ ಪ್ರತಿನಿಧಿಗೊ ಹೇಳಿಸಿಗೊಂಬವು ಕಾಂಬಲೆ ಸಿಕ್ಕುದು ಅಪರೂಪ. ಒಟ್ಟಾರೆ, ಒಂದು ಪ್ರಜಾಪ್ರಭುತ್ವ ವ್ಯವಸ್ಥೆ ಯಶಸ್ವಿಯಾಗಿ ನಡೆಯಕ್ಕಾದರೆ ಅಲ್ಲಿಯ ಪ್ರಜೆಗೊ ಪ್ರಬುದ್ಧರಾಗಿರೆಕು. ಇದಕ್ಕೆ ಕನಿಷ್ಠ ವಿದ್ಯಾಭ್ಯಾಸ ಹೊಂದಿಪ್ಪ ಸಂಪೂರ್ಣ ಸಾಕ್ಷರ ಸಮಾಜ ಇರೆಕು.

ಹೀಂಗಿದ್ದರೂ ನಮ್ಮಲ್ಲಿ ಪ್ರಜಾಪ್ರಭುತ್ವ ಬೆಳೆಯದ್ರೂ ಉಳುಕ್ಕೊಂಡು ಬೈಂದು. ಇದಕ್ಕೆ ಒಂದು ಮುಖ್ಯ ಕಾರಣ ಹೇಳಿರೆ, ಸಂವಿಧಾನದ ಉಳಿದ ಎರಡು ಅಂಗಂಗೊ - ನ್ಯಾಯಾಂಗ ಮತ್ತು ಕಾರ್ಯಾಂಗ - ರಜ ಆದರೂ ಸರಿಯಾಗಿ ಕೆಲಸ ಮಾಡ್ತಾ ಇಪ್ಪದು. ಇನ್ನೊಂದು ಕಾರಣ ಹೇಳಿರೆ, ನಮ್ಮ ಸೈನ್ಯದವರ ವಿಧೇಯತೆ. ಅವು ತಮ್ಮ ಕೆಲಸದ ಹೊರತಾಗಿ ರಾಜಕೀಯ ಅಧಿಕಾರದ ಕುರ್ಚಿಗೆ ಕಣ್ಣು ಹಾಕಿದ್ದವಿಲ್ಲೆ. ಇಲ್ಲದ್ರೆ, ನಮ್ಮಲ್ಲಿಪ್ಪ ಅವ್ಯವಸ್ಥೆಯ ನೋಡಿರೆ ನಮ್ಮ ನೆರೆಕರೆಯವರ ಹಾಂಗೆ ಇಲ್ಲಿಯೂ ಯಾವಾಗಳೇ ಮಿಲಿಟ್ರಿ ಆಢಳಿತ ಬರೆಕಾಗಿತ್ತು. ನಾವೇ ಸುಮಾರು ಸರ್ತಿ ಹತಾಶರಾಗಿ ನಮ್ಮೊಳಾಣ ಅಸಹಾಯಕತೆಯ ಹೆರಹಾಕುಲೆ "ನವಗೆ ಮಿಲಿಟ್ರಿ ಆಢಳಿತವೇ ಸರಿ" ಅಥವಾ "ಬ್ರಿಟಿಷರ ಆಳ್ವಿಕೆಯ ಕಾಲವೇ ಎಷ್ಟೋ ವಾಸಿ ಇತ್ತಡ" ಇತ್ಯಾದಿಯಾಗಿ ಹೇಳಿಗೊಂಡಿಕ್ಕು. ಅಂಬಗಾಣ ಸೇನಾಧಿಪತಿಯಾಗಿತ್ತ ಮಾಣಿಕ್ ಶಾಂಗೆ ಇತ್ತ ತಥಾಕಥಿತ ರಾಜಕೀಯದ ಮಹತ್ವಾಕಾಂಕ್ಷೆಗೆ ಸಂಬಂಧಿಸಿದ ಅನುಮಾನಂದಾಗಿಯೇ ಇಂದಿರಾ ಗಾಂಧಿ ತುರ್ತು ಪರಿಸ್ಥಿತಿ ಘೋಷಿಸಿದ್ದದು ಹೇಳುವ ಶುದ್ದಿ ಒಂದು ಕೆಟ್ಟ ಕಾರ್ಯವ ಸಮರ್ಥಿಸಿಗೊಂಬಲೆ ಹುಟ್ಟುಹಾಕಿದ ಲೊಟ್ಟೆ ಹೇಳಿಯೇ ಎನ್ನ ನಂಬಿಕೆ.

ಚುನಾವಣೆಯ ವಿಷಯ ಬಪ್ಪಗ ಟಿ.ಯನ್.ಶೇಷನ್ ಹೇಳುವ ವ್ಯಂಗ್ಯ ಚಿತ್ರಕಾರರಿಂಗೆ ಸ್ಪೂರ್ತಿ ಕೊಡ್ಳೆ ಹೇಳಿಯೇ ಹುಟ್ಟಿದನೋ ಹೇಳಿ ಕಾಂಬ ಹಾಂಗಿತ್ತ ಡೊಳ್ಳು ಹೊಟ್ಟೆಯ, ಬೋಳು ತಲೆಯ ಭೂತಪೂರ್ವ ಚುನಾವಣಾ ಆಯುಕ್ತನ ಬಗ್ಗೆ ರಜ ಮಾತಾಡದ್ರೆ ಆಗ. ಇವಂದು ಕಾರ್ಯಾಂಗದ ಕುರ್ಚಿಗೆ ಹೇಳಿ ಮಾಡಿಸಿದ ಹಾಂಗಿಪ್ಪ ವ್ಯಕ್ತಿತ್ವ. (ಕುರ್ಚಿಯನ್ನೇ ಇವನ ಅಳತೆಗೆ ಪ್ರತ್ಯೇಕ ತಯಾರಿಸೆಕ್ಕಾಗಿ ಬಂತು ಹೇಳುವ ಕುಚೇಷ್ಟೆಯ ಶುದ್ದಿಯೂ ಇದ್ದು). ಇವಂದಾಗಿ ಚುನಾವಣಾ ಆಯೋಗ ಹೇಳುವ ಒಂದು ಸಂಸ್ಥೆ ಅಸ್ತಿತ್ವಲ್ಲಿ ಇದ್ದು ಹೇಳುದು ಸಾರ್ವಜನಿಕರಿಂಗೆ ಗೊಂತಪ್ಪ ಹಾಂಗೆ ಆತು. ಆಯೋಗದ ಮತ್ತು ಆಯುಕ್ತನ ಅಧಿಕಾರಂಗಳ ಪ್ರಭಾವಶಾಲಿಯಾಗಿ ಉಪಯೋಗಿಸಿದ. ಹೊತ್ತಲ್ಲದ್ದ ಹೊತ್ತಿಲ್ಲಿ ಮೈಕದ ಅಬ್ಬರ, ಸಿಕ್ಕಿದಲ್ಲಿ ಪೂರಾ ಕಾಂಬ ಪೋಸ್ಟರುಗಳ ಹಾವಳಿಗೊಕ್ಕೆ ಸುಮಾರು ಕಡಿವಾಣ ಹಾಕಿದ. ಪ್ರಚಾರದ ಸಮಯಲ್ಲಿ ನೀತಿ ಸಂಹಿತೆಯ ಉಲ್ಲಂಘಿಸಿದವರ ಮೇಲೆ ಎಡಿಗಾದಷ್ಟು ಕ್ರಮ ತೆಕ್ಕೊಂಡ. ಒಟ್ಟಾರೆ ಚುನಾವಣೆಗೊ ತಕ್ಕಮಟ್ಟಿಂಗೆ ನಿಷ್ಪಕ್ಷ, ನಿಯಂತ್ರಿತ ಕಾರ್ಯಕ್ರಮ ಹೇಳಿ ಕಾಂಬ ಹಾಂಗಿಪ್ಪ ವ್ಯವಸ್ಥೆಗಳ ಜ್ಯಾರಿ ಮಾಡಿದ. ಎಲ್ಲಕ್ಕಿಂತ ಹೆಚ್ಚಾಗಿ, ನಂತರ ಬಂದ ಆಯುಕ್ತಂಗೊಕ್ಕೂ ಇವನ ಕಾರ್ಯಕ್ಷಮತೆಯ ಮಾನದಂಡವ ಉಳಿಸಿಗೊಂಬ ಒಂದು ಮುಖ್ಯ ಹೊಣೆಗಾರಿಕೆಯ ವಹಿಸಿಕ್ಕಿ ಹೋದ. ಕೊನೆಗೆ ನಿವೃತ್ತನಾಗಿ ಸುಮಾರು ವರ್ಷ ಮನೆಲೇ ಕೂದುಗೊಂಡಿತ್ತವ ರಾಜಕೀಯವಾಗಿ ಸಕ್ರಿಯನಾಗಿ ಅಡ್ವಾಣಿಯ ಎದುರು ಕೋಂಗ್ರೇಸು ಪಕ್ಷದ ಅಭ್ಯರ್ಥಿಯಾಗಿ ಸ್ಪರ್ಧಿಸಿ ಸೋತ. ಇವಂಗೆ ಹೀಂಗಿಪ್ಪ ದುರ್ಬುದ್ಧಿ ಬಾರದ್ದೆ ಇತ್ತಿದ್ದರೆ, ಒಳ್ಳೆಯ ಕೆಲಸ ಮಾಡಿ ಸಂಪಾದಿಸಿದ ವರ್ಚಸ್ಸಿನ ಉಳಿಸಿಗೊಂಬಲೆ ರಜ ಸುಲಭ ಆವುತ್ತೀತು !

ಇನ್ನು ಸದ್ಯಕ್ಕೆ ಚುನಾವಣೆಗೊ ಎಲ್ಲಿಯೂ ಇಲ್ಲೆ. ಆದರೂ, ಈ ವಿಷಯಲ್ಲಿ ಇತ್ತೀಚೆಗೆ ಒಂದು ಸಕಾರತ್ಮಕ ಶುದ್ದಿ ಕೇಳಿ ಬೈಂದು. ಅದೆಂತ ಹೇಳಿರೆ, ಗುಜರಾತಿಲ್ಲಿ ಮತದಾನವ ಖಡ್ಡಾಯ ಮಾಡುವ ವಿಷಯ. ಇದು ಕಳೆದ ಸುಮಾರು ೧೦ ವರ್ಷಂದ ನಮ್ಮ ದೇಶಲ್ಲಿ ಕಂಡು ಬಂದ ಅನುಕರಣೀಯ ಆರ್ಥಿಕ ಅಭಿವೃದ್ಧಿ ಮತ್ತು ಸಾಮಾಜಿಕ ಸುಧಾರಣೆಗಳ ಕೇಂದ್ರ ಬಿಂದುವಾಗಿಪ್ಪ ನರೇಂದ್ರ ಮೋದಿಯ ಚಿಂತನೆಯ ಫಲ. ನಮ್ಮ ಚುನಾವಣೆಗಳಲ್ಲಿ ಮತದಾನದ ಪ್ರಮಾಣ ಯಾವಾಗಳೂ ೫೦ ರಿಂದ ೬೦% ಅಷ್ಟೇ ಇರ್ತಷ್ಟೆ. ಇದರಲ್ಲಿ ಎಂತ ವಿಶೇಷ ಇಲ್ಲೆ. ಅಮೇರಿಕಾದ ಚುನಾವಣೆಗಳಲ್ಲಿಯುದೇ ಇಷ್ಟೇ ಮತದಾನ ಅಪ್ಪದು. ಆದರೆ, ಅಲ್ಲಿ ೧೦೦% ಅಕ್ಷರಸ್ಥರು ಇಪ್ಪ ಕಾರಣ, ಉಳಿದವು ಎಲ್ಲೋರೂ ಮತದಾನ ಮಾಡಿರೂ ಫಲಿತಾಂಶಲ್ಲಿ ಎಂತ ವಿಶೇಷ ವ್ಯತ್ಯಾಸ ಆಗ. ಆದರೆ, ನಮ್ಮ ದೇಶಲ್ಲಿಪ್ಪ ೫೦% ಅನಕ್ಷರಸ್ಥಲ್ಲಿ ಹೆಚ್ಚು ಕಮ್ಮಿ ಎಲ್ಲೋರೂ ಮತದಾನ ಮಾಡ್ತವು. ಹೇಳಿರೆ, ಅಕ್ಷರಸ್ಥರಲ್ಲಿ ಕೇವಲ ೧೦% ಮಾಂತ್ರ ಮತದಾನ ಮಾಡುದು ಹೇಳಿದ ಹಾಂಗಾತು ! ಅನಕ್ಷರಸ್ಥರೆಲ್ಲಾ ಬೆಗುಡಂಗೊ ಹೇಳುವ ತಾತ್ಪರ್ಯ ಅಲ್ಲ. ಆದರೆ, ದೈನಂದಿನ ಬವಣೆಂದ ಸೋತು ಹೋದಿಪ್ಪ ಅವರ ಕೇವಲ ತತ್ಕಾಲದ ಪರಿಹಾರಂಗಳಿಂದ ಅಥವಾ ಆಮಿಶಂಗಳಿಂದ ಪ್ರೇರೇಪಿಸಿ ಮತ ಗಿಟ್ಟಿಸಿಗೊಂಬ ಸಾಧ್ಯತೆ ಹೆಚ್ಚಿದ್ದು. ಉದಾಹರಣೆಗೆ, ಉಚಿತ ವಿದ್ಯುತ್ ಅಥವಾ ಕಿಲೋವಿಂಗೆ ೧ ರುಪಾಯಿಗೆ ಅಕ್ಕಿ ಕೊಡ್ತೆಯೋ ಹೇಳುವ ಆಶ್ವಾಸನೆಂದ ಅವು ಬಹುತೇಕ ಪ್ರಭಾವಿತರಕ್ಕು. ಅರ್ಥ ವ್ಯವಸ್ಥೆಯ ಮೇಲೆ ಇದರಿಂದ ಅಪ್ಪ ಕೆಟ್ಟ ಪರಿಣಾಮಂಗಳ ಬಗ್ಗೆ ಯೋಚಿಸುವಷ್ಟು ಅವಕ್ಕೆ ಗೊಂತಿರ್ತಿಲ್ಲೆ. ಅದೇ, ಹೆಚ್ಚು ವಿಷಯಜ್ಞಾನ ಮತ್ತು ಲೋಕಜ್ಞಾನ ಇಪ್ಪ ವಿದ್ಯಾವಂತರಿಂಗಾದರೆ ದೂರದೃಷ್ಟಿಂದ ಯೋಚನೆ ಮಾಡ್ಳೆಡಿತ್ತು. ಆದರೆ, ಸುಶಿಕ್ಷಿತರಿಂಗೆ ಟಿವಿಯ ಚರ್ಚೆಗಳಲ್ಲಿ ಭಾಗವಹಿಸಿ ದೇಶಲ್ಲಿ ಎಂತಲ್ಲಾ ಸರಿ ಇಲ್ಲೆ ಹೇಳಿ ಬೊಬ್ಬೆ ಮಾಡುದು ಬಿಟ್ರೆ, ಮತ ಚಲಾಯಿಸುವ ಕರ್ತವ್ಯದ ಬಗ್ಗೆ ನೆಂಪು ಇರ್ತಿಲ್ಲೆ. ಚುನಾವಣೆಯ ದಿನ ಇಪ್ಪ ಸಾರ್ವಜನಿಕ ರಜೆಯ ಶಾರುಕ್ ಖಾನ್ ನ ಸಿನೆಮ ನೋಡಿ ಸದುಪಯೋಗ ಪಡಿಸಿಗೊಳ್ತವೇ ಹೊರತು, ಮತಗಟ್ಟೆಗೆ ಹೋವುತ್ತವಿಲ್ಲೆ. ಹಾಂಗಾಗಿ ಮತದಾನವ ಖಡ್ಡಾಯ ಹೇಳಿ ಮಾಡುದು ಒಂದು ಒಳ್ಳೆ ಬೆಳವಣಿಗೆ ಹೇಳಿ ಕಾಣ್ತು.

ನರೇಂದ್ರ ಮೋದಿಯ ಚಿಂತನೆಗೆ ಜನರ ಅನಕ್ಷರತೆಯನ್ನೇ ರಾಜಕೀಯ ಭಂಡವಾಳವಾಗಿ ಮಾಡಿಗೊಂಡಿಪ್ಪ ಲಾಲೂವಿನ ಹಾಂಗಿಪ್ಪವರ ಸಮರ್ಥನೆ ಸಿಕ್ಕಿದ್ದು ಪರಮಾಶ್ಚರ್ಯದ ಸಂಗತಿ ! ಹಾಂಗಾಗಿ ಇದು ರಾಷ್ಟ್ರವ್ಯಾಪಿಯಾದ ಬದಲಾವಣೆಗೆ ನಾಂದಿ ಆದರೆ, ಮೋದಿಯ ಪ್ರಯತ್ನ ಸಾರ್ಥಕ.

-ಬಾಪಿ/ ಜನವರಿ ೬, ೨೦೧೦

Sunday, December 20, 2009

ತೆಲಂಗಾನ

ಆಂಧ್ರಪ್ರದೇಶವ ಎರಡು ತುಂಡು ಮಾಡಿ ತೆಲಂಗಾನ ಹೇಳುವ ಹೆಸರಿನ ಹೊಸ ರಾಜ್ಯ ಸ್ಥಾಪನೆ ಮಾಡೆಕ್ಕು ಹೇಳುವ ಬೇಡಿಕೆ ಮತ್ತು ಬೊಬ್ಬೆ ಕೆಲವು ದಿನಂದ ತಾರಕಕ್ಕೆ ಏರಿದ್ದು. ಇದರೊಟ್ಟಿಂಗೇ ಮೊದಲಿಂದಲೇ ಇತ್ತ ಇನ್ನೂ ಕೆಲವು ಪ್ರತ್ಯೇಕ ರಾಜ್ಯಂಗಳ ಬೇಡಿಕೆಗೊಕ್ಕೂ ಹೊಸ ಜೀವ ಬಂದು, ಭಾರತದ ಭೂಪಟದ ದೃಶ್ಯವೇ ಸಂಪೂರ್ಣ ಬದಲಪ್ಪ ಸಾಧ್ಯತೆ ಕಾಣ್ತಾ ಇದ್ದು. ಮೊದಲೇ ಧರ್ಮ, ಜಾತಿಗಳ ಬಾಹುಳ್ಯ ಇಪ್ಪ ನಮ್ಮ ದೇಶಲ್ಲಿ ಭಾಷಾವಾರು ಪ್ರಾಂತ್ಯಂಗಳ ನಿರ್ಮಾಣ ಮಾಡಿ ನಮ್ಮ ರಾಜಕೀಯ ನಾಯಕರು ಗೊಂದಲವ ಇನ್ನೂ ಜಾಸ್ತಿ ಮಾಡಿದವು ಹೇಳುವ ಆರೋಪದ ಬಗ್ಗೆ ಚರ್ಚೆ ಯಾವಾಗಳೂ ನಡೆತ್ತಲೇ ಬೈಂದು. ಅಂತೂ, ನಮ್ಮ ದೇಶದ ಭಾಷೆಗೊ ಜನಂಗಳ ಮಧ್ಯೆ ಸಂವಹನದ ಮಾಧ್ಯಮವಾಗಿ ಉಳಿವ ಬದಲು, ಪರಕೀಯತೆಯ ಭಾವನೆಯ ಸೃಷ್ಟಿ ಮಾಡಿದ್ದಂತೂ ಸತ್ಯ. ಕಾಸರಗೋಡು, ಬೆಳಗಾವಿ ಹಾಂಗಿಪ್ಪ ಗಡಿ ಪ್ರದೇಶಂಗಳಲ್ಲಿ ಪರಸ್ಪರ ಭಾಷಾ ವೈಷಮ್ಯ ಯಾವಾಗಳೂ ಹೊಗೆ ಆಡ್ತಾ ಇಪ್ಪದು ಇದರ ಸಣ್ಣ ನಮೂನೆ ಅಷ್ಟೆ. ಸ್ವಾತಂತ್ರ್ಯ ಪೂರ್ವಲ್ಲಿ ಇಡೀ ದೇಶವೇ ಹೆಮ್ಮೆ ಪಟ್ಟ ಯೋಧರ, ನಾಯಕರ ತಾಣವಾಗಿತ್ತ ಮಹಾರಾಷ್ಟ್ರ, ಇಂದು ಕೀಳು ಮಟ್ಟದ ಭಾಷಾ ರಾಜಕಾರಣದ ಮುಂಚೂಣಿಲಿದ್ದು. ಅಮೇರಿಕಾದ ಭೂಪಟದ ಹಾಂಗೆ, ಸರ್ತ ಗೀಟು ಹಾಕಿ ತುಂಡು ಮಾಡಿದ ಹಲ್ವಾದ ತುಂಡುಗಳ ಹಾಂಗೆ ಕಾಂಬ ರಾಜ್ಯಂಗಳ ನಮ್ಮಲ್ಲಿಯೂ ಸೃಷ್ಟಿ ಮಾಡಿದ್ದರೆ ಹೇಂಗಿರ್ತೀತು ?


ತೆಲಂಗಾನದ ವಿಷಯಲ್ಲಿ ಇಪ್ಪ ಒಂದು ವ್ಯತ್ಯಾಸ ಎಂತ ಹೇಳಿರೆ, ಇದು ಭಾಷೆಯ ತಕರಾರು ಅಲ್ಲ. ಹಾಂಗೆ ಹೇಳಿ ದೊಡ್ದ ದೂರದೃಷ್ಟಿಯ ಚಿಂತನೆಯ ಆಧರಿಸಿದ ಆಂದೋಳನವೂ ಅಲ್ಲ. ನಿಜ ಹೇಳ್ತರೆ, ಅವಭಿಜಿತ ಆಂಧ್ರದ ಸರಕಾರಲ್ಲಿ ಪಶು ಸಂಗೋಪನಾ ಸಚಿವ ಅಪ್ಪಲೂ ಯೋಗ್ಯತೆ ಇಲ್ಲದ್ದ ವ್ಯಕ್ತಿ ಒಬ್ಬ ತೆಲಂಗಾನ ಹೇಳುವ ಪ್ರತ್ಯೇಕ ರಾಜ್ಯ ಆದರೆ, ತಾನೇ ಮುಖ್ಯಮಂತ್ರಿ ಅಪ್ಪಲಕ್ಕು ಹೇಳುವ ಸ್ವಾರ್ಥಂದ ಸುರು ಮಾಡಿದ ಗಲಾಟೆಯ ಹಾಂಗೆ ಕಾಣ್ತು. ಆದರೂ, ನಮ್ಮ ದೇಶಲ್ಲಿ ಹೊಸ ಸಣ್ಣ ರಾಜ್ಯಂಗಳ ಸೃಷ್ಟಿ ಮಾಡುವ ವಾದಲ್ಲಿ ಹುರುಳು ಇದ್ದು ಹೇಳಿ ಎನ್ನ ಅಭಿಪ್ರಾಯ. ಒಟ್ಟಾರೆಯಾಗಿ, ನಮ್ಮ ಎಲ್ಲಾ ಸಮಸ್ಯೆಗಳ ತೀವ್ರತೆಯ ಹಿಂದೆಯೂ ನಮ್ಮ ಜನಸಂಖ್ಯೆಯೇ ಒಂದು ಸಾಮಾನ್ಯ ಆಂಶ ಆಗಿಪ್ಪದು ಸ್ಪಷ್ಟವಾಗಿ ಕಾಣ್ತು. ಇನ್ನೊಂದು ರೀತಿಲಿ ಹೇಳ್ತರೆ, ನಮ್ಮ ಮೊದ್ಳಾಣ ಅಜ್ಜಂದ್ರು ಸ್ವಂತಕ್ಕೆ ಇಪ್ಪ ಅರ್ಧ ಎಕ್ರೆ ತೋಟದ ಆಸ್ತಿಗೆ ೧೨ ಜನ ಮಕ್ಕಳ ದೊಡ್ಡ ಸಂತಾನವ ಸೃಷ್ಟಿ ಮಾಡಿ ಹಾಕಿ, ಯಾವ ಮಕ್ಕಳ ಮೇಲುದೇ ವಿಶೇಷ ಗಮನ ಕೊಡದ್ದೆ ಅವರವರಷ್ಟಕೇ ಬೆಳವಲೆ ಬಿಟ್ಟ ಹಾಂಗಿಪ್ಪ ಅ(ವ್ಯ)ವಸ್ಥೆ. ಭಾರತ ದೇಶದ ಭೂಪ್ರದೇಶದ ಒಟ್ಟು ವಿಸ್ತೀರ್ಣ (೧.೨ ಮಿಲಿಯ ಚದರ ಮೈಲು) ಅಮೇರಿಕಾದ ವಿಸ್ತೀರ್ಣ(೩.೫ ಮಿಲಿಯ ಚದರ ಮೈಲು)ದ ಕೇವಲ ೩೦% ಇಪ್ಪದಾದರೂ ನಮ್ಮ ಜನಸಂಖ್ಯೆ ೩.೫ ಪಟ್ಟು ಹೆಚ್ಚಿದ್ದು. ಹೇಳಿರೆ, ಇಲ್ಯಾಣ ಜನಸಾಂದ್ರತೆ ಅಮೇರಿಕಂದ ಸುಮಾರು ೧೦ ಪಟ್ಟು ಹೆಚ್ಚು. ಇನ್ನು ನಮ್ಮ ಮರುಭೂಮಿ, ಕಾಡು, ಗುಡ್ಡ ಪ್ರದೇಶಂಗಳ ಲೆಕ್ಕ ಬಿಟ್ರೆ, ಜನಸಾಂದ್ರತೆಯ ತೀವ್ರತೆ ಇನ್ನೂ ಹೆಚ್ಚಾವುತ್ತು. ಅಮೇರಿಕಾದ ರಾಜ್ಯಂಗಳ ಸರಾಸರಿ ಜನಸಂಖ್ಯೆ ೬೦ ಲಕ್ಷ ಆದರೆ, ನಮ್ಮದು ೩ ಕೋಟಿ ! ಅಲ್ಯಾಣ ಅತಿಹೆಚ್ಚು ಜನಸಂಖ್ಯೆ ಹೇಳಿರೆ ಕ್ಯಾಲಿಫೋರ್ನಿಯಾದ ೩.೫ ಕೋಟಿಯಾದರೆ, ನಮ್ಮ ಉತ್ತರಪ್ರದೇಶಲ್ಲಿ ೧೬ ಕೋಟಿ ಜನ ಇದ್ದವು. ನಮ್ಮ ಹಲವಾರು ಸಮಸ್ಯೆಗೊ ಉಲ್ಬಣ ಅಪ್ಪದು ಇದರಂದಾಗಿಯೇ ಹೇಳಿ ಧಾರಾಳ ಹೇಳ್ಳಕ್ಕು.

ಅಷ್ಟು ಹೆಚ್ಚು ಸಂಖ್ಯೆಯ ಸಾಕ್ಷರರು ಇಪ್ಪ ಮುಂದುವರಿದ ಸಮಾಜದ ವ್ಯವಸ್ಥೆಗೊ ಹೇಂಗೆ ನಡೆತ್ತಾ ಬಂದಿಕ್ಕು ಹೇಳಿ ತಿಳುಕ್ಕೊಂಬ ಉದ್ದೇಶಂದ ಅಮೇರಿಕಾದ ಹೋಲಿಕೆ ಮಾಡೆಕ್ಕಾಗಿ ಬಂತು. ನಮ್ಮಲ್ಲಿ ಅನಕ್ಷರತೆಂದ ಹಿಡುದು ಪ್ರತಿಯೊಂದು ಸಾಮಾಜಿಕ ಸಮಸ್ಯೆಯೂ ದೊಡ್ಡ ಪ್ರಮಾಣಲ್ಲಿ ಇಪ್ಪಗ, ಆದಷ್ಟು ಕಮ್ಮಿ ಜನರ ಮೇಲೆ ಗಮನ ಮತ್ತು ಶಕ್ತಿಗಳ ಕೇಂದ್ರೀಕರಿಸುಲೆ ಎಡಿಗಾದರೆ ಸುಲಭ ಅಕ್ಕು. ಗ್ರಾಮ ಪಂಚಾಯತುಗಳ ಸಬಲೀಕರಣದ ಹಿಂದೆ ಇಪ್ಪ ಚಿಂತನೆ ಇದೇ ಆದರೂ, ಆಯಾ ರಾಜ್ಯಂಗೊ ಆರ್ಥಿಕವಾಗಿ ಸುದೃಢ ಆಗದ್ರೆ, ಸ್ವಂತವಾಗಿ ಒಂದು ಸಣ್ಣ ತೋಡಿಂಗೆ ಸಂಕ ಕಟ್ಟುವ ಸಾಮರ್ಥ್ಯವೂ ಇಲ್ಲದ್ದ ಗ್ರಾಮ ಪಂಚಾಯತುಗೊಕ್ಕೆ ಎಂತ ಮಾಡ್ಳೆಡಿಗು ? ಈ ದೃಷ್ಟಿಂದ ನೋಡಿರೆ, ರಾಜ್ಯಂಗೊ ಸಣ್ಣ ಆದಷ್ಟೂ, ಕ್ಷೇತ್ರೀಯ ಸಮಸ್ಯೆಗಳ ಬಗ್ಗೆ ಹೆಚ್ಚು ಗಮನ ಹರಿಸಿ ಪರಿಹಾರ ಕಂಡುಗೊಂಡು ಬೇಗ ಉದ್ಧಾರ ಅಪ್ಪಲೆ ಸಾಧ್ಯ ಅಕ್ಕು ಹೇಳಿ ಕಾಣ್ತು. ಆದರೆ, ಇನ್ನು ಮುಂದೆ ಅಪ್ಪ ಯಾವ ರಾಜ್ಯಂಗಳ ಪುನರ್ವಿಭಜನೆಯೂ ಭಾಷೆ ಅಥವಾ ಜಾತಿಯ ಆಧಾರದ ಮೇಲೆ ಅಪ್ಪದರ ಬದಲು, ಭೌಗೋಳಿಕ ಮತ್ತು ಆರ್ಥಿಕ ಸ್ವಾವಲಂಬನೆಯ ಮಾನದಂಡಂದ ಆದರೆ ದೇಶದ ಭವಿಷ್ಯದ ದೃಷ್ಟಿಂದ ಒಳ್ಳೆದು.

-ಬಾಪಿ/ ದಶಂಬ್ರ ೨೦, ೨೦೦೯

Monday, November 30, 2009

ಚೌ ಚೌ-೦೩

ಲವ್ ಜಿಹಾದ್ : ಕೇರಳ, ಕರ್ನಾಟಕದ ಹಾಂಗಿಪ್ಪ ರಾಜ್ಯಂಗಳಲ್ಲಿ ಹಿಂದೂ ಮತ್ತು ಕ್ರಿಶ್ಚಿಯನ್ ಹುಡುಗಿಯರಿಂಗೆ ಪ್ರೀತಿಯ ಬಲೆ ಬೀಸಿ, ಮದುವೆ ಆಗಿ, ಮತಾಂತರ ಮಾಡ್ಸುವ ಮುಸ್ಲಿಮರ ವ್ಯವಸ್ಥಿತ ಜಾಲವೇ ಇದ್ದಡ. ಇದಕ್ಕೆ ಲವ್-ಜಿಹಾದ್ ಹೇಳುವ ಹೆಸರಾಡ. ಈ ಹುಡುಗಿಯರಲ್ಲಿ ಹೆಚ್ಚಿನವು ಕಾಣೆ ಅಪ್ಪದು ಅಥವಾ ಬ್ಯಾರಿಗಳ ಒಟ್ಟಿಂಗೆ ಓಡಿ ಹೋಪದು. ನಮ್ಮ ಊರಿಲ್ಲಿಯೇ ಹೀಂಗಿಪ್ಪ ಬೇಕಾದಷ್ಟು ಉದಾಹರಣೆಗೊ ಇದ್ದಡ. "ಪ್ರೀತಿ ಮಾಡಿದ ಮೇಲೆ ಹೆದರಿಕೆ ಎಂತಕೆ” ಎಂಬಿತ್ಯಾದಿ ಸಿನೆಮಾದ ಸಂಭಾಷಣೆಗಳೇ ಆದರ್ಶವಾಗಿಪ್ಪ ಈಗಾಣ ಕೂಸುಗೊಕ್ಕೆ ಅಬ್ಬೆಪ್ಪನ ಮತ್ತು ಸಮಾಜದ ಎಂತ ಗೊಡವೆಯೂ ಇಪ್ಪ ಹಾಂಗೆ ಕಾಣ್ತಿಲ್ಲೆ. ಹೀಂಗೆ ಮೋಸ ಹೋದವರಲ್ಲಿ ಹೆಚ್ಚಿನವು ಜವ್ವನದ ಕಿಚ್ಚು ತಣಿದ ಮೇಲೆ ಬಹುಪತ್ನಿತ್ವದ ವ್ಯವಸ್ಥೆಯ ಸಹಿಸಿಗೊಂಡು, ಜೀವನ ನಿರ್ವಹಣೆಗಾಗಿ ಬೀಡಿ ಕಟ್ಟಿಗೊಂಡು ಬದುಕ್ಕುವ ದಯನೀಯ ಸ್ಥಿತಿಲಿದ್ದವಡ. ಇಷ್ಟೆಲ್ಲಾ ಆದ ಮೇಲೆ ಬುದ್ಧಿ ಬಂದರುದೇ ಎಂತ ಸುಖ ? ಇಷ್ಟರವರೆಗೆ ಅದೆಷ್ಟು ಸಾವಿರ ಕೂಸುಗೊ ಹೀಂಗೆ ಕಾಣೆ ಆಗಿ ಹೋಗಿ, ಬೀಡಿ ಉದ್ಯಮವ ಉದ್ಧಾರ ಮಾಡಿಗೊಂಡಿದ್ದವೋ ? ಹಿಂದೂ ಸಮಾಜಲ್ಲಿ ಒಟ್ಟಾರೆಯಾಗಿ ಎಲ್ಲದರ ಬಗ್ಗೆಯೂ ದಿವ್ಯ ನಿರ್ಲಕ್ಷ್ಯ ಮತ್ತು ನಿಷ್ಕ್ರಿಯತೆ ಇಪ್ಪ ಕಾರಣವೇ ಮುಸ್ಲಿಮರಿಂಗೆ ಹೀಂಗಿಪ್ಪ ಕುಟಿಲ ತಂತ್ರಂಗಳ ಕಾರ್ಯಗತ ಮಾಡುವ ಧೈರ್ಯ ಬಪ್ಪದು ಹೇಳಿ ಕಾಣ್ತು.

ಇಷ್ಟರ ವರೆಗೆ ಹೀಂಗಿಪ್ಪ ಯಾವ ಪ್ರಕರಣಂಗಳಲ್ಲಿಯೂ ಯಾವುದೇ ಪ್ರತಿಭಟನೆ ಆದ್ದದಾಗಲೀ, ಓಡಿ ಹೋದವರ ರಕ್ಷಿಸಿ ವಾಪಾಸು ಕರಕ್ಕೊಂಡು ಬಂದದಾಗಲೀ ಗೊಂತಾಯಿದಿಲ್ಲೆ. ಈಗ ಇದಕ್ಕೆ ವಿರುದ್ಧವಾದ ಇನ್ನೊಂದು ಘಟನೆಯ ರಜ ವಿಮರ್ಶೆ ಮಾಡುವೊ. ರಜನೀಶ್ ಶರ್ಮ ಹೇಳುವ ಜಮ್ಮುವಿನ ಹಿಂದೂ ಹುಡುಗನುದೇ ಅಮೀನಾ ಹೇಳುವ ಕಾಶ್ಮೀರದ ಮುಸ್ಲಿಮ್ ಹುಡುಗಿಯುದೇ ಪ್ರೀತಿಸಿ ಮದುವೆ ಆದವು. ಅಮೀನಾ ಮದುವೆ ಆದ ಮೇಲೆ ಆಂಚಲ್ ಶರ್ಮ ಹೇಳಿ ಹೆಸರು ಬದಲಾಯಿಸಿಗೊಂಡತ್ತು. ಇವರ ಮದುವೆ ಆಗಿ ಸುಮಾರು ಒಂದು ತಿಂಗಳು ಅಪ್ಪಗ, ಕಾಶ್ಮೀರದ ಪೋಲೀಸುಗೊ ಹುಡುಗನ ವಿಚಾರಣೆಗೆ ಹೇಳಿ ಕರಕ್ಕೊಂಡು ಹೋದವು. ಕೆಲವು ದಿನ ಆದ ಮೇಲೆ ಆ ಹುಡುಗ ಅವನ ಕೂಡಿ ಹಾಕಿದ ಕೋಣೆಲಿ ನೇಣು ಹಾಕಿಗೊಂಡು ಸತ್ತ ಹೇಳುವ ಶುದ್ದಿಯ ಪೋಲೀಸಿನವು ಬಿಡುಗಡೆ ಮಾಡಿದವು. ಸದ್ರಿ ಮುಸ್ಲಿಮ್ ಹುಡುಗಿಯ ಅಪ್ಪ ಕಾಶ್ಮೀರದ ಪೋಲೀಸು ಇಲಾಖೆಲಿ ಕೆಲಸ ಮಾಡಿಗೊಂಡಿತ್ತದು ಕೇವಲ ಕಾಕತಾಳೀಯ ! ಈ ವಿಷಯದ ಬಗ್ಗೆ ಮಾನವ ಹಕ್ಕು ಹಿತರಕ್ಷಣೆಯವಾಗಲೀ, ಮಾಧ್ಯಮದವಾಗಲೀ ಇಷ್ಟರವರೆಗೆ ಚಕಾರ ಎತ್ತಿದ್ದವಿಲ್ಲೆ. ಅದೇ, ಕಲ್ಕತ್ತಾಲ್ಲಿ ಆದ ರಿಝ್ವಾನ್ ಹೇಳುವ ಮುಸ್ಲಿಮ್ ಹುಡುಗನೊಟ್ಟಿಂಗೆ ಆದ ಪ್ರಿಯಾಂಕಾ ತೋಡಿ ಹೇಳುವ ಹಿಂದೂ ಹುಡುಗಿಯ ಮದುವೆ ಮತ್ತು ತದನಂತರ ಹುಡುಗನ ಸಾವಿನ ಪ್ರಕರಣಕ್ಕೆ ಸಂಬಂಧಿಸಿದ ವ್ಯಾಜ್ಯವ ಪ್ರತಿದಿನ ಬಿಡದ್ದೆ ಹಿಂಬಾಲಿಸಿ ದೊಡ್ಡ ಶುದ್ದಿ ಅಪ್ಪ ಹಾಂಗೆ ಮಾಡಿತ್ತಿದ್ದವು. ಹಾಂಗೇ, ಕಾಶ್ಮೀರದ ಶೋಪಿಯಾಲ್ಲಿ ಇಬ್ಬರು ಮುಸ್ಲಿಂ ಮಹಿಳೆಯರ ಮೇಲೆ ಸೈನಿಕರು ನಡೆಶಿದವು ಹೇಳಲಾದ ಅತ್ಯಾಚಾರದ ವಿಷಯಲ್ಲಿ ತಕ್ಷಣ ಕಾರ್ಯನಿರತನಾದ ಮುಖ್ಯಮಂತ್ರಿ ಒಮರ್ ಅಬ್ದುಲ್ಲಂಗೆ ರಜನೀಶ್ ಶರ್ಮನ ವಿಷಯಲ್ಲಿ ಯಾವ ಹೇಳಿಕೆಯನ್ನೂ ಕೊಡ್ಳೆ ಪುರುಸೊತ್ತು ಆಯಿದಿಲ್ಲೆ. ಇದು ಧರ್ಮ ನಿರಪೇಕ್ಷ, ಸ್ವತಂತ್ರ ಭಾರತಲ್ಲಿ ನಡೆತ್ತಾ ಇಪ್ಪ ಸಾಮಾಜಿಕ ಮತ್ತು ರಾಜಕೀಯ ಕ್ಷೇತ್ರದವರ ವೃತ್ತಿಪರ ನಡವಳಿಕೆ.

ಮುಸ್ಲಿಮರು ಬಹು ಸಂಖ್ಯಾತರಾಗಿಪ್ಪ ಕಾಶ್ಮೀರಲ್ಲಿ ಹಿಂದು ಮತ್ತು ಬೌದ್ಧ ಧರ್ಮೀಯರ ಮೇಲಿನ ದಬ್ಬಾಳಿಕೆ ಎಲ್ಲೋರಿಂಗೂ ಗೊಂತಿಪ್ಪದೇ. ಹಾಂಗಾಗಿ, ಆ ರಾಜ್ಯಲ್ಲಿ ಅಪ್ಪ ಶೋಷಣೆಯ ಹೇಂಗಾರು ಅರ್ಥ ಮಾಡಿಗೊಂಬಲಕ್ಕು. ಹಿಂದೂಗಳೇ ಬಹು ಸಂಖ್ಯಾತರಾಗಿಪ್ಪ ದಕ್ಷಿಣದ ಪ್ರದೇಶಂಗಳಲ್ಲಿ ಅಪ್ಪ ದುಷ್ಕೃತ್ಯಂಗಳನ್ನೂ ಎಂತಕೆ ಸಹಿಸಿಗೊಳೆಕ್ಕು ? ಹೀಂಗಿಪ್ಪ ವಿಷಯಂಗಳಲ್ಲಿ ಹಿಂದೂಗಳ ಪೈಕಿ ರಜ ಆದರೂ ಸಕ್ರಿಯವಾಗಿಪ್ಪವು ಹೇಳಿರೆ ಭಜರಂಗ ದಳ ಮತ್ತು ಶ್ರೀರಾಮ ಸೇನೆಯವು. ಆದರೆ ದುರ್ದೈವದ ಸಂಗತಿ ಹೇಳಿರೆ, ಈ ಸಂಸ್ಥೆಗಳ ವಿರುದ್ಧ ಹೆರಾಣವರಿಂದಲೂ ಹೆಚ್ಚು ಹಿಂದೂ ಸಮಾಜದ ಬುದ್ಧಿಜೀವಿಗಳೇ ಟೀಕೆ ಮಾಡ್ತವು. ಪ್ರೀತಿ ಹೇಳುದಕ್ಕೆ ಧರ್ಮದ ಗೋಡೆ ಅಡ್ಡ ಅಪ್ಪಲಾಗ ಹೇಳುವ ವಾದ ಸರಿಯಾಗಿಪ್ಪಲೂ ಸಾಕು. ಆದರೆ, ಅದು ಮುಂದಾಲೋಚನೆ ಇಲ್ಲದ್ದ ಕುರುಡು ಪ್ರೀತಿ ಆದರೆ ಅಥವಾ ಹುಡುಗಿಯರ ಮುಗ್ಧತೆಯ ದುರುಪಯೋಗ ಪಡಿಸಿಗೊಂಬ ನಾಟಕದ ಪ್ರೀತಿ ಆದರೆ, ಅದರ ಬಗ್ಗೆ ಜಾಗ್ರತೆ ಮಾಡೆಕ್ಕಾವುತ್ತು.

ಅಹಿಂಸಾವಾದ : ಜಗತ್ತಿನಾದ್ಯಂತ "ಶಾಂತಿದೂತ” ಹೇಳಿಯೇ ಹೆಸರು ಮಾಡಿದ ಮಹಾತ್ಮ ಗಾಂಧಿಗೆ ನೋಬೆಲ್ ಶಾಂತಿ ಪ್ರಶಸ್ತಿ ಬಾರದ್ದದು ವಿಪರ್ಯಾಸವೇ ಸರಿ. ಈ ಪ್ರಶಸ್ತಿಗಾಗಿ ಒಬಾಮಾ ಅಥವಾ ಮದರ್ ಥೆರೆಸಾನ ಹಾಂಗಿಪ್ಪ ಹೆಚ್ಚು ಅರ್ಹತೆ ಇಪ್ಪವರೊಟ್ಟಿಂಗೆ ಪೈಪೋಟಿ ಮಾಡೆಕ್ಕಾದ ಪರಿಸ್ಥಿತಿ ಇಪ್ಪಗ, ಗಾಂಧಿಗೆ ಪ್ರಶಸ್ತಿ ಸಿಕ್ಕುದಾದರೂ ಹೇಂಗೆ ? ಅದು ಹೇಂಗೂ ಇರಲಿ. ಸದ್ಯದ ಚೋದ್ಯ ಎಂತ ಹೇಳಿರೆ, ಗಾಂಧಿಯ ಅಹಿಂಸಾವಾದ ಈಗಾಣ ಕಾಲಕ್ಕೆ ಎಷ್ಟು ಪ್ರಸ್ತುತ ಹೇಳುವ ವಿಷಯ. ಈ ಚಿಂತನೆಯನ್ನೇ ಆಧರಿಸಿ ಮುನ್ನಾಭಾಯಿ ಹೇಳುವ ಎರಡು ಆವೃತ್ತಿಯ ಸಿನೆಮಾವನ್ನೂ ಮಾಡಿದವು. ಆ ಸಿನೆಮಾ ಒಳ್ಳೆ ಮನರಂಜನೆ ಕೊಟ್ಟು, ಗಾಂಧಿಯ ನೆಂಪು ಮರುಕಳಿಸುವ ಹಾಂಗೆ ಮಾಡಿತ್ತೇ ಹೊರತು ಬೇರೆಂತ ಪ್ರಯೋಜನ ಆಯಿದಿಲ್ಲೆ. ತತ್ಕಾಲದ ಯಾವ ಗಹನವಾದ ಪ್ರಶ್ನೆಗೊಕ್ಕೂ ಅದಲ್ಲಿ ಉತ್ತರ ಸಿಕ್ಕುತ್ತಿಲ್ಲೆ. ಉದಾಹರಣೆಗೆ, ಜಗತ್ತಿನ ಎಲ್ಲೆಡೆ ಹಿಂಸೆ ತಾಂಡವ ಆಡ್ತಾ ಇಪ್ಪ ಈ ಸಂದರ್ಭಲ್ಲಿ ಗಾಂಧಿ ಬದುಕ್ಕಿತ್ತಿದ್ದರೆ ಎಂತ ಮಾಡ್ತೀತ ? ಪಾಕಿಸ್ತಾನದವು ಎಷ್ಟು ಕೆಣಕಿದರೂ ನಮ್ಮ ಸರಕಾರ ತಾಳ್ಮೆ ವಹಿಸಿಗೊಂಡೇ ಬಂದರೂ, ಮತ್ತೆ ಮತ್ತೆ ಕಾಲು ಕೆದರಿ ಜಗಳಕ್ಕೆ ಬಪ್ಪ ಈ ನೆರೆಕರೆಯ ಪೀಡೆಯ ಬಗ್ಗೆ ಬೇರೆ ಯಾವ ನಮುನೆಯ ಧೋರಣೆ ಸಮರ್ಪಕ ಅಕ್ಕು ? ಅಖೇರಿಗೆ ತಡವಲೆಡಿಯದ್ದೆ ಪ್ರತೀಕಾರವಾಗಿ ನಾವುದೇ ಹಿಂಸೆಯನ್ನೇ ಕೈಗೆತ್ತಿಗೊಂಬ ಹಾಂಗೆ ಆದರೆ, ಇಷ್ಟು ದಿನ ಪಾಲಿಸಿದ ಅಹಿಂಸಾವಾದಂದ ಎಂತ ಪುರುಷಾರ್ಥ ದಕ್ಕಿದ ಹಾಂಗಾತು ?

ಅಹಿಂಸೆ ಹೇಳುದು ಒಂದು ಸೈದ್ಧಾಂತಿಕ ಮನೋಭಾವವಾದರೆ, ಹಿಂಸೆ ಹೇಳುದು ಪ್ರವೃತ್ತಿ ಅಥವಾ ಚಟವಾಗಿ ತೋರುತ್ತು. ಅಹಿಂಸೆಯ ಹಿಂದೆ ವಿವೇಕ ಇದ್ದರೆ, ಹಿಂಸೆಯ ಹಿಂದೆ ತಿಳಿಗೇಡಿತನ ಇದ್ದು. ಆದರೆ, ಅಹಿಂಸೆ ಹೇಳುದು ಹೇಡಿತನದ ಮುಖವಾಡವಾಗಿ ಕಂಡರೆ ಅಲ್ಲಿ ಹಿಂಸೆಯ ಕೈ ಮೇಲಾವುತ್ತು. ಹಾಂಗಾರೆ, ನಮ್ಮ ಅಹಿಂಸಾವಾದ ನಿಜವಾಗಿ ಸಾರ್ಥಕ ಅಪ್ಪದು ಯಾವಾಗ ? ನಾವು ಸ್ವಂತ ಬಲಶಾಲಿಗಳಾಗಿದ್ದರೂ ಬೇರೆಯವರ ಮೇಲೆ ನಾವಾಗಿ ಆಕ್ರಮಣ ಮಾಡದ್ದಿಪ್ಪಗ. ಮತ್ತೆ ಸ್ವಂತ ಸ್ಥಿಮಿತವ ಕಳಕೊಳ್ಳದ್ದ ನಮುನೆಯ ಆಕ್ರಾಮಕ ಧೋರಣೆಯ ಮೂಲಕ ಹಿಂಸೆಯ ಪ್ರಚೋದಕರು ನಮ್ಮ ಮುಟ್ಟುವಂದ ಮದಲು ೧೦೦ ಸರ್ತಿ ಆಲೋಚನೆ ಮಾಡುವ ಹಾಂಗಿಪ್ಪ ಎಚ್ಚರಿಕೆಯ ಸಂದೇಶವ ಜಗತ್ತಿಂಗೆ ನಾವು ಕಾಲಕಾಲಕ್ಕೆ ಕೊಟ್ಟುಗೊಂಡು ಬಂದಪ್ಪಗ. ಈ ಸಂದರ್ಭಲ್ಲಿ ಚರಿತ್ರೆಯ ಒಂದು ವಿಷಯವ ಉಲ್ಲೇಖ ಮಾಡ್ತೆ. ಬೌದ್ಧ ಧರ್ಮ ಪ್ರಸಾರ ಆದ ಪ್ರದೇಶದವೆಲ್ಲಾ ತಮ್ಮ ಮೊದಲಾಣ ಸ್ವಾಭಾವಿಕವಾದ ಪ್ರತಿರೋಧ ಮತ್ತು ಹೋರಾಟದ ಮನೋಭಾವವ ಕಳಕ್ಕೊಂಡ ಕಾರಣ ಮೊದಲು ಸುಭದ್ರವಾಗಿತ್ತ ಹಲವು ಸಂಸ್ಥಾನಂಗೊ ಪರಕೀಯರ ಆಕ್ರಮಣಕ್ಕೆ ಬಲಿಯಾಗಿ ನಾಶ ಆದವು ಹೇಳುವ ವಿಷಯವ ಯಾರೋ ಇತಿಹಾಸತಜ್ಞರು ವಿಮರ್ಶೆ ಮಾಡಿದ್ದರ ಓದಿದ ನೆಂಪು ಆವುತ್ತಾ ಇದ್ದು. ಇದಲ್ಲಿ ಎಲ್ಲೋರೂ ಕಲಿಯೆಕ್ಕಾದ ಒಂದು ಪಾಠ ಇದ್ದು ಹೇಳಿ ಎನಗೆ ಕಾಣ್ತು.

ನಮ್ಮ ದೇಶಲ್ಲಿ ಅಸಮರ್ಥ ಸರಕಾರ, ಅದಕ್ಷ ಆರಕ್ಷಕ ಇಲಾಖೆ, ರಾಷ್ಟ್ರೀಯ ಭದ್ರತೆಯ ವಿಷಯಲ್ಲಿಯೂ ಒಗ್ಗಟ್ಟಿಂದ ವರ್ತಿಸಲೆಡಿಯದ್ದ ಸ್ವಾರ್ಥಿ ರಾಜಕಾರಣಿಗೊ, ಛಿದ್ರವಾದ ಗಡಿಪ್ರದೇಶದ ಬೇಲಿ - ಇಷ್ಟೆಲ್ಲಾ ಮಡಿಕ್ಕೊಂಡು ಅಹಿಂಸಾವಾದದ ಮಾತಾಡಿದರೆ ಎಲ್ಲಿಗೆ ಉದ್ಧಾರ ಅಪ್ಪದು ?

- ಬಾಪಿ/ ನವೆಂಬ್ರ ೩೦, ೨೦೦೯

Tuesday, November 24, 2009

ಚೌ ಚೌ - ೦೨

ರಾಹುಲ್ ಉವಾಚ  :  ರಾಹುಲ್ ಗಾಂಧಿಗೆ ಜಾತಿವ್ಯವಸ್ಥೆಲಿ ನಂಬಿಕೆ ಇಲ್ಲೇಡ.  ಇದು ಆಕ್ಸ್ ಫರ್ಡ್  ವಿಶ್ವವಿದ್ಯಾಲಯಲ್ಲಿ ಕಲಿವಿಕೆ ಮಾಡಿದವಂಗೆ ಸಹಜವಾಗಿ ಇರೆಕಾದ ಪ್ರಗತಿಪರ ಚಿಂತನೆ ಮಾಂತ್ರ ಅಲ್ಲ,  ಭಾರತದ ರಾಜಕಾರಣಲ್ಲಿಪ್ಪ  ಢೋಂಗಿ ಜಾತ್ಯತೀತವಾದಿಗಳ ಬಾಯಿಲಿ ಬರಲೇಬೇಕಾದ ಹೇಳಿಕೆ.  ಹಾಂಗಾಗಿ ಮೆಚ್ಚೆಕ್ಕಾದ್ದೇ !   ರಜ ಸಾಮಾನ್ಯ ಜ್ಞಾನ ಇಪ್ಪವುದೇ ಊಹೆ ಮಾಡ್ಳೆಡಿಗಪ್ಪ ವಿಷಯ ಎಂತ ಹೇಳಿರೆ,  ಇವಂಗೆ ಮದುವೆ ಹೇಳಿ ಯಾವಗಾದರೂ ಇದ್ದರೆ,   ಹಿಂದೂ ಅಥವಾ ಬೇರೆ ಯಾವ ಧರ್ಮದ ಹುಡುಗಿಯೂ  ಖಂಡಿತ ಒಪ್ಪಿಗೆ ಆಗ.  ಮದುವೆ ಆವುತ್ತರೆ, ಇವನ ಹಾಂಗೆ  ಹೆರಂದ ಪ್ರಗತಿಪರ ಚಿಂತನೆಯ ತೋರ್ಪಡಿಸಿಗೊಂಡು ಒಳಂದ ಒಳ ಏಸು ಕ್ರಿಸ್ತನ ಭಜನೆ ಮಾಡುವ ತನ್ನ ಇಟೆಲಿಯ ಅಮ್ಮನ ಜಾತಿಯ  ಹುಡುಗಿ (ಮಹಿಳೆ)ಯೇ  ಆಯೆಕ್ಕಕ್ಕು.  ಮದುವೆಯನ್ನೂ ಗುಟ್ಟಿಲ್ಲಿ ಎಲ್ಯಾರೂ ಚರ್ಚಿಲ್ಲಿ ಮಾಡಿಗೊಂಡು ಮಾಧ್ಯಮದವಕ್ಕೆ ಬೇಕಾಗಿ ಒಂದು ಹೋಮದ ಕುಂಡಕ್ಕೆ ಸುತ್ತು ಬಪ್ಪ ನಾಟಕ ಮಾಡುಗು.   ಹೇಂಗೂ ಜಾತಿ ವ್ಯವಸ್ಥೆಲಿಯೇ ನಂಬಿಕೆ  ಇಲ್ಲದ್ದವ ಹೇಳಿ ಆದ ಮೇಲೆ,  ಚರ್ಚಿನ ಪಾದ್ರಿಗೊ ಅಮಾಯಕ ಹಿಂದೂಗಳ ಮತಾಂತರ ಮಾಡ್ತಾ ಇಪ್ಪ ವಿಷಯಲ್ಲಿಯೂ ಇವಂಗೆ ಎಂತ ಚಿಂತೆ ಇರ.  ಮತ್ತೆ, ಬಾಂಗ್ಲಾದೇಶಂದ ಬೇಲಿ ಹಾರಿ ಬಂದ ಮತ್ತು ನಿರಂತರವಾಗಿ ಬತ್ತಾ ಇಪ್ಪ ಕೋಟಿಗಟ್ಳೆ ಬ್ಯಾರಿಗೊ ನಮ್ಮ ದೇಶದ ಭದ್ರತೆಗೆ ಮಾರಕರಾದ ವಲಸಿಗರು ಹೇಳುವ ವಿಷಯವೂ  ಇವಂಗೆ ತುಂಬಾ ದೊಡ್ಡ ಸಮಸ್ಯೆ ಆಗಿ ಹೇಂಗೂ ಕಾಣ.  ಅಂತೂ ನಮ್ಮ ದೇಶದ ಭಾವಿ ಪ್ರಧಾನಿ ಹೇಳಿ ಹೆಸರಿಸಿಗೊಂಡವನ ಚಿಂತನೆ ಮತ್ತು ವರ್ತನೆ ತುಂಬಾ ಸ್ಪೂರ್ತಿದಾಯಕವಾಗಿ ಅಪ್ಪ ಹಾಂಗೆ ಕಾಣ್ತು.  ಇವನ ಕೈಲಿ ನಮ್ಮ ಯುವಪೀಳಿಗೆಯ ಭವಿಷ್ಯ  ಖಂಡಿತವಾಗಿ ಸುರಕ್ಷಿತ -  ಜಾತಿಪದ್ಧತಿಲಿ ನಂಬಿಕೆ ಇಲ್ಲದ್ದವು ಆಗಿದ್ದರೆ ಮಾತ್ರ !  ಇನ್ನೂ ಕೆಲವು  ಕೋಟಿ ಹಿಂದೂಗಳ ಹಿಡುದು ಮತಾಂತರ ಮಾಡಿಸಿಗೊಂಬಲಕ್ಕು  ಹೇಳುವ ಆಶೆಲಿ, ಇಟೆಲಿಯ ಪೋಪ್  ಇವ ಪ್ರಧಾನಿ ಕುರ್ಚಿಲಿ ಕೂಪದರನ್ನೇ ಕಾದುಗೊಂಡಿಕ್ಕು.

ಹೊಣೆಗಾರಿಕೆ : ಕೊಳಕ್ಕುತನಕ್ಕೆ ಎಂತಾರೂ ನೋಬೆಲ್  ಪ್ರಶಸ್ತಿ ಹೇಳಿ ಇತ್ತಿದ್ದರೆ, ಅದು  ಖಂಡಿತ ಭಾರತಕ್ಕೆ ಸಿಕ್ಕುತ್ತೀತು  ಹೇಳುವ  ಹೇಳಿಕೆ ಕೊಟ್ಟು ಕೇಂದ್ರ ಸರಕಾರದ ಮಂತ್ರಿ ಜೈರಾಮ್  ರಮೇಶ್  ಹೇಳುವವ ಇತ್ತೀಚೆಗೆ ರಜ ಶುದ್ದಿ ಮಾಡಿದ.   ಹೀಂಗಿಪ್ಪ ಹೇಳಿಕೆ ಕೊಡೆಕಾರೆ,  ಒಂದು ಜವಾಬ್ದಾರಿ ಸ್ಥಾನಲ್ಲಿ ಇಪ್ಪವಂಗೆ ನಿಜವಾಗಿ  ತುಂಬಾ ಧೈರ್ಯ ಬೇಕು.  ಆದರೆ, ಸಮಸ್ಯೆ ಎಂತ ಹೇಳಿರೆ ಇದು ಆತ್ಮ ನಿವೇದನೆಯೋ, ಹತಾಶೆಯೋ, ಅಸಹಾಯಕತೆಯೋ, ಪ್ರಚಾರಪ್ರಿಯತೆಯೋ, ಹುಂಬತನವೋ ಹೇಳಿ ಅರ್ಥ ಆಗದ್ದ ಹಾಂಗಿಪ್ಪ ಹೇಳಿಕೆಯಾಗಿ ಹೋತು !  ಭಾರತೀಯರ ಕೊಳಕ್ಕುತನ ಎಷ್ಟಾದರೂ ಜಗತ್ಪ್ರಸಿಧ್ಧ ವಿಷಯ. ಆದರೆ, ಇದರ ನಿವಾರಣೆಗೆ ಸರಕಾರ -  ಅದರಲ್ಲೂ ಸುಮಾರು ೫೦ ವರ್ಷ ರಾಜ್ಯಭಾರ ಮಾಡಿದ ಕೋಂಗ್ರೇಸು ಸರಕಾರ - ಏಕೆ ಎಂತದೂ ಕ್ರಮ ಕೈಗೊಂಡಿದಿಲ್ಲೆ  ಹೇಳುವ ಚೋದ್ಯಕ್ಕೆ  ಇವನತ್ರೆ ಎಂತಾರೂ ಸಮಾಧಾನಕರ ಉತ್ತರ ಇದ್ದಾಡವೋ ಹೇಳಿ ದೇವರೇ ಬಲ್ಲ.   ಇದಕ್ಕೆಲ್ಲಾ  ಯಾರು ಹೊಣೆ ಹೇಳಿ ಕೇಳುವಷ್ಟು ದೇಶಪ್ರೇಮ ಯಾವ ಮಾಧ್ಯಮದವರತ್ರುದೇ ಇಪ್ಪ ಹಾಂಗೆ ಕಾಣ್ತಿಲ್ಲೆ.  ಯಾಕೆ ಹೇಳಿರೆ ಅವರ ಶಕ್ತಿ ಎಲ್ಲ ಆರೆಸ್ಸೆಸ್, ಭಾಜಪ, ಶಿವಸೇನೆಗಳ  ಹುಳುಕುಗಳ ದುರ್ಬೀನು ಹಿಡುದು ಹುಡುಕ್ಕುದರಲ್ಲೇ  (ಅಪ)ವ್ಯಯ ಆವುತ್ತು.

ಭಿತ್ತಿ ಚಿತ್ರ : ಬೆಂಗ್ಳೂರು ಪೇಟೆಲಿ ಸರಕಾರೀ ಸ್ವಾಮ್ಯದ ಸಾರ್ವಜನಿಕ  ಗೋಡೆಗಳ ಸಂಪೂರ್ಣ ಕಾಯಕಲ್ಪ ಆಯಿದು.  ಈ ಗೋಡೆಗಳಲ್ಲಿತ್ತ ಸಿನೆಮಾದ ಜಾಹೀರಾತು ಚೀಟಿಗೊ, ರಾಜಕೀಯ ಪ್ರಕಟಣೆಗೊ ಇತ್ಯಾದಿ ಎಲ್ಲಾ ಮಾಯ ಆಯಿದು.  ಅದರ ಜಾಗೆಲಿ, ಕರ್ನಾಟಕದ ಪ್ರವಾಸೀ ಕೇಂದ್ರಂಗಳ ಸುಂದರ ವರ್ಣಚಿತ್ರಂಗಳ ಬರೆಶಿದ್ದವು.   ಇದು ಭರತ್ ಲಾಲ್  ಮೀನಾ ಹೇಳುವ ನಗರಪಾಲಿಕೆಯ ಆಯುಕ್ತನ ಚಿಂತನೆಯ ಮತ್ತು ಪ್ರಯತ್ನದ ಫಲ.   ನಿಜವಾಗಿಯೂ ನಂಬಲಸಾಧ್ಯವಾದ ಬದಲಾವಣೆಯೇ  ಸರಿ.  ಮೇಲೆ ಪ್ರಸ್ತಾಪಿಸಿದ ಕೊಳಕ್ಕುತನದ ನಿವಾರಣೆಗೆ ಒಂದು ಪ್ರಾಮಾಣಿಕ ಪ್ರಯತ್ನ.    ಈ ವಿಷಯಲ್ಲಿ ಚಲನಚಿತ್ರ ವಾಣಿಜ್ಯ ಮಂಡಲಿಯವು  ದೊಡ್ಡ ಗಲಾಟೆ ಮಾಡಿದವು.  ಇಷ್ಟರವರೆಗೆ  ಚೀಟಿ ಅಂಟುಸುಲೆ  ಧರ್ಮಕ್ಕೆ ಸಿಕ್ಕಿಗೊಂಡಿತ್ತ  ಇವರ ಪಿತ್ರಾರ್ಜಿತ ದರ್ಖಾಸ್ತಿನ ಸರಕಾರದವು ಆಕ್ರಮಣ ಮಾಡಿದವು  ಹೇಳಿ ಅವರ ಗೋಳು.  ಇಚ್ಛಾ ಶಕ್ತಿ ಇದ್ದರೆ ಎಲ್ಲಾ ಸಮಸ್ಯೆಗೊಕ್ಕೂ ಪರಿಹಾರ ಇದ್ದು ಹೇಳುದರ ಸಾಧಿಸಿ ತೋರಿಸಿದ  ನಗರಪಾಲಿಕೆಯ ಈ ಅಪರೂಪದ ಅಧಿಕಾರಿಗೆ  ಅಭಿನಂದನೆಯ ಪದಗುಚ್ಛದ ನಮನ.

- ಬಾಪಿ/  ೨೪ ನವೆಂಬ್ರ, ೨೦೦೯