Sunday, October 3, 2010

ಕವಲು

ಇಂದ್ರಾಣ ಕಾಲಲ್ಲಿ  ಸಾಹಿತ್ಯ ಕ್ಷೇತ್ರಲ್ಲಿ ಹೆಸರು ಮಾಡ್ಳೆ ಅಥವಾ ಪ್ರಶಸ್ತಿ ಪಡಕ್ಕೊಂಬಲೆ  ಬರವಣಿಗೆಲಿಪ್ಪ ತಿರುಳು ಮತ್ತು ಮೌಲ್ಯಕ್ಕಿಂತ ತಥಾ ಕಥಿತ ಸಾಹಿತಿಗೆ ಇಪ್ಪ ರಾಜಕೀಯ ಸಂಪರ್ಕ ಹೆಚ್ಚು ಮುಖ್ಯ ಹೇಳುದು ಎಲ್ಲೋರಿಂಗೂ ಗೊಂತಿಪ್ಪ ವಿಷಯವೇ.  ಆದರೆ ನಮ್ಮ ಪುಣ್ಯ, ದೇವರು ಎಲ್ಲದರಲ್ಲಿಯೂ ಒಂದು ಸಮತೋಲನವ ಕಾಪಾಡುತ್ತ.   ಗಡ್ಡ ಬಿಟ್ಟು, ಖದ್ದರ್ ಅಂಗಿ ಹಾಕಿ, ಬಂಡಾಯ ಶೈಲಿಯ ಸರಕುಗಳಿಂದಲೇ ಪ್ರಚಾರ ಗಿಟ್ಟಿಸಿಗೊಂಬವು ಒಂದು ಕಡೆ ಇದ್ದರೆ,   ಬಿಡುಗಡೆ ಆದ ಕೆಲವೇ ದಿನದ ಒಳ   ಪುಸ್ತಕದ ಸಾವಿರಗಟ್ಳೆ ಪ್ರತಿಗೊ  ಮಾರಾಟ ಆಗಿ, ತಿರುಗ ತಿರುಗ ಮುದ್ರಣ ಕಾಂಬ ಒಳ್ಳೆ ಸಾಹಿತ್ಯಕೃತಿಗಳ  ರಚನೆ ಮಾಡುವವೂ ಇದ್ದವು.   ಕೃತಿಚೌರ್ಯದ ಆರೋಪ ಹೊತ್ತುಗೊಂಡಿಪ್ಪ   ಒಬ್ಬ ಕನ್ನಡ "ಸಾಹಿತಿ"ಗೂ  ಜ್ಞಾನಪೀಠ ಪ್ರಶಸ್ತಿ  ಬಂದದು ಒಂದು ದುರಂತ ಆದರೆ,   ಅಂತಹ ಪ್ರತಿಷ್ಠೆಯ ಪ್ರಶಸ್ತಿಗೊ ಬಾರದ್ದೆ ಇದ್ದರೂ    ಜನಮನ್ನಣೆಯ ಮಾನದಂಡಲ್ಲಿ ಅತ್ಯಂತ ಎತ್ತರಲ್ಲಿಪ್ಪ  ಭೈರಪ್ಪನ ಹಾಂಗಿಪ್ಪ ಮೇರು ಸಾಹಿತಿಗಳೂ ನಮ್ಮ ಮಧ್ಯೆ ಇಪ್ಪದು ಸುದೈವ.      ಭೈರಪ್ಪನ ಹಾಂಗಿಪ್ಪ ಸಾರಸ್ವತ ಲೋಕದ ಋಷಿಗಳಿಂದಾಗಿ  ಕನ್ನಡ ಸಾಹಿತ್ಯ ಶ್ರೀಮಂತ ಆದ್ದದು ಮಾಂತ್ರ ಅಲ್ಲ, ಇಂದ್ರಾಣ ಗಣಕಯಂತ್ರದ ಯುಗಲ್ಲಿಯೂ ಕನ್ನಡದ ಜನರಲ್ಲಿ ಓದುವ ಹವ್ಯಾಸ ಜೀವಂತವಾಗಿ ಒಳುಕ್ಕೊಂಡಿದು.  
 
ಭೈರಪ್ಪ ಎಂತದೇ ಬರದರೂ ಸಾಮಾಜಿಕ ಚರ್ಚೆಯ ವಿಷಯ ಅಪ್ಪದು ಸಾಮಾನ್ಯ ಸಂಗತಿ.   ವಿಜಯ ಕರ್ನಾಟಕದವು ನಡೆಶಿದ ಮತಾಂತರದ ಬಗ್ಗೆ ನಡೆದ ಲೇಖನ ಸರಣಿಗಳಲ್ಲಿಯೂ,  ಇದೇ ಅನುಭವ ಆತು.  ಅವನ ಕೃತಿಗಳ ಸರಿಯಾದ ಮೌಲ್ಯಮಾಪನ ಮಾಡುದರ  ಬದಲು ಹೆಚ್ಚಿನ ವಿಮರ್ಶಕರು  ಪೂರ್ವಗ್ರಹಂದ ಅವನ ಕೃತಿಗಳಲ್ಲಿ ಬಪ್ಪ ವಿಷಯಂಗಳ ಅವನ ಸೈದ್ಧಾಂತಿಕ ನಿಲುವು ಹೇಳಿ ಆರೋಪಿಸಿ ವೈಯಕ್ತಿಕ ನಿಂದನೆಗೆ ತೊಡಗುದು ಮಾತ್ರ ವಿಷಾದನೀಯ.   ಇತ್ತೀಚೆಗೆ ಭೈರಪ್ಪ ಬರೆದ "ಕವಲು" ಕಾದಂಬರಿಯ ಬಗ್ಗೆ ಇತ್ತ   ವಿಮರ್ಶೆಯ ಕಾರ್ಯಕ್ರಮಕ್ಕೆ ಹೋಗಿಪ್ಪಗ  ಶತಾವಧಾನಿ ಗಣೇಶ್  ಹೇಳಿದ ವಿಷಯ ಇಂದಿನ   ವಿಮರ್ಶಕರ ಒಟ್ಟಾರೆ ದೃಷ್ಟಿಕೋಣ ಮತ್ತು (ಅ)ಪ್ರಬುದ್ಧತೆಗಳ ಎತ್ತಿ ತೋರಿಸುವ ಹಾಂಗಿತ್ತು.  ಹೆಚ್ಚಿನವು ಮಾಡುದು  ಪ್ರಚಾರ  ಮತ್ತು ಮನರಂಜನೆಗಾಗಿಪ್ಪ ಚರ್ಚೆಯೇ ಹೊರತು ವಿಷಯದ ಮೇಲೆ ಇಪ್ಪ ಆಸಕ್ತಿಂದಾಗಿ ಅಲ್ಲ.   
 
ಹಿಂದಾಣ ಕಾಲದ ವಿಷಯಂಗಳ ಬಗ್ಗೆ ಸಂಶೋಧನೆ ಮಾಡಿ ಅಂಬಗಾಣ ಕಾಲಲ್ಲಿ   ಹೀಂಗಿದ್ದತ್ತು ಹೇಳಿ ತಿಳಿಶುವವು  ಚರಿತ್ರೆಕಾರರು. ತಮ್ಮ ಜೀವನಕಾಲಲ್ಲೇ ಆದ, ಅವುತ್ತಾ ಇಪ್ಪ   ಬದಲಾವಣೆಗಳ ದಾಖಲಿಸಿ ಮುಂದಿನ ಪೀಳಿಗೆಯವಕ್ಕೆ ಉಪಕಾರ ಮಾಡುವವು  ಸಮಾಜಶಾಸ್ತ್ರಜ್ಞರು.   ವರ್ತಮಾನದ ಬರವಣಿಗೆಗೊ ಭವಿಷ್ಯಲ್ಲಿ ಚರಿತ್ರೆಯ ಟಿಪ್ಪಣಿಗಳಾಗಿ ಉಪಯೋಗ ಆವುತ್ತು.   ಸಾಹಿತ್ಯ ಮತ್ತು ಪತ್ರಿಕೋದ್ಯಮ - ಈ ಎರಡು ಕ್ಷೇತ್ರಲ್ಲಿಯೂ ಸಮಾಜಕ್ಕೆ  ಇಂತಹ ಒಂದು  ಅಪೂರ್ವ ಕಾಣಿಕೆ ಕೊಡುವ ಅವಕಾಶ ಇದ್ದು.  ಈ ದೃಷ್ಟಿಂದ ನೋಡಿರೆ ಭೈರಪ್ಪ ತನ್ನ ಬರಹಂಗಳ ಮೂಲಕ ಮುಂದಾಣ ಚರಿತ್ರೆಕಾರರ ಕೆಲಸದ ಹೊರೆಯ ಕಮ್ಮಿ ಮಾಡಿದ್ದ ಹೇಳ್ಳಕ್ಕು. 
 
ಭೈರಪ್ಪನ ಕಾದಂಬರಿಯ ಹಿನ್ನೆಲೆಲಿ  ೨೦ನೇ ಶತಮಾನದ ಉತ್ತರಾರ್ಧದ ಜೀವನ ಕಾಲವ ಅವಲೋಕನ ಮಾಡಿರೆ, ಸಮಾಜಲ್ಲಿ ಪುರುಷ-ಮಹಿಳೆಯರ ಸ್ಥಾನಮಾನ  ವಿಪರೀತ  ಬದಲಾವಣೆ ಆದ್ದದು ಕಂಡು ಬತ್ತು.  ಅರ್ಹತೆ ಇದ್ದರೂ ಬಡತನಂದಾಗಿಯೋ, ಸಂಪ್ರದಾಯಂದಾಗಿಯೋ ವಿದ್ಯಾಭ್ಯಾಸ ಮುಂದುವರಿಸದ್ದೆ ಬಾಲ್ಯಲ್ಲಿಯೇ ಮದುವೆ ಆಗಿ ಸಂಸಾರದ  ಹೊರೆ ಹೊತ್ತು, ಪುರುಷ ಪ್ರಾಧಾನ್ಯವ ಪ್ರಶ್ನಿಸದ್ದೆ  ಜೀವನ ಸಾಗಿಸಿದ ಹಳೆ ತಲೆಮಾರಿನ ಹೆಮ್ಮಕ್ಕೊಗೂ   ಮಾಣ್ಯಂಗಳಷ್ಟೇ ಕಲಿವಕೆ ಮಾಡ್ಯೊಂಡು ಗಂಡು-ಹೆಣ್ಣುಗಳ ಸಮಾನತೆಯ  ಪ್ರತಿಪಾದಿಸುವ,  ಭೌದ್ಧಿಕ  ಸ್ವಾಯತ್ತತೆ  ಮತ್ತು ಆರ್ಥಿಕ ಸ್ವಾವಲಂಬನೆಗಳೊಟ್ಟಿಂಗೆ  ಸ್ವಾಭಿಮಾನಂದ ಬದುಕ್ಕುಲೆ  ಇಚ್ಛಿಸುವ ಇಂದಿನ ತಲೆಮಾರಿನ  ಹುಡುಗಿಯರಿಂಗೂ ಅಜಗಜಾಂತರ. ಇಪ್ಪದರನ್ನೇ ಆದಷ್ಟು ಪ್ರೀತಿಂದ ಮಕ್ಕೊಗೆ ಹಂಚಿ ಕೊಟ್ಟು, ಮಕ್ಕಳ ಭವಿಷ್ಯಲ್ಲಿಯೇ ತಮ್ಮ ಜೀವನದ ಪರಿಪೂರ್ಣತೆ ಕಂಡ  ಮೊದಲಾಣವರನ್ನೂ  ಆಧುನಿಕ ಬದುಕಿನ ಓಟಲ್ಲಿ  ಗೆಲ್ಲುವ  ಆಶೆಯೊಟ್ಟಿಂಗೇ  ತಾವು ಬಾಲ್ಯಲ್ಲಿ   ವಂಚಿತರಾದ  ಸುಖ-ಸೌಲಭ್ಯಂಗಳ ಎಲ್ಲಾ   ಮಕ್ಕೊಗೆ ಒದಗಿಸೆಕ್ಕು  ಹೇಳುವ ಹುಮ್ಮಸ್ಸಿನ ಇಂದ್ರಾಣವರನ್ನೂ ಹೋಲಿಕೆ ಮಾಡುದು ಎಷ್ಟು ಸರಿ   ಹೇಳಿ ಗೊಂತಿಲ್ಲೆ.  ಅಷ್ಟಾಗಿ ಕಲಿವಿಕೆಯೂ ಇಲ್ಲದ್ದೆ, ಹೊರ ಪ್ರಪಂಚದ ಜ್ಞಾನವೂ ಇಲ್ಲದ್ದ ಅಬ್ಬೆಪ್ಪಂದ್ರ ನೆರಳಿಲ್ಲಿ ಬೆಳದ್ದರಿಂದಾಗಿ  ಹಳೆ ತಲೆಮಾರಿನ  ಮಕ್ಕೊಗೆ ಮಾರ್ಗದರ್ಶನದ ಕೊರತೆ ಇದ್ದಿಕ್ಕಾದರೂ ಪ್ರತಿಭೆ ಇಪ್ಪವು ಮತ್ತು  ಸ್ವಪ್ರೇರಣೆಂದ ಧುಮುಕಿದವು ಆರೂ ಸಾಮಾನ್ಯವಾಗಿ ಅವಕಾಶಂದ ವಂಚಿತರಾಯಿದವಿಲ್ಲೆ ಹೇಳಿ ಧಾರಾಳ ಹೇಳ್ಳಕ್ಕು.   ಅದೇ, ಸಂವಹನ ಮಾಧ್ಯಮಂಗಳ ಬಾಹುಳ್ಯದ  ಇಂದ್ರಾಣ ಯುಗಲ್ಲಿ  ಎಂತ ಬೇಕಾರೂ ಕೈಮುಷ್ಟಿ ಒಳವೇ ತಯಾರು  ಸಿಕ್ಯೊಂಡಿಪ್ಪಗ  ಮಕ್ಕೊಗೆ  ಅಗತ್ಯಕ್ಕಿಂತ ಹೆಚ್ಚಿನ  ಮಾರ್ಗದರ್ಶನ ಸಿಕ್ಕುತ್ತು ಹೇಳುವ ಪರಿಸ್ಥಿತಿ ಇದ್ದು.  ಆದರೆ, ಸವಲತ್ತು ಮತ್ತು ಅವಕಾಶಂಗೊ ಇಪ್ಪ ಪ್ರಮಾಣಲ್ಲಿ ಇಂದ್ರಾಣ ಮಕ್ಕಳ ಭವಿಷ್ಯ ಹೆಚ್ಚು ಉಜ್ವಲ ಮಾಡ್ಳೆಡಿಗು ಹೇಳ್ಳೆ ಎಡಿಯ.  ಕರ್ತವ್ಯ ನಿರ್ವಹಣೆಲಿ  ಅತಿಮುಖ್ಯವಾದ ನಿಃಸ್ವಾರ್ಥ ತ್ಯಾಗ ಮತ್ತು ಸಮರ್ಪಣಾ ಭಾವಂಗಳೇ  ಹಳೆ ಮತ್ತು ಹೊಸ ತಲೆಮಾರಿನ  ಅಬ್ಬೆಪ್ಪಂದ್ರ ಮಧ್ಯೆ  ಇಪ್ಪ ವ್ಯತ್ಯಾಸದ ಸಾರಾಂಶ ಹೇಳಿ ಎನ್ನ ಅಭಿಪ್ರಾಯ.
 
ಇನ್ನು ಕೊನೆಯದಾಗಿ,  ಉಪಸಂಹಾರ.  ಘೋಷಣೆ ಕೂಗಿ, ಬೊಬ್ಬೆ ಹಾಕಿಯೇ ತಮ್ಮ ಅಸ್ತಿತ್ವವ ಲೋಕಕ್ಕೆ ತೋರಿಸಿಗೊಂಬ  ಸ್ತ್ರೀವಾದಿಗಳ ಮತ್ತು ಸ್ತ್ರೀ-ಪುರುಷ ಸಮಾನತಾ ವಾದಿಗಳ  ಮಧ್ಯೆಯೂ ಸಮಾಜಲ್ಲಿ ಎದ್ದು ಕಾಂಬ ಹಾಂಗಿಪ್ಪ ಕೆಲಸ ಮಾಡಿದ ಕೆಲವು ಮಹಿಳಾಮಣಿಗಳ ಹೆಸರು ಉಲ್ಲೇಖಿಸದ್ರೆ ಅಪಚಾರ ಅಕ್ಕು.  ಧಾರ್ಷ್ಟ್ಯ, ದರ್ಪ, ಅಹಂಕಾರಂಗಳೇ ತಾಂಡವವಾಡುವ ಪುರುಷ ಪ್ರಧಾನ  ಆರಕ್ಷಕ ಇಲಾಖೆಯನ್ನೇ ತನ್ನ ಕಾರ್ಯಕ್ಷೇತ್ರವಾಗಿ ಆರಿಸಿ ಕೆಲಸಲ್ಲಿ ಗಮನಾರ್ಹ ಸಾಧನೆ ಮಾಡಿದ ಕಿರಣ್ ಬೇಡಿ, ವೃತ್ತಿ ಕ್ಷೇತ್ರಲ್ಲಿ ದುಡಿವಗ  ಬೇಕಾದಷ್ಟು ಹೆಸರು ಮಾಡಿ   ಜನಪ್ರಿಯತೆಯ ಉತ್ತುಂಗಲ್ಲಿಪ್ಪಗಳೇ  ನಿವೃತ್ತರಪ್ಪ  ಕಷ್ಟದ ನಿರ್ಧಾರ ತೆಕ್ಕೊಂಡು  ಸಂಸಾರಸ್ಥರಾಗಿ ತಮ್ಮ ಕರ್ತವ್ಯವ ಯಶಸ್ವಿಯಾಗಿ ನಿರ್ವಹಿಸಿದ  ಮಾಧುರಿ  ದೀಕ್ಷಿತ್,  ಶರ್ಮಿಳಾ ಟಾಗೋರ್  ರಂತಹ ಚಲನಚಿತ್ರನಟಿಯರು,  ಸ್ವತಃ ಬೇಕಾದಷ್ಟು ಪ್ರತಿಭೆ ಹೊಂದಿದ್ದರೂ ಗೆಂಡನ  ಕೆಲಸಕ್ಕೆ ಸದಾ ಒತ್ತಾಸೆಯಾಗಿ ನಿಂದು ತೆರೆಮರೆಯ ಪಾತ್ರಲ್ಲಿಯೇ ಧನ್ಯತೆ ಕಂಡ  ಸುಧಾ ಮೂರ್ತಿ - ಇಂತಹ ಕೆಲವು ಅಪರೂಪದ ವ್ಯಕ್ತಿಗೊ.  ಎಷ್ಟು ಜನ ಆಧುನಿಕ ಹುಡುಗಿಯರಿಂಗೆ ಇಂತಹವರ ಬದುಕು ಮತ್ತು  ಸಾಧನೆಗೊ ಅನುಕರಣೀಯವಾಗಿ ಕಾಣ್ತು  ಹೇಳುದರ ಮೇಲೆ ನಮ್ಮ ಮುಂದಿನ ಪೀಳಿಗೆಯ ಭವಿಷ್ಯ ನಿರ್ಧಾರ ಅಕ್ಕು.  ಇಂದ್ರಾಣ ಪೀಳಿಗೆಯ ಬಹುತೇಕರಿಂಗೆ  ರಾಖೀ ಸಾವಂತ್ ಅಥವಾ  ಮಲ್ಲಿಕಾ ಶೆರಾವತ್  ನ ಹಾಂಗಿಪ್ಪವು ಆದರ್ಶಪ್ರಾಯರಾಗಿ ಕಂಡರೆ ದೇವರೇ ಗತಿ !
 
-ಬಾಪಿ