Wednesday, September 23, 2009

ಕಲ್ಪವೃಕ್ಷ

ಮನೆ ಕಟ್ಟುವ ಆಲೋಚನೆ ತಲೆಗೆ ಹೋದ ಮೇಲೆ, ಪುರುಸೊತ್ತು ಇಪ್ಪಗ ಎಲ್ಲಾ ನಮ್ಮ ಸುತ್ತ ಮುತ್ತ ಇಪ್ಪ ಮನೆಗಳ ಹೊರನೋಟ, ಒಳಾಣ ವಿನ್ಯಾಸ, ಕೋಣೆಗಳ ಗಾತ್ರ, ಗೋಡೆಯ ಬಣ್ಣ ಇತ್ಯಾದಿಗಳ ಗಮನಿಸುವ ಪ್ರಕ್ರಿಯೆ ಅನೈಚ್ಛಿಕವಾಗಿ ಸುರು ಆವುತ್ತು ಹೇಳುದು ಎನ್ನ ಸ್ವಂತ ಅನುಭವ.  ಯಾರಾದರೂ ಮಾರ್ಗಲ್ಲಿ ಹೋಪವು ಯಾವುದಾದರೂ ಮನೆಯ ತಿರುಗಿ ತಿರುಗಿ ನೋಡಿರೆ, ಅವು ಸ್ವಂತ ಮನೆ ಕಟ್ಟುಸುತ್ತಾ ಇದ್ದವು ಹೇಳಿಯೇ ಲೆಕ್ಕ ! ಹೀಂಗೆ ನೋಡಿ ಸಂಗ್ರಹಿಸಿದ, ಓದಿ ತಿಳಿದ ವಿಷಯಂಗಳ ಎಲ್ಲಾ ಕ್ರೋಢೀಕರಿಸಿದ  ಕನಸಿನ ಮನೆಯ ಒಂದು ನೀಲಿನಕ್ಷೆಯ ಕೊನೆಗೂ ನೋಡುವ ಹಾಂಗೆ ಅಪ್ಪಗ ಒಂದು ಸುದೀರ್ಘ ನಿಟ್ಟಿಸುರು ಬಿಡುವಷ್ಟು ಸುಸ್ತು ಆಗಿರುತ್ತು.   ಅಂತೂ,  "ಮನೆ ಕಟ್ಟಿ ನೋಡು" ಹೇಳುವ ಗಾದೆಯ ಅರ್ಥದ ಸರಿಯಾದ ಪರಿಚಯ ಅಪ್ಪದು ಅಂಬಗಳೇ. ಮನೆ ಕಟ್ಟುಸುಲೆ ಹೆರಟ ಗೆಂಡ-ಹೆಂಡತಿ ಆದರ್ಶ ದಂಪತಿ ಅಪ್ಪೋ ಅಲ್ಲದೋ ಹೇಳುವ ವಿಷಯದ ನಿಜವಾದ ಪರೀಕ್ಷೆ ಅಪ್ಪದೂ ಅಂಬಗಳೇ !  ಹೊಸ ಮನೆಗೆ ಸಂಬಂಧಿಸಿದ   ಇಂಚಿಂಚು ವಿವರಂಗಳನ್ನೂ ಕೂಲಂಕುಶ ವಿಮರ್ಶೆ ಮಾಡಿ, ತನ್ಮೂಲಕ  ಉದ್ಭವಿಸುವ ಎಲ್ಲಾ ಚರ್ಚೆ, ಜಗಳ, ಜಟಾಪಟಿ, ವೈಮನಸ್ಯಂಗಳನ್ನೂ ಮೀರಿ ಯಾವ  ದಂಪತಿ ಮುಂದೆ ಸಾಗುತ್ತವೋ, ಅಂಥವರ ಗಾಢವಾದ ಹೊಂದಾಣಿಕೆಗೆ ಮೆಚ್ಚುಗೆ ವ್ಯಕ್ತ ಪಡಿಸಲೇ ಬೇಕು.   

ಹೀಂಗೆ ಮನೆ ಬಗ್ಗೆ ಕಲೆಹಾಕಿದ ಮಾಹಿತಿಗಳ ಪೈಕಿ ಅತ್ಯಂತ ರೋಚಕವಾದ್ದು ಹೇಳಿರೆ, ಪೇಟೆಯ ಮನೆಗಳಲ್ಲಿ ಕಾಂಬಲೆ ಸಿಕ್ಕುವ  ತೆಂಗಿನ ಮರಂಗಳ ಕಥೆ.  ಎಷ್ಟು ಸಣ್ಣ ನಿವೇಶನ ಆದರೂ ತೆಂಗಿನ ಸೆಸಿಗೆ ಜಾಗೆ ಬಿಟ್ಟೇ ಹೆಚ್ಚಿನವು ಮನೆ ಕಟ್ಟುತ್ತವು. ಹಾಂಗೂ ಜಾಗೆ ಸಾಲದ್ದೆ ಬಂದರೆ, ಮನೆಂದ ಹೆರ ಮಾರ್ಗದ ಕರೆಲಿ ನೆರಳಿಂಗೆ ಹೇಳಿ ಸೆಸಿ ನೆಡುವ ಬದಲು ತೆಂಗಿನ ಸೆಸಿಯನ್ನೇ ನೆಡುವ ಪುಣ್ಯಾತ್ಮಂಗಳೂ ಇದ್ದವು.  ಮತ್ತೆ ಬೇರೆಯವರಿಂದ ಖಾಲಿ ನಿವೇಶನವ ಖರೀದಿಸಿದ ಅಸಾಮಿಗೊ  ಅಲ್ಲಿ ಮೊದಲೇ ಅಡ್ಡಾದಿಡ್ಡಿ ಬೆಳೆದ ತೆಂಗಿನ ಮರ ಏನಾರೂ ಇದ್ದರೆ, ಅದಕ್ಕೆ ಬೇಕಾಗಿ ಮನೆಯ ವಿನ್ಯಾಸಲ್ಲಿ ವಿಶೇಷ ಹೊಂದಾಣಿಕೆ ಮಾಡಿಗೊಂಬಲೂ ಹಿಂಜರಿತ್ತವಿಲ್ಲೆ    ಕೆಲವು ಕಡೆ,  ತೆಂಗಿನ ಮರ ಮೇಲೆ ಹೋಪಲೆ ಮನೆಯ ಚಾವಣಿಯ ಒಟ್ಟೆ ಮಾಡಿ ವ್ಯವಸ್ಥೆ ಮಾಡಿಕೊಟ್ಟ ಸೃಜನಶೀಲ ಶಿಖಾಮಣಿಗಳೂ ಇದ್ದವು.  ತೆಂಗಿನ ಸೆಸಿ ಬೆಳದು ಮರ  ಅಪ್ಪಗ ಅದರ ಬೇರುಗೊ ಹೊಕ್ಕು ಮನೆಯ ಕಾಂಪೌಂಡು  ಒಡದು ಹೋದ ದಾರುಣ ದೃಶ್ಯ ಸರ್ವೇಸಾಮಾನ್ಯ. ಮತ್ತೆ ಮರಂಗೊಕ್ಕೆ ಬೆಳಕು ಇಪ್ಪ ಹೊಡೆಂಗೆ  ಬೆಳವ ದುರ್ಬುದ್ಧಿ  ಇಪ್ಪ ಕಾರಣ, ಪೇಟೆಯ ಮರಂಗೊ ಸರ್ತ ಬೆಳವದು ಭಾರೀ  ಅಪರೂಪ.  ಹೆಚ್ಚಾಗಿ ಮರಂಗೊ ಅಕ್ಕ ಪಕ್ಕದ ಮನೆಗೊಕ್ಕೋ ಅಥವಾ ಮಾರ್ಗಕ್ಕೋ ಮಾಲಿಗೊಂಡೇ ಇಪ್ಪದು.

ತೆಂಗಿನ ಮರದ ಬಗ್ಗೆ ಇಷ್ಟು ಭ್ರಮೆ ಇಪ್ಪಲೆ ಎಂತ ಕಾರಣ ಆಗಿಕ್ಕು ಹೇಳುವ ಚೋದ್ಯ ಮನಸ್ಸಿನ ಕಾಡುತ್ತಲೇ ಇದ್ದು.  ಭೂಲೋಕಲ್ಲಿಪ್ಪಗ ಕಲ್ಪವೃಕ್ಷವ ಸಾಂಕಿದ ಪುಣ್ಯದ ಫಲಂದ ಸ್ವರ್ಗಕ್ಕೆ ಆದ್ಯತೆಯ  ಟಿಕೇಟು ಸಿಕ್ಕುಗು ಹೇಳುವ ಆಶೆ ಆಗಿಕ್ಕೋ ?  ಹಾಂಗಾರೆ, ಇಷ್ಟು ಧರ್ಮಿಷ್ಠರಾಗಿಪ್ಪವಕ್ಕೆ ತಾವು ನೆಟ್ಟ  ತೆಂಗಿನಮರಂಗಳಿಂದ  ಕಾಲಕಾಲಕ್ಕೆ ಕಸವು ಕೀಳುವ, ಒಣಕ್ಕಟೆ ಮಡಲು/ಕಾಯಿಗಳ   ತೆಗೆಶುವ ವ್ಯವಸ್ಥೆ ಮಾಡೆಕ್ಕು ಹೇಳುವ ಕನಿಷ್ಟ ಪರಿಜ್ಞಾನವೂ ಏಕೆ ಇರ್ತಿಲ್ಯೋ ?  ತೆಂಗಿನ ಕಾಯಿ ತಲಗೆ ಬಿದ್ದು ಸತ್ತರೆ ಸೀದಾ ಸ್ವರ್ಗಕ್ಕೆ ಹೋವುತ್ತು ಹೇಳುವ ಯಾವುದಾದರೂ ಪುರಾಣದ ದೃಷ್ಟಾಂತದ ಮೇಲಾಣ ಕುರುಡು ನಂಬಿಕೆಯೋ ಏನೋ ?  ಹಾಂಗೆ ಹೇಳಿ ಆದರೆ,   ನಡಕ್ಕೊಂದು ಹೋಪಗ ಎರಡು ಸರ್ತಿ  ಕೊಟ್ಟುಕಾಯಿ ತಲೆಯ ಮೇಲೆ ಬೀಳುದು ಸೆಕೆಂಡಿನ ಅಂತರಲ್ಲಿ ತಪ್ಪಿದ್ದದು ಎನ್ನ  ಪುಣ್ಯವೋ  ಅಥವಾ ಗ್ರಹಚಾರವೋ ಹೇಳುದು ಈಗ ದೊಡ್ಡ ಜಿಜ್ಞಾಸೆಯ ವಿಷಯವೇ ಆವುತ್ತು.   ಮತ್ತೆ, ತೆಂಗಿನ ಮರದ ಅಡಿಲಿ ನಿಲ್ಲಿಸಿದ ಎನ್ನ ಹಳತ್ತು ಕಾರಿನ ಗಾಜು ಹೊಡಿ ಆದ ಶುದ್ದಿಯ ಅನಗತ್ಯ ವಿವರಂಗಳ ಹೇಳಿ ಸುಮ್ಮನೆ  ಮರ್ಯಾದೆ ಕಳಕ್ಕೊಂಬ  ದುಃಸಾಹಸಕ್ಕೆ ಆನು ಖಂಡಿತ ಕೈಹಾಕುತ್ತಿಲ್ಲೆ.

ಈ ಸಂದರ್ಭಲ್ಲಿ ಎನ್ನ ಒಬ್ಬ ಗೆಳೆಯ ಬಾಲ್ಯಲ್ಲಿ ತೆಂಗಿನ ಮರದ ಬಗ್ಗೆ ಬರೆದ ಒಂದು ಪ್ರಬಂಧ ನೆಂಪು ಆವುತ್ತಾ ಇದ್ದು.  ಅದರಲ್ಲಿ ಅವ ತನಗಿಪ್ಪ ಸಮಸ್ತ ಜ್ಹಾನವನ್ನೂ ಧಾರೆ ಎರದು  ತೆಂಗಿನಮರದ ಸರ್ವ ಉಪಯೋಗಂಗಳನ್ನೂ ಎಳೆಎಳೆಯಾಗಿ ಬಿಡಿಸಿ ಬರದಿತ್ತಿದ್ದ. ಮಳೆಗಾಲಲ್ಲಿ ಕಾಲುನೀಡಿ ಕೂದುಗೊಂಡು ಸುಟ್ಟು ಹಾಕಿದ ಹಲಸಿನ ಹಪ್ಪಳಕ್ಕೆ ತೆಂಗಿನೆಣ್ಣೆ ಸವರಿ, ಕಾಯಿತುಂಡು ಸೇರಿಸಿ ತಿಂಬ ರುಚಿವಿಶೇಷ,  ಮನೆ ಜೆಂಬ್ರಲ್ಲಿ ತೆಂಗಿನ ಮಡಲು ಹಾಕಿದ ಜಾಲಿನ ಚಪ್ಪರದ ಒಳ ಕಂಬಾಟ ಆಡುವ ವಿಷಯ ಎಲ್ಲಾ ಸೇರಿದ ಅವನ ಬರವಣಿಗೆಯ ಶೈಲಿಗೆ ಮನಸೋತ ಶಾಲೆಯ  ಮಾಷ್ಟ್ರಂಗೆ ಕೆಲವು ಕ್ಷಣಕ್ಕಾದರೂ ತನ್ನ ಸ್ವಂತ ಬಾಲ್ಯಕ್ಕೆ ಮರಳಿದ ಮಧುರ ಅನುಭವ ಆಗಿಪ್ಪಲೇ ಬೇಕು.   ಆದರೆ ಎಷ್ಟೇ ಬರದರೂ ಮಾಷ್ಟ್ರ ಬರಕ್ಕೊಂಡು ಬಪ್ಪಲೆ ಹೇಳಿದ ಒಂದು ಪುಟ  ಭರ್ತಿ ಆಗದ್ದ ಕಾರಣ, ಈ ಮಾಣಿ ಇನ್ನೂ ರಜ ಬುದ್ಧಿವಂತಿಕೆ ಉಪಯೋಗಿಸಿದ.  ಒಳುದ ಅರ್ಧ ಪುಟಲ್ಲಿ ತೆಂಗಿನ ಮರದ ಬುಡಲ್ಲಿ ತಾಡುವ ದನಂಗಳ ಕಟ್ಟಿ ಹಾಕುವ ವಿಷಯ ನೆಂಪಾಗಿ ಅದರ ಬಗ್ಗೆ  (ದನದ ಕೊಂಬಿನ ವರ್ಣನೆಯೂ ಸೇರಿ) ಸುಮಾರು ವಿವರಂಗಳ ಸೇರಿಸಿದ.  ಹಾಂಗೇ ಮುಂದುವರುದು, ದನದ ಹಾಲು ಮತ್ತದರ ವಿವಿಧ ಉತ್ಪನ್ನಂಗೊ,  ಗೊಬ್ಬರ ಮತ್ತು ಸಾವಯವ ಕೃಷಿ ಇತ್ಯಾದಿ ಸಕಲ ವಿಷಯಂಗಳನ್ನೂ ಒಳಗೊಂಡ  ಮಹಾಪ್ರಬಂಧವನ್ನೇ ಮಂಡಿಸಿಬಿಟ್ಟ.  ಕೊನೆಗೂ ಅದರ ಓದಿ ಮುಗಿಶಿ ಅಪ್ಪಗ  ಅರ್ಜುನಂಗೆ ಆದ ವಿಶ್ವ ರೂಪ ದರ್ಶನದ ಅನುಭವವೇ ಎನಗುದೇ ಆತು.   ಎನಗೆ ಕನ್ನಡ ಸಾಹಿತ್ಯ ಪ್ರಪಂಚದ ಮೊತ್ತ ಮೊದಲ ಪರಿಚಯ ಆದ್ದದು ಈ ಪ್ರಬಂಧದ ಮೂಲಕವೇ ಹೇಳಿ ನಿಸ್ಸಂಕೋಚವಾಗಿ ಹೇಳ್ಳಕ್ಕು.

- ಬಾಪಿ / ೨೩.೦೯.೨೦೦೯

Monday, September 21, 2009

ಶ್ವಾನಪ್ರಿಯರು

ಒಂದರಿ ಒಂದು ನಾಯಿ ಉಸುಲು ಕಟ್ಟಿ, ಜೀವ ಬಿಟ್ಟು ಓಡಿಗೊಂಡಿತ್ತಡ.  ಅದರ ಕಂಡು ಇನ್ನೊಂದು ನಾಯಿ, "ಎಂತ ಸಂಗತಿ ? ಎಂತಕೆ ಮರ್ಲು ನಾಯಿ ಕಚ್ಚಿದವರ  ಹಾಂಗೆ ಓಡುತ್ತಾ ಇದ್ದೆ ?" ಹೇಳಿ ಕೇಳಿತ್ತಾಡ. ಅಂಬಗ ಈ ನಾಯಿ, "ಸಂಗತಿ ಎಂತ ಹೇಳಿರೆ, ಹತ್ರಾಣ ಮಾರ್ಗಲ್ಲಿ ಒಂದು ಹೊಸ ಕರೆಂಟಿನ ಕಂಬ ನೆಟ್ಟಿದವಡ. ಅದರ ಉದ್ಘಾಟನೆ ಮಾಡುವೊ ಹೇಳಿ ಹೋವುತ್ತಾ ಇದ್ದೆ.   ಸುಮ್ಮನೆ ಕೊರಪ್ಪಿ, ಗೌಜಿ ಮಾಡಿ ಎಲ್ಲಾ ನಾಯಿಗೊಕ್ಕೂ ಗೊಂತಪ್ಪ ಹಾಂಗೆ ಮಾಡೆಡ, ನೀನು ಬೇಕಾರೆ ಎನ್ನೊಟ್ಟಿಂಗೆ ಬಾ"  ಹೇಳಿತ್ತಾಡ.  

ಇತ್ತೀಚೆಗೆ ಬೆಂಗ್ಳೂರು ಮಹಾನಗರಲ್ಲಿ ಕಾಟು ನಾಯಿಗಳ ಹಾವಳಿ ತಡವಲೆಡಿಯದ್ದೆ ಸಾರ್ವಜನಕರಿಂಗೆ ತೊಂದರೆ ಆಗಿಪ್ಪಗ ಸರಕಾರದವು ನಾಯಿಗಳ ಹಿಡಿವ ಕೆಲಸಲ್ಲಿ ವಿಶೇಷ ತರಬೇತಿ ಇಪ್ಪವರ  ಕೇರಳಂದ  ಬಪ್ಪಲೆ ಮಾಡಿ   ಉಪದ್ರ ಕೊಡುವ ನಾಯಿಗಳ ಹಿಡಿದು ಗೂಡುಗಳಲ್ಲಿ ತುಂಬಿಸಿ ತೆಕ್ಕೊಂಡು ಹೋಪ ವ್ಯವಸ್ಥೆ ಮಾಡಿತ್ತಿದ್ದವು.   "ಕಚ್ಚುದು ನಾಯಿಗಳ ಹುಟ್ಟುಗುಣ" ಹೇಳುವ ಸಾಮಾನ್ಯಜ್ಞಾನವುದೇ ಇಲ್ಲದ್ದೆ ತಮ್ಮ ಮೇಲೆ ದೌರ್ಜನ್ಯ ಎಸಗುತ್ತಾ ಇಪ್ಪ ಸರಕಾರದ ವರ್ತನೆಯ ಖಂಡಿಸಿ ಠರಾವು ಮಂಡನೆ ಮಾಡುದರ ಮೂಲಕ ಅಸಮಾಧಾನ ವ್ಯಕ್ತಪಡಿಸುಲೆ ಹೇಳಿ ಅಖಿಲ ಭಾರತ ಶ್ವಾನ ಹಿತರಕ್ಷಣಾ ಸಮಿತಿ (ನೋಂ) - ಇವು  ಬೆಂಗ್ಳೂರಿಲ್ಲ್ಲಿಒಂದು ಮಹಾಸಭೆಯ  ಏರ್ಪಡಿಸಿದವಡ.  ಸಮ್ಮೇಳನದ ಶುಭದಿನದಂದು ಭಾರತದ ಎಲ್ಲಾ ಪ್ರದೇಶಂಗಳಿಂದ ವಿವಿಧ ರೀತಿಲಿ ಕೊರಪ್ಪುವ, ಬೇರೆ ಬೇರೆ ಬಣ್ಣ, ಗಾತ್ರದ ನಾಯಿಗೊ ಬಂದು ಸೇರಿದವಡ.  ಇಷ್ಟೆಲ್ಲಾ ವಿಭಿನ್ನತೆ ಇದ್ದರೂ ಸೇರಿದ ನಾಯಿಗೊ ಎಲ್ಲಾ ತಮ್ಮ ಸಂಪ್ರದಾಯದ ರೀತಿಲಿ ಬೀಲ ಆಡಿಸಿ ಉಭಯ ಕುಶಲೋಪರಿ ವಿಚಾರಿಸಿಗೊಂಡಿತ್ತಿದವಡ.  ಆದರೆ, ಕೆಲವು ನಾಯಿಗೊ ಮಾತ್ರ ಸಂಪ್ರದಾಯಕ್ಕೆ ಅಪಚಾರ ಹೇಳಿ ಕಾಂಬ ಹಾಂಗೆ ಬೀಲವ ಮೇಲಂದ ಕೆಳಂಗೆ ಆಡಿಸಿಗೊಂಡಿತ್ತಿದ್ದವಡ.  ಇದರ ಕಂಡು ಸಮ್ಮೇಳನದ ಸ್ವಾಗತ ಸಮಿತಿಯವಕ್ಕೆ ಇವು ಬ್ಯಾರಿಗಳ ದೇಶಂದ ಬೇಲಿನುಗ್ಗಿ ಬಂದ  ಗೂಢಚಾರಿಗೊ ಆಗಿಕ್ಕೋ ಹೇಳಿ ರಜ ಅನುಮಾನ ಬಂದು, ಆ ನಾಯಿಗಳ ಸಮ್ಮೇಳನದ ಚಪ್ಪರಂದ ಅತ್ಲಾಗಿ ಕರಕ್ಕೊಂಡು ಹೋಗಿ, "ನಿಂಗೊ ಯಾವ ಸೀಮೆಯವು ? ನಿಂಗಳ ಬೀಲ ಆಡಿಸುವ ಕ್ರಮ ತುಂಬಾ ವಿಚಿತ್ರ ಕಾಣ್ತನ್ನೆ  ?" ಹೇಳಿ ಜೋರಿಲ್ಲಿ ಕೊರಪ್ಪಿ ಕೇಳಿದವಡ. ಅಷ್ಟಪ್ಪಗ ಅವು, "ಎಂಗೊ ಬೊಂಬಾಯಿಂದ ಬಂದವು. ಎಂಗಳದ್ದುದೇ ಮೂಲಲ್ಲಿ ನಿಂಗಳ ಸಂಪ್ರದಾಯದವೇ. ಆದರೆ, ಬೊಂಬಾಯಿಲಿ ಎಂಗೊಗೆ ಜನಸಾಂದ್ರತೆಂದಾಗಿ ಅಡ್ಡಡ್ಡ ಬೀಲ ಆಡಿಸುಲೆ ಜಾಗೆ ಸಾಕವುತ್ತಿಲ್ಲೆ. ಹಾಂಗಾಗಿ ಮೇಲಂದ ಕೆಳಂಗೆ   ಆಡಿಸುತ್ತೆಯೊ. ಎಷ್ಟೋ ತಲೆಮಾರಿಂದ ಅಲ್ಲಿಯೇ ಇಪ್ಪ ಕಾರಣ ಈಗ ಇದುವೇ ಅಭ್ಯಾಸ ಆಗಿ ಹೋಯಿದು.  ಕ್ಷಮಿ ಸೆಕ್ಕು"  ಹೇಳಿದವಡ.

ಈ ಶ್ವಾನ ಕಥಾಪಠನ ಎಂತಕೆ ಮಾಡಿದ್ದದು ಹೇಳಿರೆ, ದಿನಾ ಮಾಡುವ ಕಾಲ್ನಡಿಗೆಯ ವ್ರತಾಚರಣೆಯ ಸಂದರ್ಭಲ್ಲಿ ಸುಮಾರು ಶ್ವಾನಪ್ರಿಯರು ಕಾಂಬಲೆ ಸಿಕ್ಕುತ್ತವು.  ಇವರ ಒಟ್ಟಿಂಗೆ ಇಪ್ಪ ಭಯಂಕರ ಗಾತ್ರದ ನಾಯಿಗೊ ದೊಡ್ಡ ಹೊಟ್ಟೆಯ ತಮ್ಮ ಯಜಮಾನಂಗಳನ್ನೇ ಎಳಕ್ಕೊಂಡು ಹೋವುತ್ತಾ ಇಪ್ಪ ದೃಶ್ಯ ನೋಡ್ಳೆ ಭಾರೀ ಗಮ್ಮತಿರ್ತು.  ಕೆಲವು  ನಾಯಿಗೊಕ್ಕೆ ಸಂಕೋಲೆಯುದೇ ಇರ್ತಿಲ್ಲೆ. ಯಜಮಾನಂಗೊಕ್ಕೆ ತಮ್ಮ ನಾಯಿಗಳ ಮೇಲೆ ಅಷ್ಟುದೇ ಭರವಸೆ ! ಹೀಂಗೆ ಸಂಕೋಲೆ ಇಲ್ಲದ್ದ ನಾಯಿಗೊ ಎದುರು ಸಿಕ್ಕಿದರೆ, ನಿಜವಾಗಿ ವ್ಯಾಯಾಮಕ್ಕೋಸ್ಕರ ಕಾಲ್ನಡಿಗೆ ಮಾಡುವ ಎನ್ನ ಹಾಂಗಿಪ್ಪ ಪಾಪದವಕ್ಕೆ ಪ್ರಾಣಭಯಂದ ಎದೆಬಡಿತ ಜಾಸ್ತಿ ಆವುತ್ತು.  ನಾಯಿಗೊಕ್ಕೆ  ಸ್ವಾಮಿಭಕ್ತಿ ಇಪ್ಪದು ಅಶನ ಹಾಕುವವರ  ಮೇಲೆ ಮಾಂತ್ರ, ದಾರಿಲಿ ಹೋಪವರ ಮೇಲೆ ಎಲ್ಲ ಎಂತ ಪ್ರೀತಿ ಇರ್ತಿಲ್ಲೆ ಹೇಳುವ ಸಾಮಾನ್ಯಜ್ಞಾನ ಇಲ್ಲದ್ದ ಶ್ವಾನಪ್ರಿಯ ಯಜಮಾನಂಗಳ ಮೇಲೆ ವಿಪರೀತ ಕೋಪ ಬತ್ತು. 

ಇನ್ನು, ನಾಯಿಗಳ ಹೆರ ಕರಕ್ಕೊಂಡು ಹೋಗಿ ತಿರುಗುಸುವ ಮೂಲ ಉದ್ದೇಶ ವ್ಯಾಯಾಮ ಅಥವಾ ಸ್ವಚ್ಚ ಹವಾಸೇವನೆ ಆಂತೂ ಖಂಡಿತ ಅಲ್ಲ ಹೇಳುದು ಗುಟ್ಟಿನ ಸಂಗತಿ ಎಂತ ಅಲ್ಲ.  ಈ ನಾಯಿಗೊಕ್ಕೆ  ಎಂತಲ್ಲ ತಿಂಬಲೆ ಕೊಡುತ್ತವು ಹೇಳಿ ಗೊಂತಿಲ್ಲೆ.  ಅವು ಒಂದೊಂದು ಹೆಡಗೆ ಹೇಸಿಗೆ ಮಾಡಿ ಮಡುಗುತ್ತವು. ಇದರ ಮನೆಲಿ ಒತ್ತರೆ ಮಾಡ್ಲೆ ಪುರುಸೊತ್ತು ಆಗದ್ದ ಕಾರಣ, ಮಾರ್ಗದ ಕರೆಲಿ ಗಲೀಜು  ಮಾಡಿಸಿ  ತಮ್ಮ ಕೆಲಸ ಸುಲಭ ಮಾಡಿಗೊಂಬ ಬೇಜವಾಬ್ದಾರಿ ವ್ಯಕ್ತಿಗಳೇ ಇಂತಹ ಯಜಮಾನಂಗೊ.  ಬೇರೆಯವರ ಮನೆಯ ಗೇಟಿನ ಬುಡಲ್ಲಿ, ಅವು ಹಾಕಿದ ರಂಗೋಲಿಯ ಮೇಲೆಯೇ  ತಮ್ಮ ನಾಯಿಗೊ  ಹೇಸಿಗೆ ಮಾಡುದರ ನೋಡಿ ಖುಷಿ ಪಡುವ ವಿಘ್ನ ಸಂತೋಷಿಗಳೂ ಧಾರಾಳ ಇದ್ದವು.   ಎನ್ನ ವಾಹನವ ಮಾರ್ಗದ ಕರೆಲಿ ನಿಲ್ಲಿಸಿಪ್ಪಗ  ಅದರ  ಗಾಲಿಯ ಮೇಲೆ ಶ್ವಾನಮೂತ್ರಸಿಂಚನ ಆಗದ್ದ ದಿನ ಅಪರೂಪ  ಹೇಳ್ಳಕ್ಕು.   ಹೀಂಗಿಪ್ಪ ಮೂರ್ಖ, ಸಮಾಜದ್ರೋಹಿ ಶ್ವಾನಪ್ರಿಯರ  ನಡವಳಿಕೆ ನೋಡಿರೆ, ತಮ್ಮ ಮುಂದಿನ ಜನ್ಮಲ್ಲಿ ನಾಯಿ ಆಗಿ ಹುಟ್ಟುಲೆ ಈಗಲೇ ತಾಲೀಮು ನಡೆಸುತ್ತಾ ಇಪ್ಪ ಹಾಂಗೆ ಕಾಣ್ತು.

ಈ ವಿಷಯಕ್ಕೆ ಸಂಬಂಧ ಪಟ್ಟ ಹಾಂಗೆ, ಅಮೆರಿಕಾಕ್ಕೆ ಹೋಗಿಪ್ಪಗಾಣ ಒಂದು ಅನುಭವವ ಹೇಳಲೇ ಬೇಕು. ಎನ್ನ ನಯಾಗರಾಕ್ಕೆ ಕರಕ್ಕೊಂಡು ಹೋದ ಸಹೋದ್ಯೋಗಿ ಮಿತ್ರ ಒಬ್ಬ ಪರಸ್ಪರರ ಸ್ವಂತ ಜೀವನದ ವಿಷಯ ಪ್ರಸ್ತಾಪ ಮಾಡಿಗೊಂಡಿಪ್ಪಗ, ತನ್ನ ಒಂಟಿ ಜೀವನದ ಸಂಗಾತಿಯಾದ ೧೨ ವರ್ಷದ ನಾಯಿಯ ವಿಷಯವ ಅರ್ಧ ಘಂಟೆಯಷ್ಟು ದೀರ್ಘ ಕಾಲ ಅತ್ಯಂತ ಹೆಮ್ಮೆಂದ ವಿವರಿಸಿದ. ನಾವು ಮನೆಯ ಮಕ್ಕಳ ವಿಷಯಲ್ಲಿ  ವಹಿಸುವಷ್ಟೇ ಕಾಳಜಿ ಅವನ ನಾಯಿಯ ಕುರಿತಾದ ವಿವರಣೆಲಿಯೂ ಕಂಡತ್ತು.    ಆ ನಾಯಿ  ಹೇಂಗೆ ಅವನ ಜೀವನದ ಒಂದು  ಅವಿಭಾಜ್ಯ  ಅಂಗವೇ  ಆಗಿ ಹೋಯಿದು ಹೇಳುದು ಅವನ ಕಥೆಯ ಸಾರಾಂಶ.   ಎಲ್ಲಾ ಶ್ವಾನ ಪ್ರಿಯರಿಂಗೂ ತಮ್ಮ ಸಾಕುಪ್ರಾಣಿಗಳ ಮೇಲೆ ಇಷ್ಟೇ ನೈಜವಾದ ಪ್ರೀತಿ ಇಕ್ಕು.   ಆದರೆ, ಆ ಪ್ರೀತಿಯ ಸಮಾಜಲ್ಲಿಪ್ಪ ಬೇರೆಯವಕ್ಕೆ ತೊಂದರೆ ಆಗದ್ದ ಹಾಂಗೆ ನಿಭಾಯಿಸುವ ಅಭ್ಯಾಸ ಮಾಡೆಕ್ಕು ಹೇಳಿ ಏಕೆ ಗೊಂತಾವುತ್ತಿಲ್ಲೆ ?      

ಶ್ವಾನಂಗಳ ಸ್ವಾಮಿನಿಷ್ಠೆಯನ್ನೇ ತಮ್ಮ ಸಂಸ್ಥೆಯ ಲಾಂಛನವಾಗಿ ಮಾಡಿಗೊಂಡ ಸಿಂಡಿಕೇಟ್ ಬ್ಯಾಂಕಿನ  ಆಢಳಿತವರ್ಗಕ್ಕೆ ಅಭಿನಂದನೆ ಹೇಳಲೇ ಬೇಕು.   ಆದರೆ,  ಸದರಿ ಬ್ಯಾಂಕಿನ ನೌಕರರು ಬ್ಯಾಂಕಿಂಗೆ ಬಂದ ಗ್ರಾಹಕರ ಕಂಡು  ನಾಯಿಗಳ ಹಾಂಗೆ ಕೊರಪ್ಪುತ್ತಾ ಇಪ್ಪದರ ನೋಡಿರೆ, ಇವು ತಮ್ಮ ಬ್ಯಾಂಕಿನ ಲಾಂಛನದ ಮೂಲ ಕಲ್ಪನೆಯ ತಪ್ಪು ಗ್ರಹಿಕೆ ಮಾಡಿಗೊಂಡಿಪ್ಪದು ಸ್ಪಷ್ಟ ಆಪ್ಪದಲ್ಲದ್ದೆ, ಅವರ  ಮುಗ್ಧತೆ ಬಗ್ಗೆ ಕನಿಕರ ಹುಟ್ಟುತ್ತು.  ಕೊನೆಯದಾಗಿ,  ಮೂಕಪ್ರಾಣಿಯಾದ ಶ್ವಾನದ ಪರವಾಗಿ ಒಂದು ಮನವಿ  :  ವಿಶ್ವಾಮಿತ್ರ ನಾಯಿ ಮಾಂಸ ತಿಂದ  ಪುರಾಣದ ಕಥೆಯ ಸತ್ಯಾಸತ್ಯತೆ ಬಗ್ಗೆ  ಒಂದು ನಿಷ್ಪಕ್ಷವಾದ ತನಿಖೆ ಆಯೆಕ್ಕು ಹೇಳಿ ಇತಿಹಾಸಕಾರರ ಆನು ಆಗ್ರಹ ಪೂರ್ವಕವಾಗಿ ಕೇಳಿಗೊಳ್ತೆ.   ಇದರ ಒಟ್ಟಿಂಗೇ, ಶ್ವಾನ ಮಾಂಸ ಭಕ್ಷಣೆಯ ನಂತರ ವಿಶ್ವಾಮಿತ್ರನ ವರ್ತನೆಲಿ ಎಂತಾರೂ ವ್ಯತ್ಯಾಸ ಕಂಡು ಬಂದಿತ್ತೋ, ಶ್ವಾನ ಜ್ವರದ ಬಾಧೆ  ಎಂತಾರೂ ಬಂದಿತ್ತೋ ಹೇಳುವ ವಿಷಯದ ಬಗ್ಗೆಯೂ  ವಿವರಂಗಳ ಬಹಿರಂಗ  ಪಡಿಸೆಕ್ಕು ಹೇಳಿ ವಿನಂತಿ ಮಾಡಿಗೊಳ್ತೆ .

- ಬಾಪಿ / ೨೧.೦೯.೨೦೦೯

Saturday, September 19, 2009

ಭಿನ್ನತೆಲಿಪ್ಪ ಏಕತೆ

ಇತ್ತೀಚೆಗೆ ಬೆಂಗ್ಳೂರಿನ ಹೊರವಲಯಲ್ಲಿ ಇಪ್ಪ ಒಂದು ಚರ್ಚಿನ ಮೇಲೆ ಯಾರೋ ಕಲ್ಲು ಇಡ್ಕಿ ರಜ ಗಲಾಟೆ ಆತು.  ಕಲ್ಲು ಇಡ್ಕಿದವು ಅವರವರ ಮನೆಗೆ ಹೋಗಿ  ಚಿಲಕ ಹಾಕಿ ಮನುಗುವಂದ  ಮೊದಲೇ ಸಿದ್ದರಾಮಯ್ಯ (ಯಾವ ವಿಷಯಕ್ಕೇ ಆದರೂ ಪ್ರತಿಕ್ರಿಯೆ ಎಂತ ಕೊಡೆಕ್ಕು ಹೇಳುದರ ಹುಟ್ಟುವಗಳೇ  "ಸಿದ್ಧ” ಮಾಡಿಗೊಂಡು ಬಂದ ಕಾರಣ ಇವಂಗೆ ಈ  ಹೆಸರು ತುಂಬಾ ಒಂಬುತ್ತು) ಮತ್ತು ದೇವೇಗೌಡನ ಹಾಂಗಿಪ್ಪ ರಾಜಕಾರಣಿಗೊ, ಯೆಡ್ಯೂರಪ್ಪ ರಾಜಿನಾಮೆ ಕೊಡೆಕು ಹೇಳಿ ಬೊಬ್ಬೆ ಹಾಕಿದವು.  ಈ ಘಟನೆಂದ ಕೇವಲ ಎರಡು ದಿನ ಮೊದಲು  ಸುಮಾರು ವರ್ಷ ಇಂದಿರಾಗಾಂಧಿಯ ಮನೆಲಿ ಪರಿಕರ್ಮಿ ಆಗಿ ಸಲ್ಲಿಸಿದ ಸೇವೆಯ ಪ್ರತಿಫಲವಾಗಿ ಕರ್ನಾಟಕದ ರಾಜ್ಯಪಾಲ ಆದ ಹನ್ಸರಾಜ್  ಭಾರದ್ವಾಜ್  ಹೇಳುವ ವ್ಯಕ್ತಿಯುದೇ ಕರ್ನಾಟಕಲ್ಲಿ ಅಲ್ಪಸಂಖ್ಯಾತರಿಂಗೆ ಭದ್ರತೆ ಇಲ್ಲೆ ಹೇಳುವ ಹೇಳಿಕೆ ಕೊಟ್ಟು ಶುದ್ದಿ ಮಾಡಿತ್ತಿದ್ದ.    ಶ್ರೀಕೃಷ್ಣ ಪರಮಾತ್ಮ  ಮತ್ತೆ ಮತ್ತೆ ಹುಟ್ಟಿ ಬತ್ತೆ  ಹೇಳಿದ್ದು  ಧರ್ಮ ಸಂಸ್ಥಾಪನೆಯ ಹಾಂಗಿಪ್ಪ ಘನ ಉದ್ದೇಶಕ್ಕಾದರೆ, ಈ ಮೇಲೆ ಹೆಸರಿಸಿದ ವ್ಯಕ್ತಿಗೊ   (ಇನ್ನು ತಿರುಗ ಹುಟ್ಟಿ ಬಪ್ಪಲಿಲ್ಲೆ ಹೇಳುದು ಖಂಡಿತ ಆದ ಕಾರಣ, ಬಂದರೂ ಮನುಷ್ಯ ಜಾತಿಲಿ ಬಪ್ಪದು ಸಂಶಯ ಆದ ಕಾರಣ) ಈ ಸರ್ತಿಲಿಯೇ  ನಮ್ಮ ಭರತಖಂಡಲ್ಲಿ  ಅಲ್ಪಸಂಖ್ಯಾತರ ಹಿತರಕ್ಷಣೆಗೆ ಬೇಕಾದ ಎಲ್ಲಾ ವ್ಯವಸ್ಥೆಗಳನ್ನೂ ಮುಗಿಶಿಕ್ಕಿಯೇ ಹೋಪೊ ಹೇಳಿ ದೃಢ ಸಂಕಲ್ಪ ಮಾಡಿದ ಹಾಂಗೆ ಕಾಣ್ತು. 

ಆಸ್ಟ್ರೇಲಿಯಾದ   ಪ್ರಧಾನ ಮಂತ್ರಿ ತನ್ನ ದೇಶ ಕ್ರಿಶ್ಚಿಯನ್ ಧರ್ಮದ ಸಂಪ್ರದಾಯಂಗಳ ಮೇಲೆ   ನಂಬಿಕೆ ಮಡಿಕ್ಕೊಂಡು ಅದರಂತೆ ಆಢಳಿತ ನಡೆಶಿಗೊಂಡು ಹೋಪ ದೇಶ ಹೇಳಿಯೂ, ಬೇರೆ ಧರ್ಮೀಯರಿಂಗೆ ಅಲ್ಲಿ ಇಪ್ಪಲೆ ಮುಕ್ತ ಅವಕಾಶ ಇದ್ದರೂ ಕ್ರಿಶ್ಚಿಯನ್  ನಂಬಿಕೆಗೊಕ್ಕೆ ಧಕ್ಕೆ ಅಥವಾ ಅವಮಾನ ಆಗದ್ದ ಹಾಂಗೆ ಜೀವನ ಮಾಡೆಕ್ಕು ಹೇಳುವ  ಹೇಳಿಕೆ (ಬೆದರಿಕೆ)ಯ ಘಂಟಾಘೋಷವಾಗಿ ಹೇಳಿದ್ದದು ಜಗಜ್ಜಾಹೀರು ಆಯಿದು.   ಒಂದು ದೇಶಲ್ಲಿ ಶಾಂತಿ ಕಾಪಾಡುಲೆ ಇದರಿಂದ ಸುಲಭ ಉಪಾಯ ಬೇರೆ ಎಂತ ಇದ್ದು ? ಹೆರಂದ ಬಂದವು ಹೇಂಗಿರೆಕೋ ಹಾಂಗೇ ಇದ್ದರೆ ಚಂದ.  ಶ್ರೀಲಂಕಲ್ಲಿ ತಮಿಳರು ಬೀಲ ಬಿಚ್ಚಲೆ ಹೋಗಿ ಇದ್ದಷ್ಟು ದಿನ ಊರವಕ್ಕೆಲ್ಲಾ ಉಪದ್ರ ಕೊಟ್ಟು ಅಖೇರಿಗೆ ಕೈಸುಟ್ಟುಗೊಂಡ ಕಥೆ ಎಲ್ಲೋರಿಂಗೂ ಗೊಂತಿಪ್ಪದೇ.  ಭಾರತಲ್ಲಿ ಮಾಂತ್ರ ಬಹುಸಂಖ್ಯಾತರು ಬೇರೆಯವಕ್ಕಾಗಿ ತ್ಯಾಗ ಮಾಡಿಗೊಂಡು, ಎಂತ ಮಾಡಿರೆ ಯಾರಿಂಗೆ ಬೇಜಾರ ಅಕ್ಕೋ ಹೇಳಿ ಜಾಗ್ರತೆ ಮಾಡಿಗೊಂಡು ಹೀನಾಯವಾಗಿ ಬದುಕ್ಕೆಕ್ಕಾದ ಪರಿಸ್ಥಿತಿ ಇಪ್ಪದು.  ಸಮಾಜ, ದೇಶಕ್ಕಿಂತ ಮೊದಲು ತಮ್ಮ ಸ್ವಂತ ಹಿತವ ನೋಡುವ ರಾಜಕಾರಣಿಗೊ ನಮ್ಮಲ್ಲಿ ಇಪ್ಪದೇ ಇದಕ್ಕೆಲ್ಲಾ ಕಾರಣ ಹೇಳುವ ಸತ್ಯ  ಸಂಗತಿಯ ಪದೇ ಪದೇ ಹೇಳಿ ದೊಂಡೆ  ಒಣಗಿಸಿ ಗೊಂಬ ದುರ್ದೆಸೆ ನಮ್ಮದಾಗಿ ಹೋತು. ಎಂತ ಮಾಡುದು ?

ಈಗ ತಿರುಗ ಚರ್ಚಿನ ಮೇಲೆ ಆದ ಧಾಳಿಯ ವಿಷಯಕ್ಕೆ ಬಪ್ಪೊ.  ರಾಜಕಾರಣಿಗೊ ಅಷ್ಟೆಲ್ಲಾ ಬೊಬ್ಬೆ ಹಾಕುತ್ತಾ ಇದ್ದರೂ ಆ ಚರ್ಚಿನ ಪಾದ್ರಿಗೊ ಯಾರೂ ಎಂತದೂ ಬಾಯಿ ಬಿಟ್ಟಿದವಿಲ್ಲೆ. ಅದಾಗಿ ಎರಡು ದಿನಲ್ಲಿ ಆ ಘಟನೆ  ಸದ್ರಿ ಚರ್ಚಿಂಗೆ ಬಪ್ಪ ಎರಡು ಗುಂಪುಗಳ ಮಧ್ಯದ ವೈಮನಸ್ಯಂದ ಆದ ಸಂಗತಿ ಹೇಳುದು ಬಹಿರಂಗ ಆತು.  ನಿಜ ವಿಷಯ ಎಂತ ಹೇಳಿರೆ, ಹಿಂದೂ ಧರ್ಮಲಿಪ್ಪ ಮೂರ್ತಿಪೂಜೆ ಇತ್ಯಾದಿಗಳ  ಮೂದಲಿಸಿಗೊಂಡು  ಒಂದೇ ಏಸು, ಒಂದೇ ಬೈಬಲ್ ಹೇಳಿಗೊಂಡು ತಿರುಗುವ ಕ್ರಿಶ್ಚಿಯನರಲ್ಲಿ ೧೪೬ ವಿವಿಧ "ಜಾತಿಗೊ" (ಅಥವಾ ಪಂಗಡಂಗೊ) ಇದ್ದಾಡ.  (ಇದು ಬರೀ ಕೇರಳದ ಲೆಕ್ಕಾಚಾರ ಮಾತ್ರ. ಬೇರೆ ಪ್ರದೇಶಂಗಳ ಸೇರಿಸಿರೆ  ಇನ್ನುದೇ ಜಾಸ್ತಿ ಇಪ್ಪಲೂ ಸಾಕು.)  ಇವರ ಪ್ರಾರ್ಥನಾ ಮಂದಿರಂಗಳೂ ಪ್ರತ್ಯೇಕ ಆಡ !  ಸಿರಿಯನ್ ಕ್ಯಾಥೊಲಿಕ್, ಲ್ಯಾಟಿನ್ ಕ್ಯಾಥೋಲಿಕ್, ಮಾರ್ಥೋಮಾ, ಪೆಂಟೆಕೋಸ್ಟ್, ಸಾಲ್ವೇಶನ್  ಆರ್ಮಿ, ಸೆವೆಂತ್ ಡೇ ಅಡ್ವೆಂಟಿಸ್ಟ್, ಆರ್ಥೋಡಾಕ್ಸ್, ಜಕೋಬೈಟ್ ಇತ್ಯಾದಿ ವಿವಿಧ ಪಂಗಂಡಂಗಳ ಪ್ರತ್ಯೇಕ ಚರ್ಚುಗೊ ಇಪ್ಪದು ನಮ್ಮ ಬಹುಶೃತ ಮಾಧ್ಯಮದವರ ಅವಗಾಹನೆಗೆ ಬಾರದ್ದೆ ಇಪ್ಪದು ಬೇಜಾರದ ಸಂಗತಿ. ಅಥವಾ ಗೊಂತಿದ್ದರೂ ಜಾಣ ಕುರುಡುತನ ಆಗಿಪ್ಪಲೂ ಸಾಕು.   ಇಂತದೇ ಗುಟ್ಟು ಮುಸ್ಲಿಮರಲ್ಲಿಯೂ ಇಪ್ಪದು ನಮ್ಮಲ್ಲಿ ಹೆಚ್ಚು ಜನಕ್ಕೆ ಗೊಂತಿರ.  ಸುನ್ನಿ, ಶಿಯಾ, ಅಹ್ಮದೀಯ, ಸುಫಿ, ಮುಜಾಹಿದ್ದೀನ್  ಇತ್ಯಾದಿ  ಗುಂಪುಗೊಕ್ಕೆ ಪ್ರತ್ಯೇಕ ಪ್ರತ್ಯೇಕ ೧೩ ನಮುನೆಯ ಮಸೀದಿಗೊ ಇದ್ದಡ.  (ಮುಸ್ಲಿಮರ ಈ ಗುಂಪುಗಾರಿಕೆಯ  ಉಪಯೋಗಿಸಿಗೊಂಡೇ ಅಮೆರಿಕಾದವು ಇರಾಕಿನ ಮೇಲೆ ಧಾಳಿ ಮಾಡಿದ್ದದು !)

ಕ್ರಿಶ್ಚಿಯನರು, ಬ್ಯಾರಿಗಳ ನಿಜ ಪುರಾಣ  ಹೀಂಗಾದರೆ   ಸಾವಿರಗಟ್ಳೆ ಧರ್ಮ ಗ್ರಂಥಂಗೊ, ಭಾಷ್ಯಂಗೊ, ೩೩ ಕೋಟಿ ದೇವರುಗೊ, ಜಾತಿಗೊ ಇತ್ಯಾದಿಗಳ ಒಳಗೊಂಡಿಪ್ಪ ವಿಶಾಲ ಹಿಂದೂ ಸಮಾಜಕ್ಕೆಲ್ಲಾ ಒಂದೇ ನಮುನೆ ದೇವಸ್ಥಾನ !  ಹಾಂಗಿದ್ದರೂ,  ಗುರುವಾಯೂರಿನ ಹಾಂಗಿಪ್ಪ ಸಂಪ್ರದಾಯವಾದಿ ದೇವಸ್ಥಾನಂಗಳಲ್ಲಿ "ಹಿಂದುಗೊ ಅಲ್ಲದ್ದವಕ್ಕೆ" ಪ್ರವೇಶ ನಿಷೇಧಿಸಿದರೆ ಅದು ಮಾಧ್ಯಮದವಕ್ಕೆ ದೊಡ್ಡ ಚರ್ಚೆಯ ವಿಷಯ ಆವುತ್ತು.   ಕಾಟು ರಾಜಕಾರಣಿಗೊ ಇಲ್ಲದ್ರೆ ಹಿಂದೂ ಸಮಾಜ ಯಾವಗಂಗೂ ಬಲಿಷ್ಠ  ಆಗಿ ಇಕ್ಕು.  ಭಾರತಲ್ಲಿ  ಸುಖ, ಶಾಂತಿಯೂ ಇಕ್ಕು.  ನಮ್ಮ ಸನಾತನ ಧರ್ಮಲ್ಲಿ ಬದಲಾದ ತತ್ಕಾಲದ ಪರಿಸ್ಥಿತಿಗೆ ಅನುಗುಣವಾದ  ಸುಧಾರಣೆಗಳ ಅಗತ್ಯ ಖಂಡಿತವಾಗಿ ಇದ್ದರೂ, ಹಿಂದುಗೊಕ್ಕೆ ಹಿಂದೂಗಳಿಂದ  ಯಾವ ಆತಂಕವೂ ಇಲ್ಲೆ.  ಹಿಂದೂಗಳ ನಿಜವಾದ  ವೈರಿಗೊ  ಕೋಂಗ್ರೇಸಿಲಿಪ್ಪ ಹಿಂದೂ ರಾಜಕಾರಣಿಗೊ.  ಇಂತಹ   ಸ್ವಾಭಿಮಾನಹೀನ, ಸಮಯಸಾಧಕರಿಂಗೆ  ಧಿಕ್ಕಾರವಿರಲಿ.

-ಬಾಪಿ  / ೧೯.೦೯.೨೦೦೯