Tuesday, July 28, 2009

ಕೋಂಗ್ರೇಸು ಎಂತಕೆ ಅಪಥ್ಯ -೫

(...ಮುಂದುವರುದ್ದು)..

೯.  ಹಿಂದೂಗಳಲ್ಲಿ ಒಗ್ಗಟ್ಟು ಹೇಳುದು ಮೊದಲೇ ಕಮ್ಮಿ. ಇನ್ನು, ಕೋಂಗ್ರೇಸಿನವು ನಮ್ಮ ಜಾತಿ ಪದ್ಧತಿಯ ಸಾಧ್ಯ ಆದಷ್ಟೂ  ದುರುಪಯೋಗ ಮಾಡಿಗೊಂಡವು. ಮೀಸಲಾತಿಯೇ ಮೊದಲಾದ ವಿವಿಧ ನೆಪಲ್ಲಿ ಒಳಪಂಗಡಂಗಳ ಸೃಷ್ಟಿ ಮಾಡಿ ಆಯಾ ಜಾತಿಯ ನಾಯಕರುಗೊ ತಮ್ಮ ರಾಜಕೀಯ ಜೀವನವ ಭದ್ರ ಮಾಡಿಗೊಂಡವು.  ಒಟ್ಟಿಲ್ಲಿ, ಬಹುಸಂಖ್ಯಾತರಾಗಿದ್ದರೂ ಈ ಒಳಪಂಗಡಂಗಳ ಗೊಂದಲಂದಾಗಿ, ಹಿಂದೂಗೊ ಯಾವತ್ತೂ ನಿರ್ಣಾಯಕರಾಗಿ ಇಪ್ಪಲೆ ಎಡಿಯದ್ದ ಅಸಹಾಯಕತೆಯ ಸಮಾಜ ವ್ಯವಸ್ಥೆ ಸೃಷ್ಟಿ ಆತು. ಜಾಫರ್ ಶರೀಫ್ ನ ಹಾಂಗಿಪ್ಪ ಬ್ಯಾರಿ ರಾಜಕಾರಣಿಗೊ ಎಲ್ಲಾ  ಮುಸ್ಲಿಂ ನಾಯಕರು ಹೇಳಿಯೇ ಕರೆಶಿಗೊಂಡರೆ, ಹಿಂದೂ ರಾಜಕಾರಣಿಗೊ ಅವರವರ ಪಂಗಡಂಗಳ ನಾಯಕರಾಗಿ ಗುರುತಿಸಿಗೊಳ್ತವೇ ಹೊರತು ಸಮಸ್ತ  ಹಿಂದೂಗಳ ನಾಯಕರು ಹೇಳುವಂತವು ಯಾರೂ ಇಲ್ಲೆ !

ಹೀಂಗಾಗಿಯೇ ಶಿವಸೇನೆ ಮತ್ತು ಭಾಜಪ ಹಿಂದೂಗೊಕ್ಕೆ ಹತ್ತರೆ ಅಪ್ಪದು.   ಶಿವಸೇನೆ ಮಹಾರಾಷ್ಟ್ರದ ಪ್ರಾಂತೀಯ ಪಕ್ಷ ಆದರೂ, ಸಮಗ್ರ ಹಿಂದೂಗಳ ಹಿತಾಸಕ್ತಿಗೆ ಧ್ವನಿ ಎತ್ತುವ ಪಕ್ಷ.  ಇನ್ನು, ಭಾಜಪದ ವ್ಯಾಪ್ತಿ ಈಗ ಇಡೀ ದೇಶಕ್ಕೆ ಹಬ್ಬಿ ಕೋಂಗ್ರೇಸಿಂಗೆ ಪರ್ಯಾಯವಾಗಿ ಬೆಳದ್ದು.  ಬೇರೆಯವೆಲ್ಲಾ ಹಿಂದೂಗಳ ಹೇಂಗೆ ಇನ್ನೂ ಒಡದು ಸ್ವಂತ ಪ್ರಯೋಜನ ಪಡವದು ಹೇಳಿ ಯೋಚನೆ ಮಾಡಿಗೊಂಡಿಪ್ಪಗ,  ರಥ ಯಾತ್ರೆಯ ಮೂಲಕ ದೇಶಾದ್ಯಂತ ಹಿಂದೂಗಳ ಭಾವನಾತ್ಮಕವಾಗಿ ಒಟ್ಟು ಸೇರಿಸುವ ಕೆಲಸ ಮಾಡಿದ ಏಕೈಕ ರಾಜಕಾರಣಿ ಹೇಳಿರೆ ಲಾಲಕೃಷ್ಣ ಅಡ್ವಾನಿ.   ಆದರೆ,  ನಮ್ಮ ಪಾಶ್ಚಾತ್ಯ  ಒಡೆತನದ ಮಾಧ್ಯಮದವು ಇವನ ಯಾತ್ರೆಯ  ಸಮಾಜವ ವಿಭಜಿಸುವ ಪ್ರಯತ್ನ ಹೇಳಿಯೇ ಬಿಂಬಿಸಿದವು.    ಇಂದಿಂಗೂ ರಾಮಜನ್ಮಭೂಮಿ ವಿವಾದವ ಸರಿಯಾಗಿ ವ್ಯಾಖ್ಯಾನ ಮಾಡುವವು ಕಮ್ಮಿ.  ಯಾತ್ರೆಯ  ರಾಜಕೀಯ ಲಾಭ ಭಾಜಪಕ್ಕೆ ಸಿಕ್ಕಿಕ್ಕು. ಆದರೆ, ಇದರಿಂದಾಗಿ ಹಿಂದೂಗಳಲ್ಲಿ ಜಾತಿ-ಪಂಥ ಮೀರಿದ ಅಪರೂಪದ ಒಗ್ಗಟ್ಟು ಕಾಂಬಲೆ ಸಿಕ್ಕಿತ್ತು.   ಅಡ್ವಾನಿಗೆ ಪ್ರಧಾನಿ ಪಟ್ಟ  ದಕ್ಕದ್ದೆ  ಹೋದರೂ, ಭಾಜಪವ  ಹಿಂದೂ ಸಮಾಜದ ಸ್ವಾಭಿಮಾನದ ಸಂಕೇತವಾಗಿ ಇಡೀ ದೇಶಲ್ಲಿ ಬೆಳೆಶಿದ ಶ್ರೇಯ ಅವಂಗೆ ಯಾವಾಗಳೂ ಸಿಕ್ಕುಗು. 

ಅಡ್ವಾನಿ - ಸರ್ದಾರ್ ಪಟೇಲರ ಪರಸ್ಪರ ಹೋಲಿಕೆ ಸುಮಾರು  ರೀತಿಲಿ ಅರ್ಥಪೂರ್ಣ ಹೇಳಿ ಕಾಣ್ತು.  ಅಸಲು ಲೋಹಪುರುಷಂಗೂ  ಅರ್ಹತೆ ಇದ್ದರೂ  ಪ್ರಧಾನಿ  ಅಪ್ಪ ಅವಕಾಶ ಸಿಕ್ಕಿತ್ತಿಲ್ಲೆ.    ಹಾಂಗೆ ನೋಡಿರೆ, ನೆಹರೂ ಕುಟುಂಬದ ಹೆರಾಣವು ಪ್ರಧಾನಿ ಆದ್ದದು ಆಕಸ್ಮಿಕವಾಗಿ ಅಥವಾ ಉತ್ಸವ ಮೂರ್ತಿಗಳಾಗಿ ಮಾತ್ರ.  ಲಾಲಬಹಾದುರ್  ಶಾಸ್ತ್ರಿ,  ನರಸಿಂಹ ರಾವ್ ಮತ್ತೆ ಮನಮೋಹನ ಸಿಂಗ್  ಇಂತಹ ಉದಾಹರಣೆಗೊ.    ನೆಹರೂವಿನ ನಂತರ ಬಂದ ಲಾಲಬಹಾದುರ್  ಶಾಸ್ತ್ರಿಯ ಹೆಚ್ಚು ಸಮಯ ಬದುಕ್ಕುಲೆ ಬಿಟ್ಟಿದವಿಲ್ಲೆ.   ದುರಾದೃಷ್ಟ ಹೇಳಿರೆ,  ಹೀಂಗೆ  ಅರ್ಹತೆ, ಕ್ಷಮತೆ ಇದ್ದುಗೊಂಡು ಸದ್ಗುಣಿಗಳಾಗಿದ್ದವರ ರಾಜಕೀಯ ಜೀವನ ಒಂದೇ ತಲೆಮಾರಿಂಗೆ ಮುಗುದು  ಹೋತು.   ನೆಹರೂ ಕುಟುಂಬದವು ಮಾಂತ್ರ ಕೇವಲ ನಾಮದ ಬಲಲ್ಲಿ  ಮತ್ತೆ ಮತ್ತೆ ಪ್ರಧಾನಿ  ಆಯ್ಕೊಂಡೇ ಬಂದವು.  ಈ ಒಂದು ವಿಷಯಲ್ಲಿ  ಕೋಂಗ್ರೇಸಿಲ್ಲಿ ಯಾವತ್ತೂ ಗೊಂದಲ ಇತ್ತೇ ಇಲ್ಲೆ !   ಕೋಂಗ್ರೇಸಿನ ವಂಶಪಾರಂಪರ್ಯದ ರಾಜಕಾರಣ ಇಲ್ಲದ್ರೆ, ನಮ್ಮ ದೇಶ ಹೇಂಗಿರ್ತೀತು ಹೇಳುವ ಕಲ್ಪನೆಯೇ ರೋಮಾಂಚನ ಕೊಡ್ತು. 

೧೦.   ಭಾರತ ಜಗತ್ತಿನ ಅತಿ ದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರ.  ನಮ್ಮಲ್ಲಿ ಧರ್ಮ, ಭಾಷೆ, ಜಾತಿಯೇ ಮೊದಲಾದ  ವೈವಿಧ್ಯಂಗಳ ಹೊರತಾಗಿಯೂ ಪ್ರಜಾಪ್ರಭುತ್ವ ಜೀವಂತವಾಗಿದ್ದು.  ಇಷ್ಟು ಹೆಗ್ಗಳಿಕೆ ಇದ್ದರೆ ಹೇಂಗೆ ಸಾಕಪ್ಪದು, ನಾವು ಬೇರೆಯವರಿಂದ ಭಿನ್ನ ಹೇಳಿ ತೋರಿಸಿಗೊಂಬದು ಬೇಡದೋ ?  ನೂರು ಕೋಟಿ ಜನಸಂಖ್ಯೆಯ ಈ ದೇಶಲ್ಲಿ ಕೆಲವು ಅಸಂಬದ್ಧ  ವ್ಯವಸ್ಥೆಗೊ ಯಾವ ಮಟ್ಟದ್ದು  ಹೇಳಿರೆ, ಇಲ್ಲಿ ಅಲ್ಪ-ಸಂಖ್ಯಾತರಾಗಿಪ್ಪದೇ ಹೆಚ್ಚು ಸುಖ ಹೇಳಿ ಯಾರಿಂಗಾರೂ ಕಾಂಗು. ಪೂರ್ತಿ ಮುಸ್ಲಿಮರೇ ಇಪ್ಪ ದೇಶಲ್ಲಿಯೂ ಇಲ್ಲದಷ್ಟು ಸವಲತ್ತು ಮತ್ತು ಸ್ವಾತಂತ್ರ್ಯ ಇಲ್ಲಿಯ ಮುಸ್ಲಿಮರಿಂಗೆ ಇದ್ದು.  ಇಲ್ಯಾಣ ಬ್ಯಾರಿಗೊ ದೇಶಭಕ್ತಿಗೀತೆಯಾದ "ವಂದೇ ಮಾತರಂ"ನ ಹಾಡುತ್ತಿಲ್ಲೆ ಹೇಳಿರೆ ಬಾಕಿ ೮೦ ಕೋಟಿ ಜನ   ಬಾಯಿ ಮುಚ್ಚಿಗೊಂಡು ಕೂರ್ತವು, ಎಲ್ಯಾರೂ ಅವಕ್ಕೆ ಬೇಜಾರಕ್ಕು ಹೇಳಿ !  ನೂರು ಕೋಟಿ ಪ್ರಜೆಗಳಲ್ಲಿ ಪ್ರತಿಯೊಬ್ಬಂಗೂ ನೂರು ಪ್ರತಿಶತ  ರಾಷ್ಟ್ರೀಯ ಬದ್ಧತೆ ಇದ್ದರೆ, ಒಂದು ದೇಶಕ್ಕೆ ಉದ್ಧಾರ ಅಪ್ಪಲೆ ಎಷ್ಟು ಸಮಯ ಬೇಕು ? ಹೆಸರಿಂಗೆ ಜಾತ್ಯತೀತ ರಾಷ್ಟ್ರ, ಆದರೆ ಹಿಂದೂಗೊಕ್ಕೆ ಒಂದು ಕಾನೂನು, ಬ್ಯಾರಿಗೊಕ್ಕೆ ಇನ್ನೊಂದು.   ಬ್ಯಾರಿಗಳ ವಿಷಯ  ಬಂದರೆ, ಎಲ್ಲವೂ ಅಪವಾದ.  ಅವಕ್ಕೆ ಮಾಂತ್ರ ಎಲ್ಲದಕ್ಕೂ ವಿನಾಯತಿ !   ಈ ದೇಶಲ್ಲಿ ಸಮಾನ ನಾಗರಿಕ ಸಂಹಿತೆ ಹೇಳುದೇ ಇಲ್ಲೆ.   ಹೀಂಗಿಪ್ಪ ಕಾನೂನು ಬೇಕು ಹೇಳುವ ರಾಜಕೀಯ ಪಕ್ಷ ಭಾಜಪ ಮಾಂತ್ರ.  ಭಾರತ ದೇಶಲ್ಲಿ ಖಾಯಂ ವಾಸ ಇಪ್ಪ ಜನಂಗೊಕ್ಕೆ  ಒಂದು ಗುರುತಿನ ಚೀಟಿ ಇರೆಕು ಹೇಳುವ ಸಾಮಾನ್ಯ ಜ್ಞಾನದ ವಿಷಯಲ್ಲಿಯುದೇ  ೫೦ ವರ್ಷ ಕೋಂಗ್ರೇಸಿನವು ಯಾವುದೇ ಕ್ರಮ ತೆಕ್ಕೊಂಡಿದವಿಲ್ಲೆ.  ಹೀಂಗೆ ಮಾಡ್ಳೆ ಹೋಗಿ, ಎಲ್ಯಾರೂ ಬೇಲಿ ನುಗ್ಗಿ ಬಂದ ಬ್ಯಾರಿಗಳ ಓಡಿಸೆಕ್ಕಾಗಿ ಬಂದರೆ, ಮಾನವ ಹಕ್ಕು ಉಲ್ಲಂಘನೆ ಮಾಡಿದ ಹಾಂಗಾವುತ್ತಿಲ್ಯಾ  ?  ಇಂಥಾ ದಗಲ್ಬಾಜಿ, ದೇಶದ್ರೋಹಿ ಜನಂಗೊ ಕೋಂಗ್ರೇಸಿನವು.  ಕೊನೆಗೂ,  ವಾಜಪೇಯಿ ಪ್ರಧಾನಿ ಆದಪ್ಪಗ ಈ ಕೆಲಸ ಸುರು ಆತು.   ಈಗ  ನಂದನ್  ನೀಲಕೇಣಿ ಹಾಂಗಿಪ್ಪ ದಕ್ಷ ವ್ಯಕ್ತಿಗೆ ಈ ಕೆಲಸವ ವಹಿಸಿದ ಕಾರಣ, ಸಾವಂದ ಮೊದಲು ಭಾರತ ದೇಶದ ಪ್ರಜೆ ಹೇಳಿ ಧೈರ್ಯಂದ ಹೇಳಿಗೊಂಬಲೆ ಗುರುತಿನ ಚೀಟಿ ಒಂದು ಸಿಕ್ಕುಗು ಹೇಳುವ ಸಣ್ಣ ಭರವಸೆ ಕಾಣ್ತು.   

(ಸದ್ಯಕ್ಕೆ ಮುಗುತ್ತು)

- ಬಾಪಿ

Saturday, July 25, 2009

ಕೋಂಗ್ರೇಸು ಎಂತಕೆ ಅಪಥ್ಯ -೪

(...ಮುಂದುವರುದ್ದು)..

೭. ನೆಹರೂ ಕುಟುಂಬದ ಸದ್ಯದ ಪರಿಸ್ಥಿತಿ ನೋಡಿರೆ, ನಮ್ಮ ದೇಶದ ಇಡೀ ಚರಿತ್ರೆಯ ಒಂದು ಸಣ್ಣ ಅವಲೋಕನ ಮಾಡಿದ ಹಾಂಗೆ ಆವುತ್ತು.  ನಮ್ಮ ದೇಶವ ಪರಕೀಯರು ಆಕ್ರಮಣ ಮಾಡಿ ಆಳಿದ  ಹಾಂಗೆ,  ನೆಹರೂಗಳ  ಒಂದು ಅಪ್ಪಟ ಹಿಂದೂ ಕುಟುಂಬದ ಮೇಲೆ ಆದ ಆಕ್ರಮಣಲ್ಲಿ, ಇಂದಿಂಗೆ ಅವರಲ್ಲಿ ಯಾರೂ ಹಿಂದೂಗಳೇ ಒಳಿದ್ದವಿಲ್ಲೆ ! ಜವಾಹರಲಾಲನ ಏಕೈಕ ಸಂತಾನವಾದ ಇಂದಿರಾ, ಘಂದಿ ಹೇಳುವ ಪಾರ್ಸಿ/ಬ್ಯಾರಿ ಯ ಮದುವೆ ಆಗಿ ರಾಜಕೀಯದ  ಅನುಕೂಲಕ್ಕಾಗಿ ನಮ್ಮ ದೇಶಲ್ಲಿ ಧರ್ಮಕ್ಕೆ ಸಿಕ್ಕುವ  "ಗಾಂಧಿ" ಹೇಳುವ ಹೆಸರು ಮಡಿಕ್ಕೊಂಡತ್ತು.  ಬ್ರಿಟಿಷರ ಬಾಯಿಲಿ ಬೊಂಬಾಯಿ ಹೇಳಿ ಇಪ್ಪದು ಬಾಂಬೇ ಆದ ಹಾಂಗಿಪ್ಪ ಕಥೆ.   ಇಂದಿರಾ ಗಾಂಧಿಯ ಈ ಪುನರ್ನಾಮಕರಣ ನಮ್ಮ ದೇಶದ ಚರಿತ್ರೆಲಿ ಆದ ನೆಹರೂ-ಗಾಂಧಿಗಳ ಅಪೂರ್ವ ಸಮ್ಮಿಲನ !  ಇನ್ನು, ರಾಜೀವ ಗಾಂಧಿ - ಮೊದಲೇ ಅರ್ಧ ಬ್ಯಾರಿ - ಮುಂದೆ  ಪ್ರೀತಿಗೋಸ್ಕರ ತಾನೇ ಕ್ರಿಶ್ಚಿಯನ್ ಆಗಿ ಬಿಟ್ಟ.  ಇವನ ಸಂತಾನದವು ಎಲ್ಲಾ ಹೇಂಗಾರೂ ಕಾನೂನು ಪ್ರಕಾರ ಏಸು ಕ್ರಿಸ್ತನ ಅನುಯಾಯಿಗಳೇ. ಹಿಂದುತ್ವ ಒಳಿಶಿಗೊಂಡ ಮೇನಕಾ ಗಾಂಧಿಯ  ಪರಿವಾರವ ಮನೆಂದಲೇ ಹೆರ ಹಾಕಿದ್ದವು.   ನಿಜವಾಗಿಯೂ, ಇವರದ್ದು ವಸುಧೈವ ಕುಟುಂಬಕಂ ಹೇಳುದರ ಅಕ್ಷರಶಃ ಪಾಲಿಸುವ ಅಪರೂಪದ,  ಆದರ್ಶ ಜಾತ್ಯತೀತ ಪರಿವಾರ.  ಮೋತಿಲಾಲ್  ನೆಹರೂವಿನ ಆತ್ಮ ಇವರ ಧರ್ಮ ನಿರಪೇಕ್ಷತೆ ಕಂಡು  ಎಷ್ಟು ಹೆಮ್ಮೆ ಪಟ್ಟುಗೊಂಡಿದ್ದೋ  !       

ಇವು ಎಂತಹ ಢೋಂಗಿಗೊ  ಹೇಳಿರೆ, ಪ್ರಿಯಾಂಕಂಗೂ ಮದುವೆ ಅಪ್ಪಲೆ ಕ್ರಿಶ್ಚಿಯನ್ ಹುಡುಗನೇ ಬೇಕಾತು. ಇನ್ನು, ರಾಹುಲ್ ದೇ  ಇದೇ ದಾರಿ ಹಿಡಿವದು ಖಂಡಿತ.  ಹೇಳಿರೆ, ಇವರ ಜಾತ್ಯತೀತವಾದ ಎಷ್ಟು ಏಕಮುಖವಾದ್ದು ಹೇಳುದು ತಿಳಿವಲೆ ಕಷ್ಟ ಇಲ್ಲೆ.   ಇವಕ್ಕೆಲ್ಲಾ ಜಗತ್ತಿಂಗೆ ತೋರಿಸಿಗೊಂಬಲೆ ಹಿಂದೂಗೊಕ್ಕೆ ಸಾಮ್ಯ ಇಪ್ಪ ಹೆಸರುಗೊ ಬೇಕು.  ಇವರ ಸುತ್ತ ಮುತ್ತ  ಇಪ್ಪವರದ್ದೂ ಇದೇ ಕಥೆ - ಅಂಬಿಕಾ ಸೋನಿ, ಜೈಪಾಲ್  ರೆಡ್ಡಿ, ಅಜಿತ್ ಜೋಗಿ, ಜಗದೀಶ್ ಟೈಟ್ಲರ್, ಸಚಿನ್ ಪೈಲೆಟ್, ಆಸ್ಕರ್ ಫೆರ್ನಾಂಡಿಸ್, ಮಾರ್ಗರೆಟ್ ಆಳ್ವ,   ವೈಯಲಾರ್  ರವಿ,   ರಾಜಶೇಖರ ರೆಡ್ಡಿ - ಎಂತಕೆ ಇಷ್ಟೂ ಜನ ಆಂತಃಪುರದ ಪರಿಚಾರಕರು ಕೇವಲ ಕ್ರಿಶ್ಚಿನರು ? ಸೋನಿಯಾ ಗಾಂಧಿಯ ಕಚೇರಿಯ ಆಪ್ತ ಸಹಾಯಕರು ಅಹ್ಮದ್ ಪಟೇಲ್ ಮತ್ತು  ಸಿ.ಟಿ.ಜಾರ್ಜ್ ! ಇದು ಕೇವಲ ಕಾಕತಾಳೀಯ ಹೇಳುವ ಉದಾರ ಮನಸ್ಸಿನ ಪ್ರಜೆಗೊ ಇಪ್ಪನ್ನಾರ ಇವರ ಕಾರುಬಾರಿಂಗೆ ಎಂತ ತೊಂದರೆ ಆಗ.

೮.  ಮೊದಲಿಂದಲೂ ಸಮಾಜವಾದವ ಪ್ರತಿಪಾದಿಸಿಗೊಂಡು ಬಂದ ಪಕ್ಷ  ಕೋಂಗ್ರೇಸು. ಇದು ಬಲ ಮತ್ತು ಎಡ ಪಂಥೀಯರಿಂದ ಸಮಾನ ದೂರಲ್ಲಿಪ್ಪ ಮಧ್ಯದ, ತಟಸ್ಥ ಧೋರಣೆ ಹೇಳಿ ಲೆಕ್ಕ.  ಆದರೆ, ನಿಜವಾಗಿ ನೋಡಿರೆ, ನರಸಿಂಹ ರಾವ್  ಪ್ರಧಾನಿ ಅಪ್ಪಲ್ಲಿ ವರೆಗೂ ಥೇಟು ಎಡ ಪಂಥೀಯ ನೀತಿಯ ಕೋಂಗ್ರೇಸು ಸರಕಾರಂಗೊ ಪಾಲಿಸಿಗೊಂಡು ಬಂದದು  ಎಲ್ಲೋರಿಂಗೂ ಗೊಂತಿದ್ದು.  ದ್ವಿಪಕ್ಷೀಯ ಜಾಗತಿಕ ವ್ಯವಸ್ಥೆಲಿ ರಶ್ಯಾದ ಪರವಾಗಿ ನಿಂದದು, ಶಾಲೆ ಪಾಠ ಪುಸ್ತಕಂಗಳಲ್ಲಿ ಇದನ್ನೇ ಬೋಧಿಸಿದ್ದು ನಮ್ಮ ಸ್ವಾತಂತ್ರ್ಯಾನಂತರದ ತಲೆಮಾರುಗೊ ಇದೇ ಗುಂಗಿಲ್ಲಿ ಬೆಳೆವ ಹಾಂಗೆ ಮಾಡಿತ್ತು.  ಜರ್ಮನಿಯ ಹಾಂಗೆ, ಖಾಸಗಿ ಭಂಡವಾಳಕ್ಕೆ ಪ್ರೋತ್ಸಾಹ ಕೊಟ್ಟು, ಸರಕಾರದ ವತಿಂದ ಬಡತನದ ರೇಖೆಂದ ಕೆಳ ಇಪ್ಪವಕ್ಕೆ ಸಹಾಯ ಮಾಡಿದ್ದರೆ, ನಮ್ಮ ದೇಶ  ಈಗ ಎಷ್ಟೋ ಮುಂದೆ ಹೋವುತೀತು. ಕೋಂಗ್ರೇಸಿನ ಎಡೆಬಿಡಂಗಿ ಧೋರಣೆಂದಾಗಿ ಸಮಾಜಲ್ಲಿ ಕೇವಲ ಬಡತನವನ್ನೇ ಸೃಷ್ಟಿ ಮಾಡಿ ಹಂಚುವ ಹಾಂಗೆ ಆತು.   ಶ್ರೀಮಂತರ ಮತ್ತು ಬಡವರ ಮಧ್ಯದ ಅಂತರ ಹೆಚ್ಚಾಯ್ಕೊಂದೇ ಹೋತು.  ತಡವಾಗಿಯಾದರೂ ಭಾಜಪ ಪ್ರತಿಪಾದಿಸಿಗೊಂಡು ಬಂದ ಬಲಪಂಥೀಯ ವಾದವ  ಕೋಂಗ್ರೇಸು ಒಪ್ಪಿಗೊಂಡದು ಸಂತೋಷದ ವಿಷಯ.  ಆದರೂ, ಈ ಮಧ್ಯೆ ಎರಡು ತಲೆಮಾರಿನವು ನರಕ್ಕ ಬಪ್ಪ ಹಾಂಗೆ ಮಾಡಿದ್ದರ ಹೊಣೆಯ ಕೋಂಗ್ರೇಸಿನ   ಮೇಲೆ ಹೊರಿಸದ್ದೆ ಇಪ್ಪದು ಹೇಂಗೆ ?

(ಇನ್ನೂ ಇದ್ದು...)

- ಬಾಪಿ