Thursday, May 28, 2009

ಶುಭಾಶಯ

ರಾಜಕೀಯ ಸಿದ್ಧಾಂತದ ವಿರೋಧಂಗಳ ಮರದು, ಇಂದು ಪೂರ್ಣ ಪ್ರಮಾಣಲ್ಲಿ ಅಸ್ತಿತ್ವಕ್ಕೆ ಬಂದ ಹೊಸ ಕೇಂದ್ರ ಸಚಿವ ಸಂಪುಟಕ್ಕೆ ಶುಭ ಹಾರೈಸುತ್ತೆ.  ಮೊದಲೇ ಹೇಳಿ ಬಿಡ್ತೆ,  ಇಂದ್ರಾಣ ಶೈಲಿ ರಜ ಬೇರೆ - ಯಾವಾಗಳೂ ಕೌರವನ ಅರ್ಥ ಹೇಳುವ ಪ್ರಭಾಕರ ಜೋಷಿಯ ರಾಮನ ಪಾತ್ರದ ಅರ್ಥ ಕೇಳಿ ಅಪ್ಪಗ ಯಾಕೋ ಇದು ಒಂಬುತ್ತಿಲ್ಲೆನ್ನೇ   ಹೇಳಿದ ಹಾಂಗೆ ಕಾಂಬಲೂ ಸಾಕು ! ಸಂಗತಿಯೇ ಹಾಗಿದ್ದು.  ಇಂದಿನ ಬದಲಾದ ಪರಿಸ್ಥಿತಿಲಿ, ರಾಷ್ಟ್ರೀಯವಾದದ ಹಾಂಗಿಪ್ಪ  ಕೆಲವು ಸೂಕ್ಷ್ಮ ವಿಷಯಂಗಳ ಬಿಟ್ಟರೆ,  ಕೋಂಗ್ರೇಸಿಂಗೂ ಭಾಜಪಕ್ಕೂ ಎಂತ ವ್ಯತ್ಯಾಸವೂ ಕಾಣ್ತಿಲ್ಲೆ.  ಸಮಾಜವಾದದ ಮಂತ್ರ ಹೇಳಿಗೊಂಡಿತ್ತ  ಕೋಂಗ್ರೇಸು ಇಂದು ಭಾಜಪದಷ್ಟೇ ಅಪ್ಪಟ ಬಲಪಂಥೀಯ ಪಕ್ಷ.  ಹಾಂಗಾಗಿ, ಎನ್ನ ಒಳ ಹುಗ್ಗಿ ಕೂದುಗೊಂಡಿಪ್ಪ ಕೈಗಾರಿಕೋದ್ಯಮಿಗೆ  ಕೋಂಗ್ರೇಸು ಪಕ್ಷ - ಕಮ್ಯುನಿಷ್ಟರ ರಹಿತವಾಗಿ -  ಅಧಿಕಾರ ಮಾಡಿರೆ, ಯಾವ ತಕರಾರೂ ಇಲ್ಲೆ.   (ಆದರೆ, ಎನ್ನ ಒಳವೇ ಇನ್ನೊಂದು ಹೊಡೆಲಿಪ್ಪ ಸ್ವಾಭಿಮಾನಿ ಭಾರತೀಯಂಗೆ  ಇವರ ಸಹಿಸಿಗೊಂಬಲೆ ಕಷ್ಟ ಆವುತ್ತು.)    

ಸಮ್ಮಿಶ್ರ ಸರಕಾರಲ್ಲಿ ಪ್ರಧಾನಿ ಆಗಿತ್ತರೂ ವಾಜಪೇಯಿಗೆ ಸ್ವಂತ ವರ್ಚಸ್ಸಿನ ಬಲಲ್ಲಿ ಕೆಲವು ಮುಖ್ಯ ನಿರ್ಧಾರಂಗಳ ತೆಕ್ಕೊಂಬ ಸಾಮರ್ಥ್ಯ ಇತ್ತು.  ಹೆಚ್ಚು ಕಮ್ಮಿ ಇದೇ ಪರಿಸ್ಥಿತಿಲಿತ್ತ ಈ ಮೊದಲಿನ ಸರಕಾರದ ಮುಖ್ಯಸ್ಥನಾಗಿ ಮನಮೋಹನ ಸಿಂಗಂಗೆ ಸೋನಿಯಾ ಗಾಂಧಿಯ ಸೆರಗು ಹಿಡುದು ನೇಲದ್ದೆ  ಯಾವ ನಿರ್ಧಾರ ತೆಕ್ಕೊಂಬಲೂ ಸಾಧ್ಯ ಆಯಿದಿಲ್ಲೆ.   ಈ ಕಾರಣಂದ ಮನಮೋಹನಂಗೆ ದುರ್ಬಲ ಪ್ರಧಾನಿ ಹೇಳುವ ಬಿರುದು ಅಂಟಿತ್ತು.  ಆದರೆ,  ಮನಮೋಹನಂಗೆ  ವಾಜಪೇಯಿಯಷ್ಟು ರಾಜಕೀಯ ಅನುಭವ ಇಲ್ಲದ್ರೂ  ಆಢಳಿತಾನುಭವ ಬೇಕಾದಷ್ಟಿದ್ದು.  ಮತ್ತೆ ಈ ಸಂಸತ್ತಿಲ್ಲಿ ಸದಸ್ಯರ ಸಂಖ್ಯೆ ಕೋಂಗ್ರೇಸಿನ ಪರವಾಗಿಪ್ಪ ಕಾರಣ, ಇವನ ಹೆಗಲು ಮೊದಲಿಂದ ಎತ್ತರ ಆದ ಹಾಂಗೆ ಕಾಣ್ತು.  ಹೊಸ ಸಂಪುಟ ರಚನೆಯ ಸರ್ಕಸ್ಸಿಲ್ಲಿಯೇ ಇವ ಈಗ ಮೊದಲಿನ ಹಾಂಗಲ್ಲ, ರಜ ಉಷಾರಿ ಆಯಿದ ಹೇಳಿ ಗೊಂತಾವುತ್ತು. 

ಬೆನ್ನಿಂಗೆ ಸಲಕ್ಕೆ ಕಟ್ಟಿರೂ ಎದ್ದು ನಿಂಬಲೆಡಿಯದ್ದಷ್ಟು ಪ್ರಾಯ ಆದರೂ ಕುರ್ಚಿ ಬಿಡುವ ಆಲೋಚನೆಲಿಲ್ಲದ್ದ ಕೆಲವು ಮುದುಕರ,  ಮತ್ತೆ  ಕೆಲವು  ಮಹಾ ಪೆದಂಬಂಗಳ ಹಾಂಗೂ ಅದಕ್ಷರ  ಸಚಿವ ಸಂಪುಟಂದ ಕೈಬಿಟ್ಟದು ಮೆಚ್ಚೆಕ್ಕಾದ ನಿರ್ಧಾರ.  ಹೀಂಗೆ ಮಂತ್ರಿ ಸ್ಥಾನ ಕಳಕ್ಕೊಂಡವರ ಬಗ್ಗೆ ರಜ ಮಾತಾಡದ್ದೆ ಇಂದ್ರಾಣ ಮಂತ್ರ ಪಠನ ಮುಗಿಶುಲೆಡಿಯ. ಇವರಲ್ಲಿ ಒಬ್ಬ ಶಿವರಾಜ್ ಪಾಟೀಲ್ ಹೇಳುವ ಸನ್ಮಾನ್ಯ ಮಾಜಿ ಗೃಹ ಮಂತ್ರಿ.  ಮುಂಬೈಯ ತಾಜ್ ಹೋಟೇಲಿಲ್ಲಿ ಉಗ್ರಗಾಮಿಗೊ ಹೊಕ್ಕು ದಾಂಧಲೆ ಮಾಡ್ತಾ ಇಪ್ಪಗ ಪಿಟೀಲು ಬಾರಿಸಿಗೊಂಡಿತ್ತ  ೨೧ನೇ ಶತಮಾನದ ನೀರೋ.  ಗುಜರಾತಿನ ಸ್ಫೋಟ ಆದ ಮೇಲೆ ನರೇಂದ್ರ ಮೋದಿ ಘಟನೆಗಳ ವಿವರ ಕೊಡ್ಳೆ ಹೇಳಿ ಈ ಅಸಾಮಿಯ ಹತ್ರೆ ಹೋದರೆ,   "ಎನಗೆ ಉಂಬಲೆ ಹೋಪಲೆ ಇದ್ದು, ಎಂತ ಹೇಳ್ತರೂ ೫ ನಿಮಿಷಲ್ಲಿ ಹೇಳಿ ಮುಗಿಶು"  ಹೇಳಿದ ತಿಮ್ರಾಂಡಿ.  ಅಮಿತಾಭ್ ಬಚ್ಚನಿಂಗೂ ನಾಚಿಕೆ ಅಪ್ಪ ಹಾಂಗೆ ದಿನಕ್ಕೆ ಹತ್ತು ಸರ್ತಿ ಡ್ರೆಸ್ಸು ಬದಲಿಸಿಗೊಂಬ ಅಭ್ಯಾಸದ  ಶೋಕಿಲಾಲ.  ಇನ್ನೊಬ್ಬ,  ಭಾರತ ದೇಶದ ಮಾನವ ಸಂಪನ್ಮೂಲವ ಲಗಾಡಿ ತೆಗವಲೆ ಹೇಳಿ ಮಾಡಿಸಿದ ಹಾಂಗಿಪ್ಪ  ಅರ್ಜುನ ಸಿಂಗ್  ಹೇಳುವ ಕೇಂದ್ರ ಮಂತ್ರಿಮಂಡಲದ ಖಾಯಂ ಗಿರಾಕಿ.  ಜಗತ್ತಿಲ್ಲೇ ಅತ್ಯಂತ ಹೆಚ್ಚು ಸಂಖ್ಯೆಯ ಯುವಪೀಳಿಗೆಯ ಜನ ಇಪ್ಪದು ನಮ್ಮ ದೇಶಲ್ಲಿ ಹೇಳುವ  ಅತಿ ಮುಖ್ಯ ವಿಷಯ  ಕುಂಭಕರ್ಣ ಗೋತ್ರದ ಮಂತ್ರಿಗೊ ಇಪ್ಪ ನಮ್ಮ ಘನ ಸರಕಾರದ ಗಮನಕ್ಕೆ ಬಂದಿಪ್ಪದು ಸಂಶಯ ! ಯುವಜನರ ಭವಿಷ್ಯವ ರೂಪಿಸಿ, ಅವರ ಆಶೋತ್ತರಂಗಳ ಈಡೇರಿಸಿ, ಜಾಗತಿಕ ಪೈಪೋಟಿಲಿ  ಬೇರೆ ದೇಶಂಗಳಿಂದ ಸ್ಪರ್ಧಾತ್ಮಕ ಮುನ್ನಡೆ  ಪಡಕ್ಕೊಂಬ ಅಪುರ್ವ ಅವಕಾಶ ಈಗ ನಮ್ಮ ದೇಶಕ್ಕಿದ್ದು.  ಈ  ಹೊಣೆ ಮಾನವ ಸಂಪನ್ಮೂಲ ಮಂತ್ರಾಲಯದ್ದು.  ವಿಪರ್ಯಾಸ ಹೇಳಿರೆ, ಈ ಮಂತ್ರಾಲಯದ ಜವಾಬ್ದಾರಿಯ ಇಷ್ಟು ದಿನ ಅರ್ಜುನ್ ಸಿಂಗನ ಹಾಂಗಿಪ್ಪ ಗಾಲಿಕುರ್ಚಿಲಿ ಓಡಾಡುವ ಪರಬ್ಬಂಗೆ ವಹಿಸಿದ್ದದು. ಇವ ತೊಲಗಿದ್ದದು ನಮ್ಮ ದೇಶದ ದೊಡ್ಡ ಸೌಭಾಗ್ಯವೇ ಸರಿ.   ಇನ್ನು,  ಬಾಲು ಹೇಳುವ ಸಾರಿಗೆ ಮಂತ್ರಿಯ  ಭ್ರಷ್ಟಾಚಾರ ಮತ್ತು ಸ್ವಜನ ಪಕ್ಷಪಾತದ ಕಾರಣಕ್ಕಾಗಿ ತಿರುಗ ಮಂತ್ರಿ ಮಾಡಿದ್ದವಿಲ್ಲೆಡ.   ಮತ್ತೊಬ್ಬ ಸೈಫುದ್ದೀನ್ ಸೋಜ್  ಹೇಳುವ  ಉಗ್ರಗಾಮಿಯೋ ಹೇಳಿ ಸಂಶಯ ಬಪ್ಪ ಹಾಂಗಿಪ್ಪ ಕಾಶ್ಮೀರದ ಬಾಯಿ ಬಡುಕ.

ಹಾಂಗಾಗಿ ಕಳೆದ ಸರ್ತಿಲಿ ದುರ್ಬಲ ಪ್ರಧಾನಿ ಹೇಳಿಯೇ ಹೆಚ್ಚು ಪ್ರಸಿದ್ಧಿ ಪಡೆದ ಮನಮೋಹನ ಸಿಂಗ್ ರಜ್ಜ ಮಟ್ಟಿಂಗೆ ಸಬಲ ಆದ್ದದು ಈ ಚುನಾವಣೆಯ ಒಂದು ಧನಾತ್ಮಕ ಅಂಶ ಹೇಳಿ ಧಾರಾಳ ಹೇಳ್ಳಕ್ಕು. ಹೊಸ ಸಂಪುಟಲ್ಲಿ ಆದಷ್ಟು ಹೊಸ ಮುಖಂಗಳ ಪರಿಚಯಿಸುವ ಪ್ರಯತ್ನ ಮಾಡಿದ್ದ.  ರಾಹುಲ್ ಗಾಂಧಿಯ ಯುವಪಡೆಯ ಸದಸ್ಯರಾದ ಜ್ಯೋತಿರಾದಿತ್ಯ ಸಿಂಧಿಯಾ, ನವೀನ್ ಜಿಂದಾಲ್, ಸಚಿನ್ ಪೈಲೆಟ್ , ಜಿತೇನ್ ಪ್ರಸಾದ್ ಮುಂತಾದವು ರಾಜ್ಯ ಮಂತ್ರಿಗಳಾದರೂ ಸಂಪುಟಲ್ಲಿಪ್ಪದು ಭವಿಷ್ಯದ ದೃಷ್ಟಿಂದ ಉತ್ತಮ.  ಬೆಂಗ್ಳೂರಿಲ್ಲಿ  ಕೃಷ್ನಬೈರೇಗೌಡ ಚುನಾವಣೆಲಿ ಸೋತ ಕಾರಣ ಅವಕಾಶ ಕಳಕ್ಕೊಂಡ.   ಈ ಸರ್ತಿ ಸಂಪುಟಲ್ಲಿಪ್ಪ  ಮಂತ್ರಿಗಳ ಸರಾಸರಿ ಪ್ರಾಯ ೫೭ ವರ್ಷ ಹೇಳಿ ವರದಿ ಆಯಿದು.  ಹೊಸ  ಚಿಗುರು, ಹಳೆ ಬೇರುಗೊ ಸೇರಿ ದೇಶದ ಸೊಬಗಿನ ಹೆಚ್ಚು ಮಾಡುವ ಸುವರ್ಣ ಅವಕಾಶ.  ಇದರಲ್ಲಿ ಅತಿ ಸಣ್ಣ ಪ್ರಾಯದ  ೨೮ರ ಅಗಥಾ ಸಂಗ್ಮಾಂದ ಹಿಡುದು ೭೭ ವರ್ಷ ಪ್ರಾಯದ ಎಸ್ಸೆಂ ಕೃಷ್ಣನ ವರೆಗೆ  ೩ ತಲೆಮಾರಿನ ವ್ಯಕ್ತಿಗೊ ಇಪ್ಪದು ನೋಡಿರೆ ನಮ್ಮ ಅಪ್ಪಟ ಭಾರತೀಯ ಶೈಲಿಯ  ದೊಡ್ಡ ಅವಿಭಕ್ತ ಕುಟುಂಬವ ನೋಡಿದ ಹಾಂಗಾವುತ್ತು.   

ಆದರೂ ನಮ್ಮ ದೇಶಲ್ಲಿ ಬೊಬ್ಬೆ ಹಾಕುವವೇ ಬೇರೆ, ವೋಟು ಹಾಕುವವೇ ಬೇರೆ ಹೇಳುವ ಸಾಮಾಜಿಕ ದ್ವಂದ್ವ ಇಪ್ಪ ಕಾರಣ, ಹೊಸ ಸರಕಾರದ ಕಾರ್ಯಕ್ರಮಂಗೊ ಹೇಂಗಿಕ್ಕು  ಹೇಳುವ ಬಗ್ಗೆ ತೀವ್ರ ಕುತೂಹಲ ಇದ್ದು.  ಸಂಸತ್ತಿಲ್ಲಿ ಮತ್ತು ಮಂತ್ರಿಮಂಡಲಲ್ಲಿ ತರುಣರ ಸೇರ್ಪಡೆಂದ ಸಮಾಜದ ಯುವಜನರು ಇನ್ನು ಮುಂದೆ  ಮತದಾನದ ಪ್ರಕ್ರಿಯೆಲಿ  ಹೆಚ್ಚು ಸಕ್ರಿಯರಾಗಿ ಭಾಗವಹಿಸುಲೆ ಪ್ರೇರಣೆ ಸಿಕ್ಕುವ ಹಾಂಗಾದರೆ,  ರಾಹುಲ್ ಗಾಂಧಿಯ ರಾಜಕೀಯ ಪ್ರವೇಶ ಮತ್ತು ಪ್ರಯತ್ನ ಸಾರ್ಥಕ.

- ಬಾಪಿ

Saturday, May 23, 2009

ವಂಶ ವೃಕ್ಷ


ಈ ದೇಶದ  ಮಕ್ಕಳಲ್ಲಿ ಎಷ್ಟು ಜನಕ್ಕೆ  ರಾಮ, ಕೃಷ್ಣ, ಬುದ್ಧ, ಶಂಕರಾಚಾರ್ಯ, ವಿವೇಕಾನಂದರಂತಹ  ನಮ್ಮ ಇತಿಹಾಸ ಮತ್ತು ಪುರಾಣದ ಪ್ರಸಿದ್ಧ ವ್ಯಕ್ತಿಗಳ ಹೆಸರು ಗೊಂತಿಕ್ಕು ? ಆದರೆ ಇದೇ ಮಕ್ಕೊಗೆ ಮೋತಿಲಾಲ್ ನೆಹರೂ, ಜವಾಹರಲಾಲ್ ನೆಹರೂ, ಕಮಲಾ ನೆಹರೂ, ಇಂದಿರಾ ಗಾಂಧಿ, ರಾಜೀವ್ ಗಾಂಧಿ ಇತ್ಯಾದಿಯವರ ಹೆಸರು ಖಂಡಿತ ಬಾಯಿಪಾಠ ಆಗಿರ್ತು !  ನಮ್ಮ ರಾಜಕೀಯದ ಈ ಅಭಿನವ ಪ್ರಾತಃಸ್ಮರಣೀಯರ ಹೆಸರುಗೊ ಶಾಲೆಯ ಪಾಠಪುಸ್ತಕಂಗಳಲ್ಲಿ ಮಾಂತ್ರ ಅಲ್ಲದ್ದೆ,   ಪೇಟೆಗಳ ಬಡಾವಣೆಗೊ, ರಾಜ ಮಾರ್ಗಂಗೊ, ಬಸ್ ಯಾ ವಿಮಾನ ನಿಲ್ದಾಣಂಗೊ,  ಸರಕಾರದ ಸಾರ್ವಜನಿಕ ಯೋಜನೆಗೊ -  ಹೀಂಗೆ ಅವಕಾಶ ಇಪ್ಪಲ್ಲಿ  ಪೂರಾ ಪುನರಾವರ್ತನೆ ಆಗಿ  ಸಮಾಜದ ಎಲ್ಲಾ ವರ್ಗದ ಜನರ ಬಾಯಿಲಿ  ಅಜರಾಮರವಾಗಿ ಉಳಿವ ಹಾಂಗೆ ಕೋಂಗ್ರೇಸಿನವು ವಿಶೇಷ ಕಾಳಜಿ ವಹಿಸಿ ವ್ಯವಸ್ಥೆ ಮಾಡಿಗೊಂಡಿದವು. 

ಎಲ್ಲಾ ದಿಕ್ಕಿಲ್ಯೂ  ನೆಹರೂ ಕುಟುಂಬಸ್ಥರ ಹೆಸರುಗಳ ಉಪಯೋಗಿಸುದರ ಕಂಡು ಬೇರೆ ದೇಶದವಕ್ಕೆ ಇವರದ್ದೆಂತ ಭಯಂಕರ ದೊಡ್ಡ ರಾಜ ಮನೆತನವೋ ಹೇಳಿ ಸಂಶಯ ಬಪ್ಪಲೂ ಸಾಕು.  ದೇಶದ ಮುಗ್ಧ ಜನರ ಇಷ್ಟೊಂದು ಅಗಾಧವಾದ  ವಿಶ್ವಾಸ, ಪ್ರೀತಿ, ಅಭಿಮಾನಕ್ಕೆ ಪ್ರತಿಯಾಗಿ ಸಮಾಜಕ್ಕೆ ಇವರ ನಿಜವಾದ ಕೊಡುಗೆ ಎಂತದು ? ಮಾಡಿದ್ದೆಲ್ಲಾ  ತ್ಯಾಗ, ಸೇವೆ ಹೇಳಿಗೊಂಡು ತಿರುಗುವ ಇವರ ಅಸಲು ಚರಿತ್ರೆ ಎಂತದು ?  ಕಾಲಚಕ್ರ ಉರುಳಿ ನೆಹರೂವಿನ ಪ್ರಪೌತ್ರನ ದರ್ಬಾರಿನ ಹೊಸ್ತಿಲಿಂಗೆ ಬಂದು ನಿಂದಿಪ್ಪಗ, ಈ ವಿಷಯದ ಬಗ್ಗೆ ರಜ ಚರ್ಚೆ ಮಾಡಿರೆ ಸಕಾಲಿಕ ಅಕ್ಕಲ್ಲದಾ ?

ನೆಹರೂವಿನ ತಟಸ್ಥ ಕೂಟನೀತಿ, ಸ್ವಾತಂತ್ರ್ಯಾನಂತರ ಬೃಹತ್ ಕೈಗಾರಿಕೆಗಳ ಸರಕಾರಿ ವಲಯಲ್ಲಿ ಮಾತ್ರ ಮಾಡ್ಳೆ ಆದ್ಯತೆ ಕೊಟ್ಟದೇ ಮೊದಲಾದ ವಿಷಯಂಗಳ  ಬಗ್ಗೆ ಪರ-ವಿರೋಧವಾಗಿ ಎಷ್ಟುದೇ ವಾದ ಮಾಡ್ಳಕ್ಕು. ಚರಿತ್ರೆಯ ಘಟನೆಗಳ  ಭವಿಷ್ಯದ ಒಂದು ಬಿಂದುವಿಲ್ಲಿ ನಿಂದು ನೋಡುವಗ ಸುಮಾರು ಗೊಂದಲ ಅಪ್ಪ ಸಾಧ್ಯತೆ ಇದ್ದು. ಆಯಾ ತೀರ್ಮಾನ ತೆಕ್ಕೊಂಬ ಸಮಯಲ್ಲಿ ಇತ್ತ  ಅನಿವಾರ್ಯತೆಗಳ ಗಮನಕ್ಕೆ ತೆಕ್ಕೊಳದ್ದೆ ಮಾಡುವ ಚರ್ಚೆ ವ್ಯರ್ಥ ಆವುತ್ತು. ಹಾಂಗಾಗಿ, ಇಂತಹ  ವಿದೇಶ ವ್ಯವಹಾರ ಅಥವಾ ಅರ್ಥವ್ಯವಸ್ಥೆಗೆ ಸಂಬಂಧಪಟ್ಟ strategy ಯಾ policy ವಿಷಯಂಗಳ  (ಸದ್ಯಕ್ಕೆ) ಬದಿಗಿಟ್ಟು ಸಾಮಾಜಿಕ ಪರಿಸ್ಥಿತಿಯ  ಬಗ್ಗೆ ಮಾತ್ರ ವಿಮರ್ಶೆ ಮಾಡಿರೆ ಹೆಚ್ಚು ಸಾರ್ಥಕ ಅಕ್ಕು ಹೇಳಿ ಗ್ರೇಶುತ್ತೆ.  

ಈಗ ನಮ್ಮ ದೇಶದ ಸ್ವಾತಂತ್ರ್ಯಾನಂತರದ ೬೨ ವರ್ಷಂಗಳಲ್ಲಿ ಆದ  ಸಾಮಾಜಿಕ ಬದಲಾವಣೆಗಳ ರಜ ಅವಲೋಕನ ಮಾಡುವೊ.  ಒಟ್ಟಿಂಗೇ,  ಸರಿಸುಮಾರು ಇಷ್ಟೇ ವರ್ಷಂಗಳಲ್ಲಿ  ಬೇರೆ ಕೆಲವು ದೇಶಂಗೊ ನಡೆದು ಬಂದ ದಾರಿಯನ್ನೂ ಗಮನಿಸಿ ತುಲನೆ ಮಾಡುವೊ.  ಉದಾರೀಕರಣದ ನೀತಿ, ದೂರದರ್ಶನದ ಪ್ರಭಾವ,  ಸಂಪರ್ಕ ಕ್ರಾಂತಿ ಇತ್ಯಾದಿಗಳಿಂದಾಗಿ  ಎಲ್ಲಾ ಸಮಾಜಂಗೊ ಕ್ಷಿಪ್ರ ಗತಿಲಿ ಬದಲಾವಣೆ ಆದ್ದದರ ನಾವು ಕಾಣ್ತಾ ಇದ್ದು. ಇದು ಎಲ್ಲಾ ದೇಶಂಗೊಕ್ಕೂ ಸಮಾನವಾಗಿ ಅನ್ವಯಿಸುವ ಬಾಹ್ಯ ಪ್ರಭಾವಂಗೊ.  ಈ ಹಿನ್ನೆಲೆಂದ ನೋಡುವಗ  ಜಪಾನ್, ಕೊರಿಯಾ, ಮಲೇಶ್ಯಾಗಳೇ ಮೊದಲಾದ ದೇಶಂಗೊ ಕೈಗಾರಿಕಾಭಿವೃದ್ಧಿ, ಜಾಗತೀಕರಣಗಳ ಹೊರತಾಗಿಯೂ ತಮ್ಮತನವ ಉಳಿಸಿಗೊಂಡು  ಬಂದಿದ್ದರೆ, ನಮ್ಮ ಸಮಾಜಲ್ಲಿ ಮಾಂತ್ರ ಅನಿಯಂತ್ರಿತ ಬದಲಾವಣೆ ಆದ್ದದರ ಮತ್ತು ಆವುತ್ತಾ ಇಪ್ಪದರ ಕಾಂಬಲಕ್ಕು.   ಹಾಂಗಾರೆ ನಮ್ಮ ಈ ಪರಿಸ್ಥಿತಿಗೆ ಯಾರು ಹೊಣೆ ಹೇಳುವ ಪ್ರಶ್ನೆ ಬಂದರೆ,  ಈ  ಅವಧಿಲಿ ಅತಿ ಹೆಚ್ಚು ಕಾಲ  ಆಢಳಿತ ಮಾಡಿದ ಕೋಂಗ್ರೇಸು ಪಕ್ಷದ ಮೇಲೆ ಕೈ ತೋರುಸೆಕ್ಕಾವುತ್ತು.   ನಮ್ಮಲ್ಯಾಣ ಬದಲಾವಣೆಗಳ ಧಾರ್ಮಿಕ ಮತ್ತು ಸಾಮಾಜಿಕ ಹೇಳಿ ಎರಡು  ಶೀರ್ಷಿಕೆಗಳ ಅಡಿಲಿ ವಿಸ್ತರಿಸುವೊ.

ಧಾರ್ಮಿಕ ಅಧಃಪತನ : ಅನಾದಿ ಕಾಲಂದಲೂ ನಮ್ಮ ಸಮಾಜ ವ್ಯವಸ್ಥೆಗೆ  ಧರ್ಮವೇ ಆಧಾರ ಸ್ತಂಭ.  ರಾಜರ ಆಢಳಿತ ಕಾಲಲ್ಲಿಯೂ ಆಸ್ಥಾನಲ್ಲಿ ಒಬ್ಬ ಧರ್ಮಗುರು ಹೇಳುವವ ಇತ್ತದು ಸಾಮಾನ್ಯ ಪದ್ಧತಿ ಆಗಿತ್ತಡ.  ಗಮನಿಸೆಕ್ಕಾದ ಇನ್ನೊಂದು ಮುಖ್ಯ ವಿಷಯ ಎಂತ ಹೇಳಿರೆ, ಹಿಂದೂ ಧರ್ಮ ಬೇರೆದರ ಹಾಂಗೆ ಹುಟ್ಟುವಾಗಲೇ ಹೆಸರು  ಹಾಕಿಸಿಗೊಂಡು ಸ್ಥಾಪನೆ ಆದ  ಧರ್ಮ ಅಲ್ಲ.   ಇದು ಯಾವಾಗ, ಹೇಂಗೆ ಸುರು ಆತು ಹೇಳುವ ಬಗ್ಗೆ ನಿಖರವಾಗಿ ಹೇಳುಲೆ ಸಾಧ್ಯ ಇಲ್ಲದ್ದ ಕಾರಣ ಇದಕ್ಕೆ ಸನಾತನ ಧರ್ಮ ಹೇಳಿಯೇ ಹೆಸರು.  ಇದಕ್ಕೆ ಧರ್ಮ ಹೇಳುವ ಸಂಕುಚಿತ ಹಣೆಪಟ್ಟಿಗಿಂತಲೂ "ಒಂದು ಜೀವನ ಪದ್ಧತಿ" ಹೇಳುದೇ  ಹೆಚ್ಚು ಸೂಕ್ತ ಹೇಳುವ ವ್ಯಾಖ್ಯಾನ ಇದ್ದು.   ಬೇರೆ ಎಲ್ಲಾ ಧರ್ಮಂಗೊ ಒಬ್ಬ ವ್ಯಕ್ತಿಯ ಮಂಡೆಂದ ಉದುರಿದ ಕೇವಲ ಒಂದು ಗ್ರಂಥವ ಆಧಾರಿಸಿದ ಬೋಧನೆಗಳಾಗಿದ್ದರೆ, ಹಿಂದೂ ಧರ್ಮಲ್ಲಿ ದೇವರುಗೊ, ಗುರುಗೊ, ಗ್ರಂಥಂಗಳ ಬಾಹುಳ್ಯವ ನಾವು ಕಾಣ್ತು.   ಇದರಲ್ಲಿ  ವೇದ, ಉಪನಿಷತ್ತುಗಳ ಉದಾತ್ತ ಆಧ್ಯಾತ್ಮಿಕ  ಚಿಂತನೆಗಳ ಒಟ್ಟಿಂಗೇ, ಸಾಹಿತ್ಯ, ಸಂಗೀತ, ಕಲೆ, ಯೋಗಂಗಳೂ ಹಾಸುಹೊಕ್ಕಾಗಿ ಸೇರಿಗೊಂಡಿದ್ದು.  ಹೇಳಿರೆ, ಇದು ಕೇವಲ ಧಾರ್ಮಿಕ ಆಚರಣೆಗೊಕ್ಕೆ ಸೀಮಿತವಾದ್ದದಲ್ಲ.  ಬೇರೆಯವಕ್ಕೆ  ಆದಿತ್ಯವಾರ, ಶುಕ್ರವಾರ ಇತ್ಯಾದಿಯಾಗಿ ನಿರ್ದಿಷ್ಟ ದಿನದಂದು ಖಡ್ಡಾಯ ಪ್ರಾರ್ಥನೆಯ "ಶಿಕ್ಷೆ" ವಿಧಿಸಿದ್ದರೆ, ನಮ್ಮಲ್ಲಿ ಹೀಂಗಿಪ್ಪ ಬಂಧನ ಎಂತ ಇಲ್ಲೆ. ನಮ್ಮ ಒಟ್ಟು ತಿಳುವಳಿಕೆ ಮತ್ತ್ತು ಆಚರಣೆಗಳ  ಸಮಗ್ರವಾಗಿ  ಕಂಡು, ದೇಹ ಮತ್ತು ಬುದ್ಧಿಗಳ ಸಮತೋಲನವ ಕಾಯ್ದುಗೊಂಬ  ಒಂದು ಅಪೂರ್ವ ಜ್ಞಾನ ಭಂಡಾರದ ಸಂಸ್ಕಾರವ ನಾವು ಬಳುವಳಿಯಾಗಿ ಪಡದ್ದು.   ಈ ಕಾರಣಂದಾಗಿಯೇ, ಭಾರತೀಯರೆಲ್ಲಾ ಹಿಂದೂಗೊ ಹೇಳುವ ವಿಶಾಲ ಮನೋಭಾವ ನವಗೆ ಬಪ್ಪದು.  ಆದರೆ, ನಮ್ಮಲ್ಲಿಪ್ಪ ಬಡತನ, ಅನರಕ್ಷರತೆಯ ದುರುಪಯೋಗ ಮಾಡಿಗೊಂಡು ಹೆರಾಣವು ಮತಾಂತರದಂತಹ ಅನಿಷ್ಟಂಗಳ ಅವ್ಯಾಹತವಾಗಿ ನಡೆಶಿಗೊಂಡು ಬತ್ತಾ ಇದ್ದವು.  ಸರಕಾರ ಇದರ ಮೊದಲಿಂದಲೇ  ಹತೋಟಿಲಿ ಮಡುಗೆಕ್ಕಾಗಿತ್ತು.  ನಮ್ಮ ನಾಯಕರಾದವಕ್ಕೆ ಧರ್ಮ, ಸಂಸ್ಕೃತಿಯ ಬಗ್ಗೆ ರಜ ಆದರೂ ಕಾಳಜಿ ಇತ್ತಿದ್ದರೆ, ಇದರ ತಡವಲೆ ಪ್ರಯತ್ನ ಮಾಡ್ತೀತವು. ಆದರೆ,  ಆರೆಸ್ಸೆಸ್ ಅಥವಾ ಭಜರಂಗ ದಳದವು ಹಿಂದೂಗಳ ರಕ್ಷಣೆಗೆ ಓಡಿ ಬರೆಕಾಗಿ ಬಂತು. ಇಲ್ಲಿಯೇ ನೆಹರೂ ಕುಟುಂಬದ ಕೊಡುಗೆ ಎಂತದು ಹೇಳುದು  ಪ್ರಸ್ತುತ ಅಪ್ಪದು. ಅವರ ಕುಟುಂಬಲ್ಲಿ ನೆಹರೂವಿನ ಅನಂತರ ಯಾರೂ ಹಿಂದೂ ಮತವ ಅನುಸರಿಸುವವು ಒಳುದ್ದವಿಲ್ಲೆ ಹೇಳುವ ಸತ್ಯವೇ ಎಲ್ಲಾ  ಸಮಸ್ಯೆಗೊಕ್ಕೂ  ಮೂಲ ಹೇಳಿರೆ ತಪ್ಪಾಗ.  ಇದರೊಟ್ಟಿಂಗಿಪ್ಪ ಚಿತ್ರಂದ ಇವರ ಪವಿತ್ರ ವಂಶವೃಕ್ಷದ ಸ್ಥೂಲ ಪರಿಚಯ ಆವುತ್ತು. ಚಿತ್ರವೇ ಅಷ್ಟು ಚೆಂದ ಇಪ್ಪ ಕಾರಣ, ಹೆಚ್ಚು ವಿವರಿಸೆಕ್ಕಾದ ಅವಶ್ಯಕತೆ ಬಾರ ಹೇಳಿ ಗ್ರೇಶುತ್ತೆ.  ಇಲ್ಲಿಂದಲೇ ಅಲ್ಪಸಂಖ್ಯಾತರ votebankನ ಹಾಂಗಿಪ್ಪ  ಬೇರೆ ಸಾಮಾಜಿಕ ಸಮಸ್ಯೆಗೊ ಹುಟ್ಟಿಗೊಂಡದು ಹೇಳಿ ಎನ್ನ ಅಭಿಪ್ರಾಯ. 

ನೈತಿಕ ಅಧಃಪತನ : ಧರ್ಮದ ಆಧಾರವೇ ಇಲ್ಲದ್ದ ಮೇಲೆ ನೈತಿಕತೆಗೆ ಎಲ್ಲಿಯ ಬೆಲೆ ? ದೇಶದ ರಾಜಕಾರಣಲ್ಲಿ ಇಂದಿರಾಗಾಂಧಿಯ ಆಗಮನವಾದಲ್ಲಿಂದ (ಸುಮಾರು ೧೯೭೦ರಿಂದ) ಮೊದಲ್ಗೊಂಡು, ನಮ್ಮ ರಾಜಕೀಯದ ವ್ಯಭಿಚಾರೀಕರಣ ಮುಕ್ತವಾಗಿ ನಡೆತ್ತಾ ಇಪ್ಪದು ಸ್ಪಷ್ಟವಾಗಿ ಕಾಣ್ತು.  ಅಲ್ಲಿಂದ ಭ್ರಷ್ಟಾಚಾರದ ಪಿಡುಗು ಬೆಳಕ್ಕೊಂಡೇ ಬಂತು.  ಕ್ರಮೇಣ, ರಾಜಕಾರಣ ಹೇಳುದು ಕಳ್ಳಕಾಕರಿಂಗೆ, ರೌಡಿಗೊಕ್ಕೆ, ಮೋಸಗಾರರಿಂಗೆ ಮಾಂತ್ರ ಇಪ್ಪ ಕ್ಷೇತ್ರ ಹೇಳಿ ಗುರುತಿಸಿಗೊಂಡತ್ತು.  ಇಂದಿರಾ ಗಾಂಧಿಯೇ ಈ ಎಲ್ಲಾ ಅಧಃಪತನಕ್ಕೆ ನಾಂದಿ ಹಾಡಿದ್ದು ಹೇಳುವಲ್ಲಿಗೆ ಇಂದ್ರಾಣ ಹರಿಕಥೆಯ ಈ ಅಧ್ಯಾಯ ಇಲ್ಲಿಗೆ  ಮುಗುತ್ತು ಮತ್ತು ನೆಹರೂವಿನ ದರಿದ್ರ ಕಥಾಶ್ರವಣ ಮಾಡಿದ ಪಾಪ ನವಗೆ ಆಂಟಿತ್ತು.       

- ಬಾಪಿ

Wednesday, May 20, 2009

ರಾಹುಲ್ ಗಾಂಧಿ !


ಕೋಂಗ್ರೇಸ್ ಪಕ್ಷದ ಯುವ ನೇತಾರ, ೨೧ನೇ ಶತಮಾನದ ಮಹಾನ್ ವಿಶ್ವ ನಾಯಕನಾದ ರಾಹುಲ್ ಗಾಂಧಿಯ ಒಂದು ಸಣ್ಣ ವ್ಯಕ್ತಿ ಪರಿಚಯ ಮಾಡುವ ಪ್ರಯತ್ನ ಮಾಡ್ತೆ. 

ಮೈಲಿ ಹರಿವದು ಇಟೆಲಿಯ pizzaದ ಹೇರಳ ಪೋಷಕಾಂಶಂಗಳ  ಹೀರಿ ತಯಾರಾದ ಸಮೃದ್ಧ ರಕ್ತ ಆದ ಕಾರಣ,  ಇವಂದು ತಿಳಿಗೆಂಪು ಮೈಬಣ್ಣ.   ಇವನ ಹಿಂದಾಣವು   ಕೆಲವು ತಲೆಮಾರಿಂಗೆ ಸಾಕಪ್ಪಷ್ಟು ಸಂಪತ್ತಿನ ಅಕ್ರಮವಾಗಿ ಕೂಡಿ ಮಡುಗಿತ್ತ ಕಾರಣ ಐಶಾರಾಮದ ಜೀವನ ಹುಟ್ಟುವಗಳೇ  ಖಾತ್ರಿ ಮಾಡಿಗೊಂಡ ಅದೃಷ್ಟಶಾಲಿ.  ದುಡಿದು ಸಂಪಾದನೆ ಮಾಡುವ ಅನಿವಾರ್ಯತೆ ಹೇಂಗೂ ಇಲ್ಲದ್ದರಿಂದ, ಯಾವುದೇ ವಿಶೇಷ ವಿದ್ಯಾಭ್ಯಾಸ ಮಾಡುವ ಬಗ್ಗೆ ತಲೆ ಕೆಡಿಸಿಗೊಂಬಲೆ ಹೋಯಿದನೇ  ಇಲ್ಲೆ.   ಆದರೂ, ಸ್ವಿಸ್ ಬ್ಯಾಂಕಿಂಗೆ ಅಂಬಗಂಬಗ ಹೋಯೆಕ್ಕಾಗಿ ಬಪ್ಪ ಕಾರಣ, ದಸ್ಕತ್ತು ಹಾಕುವಷ್ಟು ಕಲಿವಿಕೆ ಮಾಡಿಗೊಂಡಿದ.    ಅಜ್ಜನ ಕಾಲಂದಲೇ ಇವನ ಮನೆಯವು ಎಲ್ಲಾ  ಚೆಂದ ಇತ್ತದಲ್ಲದ್ದೆ  ಹೆಚ್ಚು  ಬೆಶಿಲಿಂಗೆ ಎಲ್ಲ ಹೋಗದ್ದೆ ರಾಜ ಮರ್ಜಿಲಿತ್ತ ಕಾರಣ, ಇವನೂ ಸ್ಫುರದ್ರೂಪಿ.   ಇವನ ಕೆಪ್ಪಟೆಲಿ ಬೀಳುವ  ಗುಳಿ ಸ್ವಾಭಾವಿಕವೋ ಸರ್ಜರಿ ಮಾಡಿಸಿಗೊಂಡದೋ ಹೇಳಿ ಗೊಂತಿಲ್ಲೆ.  ಅಂತೂ ಯುವ ಪೀಳಿಗೆಯ ಕೂಸುಗೊ ಇಷ್ಟು  ಹೆಚ್ಚಿನ ಸಂಖ್ಯೆಲಿ ಕೋಂಗ್ರೇಸಿಂಗೆ ವೋಟು ಹಾಕಿದ್ದಕ್ಕೆ ಇದು ಬಿಟ್ರೆ ಬೇರೆ ಎಂತ ಕಾರಣವೂ ಕಾಣ್ತಿಲ್ಲೆ.   ತನ್ನ ಅಪ್ಪನ ಚಾಳಿಯ ಅಕ್ಷರಶಃ ಅನುಸರಿಸುವ ಅತಿ ವಿಧೇಯ ಮಗನಾದ ಇವ, ನಮ್ಮ ದೇಶದವು ಚೆಂದ ಸಾಲ ಹೇಳಿ ತನ್ನ ಪ್ರತಿಭೆ ಮತ್ತು  ವಿದೇಶೀ ಅಮ್ಮನ ಅಂತಸ್ತಿಂಗೆ ಸರಿದೂಗುವ ಕೊಲಂಬಿಯಾ ದೇಶದ ಕೂಸಿನ ಮದುವೆ ಅಪ್ಪ ಅಂದಾಜಿಲಿದ್ದ ಹೇಳಿ ಗಾಳಿ ಶುದ್ದಿ.  ಕೆಲವು ಜನ ಬದ್ಧ ಎಲ್ಲ ಕಳುದ್ದು ಹೇಳ್ತವು.  ಎಂತ ಸಂಗತಿ ಹೇಳಿ ಅವಂಗೇ ಗೊಂತು.   ಹೇಂಗೂ ಮನೆಲಿ ಹೇಳುವವು ಕೇಳುವವು ಆರೂ ಇಲ್ಲೆ.  ಸ್ವಂತ ಅಪ್ಪಚ್ಚಿ ಮನೆಯವಕ್ಕೂ ಇವಕ್ಕೂ ಹೋಕೋರಕ್ಕೇ ಇಲ್ಲೆ.  ಸಾಲದ್ದಕ್ಕೆ ಇನ್ನು ಮುಂದೆ  ಇವ ಮಾಡಿದ್ದೇ ಫೇಶನು ಆದ ಕಾರಣ, ಹೇಳಿ ಪ್ರಯೋಜನ ಇಲ್ಲೆ.  ಒಟ್ಟಾರೆ ದೇವರೇ ಗೆತಿ.   ಇವನ ಅಪ್ಪ ರಾಜಕೀಯಕ್ಕೆ ಇಳುದ ಮೇಲೆ ಹೆಚ್ಚು ವರ್ಷ ಬದುಕಿತ್ತಿದ್ದ ಇಲ್ಲೆ.  ಅವ ಹೊಲಿಶಿ ಮಡುಗಿದ ಸುಮಾರು ಬೆಳಿ ಜುಬ್ಬಂಗೊ ಮೊನ್ನೆ ಯಾವಾಗಳೋ ಅಟ್ಟದ ಮೇಲೆ ಹುಡುಕ್ಕುವಗ ಅಲ್ಲಿತ್ತ ಪೆಟ್ಟಿಗೆಲಿ  ಸಿಕ್ಕಿತ್ತಡ.  ಅದೆಲ್ಲ  ಕುಂಬು ಅಪ್ಪದು ಬೇಡ ಹೇಳಿ ಇವ ಯಾವಾಗಲೂ ಅದನ್ನೇ ಹಾಕುದಡ. ಈ ಕಾರಣಂದಾಗಿ, ಸದಾ ಶ್ವೇತಾಂಬರಧಾರಿಯಾಗಿ ಕಂಗೊಳಿಸುತ್ತ.   

ಈ ಅಸಾಮಿ  ಮೊನ್ನೇಣ  ಚುನಾವಣೆಯ ಅಭ್ಯರ್ಥಿಯಾಗಿ ಅರ್ಜಿಫೋರ್ಮು ಭರ್ತಿ ಮಾಡುವಗ, ವಿದ್ಯಾರ್ಹತೆಯ ಕೋಲಮ್ಮಿಲ್ಲಿ M.Phil ಹೇಳಿ ಬರದಿತ್ತಿದ್ದಡ.  ಆದರೆ, ಯಾರೋ ಇವಂಗೆ ಆಗದ್ದವು  ಈ ವಿಷಯದ ಬಗ್ಗೆ ಕ್ಯಾಂಬ್ರಿಜ್  ವಿಶ್ವವಿದ್ಯಾಲಯಲ್ಲಿ ತನಿಖೆ ಮಾಡಿ ಅಪ್ಪಗ, ಇವ ಕಲ್ತುಗೊಂಡಿತ್ತದು ಅಪ್ಪಾದರೂ  ಪರೀಕ್ಷೆ ಪಾಸಾಗಿತ್ತಿದ್ದನೇ ಇಲ್ಲೆ ಹೇಳುವ ವಿಷಯ ಹೆರ ಬಿದ್ದು ಇವನ ಗುಟ್ಟು ರಟ್ಟಾತು.  ವಿಶ್ವವಿದ್ಯಾಲಯದವರ ಕಡತಂದ ಸಿಕ್ಕಿದ ಅಂಕಪಟ್ಟಿಯ ನೋಡಿರೆ, ಅದರಲ್ಲಿ ಇವನ  ಇಟೆಲಿಯ ಅಜ್ಜನ ಮನೆಯವು ಮಡುಗಿದ "ರೌಲ್ ವಿಂಕಿ" ಹೇಳುವ  ನಿಜ ನಾಮಧೇಯ ನಮೂದಿಸಲ್ಪಟ್ಟಿಪ್ಪದು ಸ್ಪಷ್ಟವಾಗಿ ಕಾಣ್ತು.  ಅಲ್ಲಿಗೆ,  "ರಾಹುಲ್ ಗಾಂಧಿ"  ಹೇಳುವ ಹೆಸರು ಹೇಳಿಗೊಂಡು ತಿರುಗುದು ಸುಮ್ಮನೆ ಜನರ ಮಂಗ ಮಾಡ್ಳಿಪ್ಪ ಕೆಣಿ ಹೇಳುವ  ಇನ್ನೊಂದು ರಹಸ್ಯವುದೇ ಬಹಿರಂಗ ಆತು.  ಇವನ ಅಪ್ಪ ಮದುವೆ ಅಪ್ಪಂದ ಮೊದಲೇ christianityಗೆ  ಮತಾಂತರಗೊಂಡ ಮೇಲೆ,  ಇವರ ವಂಶಲ್ಲಿ ಈಗ ಹಿಂದೂಗೊ ಯಾರೂ ಉಳಿದ್ದವಿಲ್ಲೆ ಹೇಳುದು  ಗಮನಿಸೆಕ್ಕಾದ ವಿಷಯ.  ಥೇಟು ಪುರ್ಬುವಾದ ರಾಜದೀಪ್ ಸರ್ದೇಸಾಯಿ ಹೇಳುವ ಕಿಸಬಾಯಿದಾಸಂಗೆ ಮೊನ್ನೆ ಚುನಾವಾಣೆಯ ಫಲಿತಾಂಶ ಬಂದಪ್ಪಗ   ಅಷ್ಟು ಖುಷಿ  ಆದ್ದದು ಎಂತಕೆ ಹೇಳಿ ಈಗ ಗೊಂತಾತನ್ನೆ ?

- ಬಾಪಿ

Sunday, May 17, 2009

ಚುನಾವಣೆ ೨೦೦೯

ಅಂತೂ ಮಹಾ ಚುನಾವಣೆಯ ಫಲಿತಾಂಶ ಬಂತು.   ಗೆದ್ದವಕ್ಕೆ ಸಂಭ್ರಮ, ಸೋತವಕ್ಕೆ ಹತಾಶೆ. ದೇವೇಗೌಡನ ಹಾಂಗೆ ಗೆದ್ದೂ ಸೋತವಕ್ಕೆ, ನೆವನದ bed rest !  ಪಟಾಕಿ ಮತ್ತು ಮದ್ಯದ ಅಂಗಡಿಯವಕ್ಕೆ ಒಳ್ಳೆ ವ್ಯಾಪಾರ.  ಅಂತೂ ಒಟ್ಟಿಲ್ಲಿ,  ಮನೆಲಿ ಗೌಜಿಯ ತ್ರಿಕಾಲ ಪೂಜೆ ಕಳುದ ಮೇಲೆ ನೆಂಟ್ರೆಲ್ಲಾ ವಾಪಾಸು ಹೋಗಿ ಅಪ್ಪಗ ಇಪ್ಪ ವಿಚಿತ್ರ ಮೌನದ ವಾತಾವರಣ.

ಎನ್ನ ಪ್ರಕಾರ, ಚುನಾವಣೆಯ ಕೆಲವು ವಿಶೇಷಂಗೊ ಮತ್ತು ಭವಿಷ್ಯದ ಮೇಲೆ ನಿರೀಕ್ಷಿತ ಪರಿಣಾಮಂಗೊ ಹೀಂಗಿದ್ದು  :
 
  • ಅಪ್ಪ ಮಕ್ಕಳ ಭಲೇ ಜೋಡಿಯಾದ ದೇವೇಗೌಡ-ಕುಮಾರಸ್ವಾಮಿಗೊಕ್ಕೆ ಸಂಸತ್ತಿಲ್ಲಿ  bench-mates ಅಪ್ಪ ಸುದೈವ.  ಅದುದೇ ಅತಿ ಹಿಂದಾಣ ಬೆಂಚಿಲ್ಲಿ.
  • ರಾಮಜ್ಜನ ಫಲಿತಾಂಶ ನಿರೀಕ್ಷೆ ಮಾಡಿದ ಹಾಂಗೇ ಇತ್ತು. ಠೇವಣಿ ಹೋತು. ಸೋತವರ ಬಗ್ಗೆ ಇನ್ನೂ ಹೆಚ್ಚು ಮಾತಾಡಿ ಗಾಯಕ್ಕೆ ಬರೆ ಎಳವದು ಒಳ್ಳೆ ಸಂಸ್ಕಾರ ಅಲ್ಲದ್ದ ಕಾರಣ ಈ ವಿಷಯವ ಇಷ್ಟಕ್ಕೇ ಬಿಡುವೊ !
  • ಈ ಸರ್ತಿ, ಭಾಜಪಕ್ಕೆ ಮಿಶ್ರ ಫಲ.  ಕರ್ನಾಟಕಲ್ಲಿ ಜಯಭೇರಿ ಬಾರಿಸಿದ್ದು ಯೆಡ್ಯೂರಪ್ಪಂಗೆ ರಜ ನಿರಾಳ ಅಕ್ಕು.  ಬೆಂಗ್ಳೂರಿನ ಮೂರೂ ಸ್ಥಾನ ಗೆದ್ದದು ಅನಿರೀಕ್ಷಿತ.    ಒಟ್ಟು ಫಲಿತಾಂಶ UPA (Unlimited Possibilities' Alliance) ಪರವಾಗಿಪ್ಪ ಕಾರಣ, ಕರ್ನಾಟಕಲ್ಲಿ ಕೋಂಗ್ರೇಸಿಂಗೆ ಒಳ್ಳೆ ಪರಿಣಾಮ ಸಿಕ್ಕಿತ್ತಿದ್ದರೆ, ಎಂತಾರು ಕಿತಾಪತಿ ಸುರು ಮಾಡ್ತೀತವು.  ತನಗೆ ಆಟ ಆಡ್ಳೆ ಅನುಕೂಲ ಅಪ್ಪ ಹಾಂಗಿಪ್ಪ ಅತಂತ್ರ ಸಂಸತ್ತು ನಿರ್ಮಾಣ ಅಕ್ಕು ಹೇಳುವ ನಿರೀಕ್ಷೆಲಿತ್ತ ಕುಮಾರಸ್ವಾಮಿ, ಹೋದವಾರ  ಗುಟ್ಟಾಗಿ ಸೋನಿಯಾ ಗಾಂಧಿಯ ಭೇಟಿ ಮಾಡಿ ಮುಂದಿನ ಸಂಪುಟಲ್ಲಿ ಗಣಿ ಇಲಾಖೆ ಬೇಕು ಹೇಳುವ ಬೇಡಿಕೆಯ ಮಡಿಗಿತ್ತಿದ್ದ ಹೇಳುವ ಶುದ್ದಿ ಈಗ ಅಷ್ಟೇನೂ ಗುಟ್ಟಾಗಿ ಒಳಿದ್ದಿಲ್ಲೆ.  ಕೇಂದ್ರಲ್ಲಿ ಗಣಿ ಮಂತ್ರಿ ಆಗಿ, ಬಳ್ಳಾರಿಯ ರೆಡ್ಡಿಗೊಕ್ಕೆ ಉಪದ್ರ ಕೊಟ್ಟು, ಯೆಡ್ಯೂರಪ್ಪನ ಸರ್ಕಾರವ ಉರುಳಿಸುವ ಕುತಂತ್ರವ ಈಗ ಮುಂದುವರಿಸುಲೆ ಕಷ್ಟ ಇದ್ದು. 
  • ಇದು ಕ್ಷೇತ್ರಂಗಳ ಮರುವಿಂಗಡಣೆ ಮಾಡಿದ ನಂತ್ರಾಣ ಮೊದಲಾಣ ಚುನಾವಣೆ ಆದ ಕಾರಣ, ಯಾವ ಪಕ್ಷಕ್ಕೂ ಜಾತಿವಾರು ಲೆಕ್ಕಾಚಾರದ ಸಂಪೂರ್ಣ ಹಿಡಿತ ಇತ್ತಿಲ್ಲೆ.  ಒಟ್ಟಾರೆ ಕೋಂಗ್ರೇಸಿಂಗೆ ಅನಿರೀಕ್ಷಿತ ಲಾಭ ಆತು.  ಮೊದಲೇ ಹೃದ್ರೋಗಿ ಆದ ಮನಮೋಹನ ಸಿಂಗಂಗೆ  ಈ ಅನಿರೀಕ್ಷಿತ ಪರಿಣಾಮಂದ ಏನೂ ಆಘಾತ ಆಗದ್ದೆ, ಸೌಖ್ಯಲ್ಲಿ ಇಪ್ಪದು ಅವನ ಕುಟುಂಬದವರ ಭಾಗ್ಯ.  ಖುಶಿಲಿಯೂ ದುಃಖಲ್ಲಿಯೂ ಸಮಚಿತ್ತಂದ ವರ್ತಿಸಿ, ಸ್ಥಿತಪ್ರಜ್ಹನಾಗಿದ್ದು ಹೆಬಗನ ಹಾಂಗಿಪ್ಪ ಮೋರೆ ಇದ್ದರೆ ಹೇಂಗೆ ದೀರ್ಘಾಯುಷ್ಯ ಪಡವಲಕ್ಕು ಹೇಳುದಕ್ಕೆ ಇದು ಜೀವಂತ ಉದಾಹರಣೆ.
  • ಮಳೆಗಾಲಲ್ಲಿ ಪುರುಸೊತ್ತಿಪ್ಪವರೆಲ್ಲ ಸೇರಿಸಿ ಮೇಳ ಕಟ್ಟಿಗೊಂಡು ತಿರುಗುವ ಹವ್ಯಾಸಿ ಕಲಾವಿದರ ಹಾಂಗೆ ತೃತೀಯ ರಂಗ, ಚತುರ್ಥ ರಂಗ ಹೇಳಿ ಎಲ್ಲ ಕಾರುಬಾರು ಸುರು ಮಾಡಿತ್ತ ಕ್ಷೇತ್ರೀಯ ಪಕ್ಷಂಗಳ ಮುಕ್ರಿಗೊಕ್ಕೆ ಎದ್ದು ನಿಂಬಲೆಡಿಯದ್ದಷ್ಟು ಆಘಾತ ಆಯಿದು.  
  • ಇನ್ನು ಮುಂದೆ ಭಾರತಲ್ಲಿ ಯಾವುದೇ ಒಂದು ಪಕ್ಷ ಸ್ವತಂತ್ರವಾಗಿ ಸರಕಾರ ಮಾಡ್ಳೆಡಿಯ ಹೇಳುವ ನಂಬಿಕೆ ಸುಳ್ಳಾತು.  ಈಗ, ಕೋಂಗ್ರೇಸಿನವು ಕಾಟು ಕಮ್ಯುನಿಷ್ಟರು ಅಥವಾ ಇತರ ಸುಮಾರು ಲಾಯಿಲೋಟು ಪಕ್ಷಂಗಳ  ಹಂಗು ಇಲ್ಲದ್ದೆ  ಆಢಳಿತ ಮಾಡ್ಳಕ್ಕು.
  • ರಾಹುಲ್ ಗಾಂಧಿಗೆ ಮಂತ್ರಿ ಅಪ್ಪ ಯೋಗ.  ಇದಕ್ಕೆ ಪೂರ್ವಭಾವಿಯಾಗಿ,  ಅರ್ಥ ಮಂತ್ರಾಲಯಕ್ಕೆ ಹೇಳಿ ಯಾವಾಗಲೂ ಕಿಸೆಲಿ ಮಡಿಕ್ಕೊಂಬಲೆ ಹೇಳಿ ಇಟೆಲಿ ದೇಶಂದ ಒಂದು ಇಕ್ಕುಳಿನ  ಆಮದು ಮಾಡಿಗೊಂಬ ವ್ಯವಸ್ಥೆ ಮಾಡ್ತಾ ಇದ್ದಾಡ. ಇನ್ನು ಮುಂದೆ, ಪತ್ರಕರ್ತರು ಬಾಯಿಗೆ ಬಂದ ಹಾಂಗೆ ಎಲ್ಲಾ ಪ್ರಶ್ನೆ ಕೇಳಿ ತಲೆ ತಿಂದಪ್ಪಗ  ನಾಲಗೆ ಹೆರಡದ್ರೆ, ಉಪಯೋಗ ಅಕ್ಕು ಹೇಳುವ ಕಾರಣಕ್ಕಾಡ.  
  • ಚುನಾವಣೆ ಫಲಿತಾಂಶಂಗೊ ಹೆರ ಬೀಳ್ತಾ ಇದ್ದ ಹಾಂಗೇ, ಸುಮಾರು ವಾಹಿನಿಗಳ ಪುರ್ಬು ವಕ್ತಾರರಿಂಗೆ (ರಾಜದೀಪ್ ಸರ್ದೇಸಾಯಿ, ಪ್ರಣೊಯ್ ರೋಯ್ ಹಾಂಗಿಪ್ಪ) ತಡವಲೆಡಿಯದ್ದ ಸಂತೋಶ ಆದ್ದದು ಸ್ಪಷ್ಟ ಗೊಂತಾಯಿಕ್ಕೊಂಡಿತ್ತು.   ಇನ್ನು ಮತಾಂತರದ ಪ್ರಕ್ರಿಯೆ ಅವ್ಯಾಹತವಾಗಿ ಮುಂದುವರಿವಲೆ ಏನೂ ಅಡ್ಡಿ ಇಲ್ಲೆ.    ಸೋನಿಯಾ ಗಾಂಧಿಯ ಆಶೀರ್ವಾದಂದ ಈ ಸಂಸತ್ತಿನ ಅವಧಿ ಮುಗಿವದರೊಳಗೆ, ಭೈರಪ್ಪ ಹೇಳಿದ ಅಂಕೆ ಸಂಖ್ಯೆ ಪ್ರಕಾರ ಲೆಕ್ಕ ಹಾಕಿರೆ ನಮ್ಮ ದೇಶಲ್ಲಿ  ಇನ್ನೊಂದೆರಡು ಕೋಟಿ ಕ್ರಿಶ್ಚಿಯನರು ಹೆಚ್ಚಪ್ಪದು ಖಂಡಿತ.     

-ಬಾಪಿ

Thursday, May 14, 2009

ಜಾತ್ಯತೀತವಾದ

ವಸುಧೈವ ಕುಟುಂಬಕಂ ಹೇಳುವ ಅದ್ಭುತವಾದ, ವ್ಯಾಪಕ ದೃಷ್ಟಿಕೋಣದ ಧ್ಯೇಯವಾಕ್ಯವ ಜಗತ್ತಿಂಗೆ ಸಾರಿದ ಹೆಗ್ಗಳಿಕೆ ಹಿಂದೂಗಳದ್ದು.  ಘೋಷಣೆ ಮಾಡಿದ್ದು ಮಾತ್ರವಲ್ಲ, ನಮ್ಮಲ್ಲಿ ಅಷ್ಟು ಜ್ಞಾನಭಂಡಾರ ಇತ್ತರೂ ಹೆರಂದ ಬಂದದನ್ನೂ ಧಾರಾಳವಾಗಿ ಸ್ವೀಕರಿಸಿ ಬೆಳದ ಅಪೂರ್ವ ಸಮುದಾಯ ಸ್ಪೂರ್ತಿಯ  ನಾಗರಿಕತೆ ನಮ್ಮದು.  ಕೇವಲ ಸ್ವೀಕರಿಸಿದ್ದು ಮಾತ್ರ ಅಲ್ಲದ್ದೆ, ಪೋಷಿಸಿಗೊಂಡು ಕೂಡಾ  ಬೈಂದು.  ಉದಾಹರಣೆಗೆ, ಹಿಂದುಸ್ತಾನಿ ಸಂಗೀತ ಮೂಲ ಭಾರತೀಯ ಪ್ರಕಾರ ಅಲ್ಲದ್ರೂ   ಇದರ  ಶ್ರೋತೃಗೊ ಎಲ್ಲಾ  ಹಿಂದೂಗಳೇ ಹೇಳುದು ವಾಸ್ತವ. ಕರ್ಣಕಠೋರವಾದ  ಪಳ್ಳಿಯ ಬಾಂಕಿನ  ಮಾಧುರ್ಯಕ್ಕೆ ರೋಮಾಂಚನಗೊಳ್ಳುವ  ಬ್ಯಾರಿಗಳಲ್ಲಿ  ಎಷ್ಟು ಜನಕ್ಕೆ ಶಾಸ್ತ್ರೀಯ  ಸಂಗೀತವ ಆಸ್ವಾದಿಸುವ ಸಂಸ್ಕಾರ ಇಕ್ಕು ? "ಹಿಂದೂ" ಹೇಳುವ ಶಬ್ದ ಕೇವಲ ಧರ್ಮವಾಚಕವಾಗದ್ದೆ  "ಭಾರತೀಯ" ಹೇಳುವ   ರಾಷ್ಟ್ರವಾಚಕವಾದ ಪರ್ಯಾಯ ಅರ್ಥಲ್ಲಿ ತಿಳುಕ್ಕೊಂಬ ಹೃದಯ ವೈಶಾಲ್ಯತೆಯ ನಾವು ಬೆಳೆಶಿಗೊಂಡು ಬೈಂದು.  ನಮ್ಮ ಸಂಸ್ಕೃತಿಯ ಪ್ರತಿನಿಧಿಸುವ ಯಾರನ್ನೇ ಆಗಲಿ,  "ನಮ್ಮವು" ಹೇಳಿ ನಾವು ಹೆಮ್ಮೆಂದ ಹೇಳಿಗೊಳ್ತು.  ಹಾಂಗಾಗಿ, ಯೇಸುದಾಸ್ ಕ್ರಿಶ್ಚಿಯನ್ ಹೇಳುವ ಅಥವಾ ಅಬ್ದುಲ್ ಕಲಾಂ ಮುಸ್ಲಿಮ್ ಹೇಳುವ ಭಾವನೆ ನಿಜವಾದ ಹಿಂದೂಗಳಲ್ಲಿ  ಯಾವತ್ತೂ ಬತ್ತೇ ಇಲ್ಲೆ.       

ಆದರೆ,  ಇಂತಹ  ವಿಶಾಲ ಭಾವನೆ ಹಿಂದೂ ಧರ್ಮಾನುಯಾಯಿಗಳಲ್ಲಿ ಮಾತ್ರ ಇಪ್ಪದು ತುಂಬಾ ಶೋಚನೀಯ ಸಂಗತಿ.   ಬೇರೆಯವಲ್ಲಿ ಹೆಚ್ಚಿನವಕ್ಕೆ ತಮ್ಮ ಧರ್ಮ ಮೊದಲು, ದೇಶ ನಂತರ !   ಬ್ಯಾರಿಗೊ ಪಳ್ಳಿಲಿ ಹೊತ್ತಲ್ಲದ್ದ ಹೊತ್ತಿಲ್ಲಿ ಕರ್ಕಶವಾಗಿ ಬಾಂಕು ಹಿಡಿವದಕ್ಕಾಗಲೀ, ಕ್ರಿಶ್ಚಿಯನರು ಸೇವೆಯ ಹೆಸರಿಲ್ಲಿ ದೊಡ್ಡ  ದೊಡ್ಡ ಶಾಲೆ, ಆಸ್ಪತ್ರೆ ಕಟ್ಟಿ ಕಾರುಬಾರು ಮಾಡುದಕ್ಕಾಗಲೀ  ನಮ್ಮದು ಎಂತ ತಕರಾರುದೇ ಇಲ್ಲೆ. ಆದರೆ, ನಮ್ಮ ದೇಶಲ್ಲಿ ಹಿಂದೂಗಳ ಸ್ವಂತ ಆಚರಣೆಗೊಕ್ಕೆ ಎಷ್ಟು ಗಂಡಾಂತರ ಇದ್ದು ಹೇಳುದಕ್ಕೆ  ಈ ಕೆಲವು ಉದಾಹರಣೆಗೊ ಸಾಕು  :

೧.೦  ಯೆಡ್ಯೂರಪ್ಪ  ಮುಖ್ಯಮಂತ್ರಿ ಆಗಿ ಅಧಿಕಾರ ವಹಿಸಿಗೊಂಡು ಕೆಲಸ ಸುರು ಮಾಡುವ ಮೊದಲು ಹಿಂದೂ ಪದ್ಧತಿಯ ಪ್ರಕಾರ  ಕಛೇರಿಲಿ ಪೂಜೆ ಮಾಡಿಸಿದ.  ಇದು ಬೇರೆ ಧರ್ಮೀಯರಿಂಗೆ ಮಾಡಿದ ಅವಮಾನ ಹೇಳಿ ಪ್ರಚಾರ ಆತು.   ಹೀಂಗೆ ಬೊಬ್ಬೆ ಹಾಕಿದವರಲ್ಲಿ ಎಲ್ಲೋರಿಂಗಿಂತಲೂ ಮುಂದೆ ಇತ್ತವ ಕೋಗಿಲೆ ಕಂಠದ ಕೋಂಗ್ರೇಸಿನ ಮುಕ್ರಿ ಮಲ್ಲಿಕಾರ್ಜುನ ಖರ್ಗೆ ಹೇಳುವ ವ್ಯಕ್ತಿ. 

೨.೦  ಯಾವುದೇ ಶಾಲೆಲಿ ಅಥವಾ ಸಮಾರಂಭಲ್ಲಿ ವಂದೇ ಮಾತರಂ ಪ್ರಾರ್ಥನೆ ಹೇಳಿದರೆ, ಕೆಲವರ ಧಾರ್ಮಿಕ ಭಾವನೆಗೆ ಧಕ್ಕೆ ಆವುತ್ತಡ.  ಮುಸ್ಲಿಮರ ಈ ಹುರುಳಿಲ್ಲದ್ದ ವಾದಕ್ಕೆ ಕೋಂಗ್ರೇಸ್  ಮತ್ತು ಕಮ್ಯುನಿಷ್ಟರ ಸಂಪೂರ್ಣ ಬೆಂಬಲ ಇದ್ದು.   ಹಾಂಗಾಗಿ,  ಈ ದೇಶಭಕ್ತಿ ಗೀತೆಯ ಯಾರೂ, ಎಲ್ಲಿಯೂ ಹಾಡುತ್ತವಿಲ್ಲೆ !  

೩.೦   ಪ್ರಸಿದ್ಧ ಮತ್ತು/ಅಥವಾ ಶ್ರೀಮಂತ  ಹಿಂದೂ ದೇವಸ್ಥಾನಂಗಳ ರಾಷ್ಟ್ರೀಕರಣ ಮಾಡಿದ್ದವು. ಇಂತಹ ದೇವಾಲಯಗಳ ಹುಂಡಿಗಳಲ್ಲಿ  ಸಂಗ್ರಹ ಅಪ್ಪ ಪೈಸೆಯ ಸರಕಾರದ ಖಜಾನೆಗೆ ತೆಕ್ಕೊಂಡು ಮತ್ತೆ ದೇವಸ್ಥಾನದ ಖರ್ಚಿಗೆ ಬೇಕಾದ ಹಾಂಗೆ ಸರಕಾರಂದ ಭಿಕ್ಷೆ  ಬೇಡೆಕ್ಕು.  ಈ ಅನಿಷ್ಟ (ಅ)ವ್ಯವಸ್ಥೆ ಹಿಂದೂ ದೇವಾಲಯಂಗೊಕ್ಕೆ ಮಾಂತ್ರ ಅನ್ವಯಿಸುತ್ತು !  ಮತ್ತೆ, ಈ ಪೈಸೆಯ ಮುಸ್ಲಿಮರ ಹಜ್ ಯಾತ್ರೆಯ ಸಬ್ಸಿಡಿಗೆ ವಿನಿಯೋಗಿಸುತ್ತವು ಹೇಳಿ ಹೇಳಿರೆ ಆನು ನಮ್ಮ ದೇಶದ ಪವಿತ್ರ ಧರ್ಮ ನಿರಪೇಕ್ಷ ವಾದಕ್ಕೆ ಚ್ಯುತಿ ತಂದ  ಪಾಪಿ ಆವುತ್ತೆ.   ಯೆಡ್ಯೂರಪ್ಪನ ಸರಕಾರದ ಮುಜ್ರಾಯಿ ಮಂತ್ರಿ ಮಠ, ದೇವಸ್ಥಾನಂಗೊಕ್ಕೆ ಸಹಾಯದ ಘೋಷಣೆ ಮಾಡಿರೆ, ಅಥವಾ ಶಿವರಾತ್ರಿಯ ದಿನ ಭಕ್ತರಿಂಗೆ ಗಂಗಾಜಲ ವಿತರಣೆ ಮಾಡಿರೆ, ಅದು  ಅಧಿಕಾರದ ದುರುಪಯೊಗ ಆವುತ್ತು.

೪.೦  ಈ ದೇಶಲ್ಲಿ ಸಾವಿರಾರು ವರ್ಷಂಗಳಿಂದಲೂ ಆಕ್ರಮಣ, ಅತಿಕ್ರಮಣ, ದಬ್ಬಾಳಿಕೆ, ಮತಾಂತರಗಳ ಸಹಿಸಿಗೊಂಡು ಬಂದವು ಹಿಂದೂ ಧರ್ಮದವು. ಪೋರ್ಚುಗೀಸರು ಆಳಿದ ಮಾತ್ರಕ್ಕೆ ಗೋವಾಲ್ಲಿ ಕ್ರಿಶ್ಚಿಯನ್ನರು ಹೇಂಗೆ ಬಹು ಸಂಖ್ಯಾತರಾಗಿ ಹೋದವು ? ಕೇರಳಲ್ಲಿ  ಇಷ್ಟು ಮುಸ್ಲಿಮರು ಎಲ್ಲಿಂದ ಸೃಷ್ಟಿ ಆದವು ?  ಟಿಪ್ಪೂ ಹೇಳುವ ಥೇಟು ಬ್ಯಾರಿಬುದ್ಧಿಯ ಪಿರ್ಕಿ  ಅರಸ  ಶ್ರೀರಂಗಪಟ್ಟಣಂದ ಕೇರಳದ ಮಧೂರಿನ ವರೆಗೂ ಹೋಗಿ, ದೇವಸ್ಥಾನವ ಹೊಡಿ ಮಾಡ್ಳೆ ಪ್ರಯತ್ನ ಮಾಡಿದ್ದು ಬರೀ ಕಥೆ ಅಲ್ಲ, ನಿಜ ಸಂಗತಿ.    ಚರಿತ್ರೆ ಹೀಂಗೆಲ್ಲಾ ಇದ್ದರೂ, ಯಾವುದೋ ಪಾಳುಬಿದ್ದ, ಯಾವ ಮಳೆಗಾಲಲ್ಲಿ ಬೇಕಾರೂ ಬಿದ್ದು ಹೋಕು ಹೇಳುವ ಅವಸ್ಥೆಲಿದ್ದ ಬಾಬ್ರಿ ಮಸೀದಿಯ ಪ್ರಕರಣ   "ಹಿಂದೂ ಮೂಲಭೂತವಾದ" ಹೇಳಿಯೇ ಪ್ರಚಾರ ಆತು.  ಇದು ಮಾತ್ರವಲ್ಲ, ಗೋಧ್ರಾ ಘಟನೆಯ ಸಂದರ್ಭಲ್ಲಿಯೂ, ರಾಜದೀಪ್ ಸರ್ದೇಸಾಯಿ ಹಾಂಗಿಪ್ಪ  ವರದಿಗಾರರು ಅತ್ಯಂತ ಮುತುವರ್ಜಿ ವಹಿಸಿ ಮೋದಿಗೆ  ಕೆಟ್ಟ ಹೆಸರು ಬಪ್ಪ ಹಾಂಗೆ ಆದಷ್ಟು  ಪ್ರಯತ್ನ ಮಾಡಿದವು.  ತಮ್ಮ ವಾಹಿನಿಯ ಪಾಶ್ಚಾತ್ಯ ಒಡೆಯರುಗಳ ಖುಷಿ ಪಡಿಸದ್ರೆ ಜೀವನಲ್ಲಿ ಮುಂದೆ ಬಪ್ಪದಾದರೂ ಹೇಂಗೆ ?

ಈ ಎಲ್ಲಾ ವಿಷಯಂಗಳಲ್ಲಿ ಇಪ್ಪ ಸಾಮಾನ್ಯ ಅಂಶವ ಗಮನಿಸಿರೆ,  ಹಿಂದೂಗಳ  ಅವಸಾನಕ್ಕೆ ಹಿಂದೂಗಳೇ   ಅತ್ಯಂತ ಶ್ರದ್ಧೆಂದ, ಪಣತೊಟ್ಟು, ಕಟಿಬದ್ಧರಾಗಿ ಕೆಲಸ ಮಾಡ್ತಾ ಇಪ್ಪದು ಸ್ಪಷ್ಟ ಆವುತ್ತು.    ಜಗತ್ತಿನ ಒಂದೇ ಒಂದು ಸಂಪೂರ್ಣ ಹಿಂದೂ ರಾಷ್ಟ್ರವಾಗಿದ್ದ ನೇಪಾಳ ನಮ್ಮ ಕಣ್ಣ ಮುಂದೆ ಕುಸಿದು ಹೋತು.  ಭಾರತ ದೇಶವುದೇ ಇದೇ ಹಾದಿಲಿ ಹೋವುತ್ತಾ ಇದ್ದು.   ನಮ್ಮ ದೇಶಲ್ಲಿ ಅಲ್ಪಸಂಖ್ಯಾತರ ಓಲೈಕೆ ಎಷ್ಟು ಆವುತ್ತಾ ಇದ್ದು ಹೇಳುದರ ಮೇಲೆ ಬೆಳಕು ಚೆಲ್ಲುವ  ಕೆಳಾಣ ಅಂಕಿ-ಅಂಶವ ನೋಡಿರೆ, ನಿಜಕ್ಕೂ ಗಾಬರಿ  ಆವುತ್ತು.  

                                                                       ೧೯೪೭                        ಈಗ
ಪಾಕಿಸ್ತಾನ   (ಹಿಂದೂ ಜನಸಂಖ್ಯೆ)                               ೨೭%                        ೧%
ಬಾಂಗ್ಲಾದೇಶ (ಹಿಂದೂ ಜನಸಂಖ್ಯೆ)                              ೩೦%                        ೭%
ಭಾರತ   (ಮುಸ್ಲಿಮ್ ಜನಸಂಖ್ಯೆ)                                 ೬%                          ೧೯%

ಸರಿಯಾದ ಜನಗಣತಿ ಮಾಡಿರೆ, ನಮ್ಮ ದೇಶದ "ಅವಿಭಾಜ್ಯ ಅಂಗ"ವಾದ ಕಾಶ್ಮೀರಲ್ಲಿಯೂ  ಮೇಲೆ ಕಂಡು ಬಪ್ಪ ಪರಿಸ್ಥಿತಿಯೇ ಇಕ್ಕು.   ಸದ್ಯಕ್ಕೆ, ಅಲ್ಪಸಂಖ್ಯಾತರ ಸಾಂದ್ರತೆ  ಅತ್ಯಂತ ಹೆಚ್ಚು ಇಪ್ಪ ಕೆಲವೇ ರಾಜ್ಯಂಗಳಲ್ಲಿ   ಇದರ    ಪರಿಣಾಮ ಕಾಣ್ತು.    ಆದರೆ, ಕ್ರಮೇಣ ಇದು ದೇಶವ್ಯಾಪಿಯಾಗಿ ಹರಡಿ ಹಿಂದೂಗೊ ತಮ್ಮ ನಾಡಿಲ್ಲೇ ಪರಕೀಯರಾಗಿ, ಸಂತ್ರಸ್ತರಪ್ಪ ದಿನ ದೂರ ಇಲ್ಲೆ.  ಯಾರೋ ಒಂದಿಬ್ಬರು ಮುಸ್ಲಿಮ್  ಸ್ನೇಹಿತರಿಪ್ಪ ನಮ್ಮವೇ,  ಮುಸ್ಲಿಮರೆಲ್ಲಾ ಉಗ್ರಗಾಮಿಗಳಲ್ಲ ಹೇಳುವ ವಾದವ ಕೂಡ್ಳೇ ಮಂಡಿಸುತ್ತವು.  ಅವರಲ್ಲಿ  ರಾಷ್ಟ್ರೀಯತೆಯ ಭಾವನೆಯ ಕೊರತೆ ಇದ್ದು, ಇದು ಗಂಭೀರ  ವಿಷಯ ಹೇಳುದು ಯಾಕೋ ಇಂತವಕ್ಕೆ ಮನದಟ್ಟು  ಆವುತ್ತೇ ಇಲ್ಲೆ.  

ಯಾವ ದೇಶವೂ ತನ್ನ ಸಮಸ್ತ ಪ್ರಜೆಗಳ  ಪ್ರಶ್ನಾತೀತವಾದ ರಾಷ್ಟ್ರೀಯ ಬದ್ಧತೆ ಇಲ್ಲದ್ದೆ ಮುಂದುವರಿದ ಉದಾಹರಣೆ ಇಲ್ಲೆ. ಸರ್ವ ಧರ್ಮ ಸಹಿಷ್ಣುಗಳಾಗಿ, ಪ್ರಜಾ ತಂತ್ರ ವ್ಯವಸ್ಥೆಯ ಪಾಲಿಸುವ ಎಲ್ಲಾ ಮುಂದುವರಿದ ದೇಶಂಗಳಲ್ಲಿಯೂ, ಒಂದು ಸಮಾನ ನಾಗರಿಕ ಸಂಹಿತೆ ಅನ್ವಯಿಸುತ್ತು. ಹೇಳಿರೆ, ದೇಶದ ಪ್ರಜೆಗೊಕ್ಕೆಲ್ಲಾ ಒಂದೇ ಕಾನೂನು. ಭಾರತ ಮಾತ್ರ ಇದಕ್ಕೆ ಅಪವಾದ. ಇಲ್ಲಿಯ ಪ್ರಧಾನ ಮಂತ್ರಿಯ ಪ್ರಕಾರ,  ದೇಶದ ಸಂಪತ್ತಿನ ಮೇಲೆ ಮುಸ್ಲಿಮರಿಂಗೆ ಪ್ರಥಮ ಅಧಿಕಾರ ಇಪ್ಪದಡ !  ಹೀಂಗಿಪ್ಪ ಢೋಂಗಿ, ದಂಡ-ಪಿಂಡ ರಾಜಕಾರಣಿಗಳಿಂದ ಸಮಾಜಕ್ಕೆ ಯಾವಾಗ ಮುಕ್ತಿ ? ಬಹುಷಃ ಇಂತಹವರ  ಕುಟುಂಬದ ಮುಂದಿನ  ತಲೆಮಾರಿನವು ಬಲಾತ್ಕಾರದ ಮತಾಂತರಕ್ಕೆ ಬಲಿಯಾಗಿ ತಮ್ಮ ಪೂರ್ವಜರಿಂಗೆ ಶಾಪ ಹಾಕುವ ಕಾಲ ಸೃಷ್ಟಿ ಅಪ್ಪಂದ  ಮೊದಲು ಇವಕ್ಕೆ ಬಹಿಷ್ಕಾರ ಹಾಕೆಕ್ಕಾದ ಅನಿವಾರ್ಯತೆ ಇದ್ದು.  ಮುಲಾಯಮ್, ಕರುಣಾನಿಧಿ, ಲಾಲೂ ಮತ್ತು ಕೋಂಗ್ರೇಸು ಹಾಗೂ ಕಮ್ಯುನಿಷ್ಟಿನ ಎಲ್ಲೋರನ್ನೂ ಸಾಮೂಹಿಕವಾಗಿ ಧಿಕ್ಕರಿಸಿ, ಸಕಾರಾತ್ಮಕವಾದ ಹಿಂದುತ್ವ ಮತ್ತು ರಾಷ್ಟ್ರೀಯವಾದವ ಪ್ರತಿಪಾದಿಸುವ ಮೋದಿ, ಜಯಲಲಿತಾರ ಹಾಂಗಿಪ್ಪ ರಾಜಕಾರಣಿಗೊಕ್ಕೆ ಹೆಚ್ಚಿನ ಬೆಂಬಲ ಸಿಕ್ಕೆಕ್ಕಾದ್ದು ಅತ್ಯಗತ್ಯ. 

ಒಟ್ಟಿಂಗೇ, ಹಿಂದೂಗಳ ಒಟ್ಟಾರೆ ಧೋರಣೆಲಿ ಬದಲಾವಣೆಯ ಅಗತ್ಯ ಇದ್ದು.  ಹಿಂದೂಗಳಲ್ಲಿ ಆಕ್ರಾಮಕ ಮನೋಭಾವ ಇಲ್ಲೆ ಹೇಳುವ ಒಂದು ಅಭಿಪ್ರಾಯ ಮೊದಲಿಂದಲೇ  ಇದ್ದು.  ಇದು ಸತ್ಯವೇ ಆದರೂ, ಇದರ ಬಗ್ಗೆ  ಬೇಜಾರ ಆವುತ್ತಿಲ್ಲೆ.  ಆದರೆ, ನಮ್ಮಲ್ಲಿ  ಸ್ವಾಭಿಮಾನದ ಕೊರತೆ ಇಪ್ಪದು ಅತ್ಯಂತ ಬೇಜಾರದ ಸಂಗತಿ.  ಪುರಾತನ ಕಾಲಂದಲೂ ಸಮೃದ್ಧ, ವೈಜ್ಹಾನಿಕ ಮತ್ತು ಕೆಲವೇ ಶಾಸ್ತ್ರೀಯ ಭಾಷೆಗಳ ಪೈಕಿ ಒಂದು ಹೇಳಿ ಗುರುತಿಸಿಗೊಂಡ ನಮ್ಮ ಹೆಮ್ಮೆಯ ಸಂಸ್ಕೃತ ಸತ್ತು ಹೋದ್ದದು,  ಈ ಭಾಷೆ ಆಧುನಿಕ ಕಾಲಕ್ಕೆ ಅಪ್ರಸ್ತುತ ಹೇಳುವ ಕಾರಣಂದ ಅಲ್ಲ.  ಇದಕ್ಕೆ ನಮ್ಮ ಅವಜ್ಞೆ, ಕೀಳರಿಮೆ ಮತ್ತು ಅಭಿಮಾನಶೂನ್ಯ ನಡವಳಿಕೆಯೇ ಕಾರಣ.   ಹಿಂದೂಗಳಲ್ಲಿ ಶಿಕ್ಷಿತರ ಸಂಖ್ಯೆ ಹೆಚ್ಚು ಇಪ್ಪ ಪ್ರಮಾಣಲ್ಲಿಯೇ, ಅತಿ ಬುದ್ಧಿವಂತರೂ, ಕ್ರಾಂತಿಕಾರಿಗಳೂ, ನಿರೀಶ್ವರವಾದಿಗಳೂ, ನಿರ್ಲಿಪ್ತರೂ, ನಿರಾಸಕ್ತರೂ ಜಾಸ್ತಿ ಇದ್ದವು.   ಅಲ್ಲದ್ದೆ, ನಮ್ಮಲ್ಲಿ ಧಾರಾಳವಾಗಿಪ್ಪ ಪರಸ್ಪರರ ಕಾಲು ಎಳೆವ ಸಂಪ್ರದಾಯ ನಮ್ಮ ಅಧೋಗತಿಗೆ ಇನ್ನೊಂದು ಕಾರಣ.  ಈ ಕೆಲವು ಕಾರಣಂಗಳಿಂದಾಗಿಯೇ ಹಿಂದೂಗೊ ಬಹುಸಂಖ್ಯಾತರಾಗಿದ್ದರೂ, ಸದಾ ಬೇರೆಯವರ ಕೃಪೆಲಿ ಬದುಕ್ಕಾಗಿಪ್ಪದು. 

ಚರಿತ್ರೆಯ ಘಟನೆಗಳ ಬಗ್ಗೆ ಒಂದು ದೃಷ್ಟಿ ಹಾಯಿಸಿದರೆ, ಈ ಹಿಂದೆ ನಡೆದ ಯಾವುದೇ ಸಾಮಾಜಿಕ ಕ್ರಾಂತಿಯ ಮೊದಲು ಅಲ್ಲಿಯ ಪರಿಸ್ಥಿತಿ ಅಸಹನೀಯ ಹೇಳುವ ಮಟ್ಟಕ್ಕೆ ಇಳಿದಿತ್ತು ಹೇಳುದು ಕಾಣ್ತು. . ಹಿಂದೂಗಳಲ್ಲಿ ಸಹಜವಾಗಿ ಹೇರಳವಾಗಿಪ್ಪ ಸಹನೆ, ಸಹಜೀವನದ ಸದ್ಭುದ್ದಿಯ ದುರುಪಯೋಗ ಪಡಿಸಿಗೊಂಡು  ವಿಪರೀತ ಪರೀಕ್ಷೆ ಮಾಡಿರೆ,  ಸದ್ಯಕ್ಕೆ  ಸುಪ್ತವಾಗಿಪ್ಪ ಆಕ್ರೋಶ ವಿಪರೀತ  ಕೆರಳಿ ನಮ್ಮ ಸಮಾಜಲ್ಲಿ ಕ್ರಾಂತಿಕಾರಿಯಾದ ಬದಲಾವಣೆ ಆದರೂ ಆಶ್ಚರ್ಯ ಇಲ್ಲೆ. 

- ಬಾಪಿ