Thursday, May 14, 2009

ಜಾತ್ಯತೀತವಾದ

ವಸುಧೈವ ಕುಟುಂಬಕಂ ಹೇಳುವ ಅದ್ಭುತವಾದ, ವ್ಯಾಪಕ ದೃಷ್ಟಿಕೋಣದ ಧ್ಯೇಯವಾಕ್ಯವ ಜಗತ್ತಿಂಗೆ ಸಾರಿದ ಹೆಗ್ಗಳಿಕೆ ಹಿಂದೂಗಳದ್ದು.  ಘೋಷಣೆ ಮಾಡಿದ್ದು ಮಾತ್ರವಲ್ಲ, ನಮ್ಮಲ್ಲಿ ಅಷ್ಟು ಜ್ಞಾನಭಂಡಾರ ಇತ್ತರೂ ಹೆರಂದ ಬಂದದನ್ನೂ ಧಾರಾಳವಾಗಿ ಸ್ವೀಕರಿಸಿ ಬೆಳದ ಅಪೂರ್ವ ಸಮುದಾಯ ಸ್ಪೂರ್ತಿಯ  ನಾಗರಿಕತೆ ನಮ್ಮದು.  ಕೇವಲ ಸ್ವೀಕರಿಸಿದ್ದು ಮಾತ್ರ ಅಲ್ಲದ್ದೆ, ಪೋಷಿಸಿಗೊಂಡು ಕೂಡಾ  ಬೈಂದು.  ಉದಾಹರಣೆಗೆ, ಹಿಂದುಸ್ತಾನಿ ಸಂಗೀತ ಮೂಲ ಭಾರತೀಯ ಪ್ರಕಾರ ಅಲ್ಲದ್ರೂ   ಇದರ  ಶ್ರೋತೃಗೊ ಎಲ್ಲಾ  ಹಿಂದೂಗಳೇ ಹೇಳುದು ವಾಸ್ತವ. ಕರ್ಣಕಠೋರವಾದ  ಪಳ್ಳಿಯ ಬಾಂಕಿನ  ಮಾಧುರ್ಯಕ್ಕೆ ರೋಮಾಂಚನಗೊಳ್ಳುವ  ಬ್ಯಾರಿಗಳಲ್ಲಿ  ಎಷ್ಟು ಜನಕ್ಕೆ ಶಾಸ್ತ್ರೀಯ  ಸಂಗೀತವ ಆಸ್ವಾದಿಸುವ ಸಂಸ್ಕಾರ ಇಕ್ಕು ? "ಹಿಂದೂ" ಹೇಳುವ ಶಬ್ದ ಕೇವಲ ಧರ್ಮವಾಚಕವಾಗದ್ದೆ  "ಭಾರತೀಯ" ಹೇಳುವ   ರಾಷ್ಟ್ರವಾಚಕವಾದ ಪರ್ಯಾಯ ಅರ್ಥಲ್ಲಿ ತಿಳುಕ್ಕೊಂಬ ಹೃದಯ ವೈಶಾಲ್ಯತೆಯ ನಾವು ಬೆಳೆಶಿಗೊಂಡು ಬೈಂದು.  ನಮ್ಮ ಸಂಸ್ಕೃತಿಯ ಪ್ರತಿನಿಧಿಸುವ ಯಾರನ್ನೇ ಆಗಲಿ,  "ನಮ್ಮವು" ಹೇಳಿ ನಾವು ಹೆಮ್ಮೆಂದ ಹೇಳಿಗೊಳ್ತು.  ಹಾಂಗಾಗಿ, ಯೇಸುದಾಸ್ ಕ್ರಿಶ್ಚಿಯನ್ ಹೇಳುವ ಅಥವಾ ಅಬ್ದುಲ್ ಕಲಾಂ ಮುಸ್ಲಿಮ್ ಹೇಳುವ ಭಾವನೆ ನಿಜವಾದ ಹಿಂದೂಗಳಲ್ಲಿ  ಯಾವತ್ತೂ ಬತ್ತೇ ಇಲ್ಲೆ.       

ಆದರೆ,  ಇಂತಹ  ವಿಶಾಲ ಭಾವನೆ ಹಿಂದೂ ಧರ್ಮಾನುಯಾಯಿಗಳಲ್ಲಿ ಮಾತ್ರ ಇಪ್ಪದು ತುಂಬಾ ಶೋಚನೀಯ ಸಂಗತಿ.   ಬೇರೆಯವಲ್ಲಿ ಹೆಚ್ಚಿನವಕ್ಕೆ ತಮ್ಮ ಧರ್ಮ ಮೊದಲು, ದೇಶ ನಂತರ !   ಬ್ಯಾರಿಗೊ ಪಳ್ಳಿಲಿ ಹೊತ್ತಲ್ಲದ್ದ ಹೊತ್ತಿಲ್ಲಿ ಕರ್ಕಶವಾಗಿ ಬಾಂಕು ಹಿಡಿವದಕ್ಕಾಗಲೀ, ಕ್ರಿಶ್ಚಿಯನರು ಸೇವೆಯ ಹೆಸರಿಲ್ಲಿ ದೊಡ್ಡ  ದೊಡ್ಡ ಶಾಲೆ, ಆಸ್ಪತ್ರೆ ಕಟ್ಟಿ ಕಾರುಬಾರು ಮಾಡುದಕ್ಕಾಗಲೀ  ನಮ್ಮದು ಎಂತ ತಕರಾರುದೇ ಇಲ್ಲೆ. ಆದರೆ, ನಮ್ಮ ದೇಶಲ್ಲಿ ಹಿಂದೂಗಳ ಸ್ವಂತ ಆಚರಣೆಗೊಕ್ಕೆ ಎಷ್ಟು ಗಂಡಾಂತರ ಇದ್ದು ಹೇಳುದಕ್ಕೆ  ಈ ಕೆಲವು ಉದಾಹರಣೆಗೊ ಸಾಕು  :

೧.೦  ಯೆಡ್ಯೂರಪ್ಪ  ಮುಖ್ಯಮಂತ್ರಿ ಆಗಿ ಅಧಿಕಾರ ವಹಿಸಿಗೊಂಡು ಕೆಲಸ ಸುರು ಮಾಡುವ ಮೊದಲು ಹಿಂದೂ ಪದ್ಧತಿಯ ಪ್ರಕಾರ  ಕಛೇರಿಲಿ ಪೂಜೆ ಮಾಡಿಸಿದ.  ಇದು ಬೇರೆ ಧರ್ಮೀಯರಿಂಗೆ ಮಾಡಿದ ಅವಮಾನ ಹೇಳಿ ಪ್ರಚಾರ ಆತು.   ಹೀಂಗೆ ಬೊಬ್ಬೆ ಹಾಕಿದವರಲ್ಲಿ ಎಲ್ಲೋರಿಂಗಿಂತಲೂ ಮುಂದೆ ಇತ್ತವ ಕೋಗಿಲೆ ಕಂಠದ ಕೋಂಗ್ರೇಸಿನ ಮುಕ್ರಿ ಮಲ್ಲಿಕಾರ್ಜುನ ಖರ್ಗೆ ಹೇಳುವ ವ್ಯಕ್ತಿ. 

೨.೦  ಯಾವುದೇ ಶಾಲೆಲಿ ಅಥವಾ ಸಮಾರಂಭಲ್ಲಿ ವಂದೇ ಮಾತರಂ ಪ್ರಾರ್ಥನೆ ಹೇಳಿದರೆ, ಕೆಲವರ ಧಾರ್ಮಿಕ ಭಾವನೆಗೆ ಧಕ್ಕೆ ಆವುತ್ತಡ.  ಮುಸ್ಲಿಮರ ಈ ಹುರುಳಿಲ್ಲದ್ದ ವಾದಕ್ಕೆ ಕೋಂಗ್ರೇಸ್  ಮತ್ತು ಕಮ್ಯುನಿಷ್ಟರ ಸಂಪೂರ್ಣ ಬೆಂಬಲ ಇದ್ದು.   ಹಾಂಗಾಗಿ,  ಈ ದೇಶಭಕ್ತಿ ಗೀತೆಯ ಯಾರೂ, ಎಲ್ಲಿಯೂ ಹಾಡುತ್ತವಿಲ್ಲೆ !  

೩.೦   ಪ್ರಸಿದ್ಧ ಮತ್ತು/ಅಥವಾ ಶ್ರೀಮಂತ  ಹಿಂದೂ ದೇವಸ್ಥಾನಂಗಳ ರಾಷ್ಟ್ರೀಕರಣ ಮಾಡಿದ್ದವು. ಇಂತಹ ದೇವಾಲಯಗಳ ಹುಂಡಿಗಳಲ್ಲಿ  ಸಂಗ್ರಹ ಅಪ್ಪ ಪೈಸೆಯ ಸರಕಾರದ ಖಜಾನೆಗೆ ತೆಕ್ಕೊಂಡು ಮತ್ತೆ ದೇವಸ್ಥಾನದ ಖರ್ಚಿಗೆ ಬೇಕಾದ ಹಾಂಗೆ ಸರಕಾರಂದ ಭಿಕ್ಷೆ  ಬೇಡೆಕ್ಕು.  ಈ ಅನಿಷ್ಟ (ಅ)ವ್ಯವಸ್ಥೆ ಹಿಂದೂ ದೇವಾಲಯಂಗೊಕ್ಕೆ ಮಾಂತ್ರ ಅನ್ವಯಿಸುತ್ತು !  ಮತ್ತೆ, ಈ ಪೈಸೆಯ ಮುಸ್ಲಿಮರ ಹಜ್ ಯಾತ್ರೆಯ ಸಬ್ಸಿಡಿಗೆ ವಿನಿಯೋಗಿಸುತ್ತವು ಹೇಳಿ ಹೇಳಿರೆ ಆನು ನಮ್ಮ ದೇಶದ ಪವಿತ್ರ ಧರ್ಮ ನಿರಪೇಕ್ಷ ವಾದಕ್ಕೆ ಚ್ಯುತಿ ತಂದ  ಪಾಪಿ ಆವುತ್ತೆ.   ಯೆಡ್ಯೂರಪ್ಪನ ಸರಕಾರದ ಮುಜ್ರಾಯಿ ಮಂತ್ರಿ ಮಠ, ದೇವಸ್ಥಾನಂಗೊಕ್ಕೆ ಸಹಾಯದ ಘೋಷಣೆ ಮಾಡಿರೆ, ಅಥವಾ ಶಿವರಾತ್ರಿಯ ದಿನ ಭಕ್ತರಿಂಗೆ ಗಂಗಾಜಲ ವಿತರಣೆ ಮಾಡಿರೆ, ಅದು  ಅಧಿಕಾರದ ದುರುಪಯೊಗ ಆವುತ್ತು.

೪.೦  ಈ ದೇಶಲ್ಲಿ ಸಾವಿರಾರು ವರ್ಷಂಗಳಿಂದಲೂ ಆಕ್ರಮಣ, ಅತಿಕ್ರಮಣ, ದಬ್ಬಾಳಿಕೆ, ಮತಾಂತರಗಳ ಸಹಿಸಿಗೊಂಡು ಬಂದವು ಹಿಂದೂ ಧರ್ಮದವು. ಪೋರ್ಚುಗೀಸರು ಆಳಿದ ಮಾತ್ರಕ್ಕೆ ಗೋವಾಲ್ಲಿ ಕ್ರಿಶ್ಚಿಯನ್ನರು ಹೇಂಗೆ ಬಹು ಸಂಖ್ಯಾತರಾಗಿ ಹೋದವು ? ಕೇರಳಲ್ಲಿ  ಇಷ್ಟು ಮುಸ್ಲಿಮರು ಎಲ್ಲಿಂದ ಸೃಷ್ಟಿ ಆದವು ?  ಟಿಪ್ಪೂ ಹೇಳುವ ಥೇಟು ಬ್ಯಾರಿಬುದ್ಧಿಯ ಪಿರ್ಕಿ  ಅರಸ  ಶ್ರೀರಂಗಪಟ್ಟಣಂದ ಕೇರಳದ ಮಧೂರಿನ ವರೆಗೂ ಹೋಗಿ, ದೇವಸ್ಥಾನವ ಹೊಡಿ ಮಾಡ್ಳೆ ಪ್ರಯತ್ನ ಮಾಡಿದ್ದು ಬರೀ ಕಥೆ ಅಲ್ಲ, ನಿಜ ಸಂಗತಿ.    ಚರಿತ್ರೆ ಹೀಂಗೆಲ್ಲಾ ಇದ್ದರೂ, ಯಾವುದೋ ಪಾಳುಬಿದ್ದ, ಯಾವ ಮಳೆಗಾಲಲ್ಲಿ ಬೇಕಾರೂ ಬಿದ್ದು ಹೋಕು ಹೇಳುವ ಅವಸ್ಥೆಲಿದ್ದ ಬಾಬ್ರಿ ಮಸೀದಿಯ ಪ್ರಕರಣ   "ಹಿಂದೂ ಮೂಲಭೂತವಾದ" ಹೇಳಿಯೇ ಪ್ರಚಾರ ಆತು.  ಇದು ಮಾತ್ರವಲ್ಲ, ಗೋಧ್ರಾ ಘಟನೆಯ ಸಂದರ್ಭಲ್ಲಿಯೂ, ರಾಜದೀಪ್ ಸರ್ದೇಸಾಯಿ ಹಾಂಗಿಪ್ಪ  ವರದಿಗಾರರು ಅತ್ಯಂತ ಮುತುವರ್ಜಿ ವಹಿಸಿ ಮೋದಿಗೆ  ಕೆಟ್ಟ ಹೆಸರು ಬಪ್ಪ ಹಾಂಗೆ ಆದಷ್ಟು  ಪ್ರಯತ್ನ ಮಾಡಿದವು.  ತಮ್ಮ ವಾಹಿನಿಯ ಪಾಶ್ಚಾತ್ಯ ಒಡೆಯರುಗಳ ಖುಷಿ ಪಡಿಸದ್ರೆ ಜೀವನಲ್ಲಿ ಮುಂದೆ ಬಪ್ಪದಾದರೂ ಹೇಂಗೆ ?

ಈ ಎಲ್ಲಾ ವಿಷಯಂಗಳಲ್ಲಿ ಇಪ್ಪ ಸಾಮಾನ್ಯ ಅಂಶವ ಗಮನಿಸಿರೆ,  ಹಿಂದೂಗಳ  ಅವಸಾನಕ್ಕೆ ಹಿಂದೂಗಳೇ   ಅತ್ಯಂತ ಶ್ರದ್ಧೆಂದ, ಪಣತೊಟ್ಟು, ಕಟಿಬದ್ಧರಾಗಿ ಕೆಲಸ ಮಾಡ್ತಾ ಇಪ್ಪದು ಸ್ಪಷ್ಟ ಆವುತ್ತು.    ಜಗತ್ತಿನ ಒಂದೇ ಒಂದು ಸಂಪೂರ್ಣ ಹಿಂದೂ ರಾಷ್ಟ್ರವಾಗಿದ್ದ ನೇಪಾಳ ನಮ್ಮ ಕಣ್ಣ ಮುಂದೆ ಕುಸಿದು ಹೋತು.  ಭಾರತ ದೇಶವುದೇ ಇದೇ ಹಾದಿಲಿ ಹೋವುತ್ತಾ ಇದ್ದು.   ನಮ್ಮ ದೇಶಲ್ಲಿ ಅಲ್ಪಸಂಖ್ಯಾತರ ಓಲೈಕೆ ಎಷ್ಟು ಆವುತ್ತಾ ಇದ್ದು ಹೇಳುದರ ಮೇಲೆ ಬೆಳಕು ಚೆಲ್ಲುವ  ಕೆಳಾಣ ಅಂಕಿ-ಅಂಶವ ನೋಡಿರೆ, ನಿಜಕ್ಕೂ ಗಾಬರಿ  ಆವುತ್ತು.  

                                                                       ೧೯೪೭                        ಈಗ
ಪಾಕಿಸ್ತಾನ   (ಹಿಂದೂ ಜನಸಂಖ್ಯೆ)                               ೨೭%                        ೧%
ಬಾಂಗ್ಲಾದೇಶ (ಹಿಂದೂ ಜನಸಂಖ್ಯೆ)                              ೩೦%                        ೭%
ಭಾರತ   (ಮುಸ್ಲಿಮ್ ಜನಸಂಖ್ಯೆ)                                 ೬%                          ೧೯%

ಸರಿಯಾದ ಜನಗಣತಿ ಮಾಡಿರೆ, ನಮ್ಮ ದೇಶದ "ಅವಿಭಾಜ್ಯ ಅಂಗ"ವಾದ ಕಾಶ್ಮೀರಲ್ಲಿಯೂ  ಮೇಲೆ ಕಂಡು ಬಪ್ಪ ಪರಿಸ್ಥಿತಿಯೇ ಇಕ್ಕು.   ಸದ್ಯಕ್ಕೆ, ಅಲ್ಪಸಂಖ್ಯಾತರ ಸಾಂದ್ರತೆ  ಅತ್ಯಂತ ಹೆಚ್ಚು ಇಪ್ಪ ಕೆಲವೇ ರಾಜ್ಯಂಗಳಲ್ಲಿ   ಇದರ    ಪರಿಣಾಮ ಕಾಣ್ತು.    ಆದರೆ, ಕ್ರಮೇಣ ಇದು ದೇಶವ್ಯಾಪಿಯಾಗಿ ಹರಡಿ ಹಿಂದೂಗೊ ತಮ್ಮ ನಾಡಿಲ್ಲೇ ಪರಕೀಯರಾಗಿ, ಸಂತ್ರಸ್ತರಪ್ಪ ದಿನ ದೂರ ಇಲ್ಲೆ.  ಯಾರೋ ಒಂದಿಬ್ಬರು ಮುಸ್ಲಿಮ್  ಸ್ನೇಹಿತರಿಪ್ಪ ನಮ್ಮವೇ,  ಮುಸ್ಲಿಮರೆಲ್ಲಾ ಉಗ್ರಗಾಮಿಗಳಲ್ಲ ಹೇಳುವ ವಾದವ ಕೂಡ್ಳೇ ಮಂಡಿಸುತ್ತವು.  ಅವರಲ್ಲಿ  ರಾಷ್ಟ್ರೀಯತೆಯ ಭಾವನೆಯ ಕೊರತೆ ಇದ್ದು, ಇದು ಗಂಭೀರ  ವಿಷಯ ಹೇಳುದು ಯಾಕೋ ಇಂತವಕ್ಕೆ ಮನದಟ್ಟು  ಆವುತ್ತೇ ಇಲ್ಲೆ.  

ಯಾವ ದೇಶವೂ ತನ್ನ ಸಮಸ್ತ ಪ್ರಜೆಗಳ  ಪ್ರಶ್ನಾತೀತವಾದ ರಾಷ್ಟ್ರೀಯ ಬದ್ಧತೆ ಇಲ್ಲದ್ದೆ ಮುಂದುವರಿದ ಉದಾಹರಣೆ ಇಲ್ಲೆ. ಸರ್ವ ಧರ್ಮ ಸಹಿಷ್ಣುಗಳಾಗಿ, ಪ್ರಜಾ ತಂತ್ರ ವ್ಯವಸ್ಥೆಯ ಪಾಲಿಸುವ ಎಲ್ಲಾ ಮುಂದುವರಿದ ದೇಶಂಗಳಲ್ಲಿಯೂ, ಒಂದು ಸಮಾನ ನಾಗರಿಕ ಸಂಹಿತೆ ಅನ್ವಯಿಸುತ್ತು. ಹೇಳಿರೆ, ದೇಶದ ಪ್ರಜೆಗೊಕ್ಕೆಲ್ಲಾ ಒಂದೇ ಕಾನೂನು. ಭಾರತ ಮಾತ್ರ ಇದಕ್ಕೆ ಅಪವಾದ. ಇಲ್ಲಿಯ ಪ್ರಧಾನ ಮಂತ್ರಿಯ ಪ್ರಕಾರ,  ದೇಶದ ಸಂಪತ್ತಿನ ಮೇಲೆ ಮುಸ್ಲಿಮರಿಂಗೆ ಪ್ರಥಮ ಅಧಿಕಾರ ಇಪ್ಪದಡ !  ಹೀಂಗಿಪ್ಪ ಢೋಂಗಿ, ದಂಡ-ಪಿಂಡ ರಾಜಕಾರಣಿಗಳಿಂದ ಸಮಾಜಕ್ಕೆ ಯಾವಾಗ ಮುಕ್ತಿ ? ಬಹುಷಃ ಇಂತಹವರ  ಕುಟುಂಬದ ಮುಂದಿನ  ತಲೆಮಾರಿನವು ಬಲಾತ್ಕಾರದ ಮತಾಂತರಕ್ಕೆ ಬಲಿಯಾಗಿ ತಮ್ಮ ಪೂರ್ವಜರಿಂಗೆ ಶಾಪ ಹಾಕುವ ಕಾಲ ಸೃಷ್ಟಿ ಅಪ್ಪಂದ  ಮೊದಲು ಇವಕ್ಕೆ ಬಹಿಷ್ಕಾರ ಹಾಕೆಕ್ಕಾದ ಅನಿವಾರ್ಯತೆ ಇದ್ದು.  ಮುಲಾಯಮ್, ಕರುಣಾನಿಧಿ, ಲಾಲೂ ಮತ್ತು ಕೋಂಗ್ರೇಸು ಹಾಗೂ ಕಮ್ಯುನಿಷ್ಟಿನ ಎಲ್ಲೋರನ್ನೂ ಸಾಮೂಹಿಕವಾಗಿ ಧಿಕ್ಕರಿಸಿ, ಸಕಾರಾತ್ಮಕವಾದ ಹಿಂದುತ್ವ ಮತ್ತು ರಾಷ್ಟ್ರೀಯವಾದವ ಪ್ರತಿಪಾದಿಸುವ ಮೋದಿ, ಜಯಲಲಿತಾರ ಹಾಂಗಿಪ್ಪ ರಾಜಕಾರಣಿಗೊಕ್ಕೆ ಹೆಚ್ಚಿನ ಬೆಂಬಲ ಸಿಕ್ಕೆಕ್ಕಾದ್ದು ಅತ್ಯಗತ್ಯ. 

ಒಟ್ಟಿಂಗೇ, ಹಿಂದೂಗಳ ಒಟ್ಟಾರೆ ಧೋರಣೆಲಿ ಬದಲಾವಣೆಯ ಅಗತ್ಯ ಇದ್ದು.  ಹಿಂದೂಗಳಲ್ಲಿ ಆಕ್ರಾಮಕ ಮನೋಭಾವ ಇಲ್ಲೆ ಹೇಳುವ ಒಂದು ಅಭಿಪ್ರಾಯ ಮೊದಲಿಂದಲೇ  ಇದ್ದು.  ಇದು ಸತ್ಯವೇ ಆದರೂ, ಇದರ ಬಗ್ಗೆ  ಬೇಜಾರ ಆವುತ್ತಿಲ್ಲೆ.  ಆದರೆ, ನಮ್ಮಲ್ಲಿ  ಸ್ವಾಭಿಮಾನದ ಕೊರತೆ ಇಪ್ಪದು ಅತ್ಯಂತ ಬೇಜಾರದ ಸಂಗತಿ.  ಪುರಾತನ ಕಾಲಂದಲೂ ಸಮೃದ್ಧ, ವೈಜ್ಹಾನಿಕ ಮತ್ತು ಕೆಲವೇ ಶಾಸ್ತ್ರೀಯ ಭಾಷೆಗಳ ಪೈಕಿ ಒಂದು ಹೇಳಿ ಗುರುತಿಸಿಗೊಂಡ ನಮ್ಮ ಹೆಮ್ಮೆಯ ಸಂಸ್ಕೃತ ಸತ್ತು ಹೋದ್ದದು,  ಈ ಭಾಷೆ ಆಧುನಿಕ ಕಾಲಕ್ಕೆ ಅಪ್ರಸ್ತುತ ಹೇಳುವ ಕಾರಣಂದ ಅಲ್ಲ.  ಇದಕ್ಕೆ ನಮ್ಮ ಅವಜ್ಞೆ, ಕೀಳರಿಮೆ ಮತ್ತು ಅಭಿಮಾನಶೂನ್ಯ ನಡವಳಿಕೆಯೇ ಕಾರಣ.   ಹಿಂದೂಗಳಲ್ಲಿ ಶಿಕ್ಷಿತರ ಸಂಖ್ಯೆ ಹೆಚ್ಚು ಇಪ್ಪ ಪ್ರಮಾಣಲ್ಲಿಯೇ, ಅತಿ ಬುದ್ಧಿವಂತರೂ, ಕ್ರಾಂತಿಕಾರಿಗಳೂ, ನಿರೀಶ್ವರವಾದಿಗಳೂ, ನಿರ್ಲಿಪ್ತರೂ, ನಿರಾಸಕ್ತರೂ ಜಾಸ್ತಿ ಇದ್ದವು.   ಅಲ್ಲದ್ದೆ, ನಮ್ಮಲ್ಲಿ ಧಾರಾಳವಾಗಿಪ್ಪ ಪರಸ್ಪರರ ಕಾಲು ಎಳೆವ ಸಂಪ್ರದಾಯ ನಮ್ಮ ಅಧೋಗತಿಗೆ ಇನ್ನೊಂದು ಕಾರಣ.  ಈ ಕೆಲವು ಕಾರಣಂಗಳಿಂದಾಗಿಯೇ ಹಿಂದೂಗೊ ಬಹುಸಂಖ್ಯಾತರಾಗಿದ್ದರೂ, ಸದಾ ಬೇರೆಯವರ ಕೃಪೆಲಿ ಬದುಕ್ಕಾಗಿಪ್ಪದು. 

ಚರಿತ್ರೆಯ ಘಟನೆಗಳ ಬಗ್ಗೆ ಒಂದು ದೃಷ್ಟಿ ಹಾಯಿಸಿದರೆ, ಈ ಹಿಂದೆ ನಡೆದ ಯಾವುದೇ ಸಾಮಾಜಿಕ ಕ್ರಾಂತಿಯ ಮೊದಲು ಅಲ್ಲಿಯ ಪರಿಸ್ಥಿತಿ ಅಸಹನೀಯ ಹೇಳುವ ಮಟ್ಟಕ್ಕೆ ಇಳಿದಿತ್ತು ಹೇಳುದು ಕಾಣ್ತು. . ಹಿಂದೂಗಳಲ್ಲಿ ಸಹಜವಾಗಿ ಹೇರಳವಾಗಿಪ್ಪ ಸಹನೆ, ಸಹಜೀವನದ ಸದ್ಭುದ್ದಿಯ ದುರುಪಯೋಗ ಪಡಿಸಿಗೊಂಡು  ವಿಪರೀತ ಪರೀಕ್ಷೆ ಮಾಡಿರೆ,  ಸದ್ಯಕ್ಕೆ  ಸುಪ್ತವಾಗಿಪ್ಪ ಆಕ್ರೋಶ ವಿಪರೀತ  ಕೆರಳಿ ನಮ್ಮ ಸಮಾಜಲ್ಲಿ ಕ್ರಾಂತಿಕಾರಿಯಾದ ಬದಲಾವಣೆ ಆದರೂ ಆಶ್ಚರ್ಯ ಇಲ್ಲೆ. 

- ಬಾಪಿ

No comments: