Saturday, May 23, 2009

ವಂಶ ವೃಕ್ಷ


ಈ ದೇಶದ  ಮಕ್ಕಳಲ್ಲಿ ಎಷ್ಟು ಜನಕ್ಕೆ  ರಾಮ, ಕೃಷ್ಣ, ಬುದ್ಧ, ಶಂಕರಾಚಾರ್ಯ, ವಿವೇಕಾನಂದರಂತಹ  ನಮ್ಮ ಇತಿಹಾಸ ಮತ್ತು ಪುರಾಣದ ಪ್ರಸಿದ್ಧ ವ್ಯಕ್ತಿಗಳ ಹೆಸರು ಗೊಂತಿಕ್ಕು ? ಆದರೆ ಇದೇ ಮಕ್ಕೊಗೆ ಮೋತಿಲಾಲ್ ನೆಹರೂ, ಜವಾಹರಲಾಲ್ ನೆಹರೂ, ಕಮಲಾ ನೆಹರೂ, ಇಂದಿರಾ ಗಾಂಧಿ, ರಾಜೀವ್ ಗಾಂಧಿ ಇತ್ಯಾದಿಯವರ ಹೆಸರು ಖಂಡಿತ ಬಾಯಿಪಾಠ ಆಗಿರ್ತು !  ನಮ್ಮ ರಾಜಕೀಯದ ಈ ಅಭಿನವ ಪ್ರಾತಃಸ್ಮರಣೀಯರ ಹೆಸರುಗೊ ಶಾಲೆಯ ಪಾಠಪುಸ್ತಕಂಗಳಲ್ಲಿ ಮಾಂತ್ರ ಅಲ್ಲದ್ದೆ,   ಪೇಟೆಗಳ ಬಡಾವಣೆಗೊ, ರಾಜ ಮಾರ್ಗಂಗೊ, ಬಸ್ ಯಾ ವಿಮಾನ ನಿಲ್ದಾಣಂಗೊ,  ಸರಕಾರದ ಸಾರ್ವಜನಿಕ ಯೋಜನೆಗೊ -  ಹೀಂಗೆ ಅವಕಾಶ ಇಪ್ಪಲ್ಲಿ  ಪೂರಾ ಪುನರಾವರ್ತನೆ ಆಗಿ  ಸಮಾಜದ ಎಲ್ಲಾ ವರ್ಗದ ಜನರ ಬಾಯಿಲಿ  ಅಜರಾಮರವಾಗಿ ಉಳಿವ ಹಾಂಗೆ ಕೋಂಗ್ರೇಸಿನವು ವಿಶೇಷ ಕಾಳಜಿ ವಹಿಸಿ ವ್ಯವಸ್ಥೆ ಮಾಡಿಗೊಂಡಿದವು. 

ಎಲ್ಲಾ ದಿಕ್ಕಿಲ್ಯೂ  ನೆಹರೂ ಕುಟುಂಬಸ್ಥರ ಹೆಸರುಗಳ ಉಪಯೋಗಿಸುದರ ಕಂಡು ಬೇರೆ ದೇಶದವಕ್ಕೆ ಇವರದ್ದೆಂತ ಭಯಂಕರ ದೊಡ್ಡ ರಾಜ ಮನೆತನವೋ ಹೇಳಿ ಸಂಶಯ ಬಪ್ಪಲೂ ಸಾಕು.  ದೇಶದ ಮುಗ್ಧ ಜನರ ಇಷ್ಟೊಂದು ಅಗಾಧವಾದ  ವಿಶ್ವಾಸ, ಪ್ರೀತಿ, ಅಭಿಮಾನಕ್ಕೆ ಪ್ರತಿಯಾಗಿ ಸಮಾಜಕ್ಕೆ ಇವರ ನಿಜವಾದ ಕೊಡುಗೆ ಎಂತದು ? ಮಾಡಿದ್ದೆಲ್ಲಾ  ತ್ಯಾಗ, ಸೇವೆ ಹೇಳಿಗೊಂಡು ತಿರುಗುವ ಇವರ ಅಸಲು ಚರಿತ್ರೆ ಎಂತದು ?  ಕಾಲಚಕ್ರ ಉರುಳಿ ನೆಹರೂವಿನ ಪ್ರಪೌತ್ರನ ದರ್ಬಾರಿನ ಹೊಸ್ತಿಲಿಂಗೆ ಬಂದು ನಿಂದಿಪ್ಪಗ, ಈ ವಿಷಯದ ಬಗ್ಗೆ ರಜ ಚರ್ಚೆ ಮಾಡಿರೆ ಸಕಾಲಿಕ ಅಕ್ಕಲ್ಲದಾ ?

ನೆಹರೂವಿನ ತಟಸ್ಥ ಕೂಟನೀತಿ, ಸ್ವಾತಂತ್ರ್ಯಾನಂತರ ಬೃಹತ್ ಕೈಗಾರಿಕೆಗಳ ಸರಕಾರಿ ವಲಯಲ್ಲಿ ಮಾತ್ರ ಮಾಡ್ಳೆ ಆದ್ಯತೆ ಕೊಟ್ಟದೇ ಮೊದಲಾದ ವಿಷಯಂಗಳ  ಬಗ್ಗೆ ಪರ-ವಿರೋಧವಾಗಿ ಎಷ್ಟುದೇ ವಾದ ಮಾಡ್ಳಕ್ಕು. ಚರಿತ್ರೆಯ ಘಟನೆಗಳ  ಭವಿಷ್ಯದ ಒಂದು ಬಿಂದುವಿಲ್ಲಿ ನಿಂದು ನೋಡುವಗ ಸುಮಾರು ಗೊಂದಲ ಅಪ್ಪ ಸಾಧ್ಯತೆ ಇದ್ದು. ಆಯಾ ತೀರ್ಮಾನ ತೆಕ್ಕೊಂಬ ಸಮಯಲ್ಲಿ ಇತ್ತ  ಅನಿವಾರ್ಯತೆಗಳ ಗಮನಕ್ಕೆ ತೆಕ್ಕೊಳದ್ದೆ ಮಾಡುವ ಚರ್ಚೆ ವ್ಯರ್ಥ ಆವುತ್ತು. ಹಾಂಗಾಗಿ, ಇಂತಹ  ವಿದೇಶ ವ್ಯವಹಾರ ಅಥವಾ ಅರ್ಥವ್ಯವಸ್ಥೆಗೆ ಸಂಬಂಧಪಟ್ಟ strategy ಯಾ policy ವಿಷಯಂಗಳ  (ಸದ್ಯಕ್ಕೆ) ಬದಿಗಿಟ್ಟು ಸಾಮಾಜಿಕ ಪರಿಸ್ಥಿತಿಯ  ಬಗ್ಗೆ ಮಾತ್ರ ವಿಮರ್ಶೆ ಮಾಡಿರೆ ಹೆಚ್ಚು ಸಾರ್ಥಕ ಅಕ್ಕು ಹೇಳಿ ಗ್ರೇಶುತ್ತೆ.  

ಈಗ ನಮ್ಮ ದೇಶದ ಸ್ವಾತಂತ್ರ್ಯಾನಂತರದ ೬೨ ವರ್ಷಂಗಳಲ್ಲಿ ಆದ  ಸಾಮಾಜಿಕ ಬದಲಾವಣೆಗಳ ರಜ ಅವಲೋಕನ ಮಾಡುವೊ.  ಒಟ್ಟಿಂಗೇ,  ಸರಿಸುಮಾರು ಇಷ್ಟೇ ವರ್ಷಂಗಳಲ್ಲಿ  ಬೇರೆ ಕೆಲವು ದೇಶಂಗೊ ನಡೆದು ಬಂದ ದಾರಿಯನ್ನೂ ಗಮನಿಸಿ ತುಲನೆ ಮಾಡುವೊ.  ಉದಾರೀಕರಣದ ನೀತಿ, ದೂರದರ್ಶನದ ಪ್ರಭಾವ,  ಸಂಪರ್ಕ ಕ್ರಾಂತಿ ಇತ್ಯಾದಿಗಳಿಂದಾಗಿ  ಎಲ್ಲಾ ಸಮಾಜಂಗೊ ಕ್ಷಿಪ್ರ ಗತಿಲಿ ಬದಲಾವಣೆ ಆದ್ದದರ ನಾವು ಕಾಣ್ತಾ ಇದ್ದು. ಇದು ಎಲ್ಲಾ ದೇಶಂಗೊಕ್ಕೂ ಸಮಾನವಾಗಿ ಅನ್ವಯಿಸುವ ಬಾಹ್ಯ ಪ್ರಭಾವಂಗೊ.  ಈ ಹಿನ್ನೆಲೆಂದ ನೋಡುವಗ  ಜಪಾನ್, ಕೊರಿಯಾ, ಮಲೇಶ್ಯಾಗಳೇ ಮೊದಲಾದ ದೇಶಂಗೊ ಕೈಗಾರಿಕಾಭಿವೃದ್ಧಿ, ಜಾಗತೀಕರಣಗಳ ಹೊರತಾಗಿಯೂ ತಮ್ಮತನವ ಉಳಿಸಿಗೊಂಡು  ಬಂದಿದ್ದರೆ, ನಮ್ಮ ಸಮಾಜಲ್ಲಿ ಮಾಂತ್ರ ಅನಿಯಂತ್ರಿತ ಬದಲಾವಣೆ ಆದ್ದದರ ಮತ್ತು ಆವುತ್ತಾ ಇಪ್ಪದರ ಕಾಂಬಲಕ್ಕು.   ಹಾಂಗಾರೆ ನಮ್ಮ ಈ ಪರಿಸ್ಥಿತಿಗೆ ಯಾರು ಹೊಣೆ ಹೇಳುವ ಪ್ರಶ್ನೆ ಬಂದರೆ,  ಈ  ಅವಧಿಲಿ ಅತಿ ಹೆಚ್ಚು ಕಾಲ  ಆಢಳಿತ ಮಾಡಿದ ಕೋಂಗ್ರೇಸು ಪಕ್ಷದ ಮೇಲೆ ಕೈ ತೋರುಸೆಕ್ಕಾವುತ್ತು.   ನಮ್ಮಲ್ಯಾಣ ಬದಲಾವಣೆಗಳ ಧಾರ್ಮಿಕ ಮತ್ತು ಸಾಮಾಜಿಕ ಹೇಳಿ ಎರಡು  ಶೀರ್ಷಿಕೆಗಳ ಅಡಿಲಿ ವಿಸ್ತರಿಸುವೊ.

ಧಾರ್ಮಿಕ ಅಧಃಪತನ : ಅನಾದಿ ಕಾಲಂದಲೂ ನಮ್ಮ ಸಮಾಜ ವ್ಯವಸ್ಥೆಗೆ  ಧರ್ಮವೇ ಆಧಾರ ಸ್ತಂಭ.  ರಾಜರ ಆಢಳಿತ ಕಾಲಲ್ಲಿಯೂ ಆಸ್ಥಾನಲ್ಲಿ ಒಬ್ಬ ಧರ್ಮಗುರು ಹೇಳುವವ ಇತ್ತದು ಸಾಮಾನ್ಯ ಪದ್ಧತಿ ಆಗಿತ್ತಡ.  ಗಮನಿಸೆಕ್ಕಾದ ಇನ್ನೊಂದು ಮುಖ್ಯ ವಿಷಯ ಎಂತ ಹೇಳಿರೆ, ಹಿಂದೂ ಧರ್ಮ ಬೇರೆದರ ಹಾಂಗೆ ಹುಟ್ಟುವಾಗಲೇ ಹೆಸರು  ಹಾಕಿಸಿಗೊಂಡು ಸ್ಥಾಪನೆ ಆದ  ಧರ್ಮ ಅಲ್ಲ.   ಇದು ಯಾವಾಗ, ಹೇಂಗೆ ಸುರು ಆತು ಹೇಳುವ ಬಗ್ಗೆ ನಿಖರವಾಗಿ ಹೇಳುಲೆ ಸಾಧ್ಯ ಇಲ್ಲದ್ದ ಕಾರಣ ಇದಕ್ಕೆ ಸನಾತನ ಧರ್ಮ ಹೇಳಿಯೇ ಹೆಸರು.  ಇದಕ್ಕೆ ಧರ್ಮ ಹೇಳುವ ಸಂಕುಚಿತ ಹಣೆಪಟ್ಟಿಗಿಂತಲೂ "ಒಂದು ಜೀವನ ಪದ್ಧತಿ" ಹೇಳುದೇ  ಹೆಚ್ಚು ಸೂಕ್ತ ಹೇಳುವ ವ್ಯಾಖ್ಯಾನ ಇದ್ದು.   ಬೇರೆ ಎಲ್ಲಾ ಧರ್ಮಂಗೊ ಒಬ್ಬ ವ್ಯಕ್ತಿಯ ಮಂಡೆಂದ ಉದುರಿದ ಕೇವಲ ಒಂದು ಗ್ರಂಥವ ಆಧಾರಿಸಿದ ಬೋಧನೆಗಳಾಗಿದ್ದರೆ, ಹಿಂದೂ ಧರ್ಮಲ್ಲಿ ದೇವರುಗೊ, ಗುರುಗೊ, ಗ್ರಂಥಂಗಳ ಬಾಹುಳ್ಯವ ನಾವು ಕಾಣ್ತು.   ಇದರಲ್ಲಿ  ವೇದ, ಉಪನಿಷತ್ತುಗಳ ಉದಾತ್ತ ಆಧ್ಯಾತ್ಮಿಕ  ಚಿಂತನೆಗಳ ಒಟ್ಟಿಂಗೇ, ಸಾಹಿತ್ಯ, ಸಂಗೀತ, ಕಲೆ, ಯೋಗಂಗಳೂ ಹಾಸುಹೊಕ್ಕಾಗಿ ಸೇರಿಗೊಂಡಿದ್ದು.  ಹೇಳಿರೆ, ಇದು ಕೇವಲ ಧಾರ್ಮಿಕ ಆಚರಣೆಗೊಕ್ಕೆ ಸೀಮಿತವಾದ್ದದಲ್ಲ.  ಬೇರೆಯವಕ್ಕೆ  ಆದಿತ್ಯವಾರ, ಶುಕ್ರವಾರ ಇತ್ಯಾದಿಯಾಗಿ ನಿರ್ದಿಷ್ಟ ದಿನದಂದು ಖಡ್ಡಾಯ ಪ್ರಾರ್ಥನೆಯ "ಶಿಕ್ಷೆ" ವಿಧಿಸಿದ್ದರೆ, ನಮ್ಮಲ್ಲಿ ಹೀಂಗಿಪ್ಪ ಬಂಧನ ಎಂತ ಇಲ್ಲೆ. ನಮ್ಮ ಒಟ್ಟು ತಿಳುವಳಿಕೆ ಮತ್ತ್ತು ಆಚರಣೆಗಳ  ಸಮಗ್ರವಾಗಿ  ಕಂಡು, ದೇಹ ಮತ್ತು ಬುದ್ಧಿಗಳ ಸಮತೋಲನವ ಕಾಯ್ದುಗೊಂಬ  ಒಂದು ಅಪೂರ್ವ ಜ್ಞಾನ ಭಂಡಾರದ ಸಂಸ್ಕಾರವ ನಾವು ಬಳುವಳಿಯಾಗಿ ಪಡದ್ದು.   ಈ ಕಾರಣಂದಾಗಿಯೇ, ಭಾರತೀಯರೆಲ್ಲಾ ಹಿಂದೂಗೊ ಹೇಳುವ ವಿಶಾಲ ಮನೋಭಾವ ನವಗೆ ಬಪ್ಪದು.  ಆದರೆ, ನಮ್ಮಲ್ಲಿಪ್ಪ ಬಡತನ, ಅನರಕ್ಷರತೆಯ ದುರುಪಯೋಗ ಮಾಡಿಗೊಂಡು ಹೆರಾಣವು ಮತಾಂತರದಂತಹ ಅನಿಷ್ಟಂಗಳ ಅವ್ಯಾಹತವಾಗಿ ನಡೆಶಿಗೊಂಡು ಬತ್ತಾ ಇದ್ದವು.  ಸರಕಾರ ಇದರ ಮೊದಲಿಂದಲೇ  ಹತೋಟಿಲಿ ಮಡುಗೆಕ್ಕಾಗಿತ್ತು.  ನಮ್ಮ ನಾಯಕರಾದವಕ್ಕೆ ಧರ್ಮ, ಸಂಸ್ಕೃತಿಯ ಬಗ್ಗೆ ರಜ ಆದರೂ ಕಾಳಜಿ ಇತ್ತಿದ್ದರೆ, ಇದರ ತಡವಲೆ ಪ್ರಯತ್ನ ಮಾಡ್ತೀತವು. ಆದರೆ,  ಆರೆಸ್ಸೆಸ್ ಅಥವಾ ಭಜರಂಗ ದಳದವು ಹಿಂದೂಗಳ ರಕ್ಷಣೆಗೆ ಓಡಿ ಬರೆಕಾಗಿ ಬಂತು. ಇಲ್ಲಿಯೇ ನೆಹರೂ ಕುಟುಂಬದ ಕೊಡುಗೆ ಎಂತದು ಹೇಳುದು  ಪ್ರಸ್ತುತ ಅಪ್ಪದು. ಅವರ ಕುಟುಂಬಲ್ಲಿ ನೆಹರೂವಿನ ಅನಂತರ ಯಾರೂ ಹಿಂದೂ ಮತವ ಅನುಸರಿಸುವವು ಒಳುದ್ದವಿಲ್ಲೆ ಹೇಳುವ ಸತ್ಯವೇ ಎಲ್ಲಾ  ಸಮಸ್ಯೆಗೊಕ್ಕೂ  ಮೂಲ ಹೇಳಿರೆ ತಪ್ಪಾಗ.  ಇದರೊಟ್ಟಿಂಗಿಪ್ಪ ಚಿತ್ರಂದ ಇವರ ಪವಿತ್ರ ವಂಶವೃಕ್ಷದ ಸ್ಥೂಲ ಪರಿಚಯ ಆವುತ್ತು. ಚಿತ್ರವೇ ಅಷ್ಟು ಚೆಂದ ಇಪ್ಪ ಕಾರಣ, ಹೆಚ್ಚು ವಿವರಿಸೆಕ್ಕಾದ ಅವಶ್ಯಕತೆ ಬಾರ ಹೇಳಿ ಗ್ರೇಶುತ್ತೆ.  ಇಲ್ಲಿಂದಲೇ ಅಲ್ಪಸಂಖ್ಯಾತರ votebankನ ಹಾಂಗಿಪ್ಪ  ಬೇರೆ ಸಾಮಾಜಿಕ ಸಮಸ್ಯೆಗೊ ಹುಟ್ಟಿಗೊಂಡದು ಹೇಳಿ ಎನ್ನ ಅಭಿಪ್ರಾಯ. 

ನೈತಿಕ ಅಧಃಪತನ : ಧರ್ಮದ ಆಧಾರವೇ ಇಲ್ಲದ್ದ ಮೇಲೆ ನೈತಿಕತೆಗೆ ಎಲ್ಲಿಯ ಬೆಲೆ ? ದೇಶದ ರಾಜಕಾರಣಲ್ಲಿ ಇಂದಿರಾಗಾಂಧಿಯ ಆಗಮನವಾದಲ್ಲಿಂದ (ಸುಮಾರು ೧೯೭೦ರಿಂದ) ಮೊದಲ್ಗೊಂಡು, ನಮ್ಮ ರಾಜಕೀಯದ ವ್ಯಭಿಚಾರೀಕರಣ ಮುಕ್ತವಾಗಿ ನಡೆತ್ತಾ ಇಪ್ಪದು ಸ್ಪಷ್ಟವಾಗಿ ಕಾಣ್ತು.  ಅಲ್ಲಿಂದ ಭ್ರಷ್ಟಾಚಾರದ ಪಿಡುಗು ಬೆಳಕ್ಕೊಂಡೇ ಬಂತು.  ಕ್ರಮೇಣ, ರಾಜಕಾರಣ ಹೇಳುದು ಕಳ್ಳಕಾಕರಿಂಗೆ, ರೌಡಿಗೊಕ್ಕೆ, ಮೋಸಗಾರರಿಂಗೆ ಮಾಂತ್ರ ಇಪ್ಪ ಕ್ಷೇತ್ರ ಹೇಳಿ ಗುರುತಿಸಿಗೊಂಡತ್ತು.  ಇಂದಿರಾ ಗಾಂಧಿಯೇ ಈ ಎಲ್ಲಾ ಅಧಃಪತನಕ್ಕೆ ನಾಂದಿ ಹಾಡಿದ್ದು ಹೇಳುವಲ್ಲಿಗೆ ಇಂದ್ರಾಣ ಹರಿಕಥೆಯ ಈ ಅಧ್ಯಾಯ ಇಲ್ಲಿಗೆ  ಮುಗುತ್ತು ಮತ್ತು ನೆಹರೂವಿನ ದರಿದ್ರ ಕಥಾಶ್ರವಣ ಮಾಡಿದ ಪಾಪ ನವಗೆ ಆಂಟಿತ್ತು.       

- ಬಾಪಿ

No comments: