Sunday, May 17, 2009

ಚುನಾವಣೆ ೨೦೦೯

ಅಂತೂ ಮಹಾ ಚುನಾವಣೆಯ ಫಲಿತಾಂಶ ಬಂತು.   ಗೆದ್ದವಕ್ಕೆ ಸಂಭ್ರಮ, ಸೋತವಕ್ಕೆ ಹತಾಶೆ. ದೇವೇಗೌಡನ ಹಾಂಗೆ ಗೆದ್ದೂ ಸೋತವಕ್ಕೆ, ನೆವನದ bed rest !  ಪಟಾಕಿ ಮತ್ತು ಮದ್ಯದ ಅಂಗಡಿಯವಕ್ಕೆ ಒಳ್ಳೆ ವ್ಯಾಪಾರ.  ಅಂತೂ ಒಟ್ಟಿಲ್ಲಿ,  ಮನೆಲಿ ಗೌಜಿಯ ತ್ರಿಕಾಲ ಪೂಜೆ ಕಳುದ ಮೇಲೆ ನೆಂಟ್ರೆಲ್ಲಾ ವಾಪಾಸು ಹೋಗಿ ಅಪ್ಪಗ ಇಪ್ಪ ವಿಚಿತ್ರ ಮೌನದ ವಾತಾವರಣ.

ಎನ್ನ ಪ್ರಕಾರ, ಚುನಾವಣೆಯ ಕೆಲವು ವಿಶೇಷಂಗೊ ಮತ್ತು ಭವಿಷ್ಯದ ಮೇಲೆ ನಿರೀಕ್ಷಿತ ಪರಿಣಾಮಂಗೊ ಹೀಂಗಿದ್ದು  :
 
  • ಅಪ್ಪ ಮಕ್ಕಳ ಭಲೇ ಜೋಡಿಯಾದ ದೇವೇಗೌಡ-ಕುಮಾರಸ್ವಾಮಿಗೊಕ್ಕೆ ಸಂಸತ್ತಿಲ್ಲಿ  bench-mates ಅಪ್ಪ ಸುದೈವ.  ಅದುದೇ ಅತಿ ಹಿಂದಾಣ ಬೆಂಚಿಲ್ಲಿ.
  • ರಾಮಜ್ಜನ ಫಲಿತಾಂಶ ನಿರೀಕ್ಷೆ ಮಾಡಿದ ಹಾಂಗೇ ಇತ್ತು. ಠೇವಣಿ ಹೋತು. ಸೋತವರ ಬಗ್ಗೆ ಇನ್ನೂ ಹೆಚ್ಚು ಮಾತಾಡಿ ಗಾಯಕ್ಕೆ ಬರೆ ಎಳವದು ಒಳ್ಳೆ ಸಂಸ್ಕಾರ ಅಲ್ಲದ್ದ ಕಾರಣ ಈ ವಿಷಯವ ಇಷ್ಟಕ್ಕೇ ಬಿಡುವೊ !
  • ಈ ಸರ್ತಿ, ಭಾಜಪಕ್ಕೆ ಮಿಶ್ರ ಫಲ.  ಕರ್ನಾಟಕಲ್ಲಿ ಜಯಭೇರಿ ಬಾರಿಸಿದ್ದು ಯೆಡ್ಯೂರಪ್ಪಂಗೆ ರಜ ನಿರಾಳ ಅಕ್ಕು.  ಬೆಂಗ್ಳೂರಿನ ಮೂರೂ ಸ್ಥಾನ ಗೆದ್ದದು ಅನಿರೀಕ್ಷಿತ.    ಒಟ್ಟು ಫಲಿತಾಂಶ UPA (Unlimited Possibilities' Alliance) ಪರವಾಗಿಪ್ಪ ಕಾರಣ, ಕರ್ನಾಟಕಲ್ಲಿ ಕೋಂಗ್ರೇಸಿಂಗೆ ಒಳ್ಳೆ ಪರಿಣಾಮ ಸಿಕ್ಕಿತ್ತಿದ್ದರೆ, ಎಂತಾರು ಕಿತಾಪತಿ ಸುರು ಮಾಡ್ತೀತವು.  ತನಗೆ ಆಟ ಆಡ್ಳೆ ಅನುಕೂಲ ಅಪ್ಪ ಹಾಂಗಿಪ್ಪ ಅತಂತ್ರ ಸಂಸತ್ತು ನಿರ್ಮಾಣ ಅಕ್ಕು ಹೇಳುವ ನಿರೀಕ್ಷೆಲಿತ್ತ ಕುಮಾರಸ್ವಾಮಿ, ಹೋದವಾರ  ಗುಟ್ಟಾಗಿ ಸೋನಿಯಾ ಗಾಂಧಿಯ ಭೇಟಿ ಮಾಡಿ ಮುಂದಿನ ಸಂಪುಟಲ್ಲಿ ಗಣಿ ಇಲಾಖೆ ಬೇಕು ಹೇಳುವ ಬೇಡಿಕೆಯ ಮಡಿಗಿತ್ತಿದ್ದ ಹೇಳುವ ಶುದ್ದಿ ಈಗ ಅಷ್ಟೇನೂ ಗುಟ್ಟಾಗಿ ಒಳಿದ್ದಿಲ್ಲೆ.  ಕೇಂದ್ರಲ್ಲಿ ಗಣಿ ಮಂತ್ರಿ ಆಗಿ, ಬಳ್ಳಾರಿಯ ರೆಡ್ಡಿಗೊಕ್ಕೆ ಉಪದ್ರ ಕೊಟ್ಟು, ಯೆಡ್ಯೂರಪ್ಪನ ಸರ್ಕಾರವ ಉರುಳಿಸುವ ಕುತಂತ್ರವ ಈಗ ಮುಂದುವರಿಸುಲೆ ಕಷ್ಟ ಇದ್ದು. 
  • ಇದು ಕ್ಷೇತ್ರಂಗಳ ಮರುವಿಂಗಡಣೆ ಮಾಡಿದ ನಂತ್ರಾಣ ಮೊದಲಾಣ ಚುನಾವಣೆ ಆದ ಕಾರಣ, ಯಾವ ಪಕ್ಷಕ್ಕೂ ಜಾತಿವಾರು ಲೆಕ್ಕಾಚಾರದ ಸಂಪೂರ್ಣ ಹಿಡಿತ ಇತ್ತಿಲ್ಲೆ.  ಒಟ್ಟಾರೆ ಕೋಂಗ್ರೇಸಿಂಗೆ ಅನಿರೀಕ್ಷಿತ ಲಾಭ ಆತು.  ಮೊದಲೇ ಹೃದ್ರೋಗಿ ಆದ ಮನಮೋಹನ ಸಿಂಗಂಗೆ  ಈ ಅನಿರೀಕ್ಷಿತ ಪರಿಣಾಮಂದ ಏನೂ ಆಘಾತ ಆಗದ್ದೆ, ಸೌಖ್ಯಲ್ಲಿ ಇಪ್ಪದು ಅವನ ಕುಟುಂಬದವರ ಭಾಗ್ಯ.  ಖುಶಿಲಿಯೂ ದುಃಖಲ್ಲಿಯೂ ಸಮಚಿತ್ತಂದ ವರ್ತಿಸಿ, ಸ್ಥಿತಪ್ರಜ್ಹನಾಗಿದ್ದು ಹೆಬಗನ ಹಾಂಗಿಪ್ಪ ಮೋರೆ ಇದ್ದರೆ ಹೇಂಗೆ ದೀರ್ಘಾಯುಷ್ಯ ಪಡವಲಕ್ಕು ಹೇಳುದಕ್ಕೆ ಇದು ಜೀವಂತ ಉದಾಹರಣೆ.
  • ಮಳೆಗಾಲಲ್ಲಿ ಪುರುಸೊತ್ತಿಪ್ಪವರೆಲ್ಲ ಸೇರಿಸಿ ಮೇಳ ಕಟ್ಟಿಗೊಂಡು ತಿರುಗುವ ಹವ್ಯಾಸಿ ಕಲಾವಿದರ ಹಾಂಗೆ ತೃತೀಯ ರಂಗ, ಚತುರ್ಥ ರಂಗ ಹೇಳಿ ಎಲ್ಲ ಕಾರುಬಾರು ಸುರು ಮಾಡಿತ್ತ ಕ್ಷೇತ್ರೀಯ ಪಕ್ಷಂಗಳ ಮುಕ್ರಿಗೊಕ್ಕೆ ಎದ್ದು ನಿಂಬಲೆಡಿಯದ್ದಷ್ಟು ಆಘಾತ ಆಯಿದು.  
  • ಇನ್ನು ಮುಂದೆ ಭಾರತಲ್ಲಿ ಯಾವುದೇ ಒಂದು ಪಕ್ಷ ಸ್ವತಂತ್ರವಾಗಿ ಸರಕಾರ ಮಾಡ್ಳೆಡಿಯ ಹೇಳುವ ನಂಬಿಕೆ ಸುಳ್ಳಾತು.  ಈಗ, ಕೋಂಗ್ರೇಸಿನವು ಕಾಟು ಕಮ್ಯುನಿಷ್ಟರು ಅಥವಾ ಇತರ ಸುಮಾರು ಲಾಯಿಲೋಟು ಪಕ್ಷಂಗಳ  ಹಂಗು ಇಲ್ಲದ್ದೆ  ಆಢಳಿತ ಮಾಡ್ಳಕ್ಕು.
  • ರಾಹುಲ್ ಗಾಂಧಿಗೆ ಮಂತ್ರಿ ಅಪ್ಪ ಯೋಗ.  ಇದಕ್ಕೆ ಪೂರ್ವಭಾವಿಯಾಗಿ,  ಅರ್ಥ ಮಂತ್ರಾಲಯಕ್ಕೆ ಹೇಳಿ ಯಾವಾಗಲೂ ಕಿಸೆಲಿ ಮಡಿಕ್ಕೊಂಬಲೆ ಹೇಳಿ ಇಟೆಲಿ ದೇಶಂದ ಒಂದು ಇಕ್ಕುಳಿನ  ಆಮದು ಮಾಡಿಗೊಂಬ ವ್ಯವಸ್ಥೆ ಮಾಡ್ತಾ ಇದ್ದಾಡ. ಇನ್ನು ಮುಂದೆ, ಪತ್ರಕರ್ತರು ಬಾಯಿಗೆ ಬಂದ ಹಾಂಗೆ ಎಲ್ಲಾ ಪ್ರಶ್ನೆ ಕೇಳಿ ತಲೆ ತಿಂದಪ್ಪಗ  ನಾಲಗೆ ಹೆರಡದ್ರೆ, ಉಪಯೋಗ ಅಕ್ಕು ಹೇಳುವ ಕಾರಣಕ್ಕಾಡ.  
  • ಚುನಾವಣೆ ಫಲಿತಾಂಶಂಗೊ ಹೆರ ಬೀಳ್ತಾ ಇದ್ದ ಹಾಂಗೇ, ಸುಮಾರು ವಾಹಿನಿಗಳ ಪುರ್ಬು ವಕ್ತಾರರಿಂಗೆ (ರಾಜದೀಪ್ ಸರ್ದೇಸಾಯಿ, ಪ್ರಣೊಯ್ ರೋಯ್ ಹಾಂಗಿಪ್ಪ) ತಡವಲೆಡಿಯದ್ದ ಸಂತೋಶ ಆದ್ದದು ಸ್ಪಷ್ಟ ಗೊಂತಾಯಿಕ್ಕೊಂಡಿತ್ತು.   ಇನ್ನು ಮತಾಂತರದ ಪ್ರಕ್ರಿಯೆ ಅವ್ಯಾಹತವಾಗಿ ಮುಂದುವರಿವಲೆ ಏನೂ ಅಡ್ಡಿ ಇಲ್ಲೆ.    ಸೋನಿಯಾ ಗಾಂಧಿಯ ಆಶೀರ್ವಾದಂದ ಈ ಸಂಸತ್ತಿನ ಅವಧಿ ಮುಗಿವದರೊಳಗೆ, ಭೈರಪ್ಪ ಹೇಳಿದ ಅಂಕೆ ಸಂಖ್ಯೆ ಪ್ರಕಾರ ಲೆಕ್ಕ ಹಾಕಿರೆ ನಮ್ಮ ದೇಶಲ್ಲಿ  ಇನ್ನೊಂದೆರಡು ಕೋಟಿ ಕ್ರಿಶ್ಚಿಯನರು ಹೆಚ್ಚಪ್ಪದು ಖಂಡಿತ.     

-ಬಾಪಿ

1 comment:

Prashanth said...

Baapige monneya chunavaneli mata haakale pratipakshadavu bittiravu heLi sanna samshaya :)
-Appachchi