Wednesday, May 20, 2009

ರಾಹುಲ್ ಗಾಂಧಿ !


ಕೋಂಗ್ರೇಸ್ ಪಕ್ಷದ ಯುವ ನೇತಾರ, ೨೧ನೇ ಶತಮಾನದ ಮಹಾನ್ ವಿಶ್ವ ನಾಯಕನಾದ ರಾಹುಲ್ ಗಾಂಧಿಯ ಒಂದು ಸಣ್ಣ ವ್ಯಕ್ತಿ ಪರಿಚಯ ಮಾಡುವ ಪ್ರಯತ್ನ ಮಾಡ್ತೆ. 

ಮೈಲಿ ಹರಿವದು ಇಟೆಲಿಯ pizzaದ ಹೇರಳ ಪೋಷಕಾಂಶಂಗಳ  ಹೀರಿ ತಯಾರಾದ ಸಮೃದ್ಧ ರಕ್ತ ಆದ ಕಾರಣ,  ಇವಂದು ತಿಳಿಗೆಂಪು ಮೈಬಣ್ಣ.   ಇವನ ಹಿಂದಾಣವು   ಕೆಲವು ತಲೆಮಾರಿಂಗೆ ಸಾಕಪ್ಪಷ್ಟು ಸಂಪತ್ತಿನ ಅಕ್ರಮವಾಗಿ ಕೂಡಿ ಮಡುಗಿತ್ತ ಕಾರಣ ಐಶಾರಾಮದ ಜೀವನ ಹುಟ್ಟುವಗಳೇ  ಖಾತ್ರಿ ಮಾಡಿಗೊಂಡ ಅದೃಷ್ಟಶಾಲಿ.  ದುಡಿದು ಸಂಪಾದನೆ ಮಾಡುವ ಅನಿವಾರ್ಯತೆ ಹೇಂಗೂ ಇಲ್ಲದ್ದರಿಂದ, ಯಾವುದೇ ವಿಶೇಷ ವಿದ್ಯಾಭ್ಯಾಸ ಮಾಡುವ ಬಗ್ಗೆ ತಲೆ ಕೆಡಿಸಿಗೊಂಬಲೆ ಹೋಯಿದನೇ  ಇಲ್ಲೆ.   ಆದರೂ, ಸ್ವಿಸ್ ಬ್ಯಾಂಕಿಂಗೆ ಅಂಬಗಂಬಗ ಹೋಯೆಕ್ಕಾಗಿ ಬಪ್ಪ ಕಾರಣ, ದಸ್ಕತ್ತು ಹಾಕುವಷ್ಟು ಕಲಿವಿಕೆ ಮಾಡಿಗೊಂಡಿದ.    ಅಜ್ಜನ ಕಾಲಂದಲೇ ಇವನ ಮನೆಯವು ಎಲ್ಲಾ  ಚೆಂದ ಇತ್ತದಲ್ಲದ್ದೆ  ಹೆಚ್ಚು  ಬೆಶಿಲಿಂಗೆ ಎಲ್ಲ ಹೋಗದ್ದೆ ರಾಜ ಮರ್ಜಿಲಿತ್ತ ಕಾರಣ, ಇವನೂ ಸ್ಫುರದ್ರೂಪಿ.   ಇವನ ಕೆಪ್ಪಟೆಲಿ ಬೀಳುವ  ಗುಳಿ ಸ್ವಾಭಾವಿಕವೋ ಸರ್ಜರಿ ಮಾಡಿಸಿಗೊಂಡದೋ ಹೇಳಿ ಗೊಂತಿಲ್ಲೆ.  ಅಂತೂ ಯುವ ಪೀಳಿಗೆಯ ಕೂಸುಗೊ ಇಷ್ಟು  ಹೆಚ್ಚಿನ ಸಂಖ್ಯೆಲಿ ಕೋಂಗ್ರೇಸಿಂಗೆ ವೋಟು ಹಾಕಿದ್ದಕ್ಕೆ ಇದು ಬಿಟ್ರೆ ಬೇರೆ ಎಂತ ಕಾರಣವೂ ಕಾಣ್ತಿಲ್ಲೆ.   ತನ್ನ ಅಪ್ಪನ ಚಾಳಿಯ ಅಕ್ಷರಶಃ ಅನುಸರಿಸುವ ಅತಿ ವಿಧೇಯ ಮಗನಾದ ಇವ, ನಮ್ಮ ದೇಶದವು ಚೆಂದ ಸಾಲ ಹೇಳಿ ತನ್ನ ಪ್ರತಿಭೆ ಮತ್ತು  ವಿದೇಶೀ ಅಮ್ಮನ ಅಂತಸ್ತಿಂಗೆ ಸರಿದೂಗುವ ಕೊಲಂಬಿಯಾ ದೇಶದ ಕೂಸಿನ ಮದುವೆ ಅಪ್ಪ ಅಂದಾಜಿಲಿದ್ದ ಹೇಳಿ ಗಾಳಿ ಶುದ್ದಿ.  ಕೆಲವು ಜನ ಬದ್ಧ ಎಲ್ಲ ಕಳುದ್ದು ಹೇಳ್ತವು.  ಎಂತ ಸಂಗತಿ ಹೇಳಿ ಅವಂಗೇ ಗೊಂತು.   ಹೇಂಗೂ ಮನೆಲಿ ಹೇಳುವವು ಕೇಳುವವು ಆರೂ ಇಲ್ಲೆ.  ಸ್ವಂತ ಅಪ್ಪಚ್ಚಿ ಮನೆಯವಕ್ಕೂ ಇವಕ್ಕೂ ಹೋಕೋರಕ್ಕೇ ಇಲ್ಲೆ.  ಸಾಲದ್ದಕ್ಕೆ ಇನ್ನು ಮುಂದೆ  ಇವ ಮಾಡಿದ್ದೇ ಫೇಶನು ಆದ ಕಾರಣ, ಹೇಳಿ ಪ್ರಯೋಜನ ಇಲ್ಲೆ.  ಒಟ್ಟಾರೆ ದೇವರೇ ಗೆತಿ.   ಇವನ ಅಪ್ಪ ರಾಜಕೀಯಕ್ಕೆ ಇಳುದ ಮೇಲೆ ಹೆಚ್ಚು ವರ್ಷ ಬದುಕಿತ್ತಿದ್ದ ಇಲ್ಲೆ.  ಅವ ಹೊಲಿಶಿ ಮಡುಗಿದ ಸುಮಾರು ಬೆಳಿ ಜುಬ್ಬಂಗೊ ಮೊನ್ನೆ ಯಾವಾಗಳೋ ಅಟ್ಟದ ಮೇಲೆ ಹುಡುಕ್ಕುವಗ ಅಲ್ಲಿತ್ತ ಪೆಟ್ಟಿಗೆಲಿ  ಸಿಕ್ಕಿತ್ತಡ.  ಅದೆಲ್ಲ  ಕುಂಬು ಅಪ್ಪದು ಬೇಡ ಹೇಳಿ ಇವ ಯಾವಾಗಲೂ ಅದನ್ನೇ ಹಾಕುದಡ. ಈ ಕಾರಣಂದಾಗಿ, ಸದಾ ಶ್ವೇತಾಂಬರಧಾರಿಯಾಗಿ ಕಂಗೊಳಿಸುತ್ತ.   

ಈ ಅಸಾಮಿ  ಮೊನ್ನೇಣ  ಚುನಾವಣೆಯ ಅಭ್ಯರ್ಥಿಯಾಗಿ ಅರ್ಜಿಫೋರ್ಮು ಭರ್ತಿ ಮಾಡುವಗ, ವಿದ್ಯಾರ್ಹತೆಯ ಕೋಲಮ್ಮಿಲ್ಲಿ M.Phil ಹೇಳಿ ಬರದಿತ್ತಿದ್ದಡ.  ಆದರೆ, ಯಾರೋ ಇವಂಗೆ ಆಗದ್ದವು  ಈ ವಿಷಯದ ಬಗ್ಗೆ ಕ್ಯಾಂಬ್ರಿಜ್  ವಿಶ್ವವಿದ್ಯಾಲಯಲ್ಲಿ ತನಿಖೆ ಮಾಡಿ ಅಪ್ಪಗ, ಇವ ಕಲ್ತುಗೊಂಡಿತ್ತದು ಅಪ್ಪಾದರೂ  ಪರೀಕ್ಷೆ ಪಾಸಾಗಿತ್ತಿದ್ದನೇ ಇಲ್ಲೆ ಹೇಳುವ ವಿಷಯ ಹೆರ ಬಿದ್ದು ಇವನ ಗುಟ್ಟು ರಟ್ಟಾತು.  ವಿಶ್ವವಿದ್ಯಾಲಯದವರ ಕಡತಂದ ಸಿಕ್ಕಿದ ಅಂಕಪಟ್ಟಿಯ ನೋಡಿರೆ, ಅದರಲ್ಲಿ ಇವನ  ಇಟೆಲಿಯ ಅಜ್ಜನ ಮನೆಯವು ಮಡುಗಿದ "ರೌಲ್ ವಿಂಕಿ" ಹೇಳುವ  ನಿಜ ನಾಮಧೇಯ ನಮೂದಿಸಲ್ಪಟ್ಟಿಪ್ಪದು ಸ್ಪಷ್ಟವಾಗಿ ಕಾಣ್ತು.  ಅಲ್ಲಿಗೆ,  "ರಾಹುಲ್ ಗಾಂಧಿ"  ಹೇಳುವ ಹೆಸರು ಹೇಳಿಗೊಂಡು ತಿರುಗುದು ಸುಮ್ಮನೆ ಜನರ ಮಂಗ ಮಾಡ್ಳಿಪ್ಪ ಕೆಣಿ ಹೇಳುವ  ಇನ್ನೊಂದು ರಹಸ್ಯವುದೇ ಬಹಿರಂಗ ಆತು.  ಇವನ ಅಪ್ಪ ಮದುವೆ ಅಪ್ಪಂದ ಮೊದಲೇ christianityಗೆ  ಮತಾಂತರಗೊಂಡ ಮೇಲೆ,  ಇವರ ವಂಶಲ್ಲಿ ಈಗ ಹಿಂದೂಗೊ ಯಾರೂ ಉಳಿದ್ದವಿಲ್ಲೆ ಹೇಳುದು  ಗಮನಿಸೆಕ್ಕಾದ ವಿಷಯ.  ಥೇಟು ಪುರ್ಬುವಾದ ರಾಜದೀಪ್ ಸರ್ದೇಸಾಯಿ ಹೇಳುವ ಕಿಸಬಾಯಿದಾಸಂಗೆ ಮೊನ್ನೆ ಚುನಾವಾಣೆಯ ಫಲಿತಾಂಶ ಬಂದಪ್ಪಗ   ಅಷ್ಟು ಖುಷಿ  ಆದ್ದದು ಎಂತಕೆ ಹೇಳಿ ಈಗ ಗೊಂತಾತನ್ನೆ ?

- ಬಾಪಿ

No comments: