Friday, April 10, 2009

ರಾಯ ಹಳೆಮನೆ....

Mangalore: NRI Returns Home to Contest LS Polls from Mangalore Constituency
Political Correspondent - Mangalore [Daijiworld Media Network]

Mangalore, Apr 5: Over the past few days, candidates from various political parties have been filing their nomination papers with a great deal of brouhaha. However, the nomination of a highly educated, well-heeled person has gone relatively unnoticed. 

Contesting as an independent candidate from the Dakshina Kannada  Lok Sabha  constituency is Dr Thirumalaraya Halemane, an NRI, who has now returned to his home district.

Dr Halemane quit Rutgers University, Piscataway, New Jersey, and arrived here in February this year with the aim of serving India which has been suffering at the hand of various political parties and politicians.   

Fully confident of winning, he says, "I will bring a change in the system" and claims to know the pulse of the people.  

Despite having lived in the US for 37 years, he doesn't seem to have an accent and it is also hard to identify him as an NRI. Dr Halemane is on a door-to-door campaign seeking votes.  

Dr Halemane is the founder and first president (1988-89) and chairman (1988-90) of HATCC (Hindu American Temple and Cultural Center) in New Jersey and has displayed his leadership skills through various programmes.   

Initially, though his family members did not wholeheartedly welcome his decision to contest the polls, Dr Halemane slowly convinced them and now they are helping him in his campaign.

Family: 

His wife Usha Kumari, an MBA and MA degree holder is still in the US and works as the executive director of a firm in Princeton while his elder son Kaviraj Sham Bhat Halemane works in a music company and younger son Shilpi Shankar Bhat Halemane is pursuing a BE (Mechanical) from Drexel University, Philadelphia. 

Academics: 

He secured the first rank in SSLC in 1968 and was the first person in Dakshina Kannada district to do so; First rank in PUC exam of Mysore University; First rank in BSc (Hons) from Bangalore University (1972); Winner of S Nijalingappa Gold Medal from Bangalore University (1972); Obtained his MSc (Physics/Electronics) from Indian Institute of Technology, Madras (1974); MA (Physics) (1976), MA (Maths) (1980), and PhD in Physics (1980), (all from University of Rochester, New York).   
 

Dr Halemane is listed in the 'Who's Who in Frontiers of Science and Technology' (1986); 'Who's Who in the World' (1989) and 'American Men and Women of Science' (1992).

He also has to his credit four patents (related to optical amplifiers) and over 75 publications.  

Sunday, April 5, 2009

Hindu vote bank

ಹಿಂದೂ ಮತ ಬ್ಯಾಂಕ್  ಹೇಳುವ ಶಬ್ದವ ಹುಟ್ಟು ಹಾಕುವ ಧೈರ್ಯ ಮಾಡಿದ್ದು ಪೇಜಾವರ ಸ್ವಾಮೀಜಿ.  ಇದು ತೀರಾ ಇತ್ತೀಚಿನ ಬೆಳವಣಿಗೆ.   ಹಿಂದೂ ಧರ್ಮ ಜಾಗರಣೆ ಹೇಳುವ ಅಭಿಯಾನವ ಬೇರೆ ಬೇರೆ ಜಾಗೆಗಳಲ್ಲಿ ಆಯೋಜಿಸಿ ನಮ್ಮಲ್ಲಿ ಸುಪ್ತವಾಗಿಪ್ಪ ಹಿಂದುತ್ವದ ಭಾವನೆಯ ಜಾಗೃತಿಗೊಳಿಸುವ ವಿಶೇಷ, ನಿಃಸ್ವಾರ್ಥ  ಕಾರ್ಯ. ಯಾವಾಗಲೋ ಆಯೆಕ್ಕಾಗಿತ್ತದು ತಡವಾಗಿಯಾದರೂ ಶುರು ಆದ್ದದು  ತುಂಬಾ ಖುಷಿಯ ಸಂಗತಿ.    ಹಾಂಗಾರೆ ಮೊದಲು,  ಈಗಾಗಲೇ ಜಗಜ್ಜಾಹೀರಾಗಿಪ್ಪ ಮುಸ್ಲಿಮ್ ಮತ ಬ್ಯಾಂಕ್ ನ ಬಗ್ಗೆ ರಜ ಮಾಹಿತಿ ಕಲೆ ಹಾಕುವೊ.

ಭಾರತದ ಜನಸಂಖ್ಯೆಲಿ  ಮುಸ್ಲಿಮರು ೧೨ ಪ್ರತಿಶತ ಇದ್ದವಡ.  (ಇದರಲ್ಲಿ ಬಾಂಗ್ಲಾದೇಶಂದ ಬೇಲಿನುಸುಳಿ ಬಂದವರ ತಲೆಲೆಕ್ಕ ಸೇರಿದ್ದೋ ಇಲ್ಯೋ ಹೇಳುದು ಗೊಂತಿಲ್ಲೆ).  ಅಲ್ಪ ಸಂಖ್ಯಾತರು, ಧರ್ಮ ನಿರಪೇಕ್ಷತೆ, ಮೂಲಭೂತವಾದ - ಹೀಂಗೆ  ಶಾಲೆಲಿ ಕಲಿಶದ್ದ ಕೆಲವು ಭಯಂಕರ  ದೊಡ್ಡ ಶಬ್ದಂಗಳ ಆನು ರಾಜಕಾರಣಿಗಳ ಭಾಷಣಂದ ಕೇಳಿ  ಕಲ್ತು ಧನ್ಯನಾದ ವಿಷಯ ದೇವರಾಣೆಗೂ  ಸತ್ಯ.  ಸಣ್ಣಾದಿಪ್ಪಗ ಈ ಶಬ್ದಂಗಳ ಉಪಯೋಗಿಸುವವರ ಭಾಷಾ ಪಾಂಡಿತ್ಯಕ್ಕೆ ತಲೆದೂಗಿಗೊಂಡಿತ್ತ ಆನು, ಕ್ರಮೇಣ ರಾಜಕಾರಣಿಗೊ  ಇದೆಲ್ಲ ನಿಜವಾದ ಅರ್ಥ ಗೊಂತಿಲ್ಲದ್ದೆ ಕೇವಲ ಬಾಯಿಪಾಠ ಮಾಡಿ ಹೇಳುವ  ಶಬ್ದಂಗೊ ಹೇಳಿ ಗೊಂತಾದ ಮೇಲೆ, ಎನ್ನ "ಬಾಲ" ಮುಗ್ಧತೆಗೆ ಆನೇ ಮರುಕ ಪಟ್ಟುಗೊಂಡದಿದ್ದು.  

ಮುಸ್ಲಿಮ್ ಸಮುದಾಯದ ಓತಪ್ರೋತ ಜನಸಂಖ್ಯಾ ಸ್ಫೋಟಕ್ಕೆ ಈ ಕೆಳಾಣ  ಕಾರಣಂಗಳ ಹುಡುಕ್ಕುಲಕ್ಕು  :  

(ಅ) ಬಹುಪತ್ನಿತ್ವ
(ಕ) ಮುಸ್ಲಿಮ್ ಮಹಿಳೆಯರ ಅವಿದ್ಯಾವಂತ ಸ್ಥಿತಿ 
(ಚ) ಮಕ್ಕಳ ಬಗ್ಗೆ ಭಾವನಾತ್ಮಕ ಸಂಬಂಧ ಇಲ್ಲದ್ದೆ "ದುಡಿಯುವ ಕೈಗೊ" ಹೇಳುವ ಧೋರಣೆ
(ಟ) ಹಿಂದೂಗಳ ಸಂಖ್ಯೆಯ ಮೀರಿ ಈ ದೇಶಲ್ಲಿ ತಾವೇ ಬಹುಸಂಖ್ಯಾತರಾಯೆಕ್ಕು ಹೇಳುವ  ಅವರ ಧರ್ಮಗುರುಗಳ ಆಜ್ಞೆ
(ತ) ಅಕ್ರಮ ವಲಸೆ ಮತ್ತು ಮತಾಂತರ
(ಪ) ರಾಜಕಾರಣಿಗೊ ಮಾಡುವ ಮಿತಿಮೀರಿದ ಓಲೈಕೆ 

ದೌರ್ಭಾಗ್ಯದ ಸಂಗತಿ ಎಂತ ಹೇಳಿರೆ,  ಹಿಂದೂಗೊ ಈಗಾಗಲೇ  ಅಲ್ಪ ಸಂಖ್ಯಾತರಾಗಿ  ಆಯಿದು ಹೇಳುವ  ವಾಸ್ತವದ  ಗಾಂಭೀರ್ಯವ  ಅರ್ಥ ಮಾಡಿಗೊಂಬಲೆ ಮತ್ತು ಒಪ್ಪಿಗೊಂಬಲೆ ನಾವು ತಯಾರಿಲ್ಲೆ.  ಹಿಂದೂ ರಾಜಕಾರಣಿಗೊ ನಮ್ಮ ಸಮಾಜಲ್ಲಿಪ್ಪ ಜಾತಿ ಪದ್ಧತಿಯ ಸ್ವಾರ್ಥಕ್ಕೆ ಉಪಯೋಗಿಸಿಗೊಂಡವು. ದೇವೇಗೌಡ ಒಕ್ಕಲಿಗರ, ಸಿದ್ದರಾಮಯ್ಯ ಕುರುಬರ, ಬಂಗಾರಪ್ಪ ಈಡಿಗರ, ಲಾಲೂಪ್ರಸಾದ್ ಯಾದವರ,  ಮಾಯಾವತಿ ದಲಿತರ, ಶರದ್ ಪವಾರ್ ಮರಾಠರ, ಕರುಣಾನಿಧಿ ದ್ರಾವಿಡರ ಪಂಗಡಂಗಳ ನಾಯಕರು ಹೇಳಿ ಹೇಳಿಸಿಗೊಂಬಲೆ ಬೇಕಾದ ಕೆಲಸವ ಮಾಡಿದವು.  ಹೀಂಗೆ ಒಬ್ಬೊಬ್ಬನೂ ಆಯಾಯ  ಗುಂಪಿನ ಅಧಿಪತಿಯಾಗಿ ತಮ್ಮ  ರಾಜಕೀಯ ಜೀವನವ ಭದ್ರ ಪಡಿಸಿಗೊಂಡವು.   ಹಿಂದೂ ಗುಂಪುಗೊ ಪರಂಪರಾಗತವಾದ ತಮ್ಮ ಪರಸ್ಪರ ವೈಷಮ್ಯದ ಭಾವನೆಯ ತೀರಿಸಿಗೊಂಬಲೆ ಒಳಂದ ಒಳ ಕತ್ತಿ ಮಸೆತ್ತಾ ಇದ್ದರೆ, ಆಯಾಯ ಗುಂಪಿನ ರಾಜಕಾರಣಿಗೊ ಆ ಕಿಚ್ಚಿಂಗೆ  ತುಪ್ಪ ಎರದು ಕೃತಾರ್ಥರಾದವು.  ಹೀಂಗೆ ಹೆಚ್ಚಿನ ರಾಜಕಾರಣಿಗೊ ಹಿಂದೂಗಳಲ್ಲಿ ಮೊದಲೇ ಇದ್ದ  ಒಡಕು ಖಾಯಂ ಆಗಿ ಇಪ್ಪ ಹಾಂಗೆ ಖಾತ್ರಿಪಡಿಸಿಗೊಂಬಲೆ ತಮ್ಮ ಜೀವನವ ಧಾರೆ ಎರದರೆ, ಮುಲಾಯಂ ಸಿಂಗ್ ನ ಹಾಂಗಿಪ್ಪ ಕೆಲವು ಧೂರ್ತರು ಇದು ಸಾಲ ಹೇಳಿ  ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ, ಒಟ್ಟಿಂಗೆ ಮುಸ್ಲಿಮರ ಓಲೈಕೆಯನ್ನೂ ತಮ್ಮ  ದಿವ್ಯ ಕರ್ತವ್ಯದ ಪಟ್ಟಿಗೆ ಸೇರಿಸಿಗೊಂಡವು.  ಸದಾ ಅವರ ಸೇವೆಗೆ ಕಟಿಬದ್ಧರಾಗಿ ನಿಂದು, ಸ್ವಯಂ-ಪ್ರೇರಣೆಂದ ಬೆಳಿ ಟೊಪ್ಪಿ ಹಾಕಿಗೊಂಡು ಪ್ರತಿ ಮುಸ್ಲಿಂ ಹಬ್ಬಂಗಳಲ್ಲಿಯೂ ತಪ್ಪದ್ದೆ  ಭಾಗವಹಿಸಿ ಬಿರ್ಯಾನಿಯ ಚಪ್ಪರಿಸಿ ತಿಂದು, ತಾವು ಅಲ್ಪಸಂಖ್ಯಾತರ ನಮ್ರ  ಸೇವಕರು ಹೇಳುದರ ಸಾರ್ವಜನಿಕವಾಗಿ ಪ್ರಕಟಪಡಿಸುಲೆ ಎಲ್ಲಾ  ಅವಕಾಶವನ್ನೂ ಉಪಯೋಗಿಸಿಗೊಂಡವು.

ಈ ದೃಷ್ಟಿಂದ ನೋಡಿದರೆ, ಹಿಂದೂಗಳ ಒಟ್ಟು ಮಾಡುವಲ್ಲಿ ಅಡ್ವಾಣಿಯ ರಾಮಜನ್ಮಭೂಮಿ ಆಂದೋಳನದ ರಥ ಯಾತ್ರೆಯ ಚಾರಿತ್ರಿಕ ಕೊಡುಗೆ ಎಂತದು ಹೇಳಿ ಅರ್ಥ ಆವುತ್ತು.  ಆದರೆ, ಅದರ ಪ್ರಭಾವ ಕೇವಲ ತಾತ್ಕಾಲಿಕ.  ತಿರುಗ, ರಾಮ ಸೇತುವೆಯ ವಿಷಯಲ್ಲಿ ಹೋರಾಟ ಮಾಡಿರೆ ಅಷ್ಟೇ ಪರಿಣಾಮಕಾರಿ ಅಕ್ಕು ಹೇಳ್ಳೆಡಿಯ.  ಈ ಉದ್ದೇಶ ಮುಂದುವರಿಯೆಕ್ಕಾದರೆ,  ಎಲ್ಲಾ ಹಿಂದೂಗಳ  ಒಂದು ಲಾಂಛನದ ಅಡಿಲಿ ತಂದು, ಹಿಂದೂಗಳ ಮತಂಗೊ ಹಿಡಿತಲ್ಲಿ ಇಪ್ಪ ಹಾಂಗೆ ಮಾಡಿರೆ ದುಷ್ಟ, ಸ್ವಾರ್ಥಿ ರಾಜಕಾರಣಿಗೊ ದಾರಿಗೆ ಬಂದು,   ಅಲ್ಪ ಸಂಖ್ಯಾತರ ಓಲೈಕೆ ತಾನಾಗಿ ಕಮ್ಮಿ ಅಕ್ಕು.  ಈ ಕೆಲಸ  ನಿರಂತರವಾಗಿ ಸಾಗುವ ಹಾಂಗೆ ಮಾಡ್ಳೆ  ಸಾಮರ್ಥ್ಯ ಇಪ್ಪದು ಮಠಾಧಿಪತಿಗೊಕ್ಕೆ ಮಾತ್ರ ಹೇಳಿ ಎನ್ನ ಅಭಿಪ್ರಾಯ.  ಸಮಾಜದ ಎಲ್ಲಾ ವರ್ಗಂಗಳ ಗೌರವಕ್ಕೆ ಪ್ರಾಪ್ತರಾದ ಪೇಜಾವರ ಸ್ವಾಮೀಜಿಯ ಹಾಂಗಿಪ್ಪವು ಇದರ ಮುಂದಾಳುತ್ವ ವಹಿಸಿದ್ದದು ನಿಜಕ್ಕೂ ಸ್ವಾಗತಾರ್ಹ.   ನಮ್ಮ ಹಾಂಗಿಪ್ಪ ವಿದ್ಯಾವಂತರು ನಮ್ಮ ನಿರ್ಲಿಪ್ತ ಮತ್ತು ನಿರ್ಲಕ್ಷ್ಯದ ಧೋರಣೆಯ ಬಿಟ್ಟು, ಈ ಗಂಭೀರ ವಿಷಯದ ಬಗ್ಗೆ ಹೆಚ್ಚು ಜನಕ್ಕೆ ತಿಳುವಳಿಕೆ ಬಪ್ಪ ಹಾಂಗೆ ಮಾಡಿ,  ಹಿಂದೂ ಸಮಾಜಲ್ಲಿ ಸಮಾನ ಅಭಿಪ್ರಾಯ ಮೂಡಿಸಿದರೆ, ನಮ್ಮ ಮುಂದಿನ ತಲೆಮಾರಿನವು ರಜ ನೆಮ್ಮದಿಲಿ ಬದುಕ್ಕುಲೆ ನಮ್ಮ ಅಳಿಲ ಸೇವೆ ಸಲ್ಲಿಸಿದ ಹಾಂಗೆ ಅಕ್ಕು. 

- ಬಾಪಿ

Thursday, April 2, 2009

ರಾಮನಾ ? ಕೃಷ್ಣನಾ ?

ಕೆಲವು ಸರ್ತಿ ನೋಡುವಗ, ಭಾಜಪಲ್ಲಿ ಹಿಂದೆಂದೂ ಇಲ್ಲದ್ದಷ್ಟು ಅಂತಃಕಲಹ, ಗೊಂದಲ ಇಪ್ಪ ಹಾಂಗೆ ಕಾಣ್ತು.  ಬಹುಷಃ ಪಕ್ಷದ ನಾಯಕರ  ಮತ್ತು  ಕಾರ್ಯಕರ್ತರ ಮಧ್ಯೆ ಸಂವಹನದ ಕೊರತೆ ತುಂಬಾ ಇದ್ದು ಹೇಳಿರೆ ತಪ್ಪಾಗ.     

ಕರ್ನಾಟಕಲ್ಲಿ ಭಾಜಪದ ಸರಕಾರ ಇನ್ನೂ ೬ ತಿಂಗಳು ಪೂರೈಸುತ್ತಷ್ಟೆ. ಅದರ ಮೊದಲೆ ಎಷ್ಟೊಂದು  ಬೀದಿ ರಂಪ ನಡೆವಲೆ ಸುರು ಆಯಿದು.  ಒಂದು ಕಡೆ ಸ್ವಾಭಿಮಾನಿಗಳ ಬಂಡಾಯ.  ಇನ್ನೊಂದು ಕಡೆ ಶಿವಪ್ಪ, ಯತ್ನಾಳ್  ಹಾಂಗಿಪ್ಪವರ ಬೊಬ್ಬೆ. ಪ್ರತಿಪಕ್ಷದವರಿಂದಲೂ ಹೆಚ್ಚು ವಿರೋಧ ಮಾಡ್ತಾ ಇಪ್ಪವು ಸ್ವಪಕ್ಷೀಯರೇ ! ಬೇರೆ ಪಕ್ಷಂಗಳ ಶಾಸಕರ ತಥಾ-ಕಥಿತ "ಖರೀದಿ"ಯೇ ಮೊದಲಾದ ಭಾಜಪದ ಕೆಲವು ಈ ಶತಮಾನದ ರಾಜಕೀಯದ ಹೊಸ ವಿದ್ಯಮಾನಂಗೊಕ್ಕೆ ತೃಣಮೂಲ ಕಾರ್ಯಕರ್ತರ ಮನಃಪೂರ್ವಕ ಬೆಂಬಲ ಇಲ್ಲೆ.  ಅಭಿಪ್ರಾಯವ ಮುಕ್ತವಾಗಿ ವ್ಯಕ್ತಪಡಿಸುವ ವಾತಾವರಣ ಇಪ್ಪದು ಅರೋಗ್ಯಕರ ಆಂತರಿಕ ಪ್ರಜಾಪ್ರಭುತ್ವದ ಲಕ್ಷಣವಾದರೂ ಭಾಜಪದ ಸಿದ್ಧಾಂತಕ್ಕೆ, ಮೌಲ್ಯಂಗೊಕ್ಕೆ ವಿರುದ್ಧ ಹೇಳಿ ಕಾಂಬ, ಹೀಂಗೆ ಮಾಡಿರೆ ಬೇರೆಯವಕ್ಕೂ ಭಾಜಪಕ್ಕೂ ಎಂತ ವ್ಯತ್ಯಾಸ ಹೇಳಿ  ಹಿತೈಶಿಗಳ ಮನಸ್ಸಿನ ಕಾಡುವ ಪ್ರಶ್ನೆಗಳ ವಿಷಯಲ್ಲಿ ಸಂಬಂಧಪಟ್ಟ ಎಲ್ಲೋರನ್ನೂ  ವಿಶ್ವಾಸಕ್ಕೆ ತೆಕ್ಕೊಳೆಕ್ಕಾದ್ದು ಅಗತ್ಯ.  ಯಾವುದು ಸರಿ, ಯಾವುದು ತಪ್ಪು ಹೇಳಿ ಜನಕ್ಕೆ ಅರ್ಥ ಮಾಡುಸುದಾದರೂ ಹೇಂಗೆ?

ಅವಾಸ್ತವಿಕವಾದರೂ ಪ್ರಸ್ತುತವಾದ ಈ ಪ್ರಶ್ನೆಗೆ ಉತ್ತರ ಹುಡುಕ್ಕುವೊ  - ಈ ಚುನಾವಣೆಲಿ ಪುರಾಣದ ರಾಮ ಮತ್ತು ಕೃಷ್ಣ ಎದುರೆದುರು ನಿಂದಿದ್ದರೆ, ಆರಿಂಗೆ ಮತ ಹಾಕುದು ? ಈ ಅಪರೂಪದ ದ್ವಂದ್ವಕ್ಕೆ ಎಂತ ಪರಿಹಾರ ?  ಹೇಳಿರೆ,  ಸದ್ಯದ ಪರಿಸ್ಥಿತಿಗೆ ಆರು ಹೆಚ್ಚು ಸೂಕ್ತ ಹೇಳುದು ಚೋದ್ಯದ ತಾತ್ಪರ್ಯ. ರಾಮ ತ್ರೇತಾಯುಗಲ್ಲಿಯೂ, ಕೃಷ್ಣ ದ್ವಾಪರಾಯುಗಲ್ಲಿಯೂ ಅವತರಿಸಿದ್ದೆಂತಕೆ ? ಇವರ ಪಾತ್ರ ಅದಲು ಬದಲಾಗಿದ್ದರೆ ?  ಬಹುಷಃ ಇಬ್ಬರಿಂಗೂ ತಮ್ಮ ಕರ್ತವ್ಯಂಗಳ ಪೂರೈಸುಲೆ ಎಡಿಯದ್ದೆ,  ಇಬ್ಬರೂ ಅವರವರ ಅವತಾರಂಗಳ ಸಂಪೂರ್ಣ ವೈಫಲ್ಯಂದ ಕೊನೆಗೊಳಿಸೆಕ್ಕಾಗಿ ಬತ್ತೀತೋ ಏನೋ !  ರಾಮನ ಜೀವನ ಶೈಲಿ, ಕಾರ್ಯ ವಿಧಾನಂಗೊಕ್ಕೂ ಕೃಷ್ಣಂದಕ್ಕೂ ಅಜಗಜಾಂತರ.  ಆದರೆ, ಆಯಾಯ ಯುಗಂಗೊಕ್ಕೆ ಅವರ ಧೋರಣೆಗೊ ಸರಿಯಾಗಿತ್ತು.  ಹಾಂಗಾರೆ, ಸರಿ ತಪ್ಪುಗಳ ವಿಮರ್ಶೆ ಪರಿಸ್ಥಿತಿಯ ಅವಲಂಬಿಸಿಗೊಂಡಿಪ್ಪದಲ್ಲದೋ ? ಮರ್ಲು ನಾಯಿಯ ಕೊಲ್ಲೆಕ್ಕಾದರೆ ತ್ರೇತಾಯುಗದ ಕ್ರಮಲ್ಲಿ  ಶಂಖನಾದ ಮಾಡಿ  ಧರ್ಮ ಯುದ್ಧ ಸಾರಿರೆ ಪ್ರಯೋಜನ ಇದ್ದೋ ? ಪುದೆಲಿನ ಹಿಂದೆ ಹುಗ್ಗಿ ನಿಂದು ಬಡಿದು ಸಾಯಿಸುದೇ ಪರಿಹಾರ.  ರಾಮನ ಆದರ್ಶದ ಮಟ್ಟಕ್ಕೆ, ಗೊಂತಿಪ್ಪ ಸತ್ಯವ  ಹೇಳದ್ದೆ ಮೌನವಾಗಿಪ್ಪದೂ ಲೊಟ್ಟೆ ಹೇಳಿದ ಹಾಂಗೇ.  ಆದರೆ ಕೃಷ್ಣಂಗೆ ಹಾಂಗಿಪ್ಪ ಖಡ್ಡಾಯದ ಮಡಿವಂತಿಕೆಯ ಗೊಂದಲ ಇಲ್ಲೆ.   ಒಳ್ಳೆಯತನ ಇದ್ದರೆ ಸಾಲ, ಆರತ್ರೆ ಮತ್ತು ಯಾವ ಪರಿಸ್ಥಿತಿಲಿ ಎಷ್ಟು ಒಳ್ಳೆಯತನವ ಉಪಯೋಗಿಸೆಕ್ಕು ಹೇಳುವ ಜಾಣ್ಮೆ ಮತ್ತು ವಿವೇಕಂಗಳೂ ಅಷ್ಟೇ ಮುಖ್ಯ ಹೇಳಿ ಕೃಷ್ಣ ತೋರಿಸಿ ಕೊಟ್ಟ.  ಅಲ್ಲಿಗೆ, ಈ  ಕಾಲಕ್ಕೆ ಅತ್ಯಂತ ಹತ್ತಿರದ ಯುಗದ ರಾಜಕಾರಣಿಯಾದ ಕೃಷ್ಣಂಗೆ ಎನ್ನ ಮತ ಹೇಳಿ ಪ್ರತ್ಯೇಕ ಹೇಳೆಕ್ಕೋ ?

ಈಗ ಕಲ್ಪನಾ ಲೋಕಂದ ಕಲಿಯುಗದ ಯೆಡ್ಯೂರಪ್ಪನ ವಿಷಯಕ್ಕೆ ಬಂದರೆ,  ಹುಚ್ಚು ನಾಯಿಗಳ ಸ್ಥಾನಲ್ಲಿಪ್ಪ ಪ್ರತಿಪಕ್ಷಂಗಳ (ಹೆಸರು ಹೇಳಿಸಿಗೊಂಬಲೂ ಅನರ್ಹರಾದವು, ಏಕೆ ಹೇಳಿರೆ ಅವರ ಪಾಪ ನವಗೆ ಅಂಟುಗು !) ಹಣಿಸುಲೆ ತಕ್ಕಮಟ್ಟಿಂಗೆ ಅವರದ್ದೇ ಶೈಲಿಯ ಪ್ರತಿತಂತ್ರದ ಅವಶ್ಯಕತೆ ಇದ್ದು.  ಇದು ತೀರಾ ಅತಿಯಾಗದ್ದ  ಹಾಂಗೆ ಜಾಗರೂಕರಾಗಿದ್ದುಗೊಂಡು ೫ ವರ್ಷದ ಜನಪರ ಆಢಳಿತವ ಯಶಸ್ವಿಯಾಗಿ ನಡೆಶಲಿ ಹೇಳಿ ಪ್ರಾರ್ಥಿಸುತ್ತೆ.   ಅಲ್ಲಿ ವರೆಗೆ ಭಾಜಪದ ಎಲ್ಲಾ ಹಿತೈಶಿಗೊಕ್ಕೂ ಭಗವಂತ  ತಾಳ್ಮೆಯ ಕರುಣಿಸಲಿ ! 

- ಬಾಪಿ        

Wednesday, April 1, 2009

ಕಾಳಧನ

ನಮ್ಮವು ಸ್ವಿಝರ್ ಲ್ಯಾಂಡ್ ನ  ಬ್ಯಾಂಕುಗಳಲ್ಲಿ ಅಕ್ರಮವಾಗಿ ಶೇಖರಿಸಿಟ್ಟ  ಕಾಳಧನದ ಲೆಕ್ಕಾಚಾರದ ವಿವರಂಗಳ ತರಿಸಿ ಪ್ರಕಟ ಮಾಡ್ತೆಯೊ ಹೇಳುವ ಭಾಜಪ ವಲಯದ ಘೋಷಣೆ ಪ್ರಕೃತ ಬಿಸಿ ಸುದ್ದಿ.  ಹೀಂಗೆ ಕ್ರೋಢೀಕರಿಸಿದ ಅಕ್ರಮ ಸಂಪತ್ತು  ೫೦೦ ರಿಂದ ೧೫೦೦ ಬಿಲಿಯ ಡಾಲರು ಅಕ್ಕು ಹೇಳುವ ಅಂದಾಜು. ಈ ಮೊತ್ತ  ಸುಮಾರು ೨೦ ವರ್ಷ ಪ್ರಜೆಗಳ ಮೇಲೆ ಯಾವುದೇ ತೆರಿಗೆ ಹೇರದ್ದೆ  ಭಾರತ ದೇಶವ  ನಡೆಸಿಗೊಂಡು ಹೋಪಲೆ ಸಾಕಡ !  ಈ ಕೆಲಸ ಕಾರ್ಯಸಾಧ್ಯವೋ ಅಲ್ಲದೋ ಹೇಳಿ ಈಗಳೇ ಹೇಳುದು ಕಷ್ಟ.  ಆದರೆ, ಭಾಜಪ ಇದರ ಪ್ರಸ್ತಾಪ ಮಾಡುವ ಜಾಣ್ಮೆ ತೋರಿಸಿದ್ದದು ಸಂತೋಶದ ಸಂಗತಿ.  ಇದರ ಬಗ್ಗೆ ಕಾಂಗ್ರೆಸಿನವರ  ಜಾಣಮೌನವೂ ಅಷ್ಟೇ ನಿರೀಕ್ಷಿತ. 

ತ್ಯಾಗ, ಬಲಿದಾನ, ಬದ್ಧತೆ,  ಶಿಸ್ತು, ರಾಷ್ಟ್ರಪ್ರೇಮ ಇತ್ಯಾದಿ ಉನ್ನತ ಮೌಲ್ಯಂಗಳ ಬೆಳೆಶಿದ ಹೆಮ್ಮೆಯ ಚರಿತ್ರೆ ನಮ್ಮದು.  ಸ್ವಾತಂತ್ರ್ಯದ ನಿಕಟ ಭವಿಷ್ಯಲ್ಲಿಯೂ ಇದೇ ಆದರ್ಶಂಗಳ ಪ್ರತಿಪಾದಿಸಿ ದೇಶವ ಮುನ್ನಡೆಸಿದ ನಾಯಕರನ್ನೂ ನಾವು   ಧಾರಾಳ ಕಂಡಿದು (ಅಥವಾ, ಕೇಳಿದ್ದು).  ಇಂತವು ಹೋಗಿ ಇನ್ನೊಂದು ತಲೆಮಾರಿನವು ಬಂದ ಕೂಡ್ಳೇ ಸಾಮಾಜಿಕ ಮೌಲ್ಯಂಗಳ  ಅತಿ ಶೀಘ್ರ ಅಧಃಪತನ ಹೇಂಗಾತು ? ವಿಶ್ವದ ಅತ್ಯಂತ ಭ್ರಷ್ಟ ದೇಶಂಗಳ ಪಟ್ಟಿಲಿ ಮೊತ್ತ ಮೊದಲ ಸ್ಥಾನಕ್ಕೆ ಇಥಿಯೋಪಿಯಾದ ಹಾಂಗಿಪ್ಪ ತಲೆಹೋಕ ರಾಷ್ತ್ರಂಗಳೊಟ್ಟಿಂಗೆ ಪೈಪೋಟಿ ಮಾಡುವ ಅನಪೇಕ್ಷಣೀಯ ಹೆಗ್ಗಳಿಕೆ ಯಾಕೆ ನಮ್ಮದಾಗಿ ಹೋತು ?  ಇಂದಿರಾ ಗಾಂಧಿ ಹೇಳುವ ಹೆಂಗಸು ರೂಪದ ರಾಕ್ಷಸಿ ನಮ್ಮ ದೇಶಲ್ಲಿ ಭ್ರಷ್ಟಾಚಾರ, ಮೋಸ, ರಾಜಕೀಯ ಸೋಗಲಾಡಿತನ ಇತ್ಯಾದಿಗಳ ವಿಷ ಬೀಜ ಬಿತ್ತಿರೆ, ದೇವರಾಜ ಅರಸಿನ ಹಾಂಗಿಪ್ಪ ಪಾಳಯಗಾರರು ಇವುಗಳ  ರಾಜ್ಯಮಟ್ಟಲ್ಲಿ ಯಶಸ್ವಿಯಾಗಿ ಅನುಷ್ಠಾನ ಮಾಡಿ ಚಪ್ಪಾಳೆ ಗಿಟ್ಟಿಸಿಗೊಂಡವು.   ಇದು ಜೀವನಕ್ರಮವೇ ಆಗಿ ಹೋತು. "ಹುಶಾರಿ" ಹೇಳುದಕ್ಕೆ "ಹೇಂಗೆ ಕೆಲಸ ಮಾಡಿಸಿಗೊಂಬದು ಹೇಳಿ ಗೊಂತಿಪ್ಪವ" ಹೇಳುವ ಪರ್ಯಾಯ ಅರ್ಥ ಆಡುಭಾಷೆಯ ಶಬ್ದಭಂಡಾರಲ್ಲಿ ಸೇರಿಗೊಂಡತ್ತು.

ಸ್ವಾತಂತ್ರ್ಯಾನಂತರದ ಅತಿ ಹೆಚ್ಚಿನ ಅವಧಿ (ಹೇಳಿರೆ ಸುಮಾರು ೫೦ ವರ್ಷ) ಅಧಿಕಾರ ಮಾಡಿದ ಪಕ್ಷ ಕಾಂಗ್ರೆಸ್.  ಇದರಲ್ಲಿ ಸುರುವಾಣ ೨೦ ವರ್ಷ ಬಿಟ್ಟರೆ, ಉಳಿದ ಅವಧಿ ಎಲ್ಲಾ  ಗೋಲುಮಾಲು ರಾಜಕೀಯವೇ. ಮತ್ತೆ, ನಿಕಟಪೂರ್ವದ ಒಂದು ಸರ್ತಿ ಬಿಟ್ಟರೆ, ಕಾಂಗ್ರೆಸ್  ಯಾವಾಗಲೂ ಏಕಪಕ್ಷೀಯ ಆಢಳಿತ ನಡೆಶಿಗೊಂದು ಬೈಂದು.  ಹಾಂಗಾಗಿ, ಈ ಕಾಳಧನದ ಅತಿ ಹೆಚ್ಚಿನ ಪಾಲು ಯಾರಿಂಗೆ ಸೇರಿದ್ದು ಹೇಳಿ ಊಹಿಸಿದವಕ್ಕೆ ಯಾವ ಬಹುಮಾನವೂ ಕೊಡೆಕು ಹೇಳಿ ಇಲ್ಲೆ !  ಈ ವಿಷಯ ಇನ್ನೂ ಹೆಚ್ಚು ಚರ್ಚೆಯ ವಸ್ತು ಆಗಲಿ ಹೇಳಿಯೂ, ಈ ಚುನಾವಣೆಲಿ ಮತದಾರರು ಯಾರ ಆರಿಸೆಕ್ಕು ಹೇಳುವ ಬಗ್ಗೆ ತೆಕ್ಕೊಂಬ  ತೀರ್ಮಾನಲ್ಲಿ ನಿರ್ಣಾಯಕ ಪಾತ್ರ ವಹಿಸಲಿ ಹೇಳಿಯೂ ಹಾರೈಸುತ್ತೆ.

- ಬಾಪಿ        

ಜನಸಂಘ

ಸದ್ಯಕ್ಕೆ ಊರಿಲ್ಲಿ ಎಲ್ಲಿ ಹೋದರೂ ಸ್ವಾಭಿಮಾನಿ ವೇದಿಕೆಯ ವಿಷಯದ್ದೇ  ಬಿಸಿ ಚರ್ಚೆ.  ದಕ್ಷಿಣಕನ್ನಡ ಜಿಲ್ಲೆಲಿ ಭಾಜಪದ ಟಿಕೇಟು ಹಂಚಿಕೆಯ ವಿಷಯಲ್ಲಿ ಸಂಬಂಧಪಟ್ಟ ನಾಯಕರ ಸರ್ವಾಧಿಕಾರಿ ಧೋರಣೆಯ ವಿರುದ್ಧದ ಬಂಡಾಯವೇ ಸ್ವಾಭಿಮಾನಿ ವೇದಿಕೆಯ  ಮೂಲಮಂತ್ರ ಹೇಳುದು  ಜೆಂಬ್ರಂಗಳಲ್ಲಿ ಮಾತುಕತೆಯ ಸಾಮಾನ್ಯ ವಿಷಯ.  ರಾಮಜ್ಜ ಈಗ ಜನಸಂಘವ ತಿರುಗ ಸುರು ಮಾಡಿ ಅದರ ದೀಪದ ಚಿಹ್ನೆಲಿ ಸ್ಪರ್ಧಿಸುವ ಅಂದಾಜಿ ಮಾಡ್ತಾ ಇದ್ದ  ಹೇಳಿ ಕಾಣ್ತು.  ಮತ್ತೆ, ರಾಮಜ್ಜನುದೇ ಅಡ್ವಾಣಿಯುದೇ ಜೈಲಿಲ್ಲಿ ಒಡನಾಡಿಗಳಾಗಿದ್ದವಾದ್ದರಿಂದ ಅಡ್ವಾಣಿ ಪ್ರಧಾನಿ ಅಪ್ಪಲೆ ರಾಮಜ್ಜಂದು ಯಾವುದೇ ತಕರಾರು ಇಲ್ಲದ್ದ ಕಾರಣ ರಾಮಜ್ಜ ಸ್ಪರ್ಧಿಸಿ ಗೆಲ್ಲುವುದರಿಂದ ಭಾಜಪಕ್ಕೆ ಯಾವುದೇ ಹಾನಿ ಇಲ್ಲೆ, ಒಟ್ಟಿಂಗೆ  ಭಾಜಪದ ತಪ್ಪುಗಳ ವಿರುದ್ಧ ಹೋರಾಡಿ ಬುದ್ಧಿ ಕಲಿಸಿದ ಹಾಂಗೆ ಆವುತ್ತು ಹೇಳುವ ವಾದ ಕೇಳಿ ಬತ್ತು.  ಅದರೊಟ್ಟಿಂಗೆ, ಕ್ಷೇತ್ರದ ಒಟ್ಟಾರೆ ಸ್ವಾಭಿಮಾನಿ ಹೋರಾಟಗಾರರ ಅಂದಾಜು ಸಂಖ್ಯೆ ೨೦೦೦೦ ಹೇಳಿ ಅಂದಾಜಿಯಡ.  ಅಲ್ಲಿಗೆ, ರಾಮಜ್ಜಂಗೆ ಸೋಲು ನಿಶ್ಚಯ ಹೇಳಿಯೂ, ಹೋರಾಟದ ಲಾಭ ಸಿಕ್ಕುದು ಜನಾರ್ಧನ ಪೂಜಾರಿಗೆ ಹೇಳುದುದೇ ಸ್ಪಷ್ಟ ಆವುತ್ತು.      

ದೇಶ ಮೊದಲು-ಪಕ್ಷ ನಂತರ-ವ್ಯಕ್ತಿ ಕೊನೆಗೆ  ಹೇಳುವ ಧೋರಣೆಗೆ ಅಚಲವಾದ ಬದ್ಧತೆ  ಇರೆಕ್ಕಾದ ಆರೆಸ್ಸೆಸ್ ಮತ್ತು ಜನಸಂಘದ ಮೂಲದವಕ್ಕೆ ರಾಷ್ಟ್ರೀಯ ದೃಷ್ಟಿಕೋಣ ಇಲ್ಲದ್ದ ಇಂತಹ  ನಡವಳಿಕೆ ಎಷ್ಟು ಶೋಭೆ ತಕ್ಕು ಹೇಳುದು ಚಿಂತಿಸೆಕ್ಕಾದ  ವಿಷಯವೇ ಸರಿ.      ಜನಸಂಘವ ಪುನಃ ಸ್ಥಾಪನೆ ಮಾಡುವ ಈ ಸ್ವಾಭಿಮಾನಿಗಳ ವ್ಯರ್ಥ ಪ್ರಯತ್ನವ ನೋಡಿ ಶ್ಯಾಮ ಪ್ರಸಾದ ಮುಖರ್ಜಿಯ ಆತ್ಮ ಅದೆಷ್ಟು ಅಸಹಾಯಕತೆಯ ಕಣ್ಣೀರು ಹಾಕಿಗೊಂಡಿದ್ದೋ ? ಸ್ವಾಭಿಮಾನದ ಗುಂಗಿಲ್ಲಿಪ್ಪವಕ್ಕೆ ಈ ಸೂಕ್ಷ್ಮ ವಿಷಯವ ಗಮನಕ್ಕೆ ತೆಕ್ಕೊಂಬಲೆ ಪುರುಸೊತ್ತು ಬೇಕನ್ನೆ ?         

- ಬಾಪಿ