Saturday, July 25, 2009

ಕೋಂಗ್ರೇಸು ಎಂತಕೆ ಅಪಥ್ಯ -೪

(...ಮುಂದುವರುದ್ದು)..

೭. ನೆಹರೂ ಕುಟುಂಬದ ಸದ್ಯದ ಪರಿಸ್ಥಿತಿ ನೋಡಿರೆ, ನಮ್ಮ ದೇಶದ ಇಡೀ ಚರಿತ್ರೆಯ ಒಂದು ಸಣ್ಣ ಅವಲೋಕನ ಮಾಡಿದ ಹಾಂಗೆ ಆವುತ್ತು.  ನಮ್ಮ ದೇಶವ ಪರಕೀಯರು ಆಕ್ರಮಣ ಮಾಡಿ ಆಳಿದ  ಹಾಂಗೆ,  ನೆಹರೂಗಳ  ಒಂದು ಅಪ್ಪಟ ಹಿಂದೂ ಕುಟುಂಬದ ಮೇಲೆ ಆದ ಆಕ್ರಮಣಲ್ಲಿ, ಇಂದಿಂಗೆ ಅವರಲ್ಲಿ ಯಾರೂ ಹಿಂದೂಗಳೇ ಒಳಿದ್ದವಿಲ್ಲೆ ! ಜವಾಹರಲಾಲನ ಏಕೈಕ ಸಂತಾನವಾದ ಇಂದಿರಾ, ಘಂದಿ ಹೇಳುವ ಪಾರ್ಸಿ/ಬ್ಯಾರಿ ಯ ಮದುವೆ ಆಗಿ ರಾಜಕೀಯದ  ಅನುಕೂಲಕ್ಕಾಗಿ ನಮ್ಮ ದೇಶಲ್ಲಿ ಧರ್ಮಕ್ಕೆ ಸಿಕ್ಕುವ  "ಗಾಂಧಿ" ಹೇಳುವ ಹೆಸರು ಮಡಿಕ್ಕೊಂಡತ್ತು.  ಬ್ರಿಟಿಷರ ಬಾಯಿಲಿ ಬೊಂಬಾಯಿ ಹೇಳಿ ಇಪ್ಪದು ಬಾಂಬೇ ಆದ ಹಾಂಗಿಪ್ಪ ಕಥೆ.   ಇಂದಿರಾ ಗಾಂಧಿಯ ಈ ಪುನರ್ನಾಮಕರಣ ನಮ್ಮ ದೇಶದ ಚರಿತ್ರೆಲಿ ಆದ ನೆಹರೂ-ಗಾಂಧಿಗಳ ಅಪೂರ್ವ ಸಮ್ಮಿಲನ !  ಇನ್ನು, ರಾಜೀವ ಗಾಂಧಿ - ಮೊದಲೇ ಅರ್ಧ ಬ್ಯಾರಿ - ಮುಂದೆ  ಪ್ರೀತಿಗೋಸ್ಕರ ತಾನೇ ಕ್ರಿಶ್ಚಿಯನ್ ಆಗಿ ಬಿಟ್ಟ.  ಇವನ ಸಂತಾನದವು ಎಲ್ಲಾ ಹೇಂಗಾರೂ ಕಾನೂನು ಪ್ರಕಾರ ಏಸು ಕ್ರಿಸ್ತನ ಅನುಯಾಯಿಗಳೇ. ಹಿಂದುತ್ವ ಒಳಿಶಿಗೊಂಡ ಮೇನಕಾ ಗಾಂಧಿಯ  ಪರಿವಾರವ ಮನೆಂದಲೇ ಹೆರ ಹಾಕಿದ್ದವು.   ನಿಜವಾಗಿಯೂ, ಇವರದ್ದು ವಸುಧೈವ ಕುಟುಂಬಕಂ ಹೇಳುದರ ಅಕ್ಷರಶಃ ಪಾಲಿಸುವ ಅಪರೂಪದ,  ಆದರ್ಶ ಜಾತ್ಯತೀತ ಪರಿವಾರ.  ಮೋತಿಲಾಲ್  ನೆಹರೂವಿನ ಆತ್ಮ ಇವರ ಧರ್ಮ ನಿರಪೇಕ್ಷತೆ ಕಂಡು  ಎಷ್ಟು ಹೆಮ್ಮೆ ಪಟ್ಟುಗೊಂಡಿದ್ದೋ  !       

ಇವು ಎಂತಹ ಢೋಂಗಿಗೊ  ಹೇಳಿರೆ, ಪ್ರಿಯಾಂಕಂಗೂ ಮದುವೆ ಅಪ್ಪಲೆ ಕ್ರಿಶ್ಚಿಯನ್ ಹುಡುಗನೇ ಬೇಕಾತು. ಇನ್ನು, ರಾಹುಲ್ ದೇ  ಇದೇ ದಾರಿ ಹಿಡಿವದು ಖಂಡಿತ.  ಹೇಳಿರೆ, ಇವರ ಜಾತ್ಯತೀತವಾದ ಎಷ್ಟು ಏಕಮುಖವಾದ್ದು ಹೇಳುದು ತಿಳಿವಲೆ ಕಷ್ಟ ಇಲ್ಲೆ.   ಇವಕ್ಕೆಲ್ಲಾ ಜಗತ್ತಿಂಗೆ ತೋರಿಸಿಗೊಂಬಲೆ ಹಿಂದೂಗೊಕ್ಕೆ ಸಾಮ್ಯ ಇಪ್ಪ ಹೆಸರುಗೊ ಬೇಕು.  ಇವರ ಸುತ್ತ ಮುತ್ತ  ಇಪ್ಪವರದ್ದೂ ಇದೇ ಕಥೆ - ಅಂಬಿಕಾ ಸೋನಿ, ಜೈಪಾಲ್  ರೆಡ್ಡಿ, ಅಜಿತ್ ಜೋಗಿ, ಜಗದೀಶ್ ಟೈಟ್ಲರ್, ಸಚಿನ್ ಪೈಲೆಟ್, ಆಸ್ಕರ್ ಫೆರ್ನಾಂಡಿಸ್, ಮಾರ್ಗರೆಟ್ ಆಳ್ವ,   ವೈಯಲಾರ್  ರವಿ,   ರಾಜಶೇಖರ ರೆಡ್ಡಿ - ಎಂತಕೆ ಇಷ್ಟೂ ಜನ ಆಂತಃಪುರದ ಪರಿಚಾರಕರು ಕೇವಲ ಕ್ರಿಶ್ಚಿನರು ? ಸೋನಿಯಾ ಗಾಂಧಿಯ ಕಚೇರಿಯ ಆಪ್ತ ಸಹಾಯಕರು ಅಹ್ಮದ್ ಪಟೇಲ್ ಮತ್ತು  ಸಿ.ಟಿ.ಜಾರ್ಜ್ ! ಇದು ಕೇವಲ ಕಾಕತಾಳೀಯ ಹೇಳುವ ಉದಾರ ಮನಸ್ಸಿನ ಪ್ರಜೆಗೊ ಇಪ್ಪನ್ನಾರ ಇವರ ಕಾರುಬಾರಿಂಗೆ ಎಂತ ತೊಂದರೆ ಆಗ.

೮.  ಮೊದಲಿಂದಲೂ ಸಮಾಜವಾದವ ಪ್ರತಿಪಾದಿಸಿಗೊಂಡು ಬಂದ ಪಕ್ಷ  ಕೋಂಗ್ರೇಸು. ಇದು ಬಲ ಮತ್ತು ಎಡ ಪಂಥೀಯರಿಂದ ಸಮಾನ ದೂರಲ್ಲಿಪ್ಪ ಮಧ್ಯದ, ತಟಸ್ಥ ಧೋರಣೆ ಹೇಳಿ ಲೆಕ್ಕ.  ಆದರೆ, ನಿಜವಾಗಿ ನೋಡಿರೆ, ನರಸಿಂಹ ರಾವ್  ಪ್ರಧಾನಿ ಅಪ್ಪಲ್ಲಿ ವರೆಗೂ ಥೇಟು ಎಡ ಪಂಥೀಯ ನೀತಿಯ ಕೋಂಗ್ರೇಸು ಸರಕಾರಂಗೊ ಪಾಲಿಸಿಗೊಂಡು ಬಂದದು  ಎಲ್ಲೋರಿಂಗೂ ಗೊಂತಿದ್ದು.  ದ್ವಿಪಕ್ಷೀಯ ಜಾಗತಿಕ ವ್ಯವಸ್ಥೆಲಿ ರಶ್ಯಾದ ಪರವಾಗಿ ನಿಂದದು, ಶಾಲೆ ಪಾಠ ಪುಸ್ತಕಂಗಳಲ್ಲಿ ಇದನ್ನೇ ಬೋಧಿಸಿದ್ದು ನಮ್ಮ ಸ್ವಾತಂತ್ರ್ಯಾನಂತರದ ತಲೆಮಾರುಗೊ ಇದೇ ಗುಂಗಿಲ್ಲಿ ಬೆಳೆವ ಹಾಂಗೆ ಮಾಡಿತ್ತು.  ಜರ್ಮನಿಯ ಹಾಂಗೆ, ಖಾಸಗಿ ಭಂಡವಾಳಕ್ಕೆ ಪ್ರೋತ್ಸಾಹ ಕೊಟ್ಟು, ಸರಕಾರದ ವತಿಂದ ಬಡತನದ ರೇಖೆಂದ ಕೆಳ ಇಪ್ಪವಕ್ಕೆ ಸಹಾಯ ಮಾಡಿದ್ದರೆ, ನಮ್ಮ ದೇಶ  ಈಗ ಎಷ್ಟೋ ಮುಂದೆ ಹೋವುತೀತು. ಕೋಂಗ್ರೇಸಿನ ಎಡೆಬಿಡಂಗಿ ಧೋರಣೆಂದಾಗಿ ಸಮಾಜಲ್ಲಿ ಕೇವಲ ಬಡತನವನ್ನೇ ಸೃಷ್ಟಿ ಮಾಡಿ ಹಂಚುವ ಹಾಂಗೆ ಆತು.   ಶ್ರೀಮಂತರ ಮತ್ತು ಬಡವರ ಮಧ್ಯದ ಅಂತರ ಹೆಚ್ಚಾಯ್ಕೊಂದೇ ಹೋತು.  ತಡವಾಗಿಯಾದರೂ ಭಾಜಪ ಪ್ರತಿಪಾದಿಸಿಗೊಂಡು ಬಂದ ಬಲಪಂಥೀಯ ವಾದವ  ಕೋಂಗ್ರೇಸು ಒಪ್ಪಿಗೊಂಡದು ಸಂತೋಷದ ವಿಷಯ.  ಆದರೂ, ಈ ಮಧ್ಯೆ ಎರಡು ತಲೆಮಾರಿನವು ನರಕ್ಕ ಬಪ್ಪ ಹಾಂಗೆ ಮಾಡಿದ್ದರ ಹೊಣೆಯ ಕೋಂಗ್ರೇಸಿನ   ಮೇಲೆ ಹೊರಿಸದ್ದೆ ಇಪ್ಪದು ಹೇಂಗೆ ?

(ಇನ್ನೂ ಇದ್ದು...)

- ಬಾಪಿ


No comments: