Saturday, September 19, 2009

ಭಿನ್ನತೆಲಿಪ್ಪ ಏಕತೆ

ಇತ್ತೀಚೆಗೆ ಬೆಂಗ್ಳೂರಿನ ಹೊರವಲಯಲ್ಲಿ ಇಪ್ಪ ಒಂದು ಚರ್ಚಿನ ಮೇಲೆ ಯಾರೋ ಕಲ್ಲು ಇಡ್ಕಿ ರಜ ಗಲಾಟೆ ಆತು.  ಕಲ್ಲು ಇಡ್ಕಿದವು ಅವರವರ ಮನೆಗೆ ಹೋಗಿ  ಚಿಲಕ ಹಾಕಿ ಮನುಗುವಂದ  ಮೊದಲೇ ಸಿದ್ದರಾಮಯ್ಯ (ಯಾವ ವಿಷಯಕ್ಕೇ ಆದರೂ ಪ್ರತಿಕ್ರಿಯೆ ಎಂತ ಕೊಡೆಕ್ಕು ಹೇಳುದರ ಹುಟ್ಟುವಗಳೇ  "ಸಿದ್ಧ” ಮಾಡಿಗೊಂಡು ಬಂದ ಕಾರಣ ಇವಂಗೆ ಈ  ಹೆಸರು ತುಂಬಾ ಒಂಬುತ್ತು) ಮತ್ತು ದೇವೇಗೌಡನ ಹಾಂಗಿಪ್ಪ ರಾಜಕಾರಣಿಗೊ, ಯೆಡ್ಯೂರಪ್ಪ ರಾಜಿನಾಮೆ ಕೊಡೆಕು ಹೇಳಿ ಬೊಬ್ಬೆ ಹಾಕಿದವು.  ಈ ಘಟನೆಂದ ಕೇವಲ ಎರಡು ದಿನ ಮೊದಲು  ಸುಮಾರು ವರ್ಷ ಇಂದಿರಾಗಾಂಧಿಯ ಮನೆಲಿ ಪರಿಕರ್ಮಿ ಆಗಿ ಸಲ್ಲಿಸಿದ ಸೇವೆಯ ಪ್ರತಿಫಲವಾಗಿ ಕರ್ನಾಟಕದ ರಾಜ್ಯಪಾಲ ಆದ ಹನ್ಸರಾಜ್  ಭಾರದ್ವಾಜ್  ಹೇಳುವ ವ್ಯಕ್ತಿಯುದೇ ಕರ್ನಾಟಕಲ್ಲಿ ಅಲ್ಪಸಂಖ್ಯಾತರಿಂಗೆ ಭದ್ರತೆ ಇಲ್ಲೆ ಹೇಳುವ ಹೇಳಿಕೆ ಕೊಟ್ಟು ಶುದ್ದಿ ಮಾಡಿತ್ತಿದ್ದ.    ಶ್ರೀಕೃಷ್ಣ ಪರಮಾತ್ಮ  ಮತ್ತೆ ಮತ್ತೆ ಹುಟ್ಟಿ ಬತ್ತೆ  ಹೇಳಿದ್ದು  ಧರ್ಮ ಸಂಸ್ಥಾಪನೆಯ ಹಾಂಗಿಪ್ಪ ಘನ ಉದ್ದೇಶಕ್ಕಾದರೆ, ಈ ಮೇಲೆ ಹೆಸರಿಸಿದ ವ್ಯಕ್ತಿಗೊ   (ಇನ್ನು ತಿರುಗ ಹುಟ್ಟಿ ಬಪ್ಪಲಿಲ್ಲೆ ಹೇಳುದು ಖಂಡಿತ ಆದ ಕಾರಣ, ಬಂದರೂ ಮನುಷ್ಯ ಜಾತಿಲಿ ಬಪ್ಪದು ಸಂಶಯ ಆದ ಕಾರಣ) ಈ ಸರ್ತಿಲಿಯೇ  ನಮ್ಮ ಭರತಖಂಡಲ್ಲಿ  ಅಲ್ಪಸಂಖ್ಯಾತರ ಹಿತರಕ್ಷಣೆಗೆ ಬೇಕಾದ ಎಲ್ಲಾ ವ್ಯವಸ್ಥೆಗಳನ್ನೂ ಮುಗಿಶಿಕ್ಕಿಯೇ ಹೋಪೊ ಹೇಳಿ ದೃಢ ಸಂಕಲ್ಪ ಮಾಡಿದ ಹಾಂಗೆ ಕಾಣ್ತು. 

ಆಸ್ಟ್ರೇಲಿಯಾದ   ಪ್ರಧಾನ ಮಂತ್ರಿ ತನ್ನ ದೇಶ ಕ್ರಿಶ್ಚಿಯನ್ ಧರ್ಮದ ಸಂಪ್ರದಾಯಂಗಳ ಮೇಲೆ   ನಂಬಿಕೆ ಮಡಿಕ್ಕೊಂಡು ಅದರಂತೆ ಆಢಳಿತ ನಡೆಶಿಗೊಂಡು ಹೋಪ ದೇಶ ಹೇಳಿಯೂ, ಬೇರೆ ಧರ್ಮೀಯರಿಂಗೆ ಅಲ್ಲಿ ಇಪ್ಪಲೆ ಮುಕ್ತ ಅವಕಾಶ ಇದ್ದರೂ ಕ್ರಿಶ್ಚಿಯನ್  ನಂಬಿಕೆಗೊಕ್ಕೆ ಧಕ್ಕೆ ಅಥವಾ ಅವಮಾನ ಆಗದ್ದ ಹಾಂಗೆ ಜೀವನ ಮಾಡೆಕ್ಕು ಹೇಳುವ  ಹೇಳಿಕೆ (ಬೆದರಿಕೆ)ಯ ಘಂಟಾಘೋಷವಾಗಿ ಹೇಳಿದ್ದದು ಜಗಜ್ಜಾಹೀರು ಆಯಿದು.   ಒಂದು ದೇಶಲ್ಲಿ ಶಾಂತಿ ಕಾಪಾಡುಲೆ ಇದರಿಂದ ಸುಲಭ ಉಪಾಯ ಬೇರೆ ಎಂತ ಇದ್ದು ? ಹೆರಂದ ಬಂದವು ಹೇಂಗಿರೆಕೋ ಹಾಂಗೇ ಇದ್ದರೆ ಚಂದ.  ಶ್ರೀಲಂಕಲ್ಲಿ ತಮಿಳರು ಬೀಲ ಬಿಚ್ಚಲೆ ಹೋಗಿ ಇದ್ದಷ್ಟು ದಿನ ಊರವಕ್ಕೆಲ್ಲಾ ಉಪದ್ರ ಕೊಟ್ಟು ಅಖೇರಿಗೆ ಕೈಸುಟ್ಟುಗೊಂಡ ಕಥೆ ಎಲ್ಲೋರಿಂಗೂ ಗೊಂತಿಪ್ಪದೇ.  ಭಾರತಲ್ಲಿ ಮಾಂತ್ರ ಬಹುಸಂಖ್ಯಾತರು ಬೇರೆಯವಕ್ಕಾಗಿ ತ್ಯಾಗ ಮಾಡಿಗೊಂಡು, ಎಂತ ಮಾಡಿರೆ ಯಾರಿಂಗೆ ಬೇಜಾರ ಅಕ್ಕೋ ಹೇಳಿ ಜಾಗ್ರತೆ ಮಾಡಿಗೊಂಡು ಹೀನಾಯವಾಗಿ ಬದುಕ್ಕೆಕ್ಕಾದ ಪರಿಸ್ಥಿತಿ ಇಪ್ಪದು.  ಸಮಾಜ, ದೇಶಕ್ಕಿಂತ ಮೊದಲು ತಮ್ಮ ಸ್ವಂತ ಹಿತವ ನೋಡುವ ರಾಜಕಾರಣಿಗೊ ನಮ್ಮಲ್ಲಿ ಇಪ್ಪದೇ ಇದಕ್ಕೆಲ್ಲಾ ಕಾರಣ ಹೇಳುವ ಸತ್ಯ  ಸಂಗತಿಯ ಪದೇ ಪದೇ ಹೇಳಿ ದೊಂಡೆ  ಒಣಗಿಸಿ ಗೊಂಬ ದುರ್ದೆಸೆ ನಮ್ಮದಾಗಿ ಹೋತು. ಎಂತ ಮಾಡುದು ?

ಈಗ ತಿರುಗ ಚರ್ಚಿನ ಮೇಲೆ ಆದ ಧಾಳಿಯ ವಿಷಯಕ್ಕೆ ಬಪ್ಪೊ.  ರಾಜಕಾರಣಿಗೊ ಅಷ್ಟೆಲ್ಲಾ ಬೊಬ್ಬೆ ಹಾಕುತ್ತಾ ಇದ್ದರೂ ಆ ಚರ್ಚಿನ ಪಾದ್ರಿಗೊ ಯಾರೂ ಎಂತದೂ ಬಾಯಿ ಬಿಟ್ಟಿದವಿಲ್ಲೆ. ಅದಾಗಿ ಎರಡು ದಿನಲ್ಲಿ ಆ ಘಟನೆ  ಸದ್ರಿ ಚರ್ಚಿಂಗೆ ಬಪ್ಪ ಎರಡು ಗುಂಪುಗಳ ಮಧ್ಯದ ವೈಮನಸ್ಯಂದ ಆದ ಸಂಗತಿ ಹೇಳುದು ಬಹಿರಂಗ ಆತು.  ನಿಜ ವಿಷಯ ಎಂತ ಹೇಳಿರೆ, ಹಿಂದೂ ಧರ್ಮಲಿಪ್ಪ ಮೂರ್ತಿಪೂಜೆ ಇತ್ಯಾದಿಗಳ  ಮೂದಲಿಸಿಗೊಂಡು  ಒಂದೇ ಏಸು, ಒಂದೇ ಬೈಬಲ್ ಹೇಳಿಗೊಂಡು ತಿರುಗುವ ಕ್ರಿಶ್ಚಿಯನರಲ್ಲಿ ೧೪೬ ವಿವಿಧ "ಜಾತಿಗೊ" (ಅಥವಾ ಪಂಗಡಂಗೊ) ಇದ್ದಾಡ.  (ಇದು ಬರೀ ಕೇರಳದ ಲೆಕ್ಕಾಚಾರ ಮಾತ್ರ. ಬೇರೆ ಪ್ರದೇಶಂಗಳ ಸೇರಿಸಿರೆ  ಇನ್ನುದೇ ಜಾಸ್ತಿ ಇಪ್ಪಲೂ ಸಾಕು.)  ಇವರ ಪ್ರಾರ್ಥನಾ ಮಂದಿರಂಗಳೂ ಪ್ರತ್ಯೇಕ ಆಡ !  ಸಿರಿಯನ್ ಕ್ಯಾಥೊಲಿಕ್, ಲ್ಯಾಟಿನ್ ಕ್ಯಾಥೋಲಿಕ್, ಮಾರ್ಥೋಮಾ, ಪೆಂಟೆಕೋಸ್ಟ್, ಸಾಲ್ವೇಶನ್  ಆರ್ಮಿ, ಸೆವೆಂತ್ ಡೇ ಅಡ್ವೆಂಟಿಸ್ಟ್, ಆರ್ಥೋಡಾಕ್ಸ್, ಜಕೋಬೈಟ್ ಇತ್ಯಾದಿ ವಿವಿಧ ಪಂಗಂಡಂಗಳ ಪ್ರತ್ಯೇಕ ಚರ್ಚುಗೊ ಇಪ್ಪದು ನಮ್ಮ ಬಹುಶೃತ ಮಾಧ್ಯಮದವರ ಅವಗಾಹನೆಗೆ ಬಾರದ್ದೆ ಇಪ್ಪದು ಬೇಜಾರದ ಸಂಗತಿ. ಅಥವಾ ಗೊಂತಿದ್ದರೂ ಜಾಣ ಕುರುಡುತನ ಆಗಿಪ್ಪಲೂ ಸಾಕು.   ಇಂತದೇ ಗುಟ್ಟು ಮುಸ್ಲಿಮರಲ್ಲಿಯೂ ಇಪ್ಪದು ನಮ್ಮಲ್ಲಿ ಹೆಚ್ಚು ಜನಕ್ಕೆ ಗೊಂತಿರ.  ಸುನ್ನಿ, ಶಿಯಾ, ಅಹ್ಮದೀಯ, ಸುಫಿ, ಮುಜಾಹಿದ್ದೀನ್  ಇತ್ಯಾದಿ  ಗುಂಪುಗೊಕ್ಕೆ ಪ್ರತ್ಯೇಕ ಪ್ರತ್ಯೇಕ ೧೩ ನಮುನೆಯ ಮಸೀದಿಗೊ ಇದ್ದಡ.  (ಮುಸ್ಲಿಮರ ಈ ಗುಂಪುಗಾರಿಕೆಯ  ಉಪಯೋಗಿಸಿಗೊಂಡೇ ಅಮೆರಿಕಾದವು ಇರಾಕಿನ ಮೇಲೆ ಧಾಳಿ ಮಾಡಿದ್ದದು !)

ಕ್ರಿಶ್ಚಿಯನರು, ಬ್ಯಾರಿಗಳ ನಿಜ ಪುರಾಣ  ಹೀಂಗಾದರೆ   ಸಾವಿರಗಟ್ಳೆ ಧರ್ಮ ಗ್ರಂಥಂಗೊ, ಭಾಷ್ಯಂಗೊ, ೩೩ ಕೋಟಿ ದೇವರುಗೊ, ಜಾತಿಗೊ ಇತ್ಯಾದಿಗಳ ಒಳಗೊಂಡಿಪ್ಪ ವಿಶಾಲ ಹಿಂದೂ ಸಮಾಜಕ್ಕೆಲ್ಲಾ ಒಂದೇ ನಮುನೆ ದೇವಸ್ಥಾನ !  ಹಾಂಗಿದ್ದರೂ,  ಗುರುವಾಯೂರಿನ ಹಾಂಗಿಪ್ಪ ಸಂಪ್ರದಾಯವಾದಿ ದೇವಸ್ಥಾನಂಗಳಲ್ಲಿ "ಹಿಂದುಗೊ ಅಲ್ಲದ್ದವಕ್ಕೆ" ಪ್ರವೇಶ ನಿಷೇಧಿಸಿದರೆ ಅದು ಮಾಧ್ಯಮದವಕ್ಕೆ ದೊಡ್ಡ ಚರ್ಚೆಯ ವಿಷಯ ಆವುತ್ತು.   ಕಾಟು ರಾಜಕಾರಣಿಗೊ ಇಲ್ಲದ್ರೆ ಹಿಂದೂ ಸಮಾಜ ಯಾವಗಂಗೂ ಬಲಿಷ್ಠ  ಆಗಿ ಇಕ್ಕು.  ಭಾರತಲ್ಲಿ  ಸುಖ, ಶಾಂತಿಯೂ ಇಕ್ಕು.  ನಮ್ಮ ಸನಾತನ ಧರ್ಮಲ್ಲಿ ಬದಲಾದ ತತ್ಕಾಲದ ಪರಿಸ್ಥಿತಿಗೆ ಅನುಗುಣವಾದ  ಸುಧಾರಣೆಗಳ ಅಗತ್ಯ ಖಂಡಿತವಾಗಿ ಇದ್ದರೂ, ಹಿಂದುಗೊಕ್ಕೆ ಹಿಂದೂಗಳಿಂದ  ಯಾವ ಆತಂಕವೂ ಇಲ್ಲೆ.  ಹಿಂದೂಗಳ ನಿಜವಾದ  ವೈರಿಗೊ  ಕೋಂಗ್ರೇಸಿಲಿಪ್ಪ ಹಿಂದೂ ರಾಜಕಾರಣಿಗೊ.  ಇಂತಹ   ಸ್ವಾಭಿಮಾನಹೀನ, ಸಮಯಸಾಧಕರಿಂಗೆ  ಧಿಕ್ಕಾರವಿರಲಿ.

-ಬಾಪಿ  / ೧೯.೦೯.೨೦೦೯        

No comments: