Tuesday, January 26, 2010

ನೆರೆಕರೆ

"ಸ್ನೇಹಿತರ ಬೇಕಾರೆ ಬದಲುಸಲಕ್ಕು ಆದರೆ ನೆರೆಕರೆಯವರ ಬದಲುಸುಲೆಡಿಯ" ಹೇಳುದು ವಾಜಪೇಯಿಯ ಪ್ರಸಿದ್ಧ ಹೇಳಿಕೆಗಳಲ್ಲಿ ಒಂದು. ಇದು ರಜ ಅನುಸರಿಸಿಗೊಂಡು ಹೋಯೆಕ್ಕು ಹೇಳುವ ಧೋರಣೆ. ಆದರೆ, ಪಾಕಿಸ್ತಾನದ ವಿಷಯಲ್ಲಿ "ಶಠಂ ಪ್ರತಿ ಶಾಠ್ಯಂ" ಹೇಳುದು ಆರೆಸ್ಸೆಸ್ಸಿನ ಸಿದ್ಧಾಂತ.  ಈ ಎರಡು ದೃಷ್ಟಿಕೋಣಂಗಳ ಸಮತೋಲನಕ್ಕಾಗಿ ವಾಜಪೇಯಿ  ಯಾವಾಗಳೂ ಬಾಯಿಲಿ "ನ ದೈನ್ಯಂ ನ ಪಲಾಯನಂ" ಹೇಳುವ ವೀರಮಂತ್ರವ ಹೇಳಿಗೊಂಡೇ ಲಾಹೋರಿಂಗೆ ಐತಿಹಾಸಿಕ  ಬಸ್ಸು ಯಾತ್ರೆ ಮಾಡಿ ಶಾಂತಿ ಪ್ರಸ್ತಾಪ ಮಾಡಿದ.   (ಇದರೆಡೆಲಿ ಜಿನ್ನಾನ ಹೊಗಳುಲೆ ಹೋಗಿ ಭಾಜಪದ ಅವಕೃಪೆಗೆ ಒಳಗಾದ ಜಸ್ವಂತ ಸಿಂಗ್  ಈ ಬಸ್ ಯಾತ್ರೆ ಎನ್ನದೇ ಯೋಚನೆ ಹೇಳಿ ಇತ್ತೀಚೆಗೆ ತನ್ನ  ಬೆನ್ನು ತಾನೇ ತಟ್ಟಿಗೊಂಡ).   ವಾಜಪೇಯಿ ಅಲ್ಲಿಪ್ಪಗ  ನವಾಜ್  ಶರೀಫ್  ಲಾಯಿಕ ಶರ್ಬತ್ತು, ಬಿರ್ಯಾನಿ ಎಲ್ಲಾ ಕೊಟ್ಟು ಸತ್ಕಾರ ಮಾಡಿಕ್ಕು. ಆದರೆ, ವಾಜಪೇಯಿಗೆ ಅಲ್ಲಿಗೆ ಹೋಗಿ ಬಂದ ಬಚ್ಚೆಲು ತಣಿವಂದ ಮೊದಲೇ   ಪಾಕಿಸ್ತಾನದ ದ್ವಂದ್ವ ನೀತಿ ಅರ್ಥ ಅಪ್ಪ ಹಾಂಗಿಪ್ಪ ಘಟನೆ ನಡದತ್ತು.  ಶಾಂತಿಯ ವಾತಾವರಣ ಇದ್ದರೆ ತಾನು ಖುದ್ದು ಚಲಾವಣೆಲಿ ಇಪ್ಪಲೆ ಎಡಿತ್ತಿಲ್ಲೆ ಹೇಳಿ ಯೋಚನೆ ಮಾಡಿದ ಮುಶಾರಫ್  ಕಾರ್ಗಿಲಿನ ಅಧ್ಯಾಯಕ್ಕೆ ನಾಂದಿ ಹಾಡಿದ. 

ಊರಿಲ್ಲಿ ಅವರವರ ತೋಟದ ಕರೆಲಿ ಬ್ಯಾರಿಗಳ ಮನೆ ಇದ್ದು ಅನುಭವಿಸಿದವಕ್ಕೆ ಇದು ದೊಡ್ಡ ಸಂಗತಿ ಹೇಳಿಯೇ ಕಾಣ.  ದಿನ ನಿತ್ಯ ಬೇಲಿ ನುಗ್ಗಿ ತೋಟಕ್ಕೆ ಬಪ್ಪ ಏಡುಗೊ,  ಹೊಳೆಲಿ ಹೊಯಿಗೆ ತೋಡಿ ಸಿಕ್ಕಿದ  ತತ್ವಾರದ ನೀರಿನ  ಕಷ್ಟಪಟ್ಟು ತೋಕಿ ಬೆಳೆಶಿದ ಬಾಳೆ, ಮುಂಡಿಸೆಸಿ ಇತ್ಯಾದಿಗಳ ಲಗಾಡಿ ಕೊಟ್ಟುಗೊಂಡಿತ್ತದರ ಸಹಿಸಿಗೊಂಡವಕ್ಕೆ  "ಏಡು ಮುಟ್ಟದ್ದ ಸೊಪ್ಪಿಲ್ಲೆ" ಹೇಳುವ ಗಾದೆಯ ಯಾವಗಂಗೂ ಮರವಲೆ ಸಾಧ್ಯ ಇಲ್ಲೆ.    ಉಪದ್ರ ಕೊಡುದು ಬ್ಯಾರಿಗಳ ಹುಟ್ಟು ಗುಣ.  ಹಾಂಗಾರೆ, ನಾವು ಯಾವಗಂಗೂ ಉಪದ್ರವ ಸಹಿಸಿಗೊಂಡೇ ಬದುಕ್ಕೆಕ್ಕೋ ? ಸಹಿಸುದಾದರೆ, ಎಷ್ಟರವರೆಗೆ ಸಹಿಸೆಕ್ಕು ?  ಉಪದ್ರ ತಡೆತ್ತಿಲ್ಲೆ ಹೇಳಿ ಆಸ್ತಿಯನ್ನೇ ಮಾರಾಟ ಮಾಡುದೋ ?  ಅಥವಾ ಬ್ಯಾರಿಯ ದರ್ಖಾಸ್ತಿನ  ಕ್ರಯಕ್ಕೆ ತೆಕ್ಕೊಂಡು  ಉಪದ್ರ ಇಲ್ಲದ್ದ ಹಾಂಗೆ ಮಾಡಿಗೊಂಬದೋ ? ಏಡುಗಳ ಕಟ್ಟಿ ಹಾಕಿರೆ ಅಥವಾ ವಿಷ ಕೊಟ್ಟು ಸಾಯಿಸಿರೆ ಹೇಂಗೆ ? ಇಲ್ಲವೇ, ಏಡುಗಳಿಂದ ಪೀಡೆ ಅನುಭವಿಸುತ್ತಾ ಇಪ್ಪ ಸಮಾನ ದುಃಖಿಗಳ ಎಲ್ಲಾ  ಒಟ್ಟುಗೂಡಿಸಿ ಸಂಘಟನೆಯ ಬಲಲ್ಲಿ ಅವರ ಬಗ್ಗುಬಡಿವದೋ ?  ಅಂತೂ, ಜೀವನಲ್ಲಿ ಈ ರೀತಿಯ  ಅನುಭವಂಗೊಕ್ಕೆ ಬೆಲೆ ಕಟ್ಟುಲೆಡಿಯ. ಒಟ್ಟಿಲ್ಲಿ, ಹೀಂಗಿಪ್ಪ ಏಡುಗಳ ಪೀಡೆಯ ಸಮರ್ಥವಾಗಿ ಎದುರಿಸಿ ಗೆದ್ದ  ಹಿನ್ನೆಲೆ ಇಪ್ಪ ಹವ್ಯಕ ಬ್ರಾಹ್ಮಣರಲ್ಲಿ ಯಾರಾರೂ ಒಬ್ಬ ಭಾರತದ ಪ್ರಧಾನ ಮಂತ್ರಿ ಅಪ್ಪಲ್ಲಿ ವರೆಗೆ ಪಾಕಿಸ್ತಾನದ ಸಮಸ್ಯೆ ಪರಿಹಾರ ಆಗ ಹೇಳುವ ಖಡಾಖಂಡಿತ ನಂಬಿಕೆ ಎನ್ನದು. 

ಪಾಕಿಸ್ತಾನದವು ಕಾಶ್ಮೀರದ ವಿಷಯವ ದೊಡ್ಡ ಸಮಸ್ಯೆಯಾಗಿ ಬಿಂಬಿಸಿ ಅಂತರರಾಷ್ಟ್ರೀಯ ಮಟ್ಟಲ್ಲಿ ಯಾವಾಗಲೂ ಶುದ್ದಿ ಮಾಡಿಗೊಂಡಿಪ್ಪವು. ಮತ್ತೆ  ಚೀನಾದಂತಹ ನಮ್ಮ ವೈರಿಗಳೊಟ್ಟಿಂಗೆ ಸೇರಿ ಕುತಂತ್ರ ಮಾಡಿಗೊಂಡಿಪ್ಪವು.  ದುರದೃಷ್ಟ ಎಂತ ಹೇಳಿರೆ,  ನಮ್ಮ ರಾಜಕಾರಣಿಗೊಕ್ಕೆ  ಪಾಕಿಸ್ತಾನದವು ಹೇಳಿದ್ದಕ್ಕೆ, ಮಾಡಿದ್ದಕ್ಕೆಲ್ಲಾ ಉತ್ತರ, ಪ್ರತಿತಂತ್ರ ಮಾಡುದೇ ಉದ್ಯೋಗ ಆಗಿ ಹೋಯಿದು.  ವಾಸ್ತವ ಎಂತ ಹೇಳಿರೆ, ಪಾಕಿಸ್ತಾನ್  ಒಂದು ಯಕಃಶ್ಚಿತ್  ದೇಶ.   ವಿಸ್ತೀರ್ಣಲ್ಲಿ ನಮ್ಮ ೨೫% ಇದ್ದುಗೊಂಡು (ಭಾರತ : ೩.೩ ಮಿಲಿಯ ಚದರ ಕಿ.ಮಿ, ಪಾಕಿಸ್ತಾನ :  ೮ ಲಕ್ಷ ಚದರ ಕಿ.ಮಿ.),   ಜನಸಂಖ್ಯೆಲಿ ಕೇವಲ ೧೬% (ನಮ್ಮದು ೧೦೮ ಕೋಟಿ, ಅವರದ್ದು ೧೬ ಕೋಟಿ) ಇಪ್ಪ ಸಣ್ಣ ದೇಶ.  ಹೇಳಿರೆ, ನಮ್ಮ  ಕಾಶ್ಮೀರ, ಉತ್ತರಪ್ರದೇಶ ಮತ್ತು ಬಿಹಾರಂಗಳ ಸೇರಿಸಿರೆ ಅಪ್ಪಷ್ಟು ದೊಡ್ಡ  ಅಷ್ಟೇ ! ಇನ್ನು ಜನಸಂಖ್ಯೆಲಿ ಭಾರತದ ಉತ್ತರಪ್ರದೇಶ ಒಂದೇ ಇಡೀ ಪಾಕಿಸ್ತಾನಕ್ಕೆ ಸಮ ! ನಾವು ಪಾಕಿಸ್ತಾನವ ಗಣ್ಯ ಮಾಡದ್ದರೆ ಅಲ್ಯಾಣವರ ಹೇಳಿಕೆಗೊ ವಿಶೇಷ ದೊಡ್ಡ ಶುದ್ದಿ ಅಪ್ಪಲೆ ಸಾಧ್ಯವೇ ಇಲ್ಲೆ. ಎಷ್ಟೋ ಸರ್ತಿ ನಾವೇ ಅವರ ದೊಡ್ಡ ಮಾಡುದು. ನೇಪಾಳ, ಅಫ್ಘಾನಿಸ್ತಾನ್,  ಬಾಂಗ್ಲಾದೇಶ, ಶ್ರೀಲಂಕಾ, ಮಾಯನ್ಮಾರ್  ಎಲ್ಲಾ ಇಪ್ಪ ಹಾಂಗೆ ಪಾಕಿಸ್ತಾನವುದೇ ನಮ್ಮ ಒಂದು ಸಣ್ಣ ನೆರೆಕರೆಯ ದೇಶ ಅಷ್ಟೇ ಹೇಳುವ ಧೋರಣೆ ತಾಳಿದರೆ,  ಅವರ ಹಾಂಕಾರ ರಜ ಕಮ್ಮಿ ಅಕ್ಕು.  ಈ ವಿಷಯವ ರಾಹುಲ್  ಗಾಂಧಿ ಅತ್ಯಂತ ಸಮರ್ಪಕವಾಗಿ ಪ್ರಸ್ತಾಪ ಮಾಡಿದ್ದ. ಇದು ಅವ ರಾಜಕೀಯವಾಗಿ ಪ್ರಬುದ್ಧ ಆವುತ್ತಾ ಇಪ್ಪದಕ್ಕೆ ಸಾಕ್ಷಿ.

ಸ್ವಾತಂತ್ರ್ಯಾನಂತರ ನೆಹರೂವಿನ ವಿದೇಶ ನೀತಿಯ ಫಲವಾಗಿ ಭಾರತಕ್ಕೆ ಅಮೇರಿಕಾದ ಸ್ನೇಹದ ಲಾಭ ಸಿಕ್ಕಿತ್ತಿಲ್ಲೆ. ಇದರ ಪಾಕಿಸ್ತಾನದವು ಲಾಯಿಕಲ್ಲಿ ಉಪಯೋಗಿಸಿಗೊಂಡವು.   ನಮ್ಮದು ತಟಸ್ಥ ಧೋರಣೆ ಹೇಳಿ ಲೆಕ್ಕ ಆದರೂ, ಯಾವಾಗಲೂ ರಶ್ಯಾದ ಹೊಡೆಂಗೆ ಮಾಲಿಗೊಂಡಿತ್ತ  ರಾಜಕೀಯ, ಸಾಮಾಜಿಕ  ವ್ಯವಸ್ಥೆ.  ಹಾಂಗಾಗಿ  ನವಗೆ ಆದರ್ಶಪ್ರಾಯರಾಗಿತ್ತ  ರಶ್ಯಾದ ಹಾಂಗೇ,  ದೇಶಲ್ಲಿ ಸಂಪತ್ತಿನ ಸೃಷ್ಟಿ ಮಾಡುವ ಬದಲು ಬಡತನವನ್ನೇ ಹಂಚಿಗೊಂಬ ಹಾಂಗಾತು.  ಅವರ ಹಾಂಗೇ  ನಮ್ಮದೂ ಅವ್ಯವಸ್ಥೆಯ ದಾರಿಲೇ ಹೋತು.  ಕೈಗಾರಿಕೆ ಮತ್ತು ವ್ಯಾಪಾರ-ವ್ಯವಹಾರ ಸರಕಾರದ ಬಿಗಿಮುಷ್ಟಿಲಿ ಇಪ್ಪವರೆಗೆ,  ನಮ್ಮ ವಾರ್ಷಿಕ ಬೆಳವಣಿಗೆ ೩% ದಾಂಟಿತ್ತಿದ್ದಿಲ್ಲೆ.  ಈ ಧೋರಣೆಯ ಸಡಿಲಿಸಿ ಖಾಸಗಿಯವಕ್ಕೆ ಹೆಚ್ಚಿನ ಅವಕಾಶ, ಆದ್ಯತೆ ಸಿಕ್ಕಿದ ಮೇಲೆಯೇ  ಈ ಸಂಖ್ಯೆ ೮ - ೧೦% ವರೆಗೆ ಬಂದು ನಿಂದದು. ನಮ್ಮ ಕಣ್ಣ ಮುಂದೆಯೇ ಹಾಂಕಾಂಗ್, ಸಿಂಗಾಪುರ, ಮಾಲ್ಡೀವ್ಸ್  ಇತ್ಯಾದಿ ದ್ವೀಪ-ದೇಶಂಗೊ ಅಭಿವೃದ್ಧಿ ಆವುತ್ತಾ ಇಪ್ಪಗ, ಪ್ರಾಯೋಗಿಕವಾಗಿಯಾದರೂ, ನಮ್ಮ ಅಂಡಮಾನ ಅಥವಾ ಲಕ್ಷದ್ವೀಪವ ಒಂದು ಮುಕ್ತ ಮಾರುಕಟ್ಟೆಯಾಗಿ ಮಾಡಿ ನೋಡುವೋ ಹೇಳಿ ನಮ್ಮ ರಾಜಕೀಯ, ಆರ್ಥಿಕ ನೇತಾರರಿಂಗೆ ಇಷ್ಟು ವರ್ಷಲ್ಲಿ ಕಾಣದ್ದದು ಭಯಂಕರ ಆಶ್ಚರ್ಯದ ಸಂಗತಿ.  ಇಲ್ಲದ್ರೆ ಇಷ್ಟು ಹೊತ್ತಿಂಗೆ ನಮ್ಮ ದೇಶದ ಸ್ವಾಧೀನಲ್ಲಿಯೇ ಇಪ್ಪ ಒಂದು ದುಬೈ ಅಥವಾ ಸಿಂಗಾಪುರವ ಸೃಷ್ಟಿ ಮಾಡ್ಳೆ ಎಡಿತ್ತೀತು.  ಒಟ್ಟಿಲ್ಲಿ, ಸಮೃದ್ಧ ಅಮೇರಿಕಾದ ಗೆಳೆತನಂದಾಗಿ ಪಾಕಿಸ್ತಾನದವು ಉದ್ಧಾರ ಆಗದ್ದದು ಮಾತ್ರ ದೇವರ ದಯೆ ! ಸದ್ಯಕ್ಕೆ ಇದೊಂದೇ ಸಮಾಧಾನ.

-ಬಾಪಿ





No comments: