Thursday, January 13, 2011

ಸ್ವಾತಂತ್ರ್ಯ

ಸ್ವಾತಂತ್ರ್ಯ ಬಂದಾತು ೬೦ ವರುಷ
ಜನಮಾನಸಲ್ಲಿಲ್ಲೇಕೆ ಯಾವ ಹರುಷ
ಸರ್ಕಾರ ಹೇಂಗಾತು ಖಾಲಿ ಖಜಾನೆ
ಮಂತ್ರಿಗೊಕ್ಕೆಂತಕೆ ದೊಡ್ಡ ಅರಮನೆ
 
ಪವಾರಿನ ಮರುಳು ದಿನಾ ಕ್ರಿಕೆಟ್ಟು
ಬೇರೆ ಕೆಲಸಕ್ಕೆ ಎಲ್ಲಿ ಪುರುಸೊತ್ತು 
ಆತು ನೀರುಳ್ಳಿ  ದಿನದಿನ ದುಬಾರಿ
ಪಾಪದವಕ್ಕಿದ್ದು ಅವರವರ ದಾರಿ
 
ಮಾಡೇ ಇಲ್ಲದ್ದ ಶಾಲೆಗಳೇ ಎಲ್ಲ 
ಕಲಿಶುವವು ಆರು ದೇವರೇ ಬಲ್ಲ
ಪಾಸಪ್ಪಲೆ ಸಾಕು ೩೫ ಮಾರ್ಕು
ಆಫೀಸಿಲ್ಲೆಲ್ಲ ಮೀಸಲಾತಿ ಸರಕು
 
ಅಲ್ಪರ ತುಷ್ಟಿಗೆ ಸದಾ ಕಟಿಬದ್ಧ
ಹೇಳಿದವಡ ಹಿಂದು ಉಗ್ರವಾದ 
ಎಲ್ಲೆಂದರಲ್ಲಿ ಹೊಟ್ಟುತ್ತು ಬಾಂಬು
ಬದುಕ್ಕಿ ಒಳುದರೆ ಹರ್ಕಟೆ ದಿಂಬು
 
ಖಂಡಿತ ರಾಹುಲ್ ಇನ್ನು ಪ್ರಧಾನಿ
ಭಾರತ ಆವುತ್ತಯ್ಯ  ಚಿನ್ನದಾ ಗಣಿ
ಎಲ್ಲೋರ ಮನೆಲಿ ಮೊಬೈಲು ಟೀವಿ
ನೀರು ಬಾರದ್ರೆ ಇರಲೊಂದು ಬಾವಿ
 
-ಬಾಪಿ
 
 
 
 
 

No comments: