Saturday, October 24, 2009

ಚೌ ಚೌ - ೦೧

ನೋಬೆಲ್ ಪ್ರಶಸ್ತಿ : ಒಬಾಮಂಗೆ ನೋಬೆಲ್ ಶಾಂತಿ ಪ್ರಶಸ್ತಿ ಬಂದ ಬಗ್ಗೆ ಬೇಕಾದಷ್ಟು ಊಹಾಪೋಹಂಗೊ ಚಲಾವಣೆಲಿ ಇದ್ದು. ಎಡಪಂಥವಾದಿಗಳೇ ಬಹುಮತಲ್ಲಿಪ್ಪ ಪ್ರಶಸ್ತಿಯ ಆಯ್ಕೆ ಸಮಿತಿಯವು ಇರಾನ್, ಉತ್ತರ ಕೊರಿಯಾ ಇತ್ಯಾದಿ ದೇಶಂಗಳ ಕುರಿತಾದ ಅಮೇರಿಕಾದ ವಿದೇಶಾಂಗ ನೀತಿಯ ತತ್ಕಾಲೀನ ಧೋರಣೆಯ ಇಕ್ಕಟ್ಟಿಲ್ಲಿ ಸಿಲುಕಿಸಲೆ ಈ ತಂತ್ರ ಹೂಡಿದ್ದದು ಹೇಳಿ ಗುಸುಗುಸು ಶುದ್ದಿ. ಅಂತೂ, ಎನ್ನ ಪ್ರಕಾರ ಇದು ಕ್ಲಾಸಿನ ಅತ್ಯಂತ ಪೋಕರಿ ಮಾಣಿಯ ಲೀಡರು ಮಾಡಿದ ಹಾಂಗಿಪ್ಪ ಕಥೆ. ಒಬಾಮಾ ಅಧಿಕಾರಕ್ಕೆ ಬಂದ ಮೇಲಾಣ ೬ ತಿಂಗಳಿಲ್ಲಿ ಸಾಧನೆ ಮಾಡಿದ್ದದು ಎಂತದೂ ಇಲ್ಲೆ ಹೇಳುದು ಎಲ್ಲೋರಿಂಗೂ ಗೊಂತಿಪ್ಪ ವಿಷಯ. ಬರೀ ಆಶ್ವಾಸನೆಯ ಮೇಲೆ ಪ್ರಶಸ್ತಿ ಕೊಡ್ತರೆ, ನಮ್ಮ ವಾಟಾಳ್ ನಾಗರಾಜಂಗೆ ಪ್ರಪಂಚದ ಎಲ್ಲಾ ಪುರಸ್ಕಾರಂಗಳೂ ಸಿಕ್ಕೆಕ್ಕಿತ್ತು. ಚರಿತ್ರೆಲಿ ಇಷ್ಟರವರೆಗೆ ನಡೆದ ಯುದ್ಧಂಗಳಲ್ಲಿ ಅಣ್ವಸ್ತ್ರ ಪ್ರಯೋಗ ಮಾಡಿದ ಒಂದೇ ಒಂದು ದೇಶವಾದ ಅಮೇರಿಕಾ, ಈಗ ಪ್ರಪಂಚದ ಬೇರೆ ಎಲ್ಲಾ ದೇಶಂಗೊಕ್ಕೆ ಪರಮಾಣು ನೀತಿಯ ಬೋಧನೆ ಮಾಡುವ ಗುರಿಕ್ಕಾರ್ತಿಗೆ ವಹಿಸಿಗೊಂಡಿಪ್ಪದು ದೊಡ್ಡ ವಿಪರ್ಯಾಸ ! ಈ ಅಧಿಕಪ್ರಸಂಗಿಗಳ ಸ್ವಂತ ಚರಿತ್ರೆಯ ಹುಳುಕಿನ ಬೊಟ್ಟು ಮಾಡಿ ತೋರುಸುವ ಧೈರ್ಯ ಯಾರಿಂಗೂ ಇಲ್ಲೆನ್ನೆ ಹೇಳುದು ಭಾರೀ ಬೇಜಾರದ ವಿಷಯ.

ಬೋಫೋರ್ಸ್ : ಕೋತ್ರೋಕಿ ಹೇಳುವ ಮಹಾಶಯನ ಬೋಫೋರ್ಸ್ ಹಗರಣಲ್ಲಿ ದೋಷಮುಕ್ತಿಗೊಳಿಸಿ ಕೇಸಿನ ಬರ್ಖಾಸ್ತು ಮಾಡೆಕ್ಕು ಹೇಳುವ ಅರ್ಜಿಯ CBIಯವು ಉಚ್ಛನ್ಯಾಯಾಲಯಲ್ಲಿ ಸಲ್ಲಿಸಿದ್ದವಡ. ಇದು ಅವಂಗೆ (ಅಕ್ರಮವಾಗಿ) ಸಲ್ಲೆಕ್ಕಾದ ಬಾಕಿ ೨೯ ಮಿಲಿಯ ಡಾಲರುಗಳ ವಿಲೇವಾರಿಯ ವ್ಯವಸ್ಥೆಯ ಸುಗಮ ಮಾಡಿಕೊಡುವ ಹೊಸ ಕಾರ್ಯತಂತ್ರ. ವಾಜಪೇಯಿಯ ಸರಕಾರದ ಅವಧಿಲಿ ಈ ಕೇಸಿನ ಬಗ್ಗೆ ಎಂತಾರು ಇತ್ಯರ್ಥ ಅಕ್ಕು ಹೇಳುವ ಆಶೆ ಎಲ್ಲೋರಿಂಗೂ ಇತ್ತು. ಆದರೆ ನಿಜ ಹೇಳ್ತರೆ, ಆ ಸರಕಾರಂದಲೂ ಹೆಚ್ಚು ಬೋಫೋರ್ಸ್ ಕೇಸಿನ ಮುಂದುವರಿಸಿದ ಹೆಗ್ಗಳಿಕೆ ನರಸಿಂಹ ರಾಯನ ಸರಕಾರಕ್ಕೆ ಸೇರೆಕ್ಕು. ಕೋತ್ರೋಕಿಯ ಹೆಸರಿನ ಅಂಬಗಂಬಗ ಹೇಳಿ ಸೋನಿಯಾ ಗಾಂಧಿಯ ಹೆದರಿಸಿ ಕೂರಿಸಿಗೊಂಡೇ ಅವ ತನ್ನ ೫ ವರ್ಷದ ರಾಜ್ಯಭಾರವ "ಯಶಸ್ವಿಯಾಗಿ" ಪೂರೈಸಿದ. ಮಹಾ ಬುದ್ಧಿವಂತ ! ಎಷ್ಟಾದರೂ ಆಂಧ್ರದ ಖಾರ ಮೆಣಸಿನ ಕಾಯಿ ತಿಂದು ಬೆಳೆದ ಜೀವ ಅಲ್ಲದಾ ?

ನಕ್ಸಲೀಯರು : ಇತ್ತೀಚೆಗೆ ನಮ್ಮ ದೇಶಲ್ಲಿ ಮಾವೋವಾದಿಗಳ ಕಾರುಬಾರು ರಜ ಜೋರು ಆಯಿದು. ನೇಪಾಳಲ್ಲಿ ಅಧಿಕಾರದ ರುಚಿ ಕಂಡ ಮೇಲೆ, ಅವರದ್ದು ಈಗ ಭಾರತದ ಮೇಲೆ ಕಣ್ಣು. ನಮ್ಮ ದೇಶದ ಮಧ್ಯ- ಉತ್ತರ -ಪೂರ್ವ ರಾಜ್ಯಂಗಳಲ್ಲಿಪ್ಪ ಹೇರಳ ಕಾಡುಪ್ರದೇಶಂಗಳ ನೆಲೆಯಾಗಿ ಮಾಡಿಗೊಂಡು, ಹೆಚ್ಚಾಗಿ ಕಾಡಿನ ಹತ್ತರಾಣ ಹಳ್ಳಿಗಳ ಮುಗ್ಧ ಜನಂಗಳ ಅಥವಾ ಪೋಲೀಸರ ಕೊಂದು ತಮ್ಮ ಸಂಸ್ಥೆಯ ಹೆಸರು ಸದಾ ಪತ್ರಿಕೆಗಳಲ್ಲಿ ಚಲಾವಣೆಲಿ ಇಪ್ಪ ಹಾಂಗೆ ನೋಡಿಗೊಳ್ತಾ ಇದ್ದವು. ಇವರ ದುಷ್ಕೃತ್ಯಂಗೊಕ್ಕೆ ಎಡಪಕ್ಷಂಗಳ ಸಹಾನುಭೂತಿ ಇಪ್ಪದಲ್ಲದ್ದೆ, ಅನೇಕ ಬುದ್ಧಿಜೀವಿಗಳದ್ದೂ ಬೆಂಬಲ ಇದ್ದು. ಇದೆಂತ ಆಶ್ಚರ್ಯದ ವಿಷಯ ಅಲ್ಲ. ಏಕೆ ಹೇಳಿರೆ, ಕೈಲಿ ಬೆಡಿ ಹಿಡುಕ್ಕೊಂಡಿಪ್ಪ ವಿಕೃತ ಮನಸ್ಸಿನ ಬುದ್ಧಿಜೀವಿಗಳೇ ನಕ್ಸಲೀಯರು ಅಲ್ಲದಾ ? ಇದೇ ಬುದ್ಧಿಜೀವಿಗೊ, ನಮ್ಮ ದೇಶದ ಸಂಸ್ಕೃತಿಗೆ ಸಂಬಂಧಿಸಿದ ವಿಷಯಲ್ಲಿ ವಿಶ್ವ ಹಿಂದೂ ಪರಿಷತ್ತು ಅಥವಾ ಭಜರಂಗ ದಳದವು ಎಂತಾರೂ ಗಲಾಟೆ ಮಾಡಿರೆ ಅದಕ್ಕೆ ಕೂಡ್ಳೇ ತಕರಾರು ಮಾಡ್ತವು ! ವಿತಂಡವಾದವೇ ಬುದ್ಧಿವಂತಿಕೆಯ ಮಾನದಂಡ ಆಗಿಪ್ಪಗ, ಒಳ್ಳೆಯ ತರ್ಕಕ್ಕೆ ಅವಕಾಶ ಎಲ್ಲಿದ್ದು ?

ಗುರುತು ಚೀಟಿ : ವಿಶಿಷ್ಠ ಗುರುತುಚೀಟಿ ಪ್ರಾಧಿಕಾರ ಹೇಳುವ ಹೊಸ ಸಂಸ್ಥೆಯ ಸುರುಮಾಡಿ, ನಂದನ್ ನೀಲಕೇಣಿಯ ಅದಕ್ಕೆ ಮುಖ್ಯಸ್ಥನಾಗಿ ಮಾಡಿದ ಮನಮೋಹನ ಸಿಂಗನ ಸರಕಾರದ ನಿರ್ಧಾರವ ಸ್ವಾಗತಿಸಿ ಚಪ್ಪಾಳೆ ತಟ್ಟಿದವರಲ್ಲಿ ಆನೂ ಒಬ್ಬ. ಆದರೆ, ಈ ಪ್ರಕ್ರಿಯೆ ಮುಗಿಶುಲೆ ೫ ವರ್ಷ ಬೇಕಕ್ಕು ಹೇಳಿಯೂ, ಈ ಗುರುತು ಚೀಟಿ ಭಾರತ ದೇಶದ ಪೌರತ್ವದ ದೃಢೀಕರಣ ಅಲ್ಲ ಹೇಳಿಯೂ ತಿಳಿಶುವ ಹೊಸ ನಿರಾಶಾದಯಕ ಸುದ್ದಿ ಇತ್ತೀಚೆಗೆ ಕೇಳಿ ಬೈಂದು. ಸದ್ಯಕ್ಕೆ ಲಂಚ ಕೊಡದ್ದೆ, ಧರ್ಮಕ್ಕೆ ಕಿಸೆಲಿ ಮಡಿಕ್ಕೊಂಬಲೆ ಒಂದು ಹೊಸ ಗುರುತು ಚೀಟಿ ಸಿಕ್ಕುಗು ಹೇಳುದಷ್ಟೇ ಭಾರತೀಯರ ಸೌಭಾಗ್ಯ. ದಾರಿಲಿ ಹೋಪವರ ಎಲ್ಲಾ ಹಿಡುದು ನಿಲ್ಲಿಸಿ ಗುರುತು ಚೀಟಿಯ ಹಂಚುವ ಅಭಿಯಾನ ಈಗಾಗಲೇ ಸುರು ಆಗಿರೆಕು. ಹಾಂಗಾರೆ, ಈ ಗುರುತಿನ ಚೀಟಿಯ ಉಪಯೋಗಿಸಿಗೊಂಡು ಬಾಂಗ್ಲಾದೇಶಂದ ಬಂದ ಕೋಟಿಗಟ್ಳೆ ಬ್ಯಾರಿಗೊ ನಿಧಾನಕ್ಕೆ ಭಾರತದ ಪೌರರಪ್ಪಲಕ್ಕು. ಅಲ್ಪ ಸಂಖ್ಯಾತರ ಸಂಖ್ಯೆಯ ಅಧಿಕೃತವಾಗಿ ಹೆಚ್ಚು ಮಾಡ್ಳೆ ಇಪ್ಪ ಸಾವಿರಾರು ಕೋಟಿಯ ಯೋಜನೆ ! ಹೇಂಗಿದ್ದು ?

ಪ್ರಳಯ : ೨೦೧೨ನೇ ಇಸವಿಲಿ ಪ್ರಳಯ ಆವುತ್ತು ಹೇಳಿ ಇತ್ತಿಚೆಗೆ ಒಂದು ಪತ್ರಿಕೆಲಿ ಸುದ್ದಿ ಬಂತು. ಇದರ ಕೇಳಿ ಜನ ಎಂತ ಭಯಂಕರ ತಲೆಬೆಶಿ ಮಾಡಿಗೊಂಡ ಹಾಂಗೆ ಕಾಣ್ತಿಲ್ಲೆ. ಅತ್ಯಂತ ಹೆಚ್ಚು ತಲೆಬೆಶಿ ಮಾಡಿಗೊಳೆಕ್ಕಾದ ಕರಾವಳಿ ಪ್ರದೇಶದ ಜನರಲ್ಲಿ ಹೆಚ್ಚಿನವು ಈಗಾಗಲೇ ಬೆಂಗ್ಳೂರಿಲ್ಯೋ, ಅಮೇರಿಕಲ್ಯೋ ಇಪ್ಪ ಮಕ್ಕಳ ಒಟ್ಟಿಂಗೆ ಬೇಕಾದ ವ್ಯವಸ್ಥೆ ಮಾಡ್ಯೊಂಡಿಕ್ಕು. ಅಂತೂ, ಇದರಿಂದಾಗಿ ಘಟ್ಟದ ಮೇಲೆ ನಿವೇಶನದ ಕ್ರಯ ಏರುದು ಖಂಡಿತ. ಇನ್ನೂ ಹೆಚ್ಚು ಸುರಕ್ಷಿತ ಜೀವನವ ಅಪೇಕ್ಷೆ ಮಾಡುವವು ನಂದಿ ಬೆಟ್ಟದ ಮೇಲೆ ಬಹುಮಹಡಿಯ ಕಟ್ಟೋಣ ಕಟ್ಟಿ, ಅತ್ಯಂತ ಮೇಲಾಣ ಮಾಳಿಗೆಲಿ ವಾಸ ಮಾಡುವ ಕೆಣಿ ಮಾಡ್ಳೂ ಸಾಕು. ಅಂತೂ ಮನುಷ್ಯಂಗೆ ಜೀವಭಯ ಹೇಳುದು ಭಯಂಕರ ದೊಡ್ಡ ಸಂಗತಿ ಅಲ್ಲದಾ ? ಒಟ್ಟಾರೆ, ಇನ್ನು ಮೂರೇ ವರ್ಷ ಇಪ್ಪದು. ಗಮ್ಮತು ಮಾಡುವಷ್ಟು ಮಾಡಿಗೊಂಬಲಕ್ಕು.

- ಬಾಪಿ / ಶನಿವಾರ, ೨೪ ಅಕ್ಟೋಬರ ೨೦೦೯

No comments: