Tuesday, November 24, 2009

ಚೌ ಚೌ - ೦೨

ರಾಹುಲ್ ಉವಾಚ  :  ರಾಹುಲ್ ಗಾಂಧಿಗೆ ಜಾತಿವ್ಯವಸ್ಥೆಲಿ ನಂಬಿಕೆ ಇಲ್ಲೇಡ.  ಇದು ಆಕ್ಸ್ ಫರ್ಡ್  ವಿಶ್ವವಿದ್ಯಾಲಯಲ್ಲಿ ಕಲಿವಿಕೆ ಮಾಡಿದವಂಗೆ ಸಹಜವಾಗಿ ಇರೆಕಾದ ಪ್ರಗತಿಪರ ಚಿಂತನೆ ಮಾಂತ್ರ ಅಲ್ಲ,  ಭಾರತದ ರಾಜಕಾರಣಲ್ಲಿಪ್ಪ  ಢೋಂಗಿ ಜಾತ್ಯತೀತವಾದಿಗಳ ಬಾಯಿಲಿ ಬರಲೇಬೇಕಾದ ಹೇಳಿಕೆ.  ಹಾಂಗಾಗಿ ಮೆಚ್ಚೆಕ್ಕಾದ್ದೇ !   ರಜ ಸಾಮಾನ್ಯ ಜ್ಞಾನ ಇಪ್ಪವುದೇ ಊಹೆ ಮಾಡ್ಳೆಡಿಗಪ್ಪ ವಿಷಯ ಎಂತ ಹೇಳಿರೆ,  ಇವಂಗೆ ಮದುವೆ ಹೇಳಿ ಯಾವಗಾದರೂ ಇದ್ದರೆ,   ಹಿಂದೂ ಅಥವಾ ಬೇರೆ ಯಾವ ಧರ್ಮದ ಹುಡುಗಿಯೂ  ಖಂಡಿತ ಒಪ್ಪಿಗೆ ಆಗ.  ಮದುವೆ ಆವುತ್ತರೆ, ಇವನ ಹಾಂಗೆ  ಹೆರಂದ ಪ್ರಗತಿಪರ ಚಿಂತನೆಯ ತೋರ್ಪಡಿಸಿಗೊಂಡು ಒಳಂದ ಒಳ ಏಸು ಕ್ರಿಸ್ತನ ಭಜನೆ ಮಾಡುವ ತನ್ನ ಇಟೆಲಿಯ ಅಮ್ಮನ ಜಾತಿಯ  ಹುಡುಗಿ (ಮಹಿಳೆ)ಯೇ  ಆಯೆಕ್ಕಕ್ಕು.  ಮದುವೆಯನ್ನೂ ಗುಟ್ಟಿಲ್ಲಿ ಎಲ್ಯಾರೂ ಚರ್ಚಿಲ್ಲಿ ಮಾಡಿಗೊಂಡು ಮಾಧ್ಯಮದವಕ್ಕೆ ಬೇಕಾಗಿ ಒಂದು ಹೋಮದ ಕುಂಡಕ್ಕೆ ಸುತ್ತು ಬಪ್ಪ ನಾಟಕ ಮಾಡುಗು.   ಹೇಂಗೂ ಜಾತಿ ವ್ಯವಸ್ಥೆಲಿಯೇ ನಂಬಿಕೆ  ಇಲ್ಲದ್ದವ ಹೇಳಿ ಆದ ಮೇಲೆ,  ಚರ್ಚಿನ ಪಾದ್ರಿಗೊ ಅಮಾಯಕ ಹಿಂದೂಗಳ ಮತಾಂತರ ಮಾಡ್ತಾ ಇಪ್ಪ ವಿಷಯಲ್ಲಿಯೂ ಇವಂಗೆ ಎಂತ ಚಿಂತೆ ಇರ.  ಮತ್ತೆ, ಬಾಂಗ್ಲಾದೇಶಂದ ಬೇಲಿ ಹಾರಿ ಬಂದ ಮತ್ತು ನಿರಂತರವಾಗಿ ಬತ್ತಾ ಇಪ್ಪ ಕೋಟಿಗಟ್ಳೆ ಬ್ಯಾರಿಗೊ ನಮ್ಮ ದೇಶದ ಭದ್ರತೆಗೆ ಮಾರಕರಾದ ವಲಸಿಗರು ಹೇಳುವ ವಿಷಯವೂ  ಇವಂಗೆ ತುಂಬಾ ದೊಡ್ಡ ಸಮಸ್ಯೆ ಆಗಿ ಹೇಂಗೂ ಕಾಣ.  ಅಂತೂ ನಮ್ಮ ದೇಶದ ಭಾವಿ ಪ್ರಧಾನಿ ಹೇಳಿ ಹೆಸರಿಸಿಗೊಂಡವನ ಚಿಂತನೆ ಮತ್ತು ವರ್ತನೆ ತುಂಬಾ ಸ್ಪೂರ್ತಿದಾಯಕವಾಗಿ ಅಪ್ಪ ಹಾಂಗೆ ಕಾಣ್ತು.  ಇವನ ಕೈಲಿ ನಮ್ಮ ಯುವಪೀಳಿಗೆಯ ಭವಿಷ್ಯ  ಖಂಡಿತವಾಗಿ ಸುರಕ್ಷಿತ -  ಜಾತಿಪದ್ಧತಿಲಿ ನಂಬಿಕೆ ಇಲ್ಲದ್ದವು ಆಗಿದ್ದರೆ ಮಾತ್ರ !  ಇನ್ನೂ ಕೆಲವು  ಕೋಟಿ ಹಿಂದೂಗಳ ಹಿಡುದು ಮತಾಂತರ ಮಾಡಿಸಿಗೊಂಬಲಕ್ಕು  ಹೇಳುವ ಆಶೆಲಿ, ಇಟೆಲಿಯ ಪೋಪ್  ಇವ ಪ್ರಧಾನಿ ಕುರ್ಚಿಲಿ ಕೂಪದರನ್ನೇ ಕಾದುಗೊಂಡಿಕ್ಕು.

ಹೊಣೆಗಾರಿಕೆ : ಕೊಳಕ್ಕುತನಕ್ಕೆ ಎಂತಾರೂ ನೋಬೆಲ್  ಪ್ರಶಸ್ತಿ ಹೇಳಿ ಇತ್ತಿದ್ದರೆ, ಅದು  ಖಂಡಿತ ಭಾರತಕ್ಕೆ ಸಿಕ್ಕುತ್ತೀತು  ಹೇಳುವ  ಹೇಳಿಕೆ ಕೊಟ್ಟು ಕೇಂದ್ರ ಸರಕಾರದ ಮಂತ್ರಿ ಜೈರಾಮ್  ರಮೇಶ್  ಹೇಳುವವ ಇತ್ತೀಚೆಗೆ ರಜ ಶುದ್ದಿ ಮಾಡಿದ.   ಹೀಂಗಿಪ್ಪ ಹೇಳಿಕೆ ಕೊಡೆಕಾರೆ,  ಒಂದು ಜವಾಬ್ದಾರಿ ಸ್ಥಾನಲ್ಲಿ ಇಪ್ಪವಂಗೆ ನಿಜವಾಗಿ  ತುಂಬಾ ಧೈರ್ಯ ಬೇಕು.  ಆದರೆ, ಸಮಸ್ಯೆ ಎಂತ ಹೇಳಿರೆ ಇದು ಆತ್ಮ ನಿವೇದನೆಯೋ, ಹತಾಶೆಯೋ, ಅಸಹಾಯಕತೆಯೋ, ಪ್ರಚಾರಪ್ರಿಯತೆಯೋ, ಹುಂಬತನವೋ ಹೇಳಿ ಅರ್ಥ ಆಗದ್ದ ಹಾಂಗಿಪ್ಪ ಹೇಳಿಕೆಯಾಗಿ ಹೋತು !  ಭಾರತೀಯರ ಕೊಳಕ್ಕುತನ ಎಷ್ಟಾದರೂ ಜಗತ್ಪ್ರಸಿಧ್ಧ ವಿಷಯ. ಆದರೆ, ಇದರ ನಿವಾರಣೆಗೆ ಸರಕಾರ -  ಅದರಲ್ಲೂ ಸುಮಾರು ೫೦ ವರ್ಷ ರಾಜ್ಯಭಾರ ಮಾಡಿದ ಕೋಂಗ್ರೇಸು ಸರಕಾರ - ಏಕೆ ಎಂತದೂ ಕ್ರಮ ಕೈಗೊಂಡಿದಿಲ್ಲೆ  ಹೇಳುವ ಚೋದ್ಯಕ್ಕೆ  ಇವನತ್ರೆ ಎಂತಾರೂ ಸಮಾಧಾನಕರ ಉತ್ತರ ಇದ್ದಾಡವೋ ಹೇಳಿ ದೇವರೇ ಬಲ್ಲ.   ಇದಕ್ಕೆಲ್ಲಾ  ಯಾರು ಹೊಣೆ ಹೇಳಿ ಕೇಳುವಷ್ಟು ದೇಶಪ್ರೇಮ ಯಾವ ಮಾಧ್ಯಮದವರತ್ರುದೇ ಇಪ್ಪ ಹಾಂಗೆ ಕಾಣ್ತಿಲ್ಲೆ.  ಯಾಕೆ ಹೇಳಿರೆ ಅವರ ಶಕ್ತಿ ಎಲ್ಲ ಆರೆಸ್ಸೆಸ್, ಭಾಜಪ, ಶಿವಸೇನೆಗಳ  ಹುಳುಕುಗಳ ದುರ್ಬೀನು ಹಿಡುದು ಹುಡುಕ್ಕುದರಲ್ಲೇ  (ಅಪ)ವ್ಯಯ ಆವುತ್ತು.

ಭಿತ್ತಿ ಚಿತ್ರ : ಬೆಂಗ್ಳೂರು ಪೇಟೆಲಿ ಸರಕಾರೀ ಸ್ವಾಮ್ಯದ ಸಾರ್ವಜನಿಕ  ಗೋಡೆಗಳ ಸಂಪೂರ್ಣ ಕಾಯಕಲ್ಪ ಆಯಿದು.  ಈ ಗೋಡೆಗಳಲ್ಲಿತ್ತ ಸಿನೆಮಾದ ಜಾಹೀರಾತು ಚೀಟಿಗೊ, ರಾಜಕೀಯ ಪ್ರಕಟಣೆಗೊ ಇತ್ಯಾದಿ ಎಲ್ಲಾ ಮಾಯ ಆಯಿದು.  ಅದರ ಜಾಗೆಲಿ, ಕರ್ನಾಟಕದ ಪ್ರವಾಸೀ ಕೇಂದ್ರಂಗಳ ಸುಂದರ ವರ್ಣಚಿತ್ರಂಗಳ ಬರೆಶಿದ್ದವು.   ಇದು ಭರತ್ ಲಾಲ್  ಮೀನಾ ಹೇಳುವ ನಗರಪಾಲಿಕೆಯ ಆಯುಕ್ತನ ಚಿಂತನೆಯ ಮತ್ತು ಪ್ರಯತ್ನದ ಫಲ.   ನಿಜವಾಗಿಯೂ ನಂಬಲಸಾಧ್ಯವಾದ ಬದಲಾವಣೆಯೇ  ಸರಿ.  ಮೇಲೆ ಪ್ರಸ್ತಾಪಿಸಿದ ಕೊಳಕ್ಕುತನದ ನಿವಾರಣೆಗೆ ಒಂದು ಪ್ರಾಮಾಣಿಕ ಪ್ರಯತ್ನ.    ಈ ವಿಷಯಲ್ಲಿ ಚಲನಚಿತ್ರ ವಾಣಿಜ್ಯ ಮಂಡಲಿಯವು  ದೊಡ್ಡ ಗಲಾಟೆ ಮಾಡಿದವು.  ಇಷ್ಟರವರೆಗೆ  ಚೀಟಿ ಅಂಟುಸುಲೆ  ಧರ್ಮಕ್ಕೆ ಸಿಕ್ಕಿಗೊಂಡಿತ್ತ  ಇವರ ಪಿತ್ರಾರ್ಜಿತ ದರ್ಖಾಸ್ತಿನ ಸರಕಾರದವು ಆಕ್ರಮಣ ಮಾಡಿದವು  ಹೇಳಿ ಅವರ ಗೋಳು.  ಇಚ್ಛಾ ಶಕ್ತಿ ಇದ್ದರೆ ಎಲ್ಲಾ ಸಮಸ್ಯೆಗೊಕ್ಕೂ ಪರಿಹಾರ ಇದ್ದು ಹೇಳುದರ ಸಾಧಿಸಿ ತೋರಿಸಿದ  ನಗರಪಾಲಿಕೆಯ ಈ ಅಪರೂಪದ ಅಧಿಕಾರಿಗೆ  ಅಭಿನಂದನೆಯ ಪದಗುಚ್ಛದ ನಮನ.

- ಬಾಪಿ/  ೨೪ ನವೆಂಬ್ರ, ೨೦೦೯

No comments: