Monday, August 3, 2009

ಧನಾತ್ಮಕ ಚಿಂತನೆ

ಮನಸ್ಸಿನ ಯಾವಾಗಲೂ ಧನಾತ್ಮಕವಾಗಿ ಯೋಚಿಸುವ ಹಾಂಗೆ ಅಭ್ಯಾಸ ಮಾಡಿಗೊಂಡಿದ್ದರೆ, ಚಿಂತೆ ಕಮ್ಮಿ ಆಗಿ, ಆರೋಗ್ಯ ವೃದ್ಧಿ ಆಗಿ, ಆಯುಷ್ಯ ಹೆಚ್ಚಾವುತ್ತು ಹೇಳಿ ಆಯುರ್ವೇದ ಹೇಳ್ತು.  ಭಾರತೀಯರಿಂಗೆ ಸಾವಿರಾರು ವರ್ಷ ಮೊದಲೇ ಗೊಂತಿತ್ತ  ಈ ವಿಷಯವ ಡೇಲ್ ಕಾರ್ನೆಗೀ ಹಾಂಗಿಪ್ಪವು  ತಮ್ಮ ಜೀವನಪೂರ್ತಿ ಬೋಧಿಸಿ ಮಿಲಿಯಗಟ್ಟಲೆ ಡಾಲರು ಸಂಪಾದಿಸಿದವು.   ಭಾರತ ದೇಶಲ್ಲಿ ಇಂದು ಧನಾತ್ಮಕ ಚಿಂತನೆ ಮತ್ತು  ಆಶಾವಾದ ಇಲ್ಲದ್ರೆ, ಯಾರೂ ಬದುಕ್ಕಿ ಒಳಿವಲೆ ಸಾಧ್ಯವೇ ಇತ್ತಿಲ್ಲೆ.  ಇದು ನಮ್ಮ ನೈಸರ್ಗಿಕ ಸಂಪತ್ತು ಹೇಳಿಯೂ ಹೇಳ್ಳಕ್ಕು ! ಬಡತನ, ನಿರುದ್ಯೋಗ, ಅನಕ್ಷರತೆ, ಹಸಿವು, ಬೆಶಿಲಿನ ತಾಪ, ವಿದ್ಯುತ್  ಕ್ಷಾಮ, ಒಂದೋ ನೆರೆ ಅಥವಾ ಬರಗಾಲ, ಭೂಕಂಪ, ಕೊಳೆರೋಗ, ಹೊಂಡ ಬಿದ್ದ ಮಾರ್ಗಂಗೊ, ಸಂಕ ಇಲ್ಲದ್ದ ತೋಡುಗೊ, ನುಸಿಯ ಉಪದ್ರ  ಇತ್ಯಾದಿಯಾಗಿ  ನಾಗರಿಕ ಸಮಾಜಲ್ಲಿ ಮನುಷ್ಯರಾಗಿ ಬದುಕ್ಕುಲೆ ಭರವಸೆ ಮೂಡಿಸುವ  ಒಂದೇ ಒಂದು ಒಳ್ಳೆಯ ಅಂಶ ಇಲ್ಲಿ ಇಲ್ಲದ್ರೂ ಪ್ರತಿವರ್ಷ ಜನಸಂಖ್ಯೆ ಹೆಚ್ಚಾಯ್ಕೊಂಡೇ  ಹೋದ್ದಲ್ಲದ್ದೆ ಕಮ್ಮಿ ಆಯಿದಿಲ್ಲೆ ! ವೈರಾಗ್ಯದ ಸೋಂಕೇ  ತಟ್ಟದ್ದ, ಅತಿಯಾದ ಜೀವನೋತ್ಸಾಹ ಇಲ್ಲದ್ರೆ ಇದು ಹೇಂಗೆ ಸಾಧ್ಯ ? ಬುದ್ಧಿವಂತಿಕೆಯ ಒಟ್ಟಿಂಗೇ,  ಕಷ್ಟವ ಎದುರಿಸುವ ಧೈರ್ಯ, ಮುಂದಿನ ತಲೆಮಾರಿಂಗಾಗಿ ತಮ್ಮ ಸ್ವಂತ ಜೀವಿತ ಸಮಯಲ್ಲಿ ಮಾಡುವ ತ್ಯಾಗ, ಇಪ್ಪದರಲ್ಲೇ ರಜ ಆದರೂ ಉಳಿತಾಯ ಮಾಡುವ ದೂರದೃಷ್ಟಿ, ತಮ್ಮ ಹೊಟ್ಟೆ ಖಾಲಿ ಇದ್ದರೂ ಮನೆಗೆ ಬಂದ ನೆಂಟರ ಸತ್ಕರಿಸುವ ಉದಾರಗುಣ,  ಕುಟುಂಬದ ಮೇಲಾಣ ಬದ್ಧತೆ, ದೈವಭಕ್ತಿ - ಹೀಂಗಿಪ್ಪ ಹಲವಾರು ಸದ್ಗುಣಂಗಳಿಂದಾಗಿ  ನಮ್ಮ ದೇಶದವಕ್ಕೆ ಸ್ವಾಭಾವಿಕವಾಗಿ ಕಷ್ಟಂಗಳ ಎದುರಿಸಿ, ಗೆಲ್ಲುವ ಶಕ್ತಿ ಹೆಚ್ಚು ಇದ್ದು.  ಹಾಂಗಾಗಿಯೇ ನಮ್ಮವಕ್ಕೆ ಬೇರೆ ಯಾವ ದೇಶಕ್ಕೆ  ಹೋದರೂ ಬೇರೆಯವರಿಂದ ಸುಲಭಲ್ಲಿ ಉದ್ಧಾರ ಅಪ್ಪಲೆ ಎಡಿವದು.  ಎರಡನೇ ಕ್ಲಾಸಿನವಂಗೆ ಒಂದನೇ ಕ್ಲಾಸಿನ ಪರೀಕ್ಷೆ  ಬರವಲೆ ಸುಲಭ ಆವುತ್ತಿಲ್ಯಾ, ಹಾಂಗೇ !  ನಮ್ಮ ದೇಶಲ್ಲಿ ಆರಾದರೂ ರೈತಂಗೊ  ಆತ್ಮಹತ್ಯೆ ಮಾಡಿಗೊಂಡರೆ, ಅದು ಸಾಲ ಮಾಡಿ ತೀರುಸಲೆಡಿಯದ್ದ  ಪಾಪಪ್ರಜ್ಞೆಂದಲೇ ಹೊರತು, ಕಷ್ಟ ಸಹಿಸುಲೆ ಎಡಿಯದ್ದೆ ಅಲ್ಲ.   ಎಷ್ಟೋ ಜನ ಬಹುರಾಷ್ಟ್ರೀಯ ಕಂಪೆನಿಗಳ ವಿದೇಶೀ ಪ್ರಬಂಧಕರು ತಮ್ಮ ತಾಳ್ಮೆಯ ಇನ್ನೂ ಜಾಸ್ತಿ ಮಾಡಿಗೊಂಬಲೆ ಭಾರತಕ್ಕೆ ತಾತ್ಕಾಲಿಕ ವರ್ಗಾವಣೆ ಕೇಳ್ತವಡ ! ಇಲ್ಲಿಯ ವಿಪರೀತ  ಹವೆ, ವಾಹನ ದಟ್ಟಣೆ, ದೂರವಾಣಿ ಸಮಸ್ಯೆ, ಕಾರ್ಮಿಕರ ಹರತಾಳ ಇತ್ಯಾದಿಗಳ ನಡುವೆಯೂ ಉತ್ಪಾದನೆ ಮಾಡಿ, ಕಂಪೆನಿಗೆ  ಲಾಭ ಗಳಿಸುವ ಕೆಲಸ ಹೇಳಿರೆ ದೊಡ್ಡ ಪಂಥಾಹ್ವಾನವೇ ಸರಿ.        

ಗುಡ್ಡೆಯ ಮೇಲಿಪ್ಪ ಒಂದು ಕಾಟು ಮಾವಿನ ಮರ  ಯಾವುದೇ ಗೊಬ್ಬರ, ನೀರು ಇತ್ಯಾದಿಗಳ ಪೋಷಣೆ ಇಲ್ಲದ್ದೆ, ಎಲ್ಲಾ ಪ್ರಕೃತಿ ವಿಕೋಪಂಗಳನ್ನೂ ಸಹಿಸಿಗೊಂಡು ರುಚಿಯಾದ ಫಲ ಕೊಡುವ  ತ್ಯಾಗ ಜೀವನಲ್ಲಿಯೇ ಧನ್ಯತೆ ಕಾಣ್ತು.    ಅದೇ ಯಾವುದಾದರೂ ಹಣ್ಣಿನ ಕೃಷಿ ಮಾಡುವವನ ತೋಟಲ್ಲಿಪ್ಪ ಮಾವಿನ ಮರಕ್ಕೆ ಬೇಕಾದ ಹಾಂಗೆ ನೀರಿನ ವ್ಯವಸ್ಥೆ, ರಸಗೊಬ್ಬರ, ಕೀಟನಾಶಕದ ಸಿಂಚನ ಇತ್ಯಾದಿಗಳ  ಸರ್ವ ಸೌಕರ್ಯವೂ ಸಿಕ್ಕುತ್ತು.   ನಮ್ಮ ದೇಶದವಕ್ಕೂ ಮುಂದುವರಿದ ದೇಶದವಕ್ಕೂ ಇಪ್ಪ ವ್ಯತ್ಯಾಸ ಇಷ್ಟೇ.  ನಮ್ಮ ಇಪ್ಪ ಶಕ್ತಿ ಎಲ್ಲಾ -  ಕಾಟು ಮಾವಿನ ಮರದ ಹಾಂಗೆ - ಉಸುಲು ಹಿಡುಕ್ಕೊಂಡು ಬದುಕ್ಕಿ ಉಳಿಯುವ ಸಂಘರ್ಷಲ್ಲಿಯೇ ವ್ಯಯ ಆವುತ್ತು.  ಬೇರೆ ದೇಶದವರ ಶಕ್ತಿ ಅಪವ್ಯಯ ಆಗದ್ದೆ, ಸರಿಯಾದ ಉದ್ದೇಶಕ್ಕೆ ಬಳಕೆ ಆವುತ್ತು.  ಹಾಂಗಾಗಿ, ಅವರಲ್ಲಿ ಉತ್ಪಾದನಾ ಕ್ಷಮತೆ ಹೆಚ್ಚು.   ಆದರೆ, ಸಣ್ಣ ಕಷ್ಟ ಬಂದರೂ ಅವು (ಕಶಿ ಮಾವಿನ ಮರಂಗಳ ಹಾಂಗೆ) ಜರ್ಜರಿಸಿ ಕಂಗಾಲಾಗಿ ಹೋಪ ಸಾಧ್ಯತೆ ಹೆಚ್ಚು.

ಬೇರೆಯವು ನಮ್ಮ ಟೀಕೆ ಮಾಡಿರೆ ನವಗೆ ಕೋಪ ಬಪ್ಪದು ಸಹಜ.  ಹಾಂಗಾರೆ, ನಮ್ಮ ನಾವೇ ವಿಮರ್ಶೆ ಮಾಡಿಗೊಂಬ ಕ್ರಮವ ಬೆಳೆಶಿಗೊಂಬದು ಸೂಕ್ತ.   ಬುದ್ಧಿಶಕ್ತಿಲಿ ಭಾರತೀಯರು ಯಾರಿಂಗೂ ಕಮ್ಮಿ ಇಲ್ಲದ್ದ ಕಾರಣ, ನಮ್ಮ ದೌರ್ಬಲ್ಯಂಗಳ ಗುರುತಿಸಿ, ಸರಿಪಡಿಸಿಗೊಂಡು  ಮುಂದುವರಿಯುವ ಪ್ರಯತ್ನ ತ್ವರಿತವಾಗಿ ಆಯೆಕ್ಕಾಯಿದು.  ಇಲ್ಲದ್ರೆ,  ಕಾಟು ಮಾವಿನ ಮರದ ಹಾಂಗೆ  ಸಾಧಾರಣ  ಬೆಳವಣಿಗೆ ಮಾಂತ್ರ ಸಾಧ್ಯ ಇದ್ದಷ್ಟೆ.   ನಮ್ಮ  ಪ್ರತಿಭೆಗೆ ಅನುಗುಣವಾದ ಪ್ರಗತಿ  ಆಯೆಕ್ಕಾದರೆ, ನಮ್ಮ ಒಟ್ಟಾರೆ ಧೋರಣೆಲಿ ಬದಲಾವಣೆಯ ಅಗತ್ಯ ಇದ್ದು.  ದೇಶದ ಎಲ್ಲಾ ಪ್ರಜೆಗಳ ಪ್ರಶ್ನಾತೀತವಾದ ರಾಷ್ಟ್ರೀಯ ಬದ್ಧತೆ, ದೇಶಾಭಿಮಾನ ಇಲ್ಲದ್ದೆ ಯಾವ ದೇಶವೂ ಉದ್ಧಾರ ಆದ ಉದಾಹರಣೆ ಇಲ್ಲೆ.  ಎಲ್ಲಕ್ಕಿಂತ ಹೆಚ್ಚಾಗಿ, ನಮ್ಮ ರಾಜಕೀಯ ನಾಯಕತ್ವದ ಗುಣಮಟ್ಟ ಗಣನೀಯವಾಗಿ ಸುಧಾರಣೆ ಆಯೆಕ್ಕು.   ಈ ಸರ್ತಿಯ ಸಂಸತ್ತಿನ  ಚುನಾವಣೆಲಿ ಅತಿ ಹೆಚ್ಚು ಯುವ ಸಂಸದರು ಆಯ್ಕೆ ಆಗಿ ಬೈಂದವು  ಹೇಳುವ ಶುಭ ಶುದ್ದಿಯ ಈ ಮೊದಲೇ ಒಂದರಿ ಬರದ ನೆಂಪು. ಸದ್ಯಕ್ಕೆ, ಇದುವೇ ನಮ್ಮ ದೇಶದ ಮಟ್ಟಿಂಗೆ ದೊಡ್ಡ ಧನಾತ್ಮಕ ಸಂಗತಿ.   

- ಬಾಪಿ /  ೦೩.೦೮.೨೦೦೯

1 comment:

Rajesh said...

ನೀನು ಬರದ ಈ ಲೇಖನ ಧನಾತ್ಮಕ ಚಿಂತನೆಗೆ ಒಂದು ಉದಾಹರಣೆ. ಲಾಯಿಕಾಯಿದು.