Thursday, August 13, 2009

ನಮ್ಮ ಸಮಸ್ಯೆಗೊ-೨

 (...ಮುಂದುವರುದ್ದು)..

ಕಾಶ್ಮೀರ :  ಈ ಸಮಸ್ಯೆಯುದೇ  ನವಗೆ ಬ್ರಿಟಿಷರು ಕೊಟ್ಟ ಬಳುವಳಿ.   ಸ್ವಾತಂತ್ರ್ಯದ ಆಮಿಷಲ್ಲಿ  ಭಾರತ-ಪಾಕಿಸ್ತಾನಂಗಳ ಸೃಷ್ಟಿ ಮಾಡಿ ಇಬ್ಬರ ಮಧ್ಯೆ ಒಂದು ಎಡೆಬಿಡಂಗಿ ಕಾಶ್ಮೀರವನ್ನೂ ಮಡುಗಿದವು.  ಈ ವಿಷಯಕ್ಕೆ ಬೇಕಾಗಿ ಈಗಾಗಲೇ ೨ ಸರ್ತಿ ಭಾರತಕ್ಕೂ ಪಾಕಿಸ್ತಾನಕ್ಕೂ ಯುದ್ಧವೂ ಆಯಿದು.  ಯುದ್ಧಂಗಳಲ್ಲಿ ಭಾರತಕ್ಕೆ ಜಯ ಸಿಕ್ಕಿದರೂ ಸಮಸ್ಯೆ ಮಾಂತ್ರ ಬಗೆಹರಿದ್ದಿಲ್ಲೆ.  ಬದಲಾಗಿ, ಇನ್ನೂ ಜಟಿಲ ಆವುತ್ತಾ ಇದ್ದು.   ಎರಡೂ ದೇಶಂಗಳಲ್ಲಿ ರಾಜಕೀಯ ಪ್ರಬುದ್ಧತೆ  ಇಲ್ಲದ್ದದೇ ಇದು ಇಷ್ಟು ಮುಂದುವರಿವಲೆ ಕಾರಣ.  ಎರಡು ಕಡೆಯವುದೇ ರಜ ಹೊಸ ದೃಷ್ಟಿಕೋಣಂದ ಯೋಚನೆ ಮಾಡಿರೆ,  "ನಿಂಗೊ ಇಬ್ರೂ  ಯಾವಾಗಳೂ ಕಚ್ಚಾಡಿಗೊಂಡು ಇರೆಕು, ಉದ್ಧಾರ ಆಪ್ಪಲಾಗ"  ಹೇಳುವ ಬ್ರಿಟಿಶರ ಕನಸಿನ ಭಗ್ನ ಮಾಡ್ಳೆ  ಕಷ್ಟ ಇಲ್ಲೆ. 

ಯಾರೋ ಸ್ವಾಭಿಮಾನ ಹೀನರು  ಕಾಶ್ಮೀರಕ್ಕೆ ಭಾರತದ ಸ್ವಿಝರ್ಲ್ಯಾಂಡ್ ಹೇಳುವ ಹೆಸರಿನ ಒಪ್ಪಿಗೊಂಡಿದವು.   ಉತ್ಕಟ ದೇಶಾಭಿಮಾನ ಇಪ್ಪ ನಮ್ಮ ಹಾಂಗಿಪ್ಪವು ಇದರ ಪ್ರತಿಭಟಿಸಿ,  ಸ್ವಿಝರ್ಲ್ಯಾಂಡಿಂಗೆ ಯುರೋಪಿನ ಕಾಶ್ಮೀರ ಹೇಳಿ ಹೆಸರು ಮಡಿಗಿ ಸೇಡು ತೀರಿಸಿಗೊಂಬಲಕ್ಕು.    ಮೇಲ್ನೋಟಕ್ಕೆ, ಇದು ನಾ ಮೇಲು ತಾ ಮೇಲು ಹೇಳುವ ಮಕ್ಕಳಾಟಿಕೆಯ ವಾದದ ಹಾಂಗೆ ಕಂಡರೂ ಇದಲ್ಲಿ ಒಂದು ಬಹು ಮುಖ್ಯವಾದ ತತ್ವ ಇದ್ದು.    ಸ್ವಿಝರ್ಲ್ಯಾಂಡಿನ ಹಾಂಗಿಪ್ಪ ಸಣ್ಣ ದೇಶದ ಪೂರ್ತಿ ಅರ್ಥವ್ಯವಸ್ಥೆಯೇ ಹೊರದೇಶದ ಪ್ರವಾಸಿಗಳ ಮೇಲೆ ಆಧರಿಸಿಪ್ಪದು.  ಹೇಳಿರೆ, ಕಾಶ್ಮೀರಕ್ಕುದೇ ಈ ದಿಕ್ಕಿಲ್ಲಿ ಬೆಳವಲೆ ಅಷ್ಟೇ ಅವಕಾಶ ಇದ್ದು ಹೇಳುವ ತಾತ್ಪರ್ಯ.   ಇದಕ್ಕಿಪ್ಪ ಸದ್ಯದ ಮೊದಲನೇ ತೊಡಕು ಹೇಳಿರೆ,  ಭಯೋತ್ಪಾದಕರ  ಉಪದ್ರ.

ಜಗತ್ತಿಲ್ಲಿ ಎಲ್ಲಿಯೇ ನೋಡಿದರೂ ಶಾಂತಿ, ನೆಮ್ಮದಿಯ ಲಗಾಡಿ ಕೊಡ್ಳೆ ನೋಡುವ ಜನಂಗಳ ಸಂಖ್ಯೆ ಯಾವಾಗಳೂ ಭಾರೀ ಸಣ್ಣ ಪ್ರಮಾಣದ್ದು.   ಸಣ್ಣ ಸಂಖ್ಯೆಲಿಪ್ಪ ಈ ಜನಂಗೊ  ಬೇರೆಯವರ ಕೊಂದೋ, ಹೆದರಿಸಿಯೋ ತಮ್ಮ ದಾರಿಯ ಸುಗಮ ಮಾಡಿಗೊಂಬದು. ಅಂಬಗ, ಬಹುಸಂಖ್ಯಾತ ಶಾಂತಿಪ್ರಿಯರ  ಇಚ್ಚಾಶಕ್ತಿಯ ಕ್ರೋಢೀಕರಿಸಿದರೆ, ಅವರಲ್ಲಿ ಆಶಾವಾದದ ಹುರುಪು ತುಂಬಿದರೆ, ಅಲ್ಪ ಸಂಖ್ಯೆಲಿಪ್ಪ ಶಾಂತಿಭಂಗ ಮಾಡುವವರ  ಬಗ್ಗು ಬಡಿವಲೆ ಕಷ್ಟ ಇಲ್ಲೆ.  ಇವರೊಟ್ಟಿಂಗೆ, ಸಮಾಜಲ್ಲಿ ಮಟ್ಟ ಹಾಕೆಕ್ಕಾದ ಇನ್ನೊಂದು ವರ್ಗವೂ  ಇದ್ದು -  ಅವು ಆರು  ಹೇಳಿರೆ, ಸ್ವತಃ  ಉಗ್ರವಾದದ ದಾರಿ ಹಿಡಿಯದ್ದರುದೇ  ಆ ಕೆಲಸ ಮಾಡುವವರ ಬಗ್ಗೆ ಅನುಕಂಪ ಇದ್ದುಗೊಂಡು ಅವರ ಸಾಂಕುವವು.  ಇತ್ತೀಚೆಗೆ ಉಪ್ಪಳಲ್ಲಿ ಹುಗ್ಗಿ ಕೂದುಗೊಂಡಿತ್ತ ಉಗ್ರವಾದಿಯ ಪೋಲೀಸಿನವು ಹಿಡಿದು ತಪ್ಪಗ, ಆ ಊರಿನ ಅದೇ ಕೋಮಿನ ಕೆಲವು ಜನ ಆದಷ್ಟು ಉಪದ್ರ ಕೊಟ್ಟು ಆ ವ್ಯಕ್ತಿ ತಪ್ಪಿಸಿಗೊಂಡು ಹೋಪಲೆ ಸಹಾಯ ಅಪ್ಪ ಹಾಂಗೆ ವಿಫಲ ಪ್ರಯತ್ನ ಮಾಡಿದ್ದದು ನವಗೆ ನೆಂಪಿಕ್ಕು.   ಇದುದೇ ಕೇವಲ ಸಣ್ಣ ವಿಷಯ ಅಲ್ಲ.   ಹಾಂಗಾಗಿ, ಇವರನ್ನೂ ಉಪೇಕ್ಷೆ  ಮಾಡ್ಳೆ ಸಾಧ್ಯ ಇಲ್ಲೆ      

ಕಾಶ್ಮೀರದ ಸಮಗ್ರ ಬೆಳವಣಿಗೆಯೇ ಅಲ್ಯಾಣ ಸಮಸ್ಯೆಗೆ ಪರಿಹಾರ ಹೇಳಿ ಎನಗೆ ಕಾಣ್ತು. ಸಮಾಜದ ಬೆಳವಣಿಗೆ ಆಗಿ, ಉದ್ಯೋಗಂಗೊ ಸೃಷ್ಟಿ ಆಗಿ ಅರ್ಥ ವ್ಯವಸ್ಥೆ ಸುಧಾರಣೆ ಆದರೆ,  ಭಯೋತ್ಪಾದಕರು ಮೂಲೆಗುಂಪಾವುತ್ತವು.  ಅಂಬಗ ಮುಖ್ಯವಾಹಿನಿಲಿಪ್ಪವು ಸಮಾಜಲ್ಲಿ ಶಾಂತಿ ಕದಡುವ, ತಮ್ಮ ಸುಭದ್ರ ಜೀವನಕ್ಕೆ ಕಲ್ಲು ಹಾಕುವ ಯಾವ  ಪ್ರಯತ್ನಕ್ಕೂ ಸೊಪ್ಪು ಹಾಕುತ್ತವಿಲ್ಲೆ.  ಅದೇ, ಸಮಾಜಲ್ಲಿ ಕಡುಬಡತನ ಇದ್ದು ಯಾವುದೇ ಸೌಲಭ್ಯ ಇಲ್ಲದ್ದ ಪರಿಸ್ಥಿತಿ ಇದ್ದರೆ, ಸರಕಾರದ ವಿರುದ್ಧ ಜನರಲ್ಲಿ ಇಪ್ಪ ಅಸಮಾಧಾನವ ದುರುಪಯೋಗ ಪಡಿಸಿಗೊಂಬಲೆ ಉಗ್ರವಾದಿಗೊಕ್ಕೆ ಸುಲಭ ಆವುತ್ತು ಹೇಳಿ ಎನ್ನ ಅಭಿಪ್ರಾಯ.

ಭಾರತ ದೇಶದ ಈ ವರ್ಷದ ರಕ್ಷಣಾ ಇಲಾಖೆಯ ಖರ್ಚಿಂಗೆ  ಅನುದಾನ ೧೪೦೦೦೦ ಕೋಟಿ ರುಪಾಯಿ ! ಪಾಕಿಸ್ತಾನಲ್ಲಿ ತಿಂಬಲೆ ಗೆತಿ ಇಲ್ಲದ್ರೂ, ಇದರ ಅರ್ಧದಷ್ಟದರೂ ರಕ್ಷಣಾ ಸಾಮಾಗ್ರಿಗಳ ಖರೀದಿಗೆ ಖರ್ಚು ಮಾಡುಗು.  ಹೇಳಿರೆ, ಎರಡೂ ದೇಶದವು ಸೇರಿ ಯಾವಾಗಳೋ ೫೦ ವರ್ಷಕ್ಕೊಂದರಿ ಮಾಡುವ ಸಾಧ್ಯತೆ ಇಪ್ಪ ಯುದ್ಧಕ್ಕಾಗಿ  ಸುಮಾರು ೨೦೦೦೦೦ ಕೋಟಿ ರುಪಾಯಿ  ನಿರಂತರ ಖರ್ಚು ಮಾಡ್ತಾ ಇದ್ದವು.   ಅಲ್ಲಿಗೆ, ಭಾರತ-ಪಾಕಿಸ್ತಾನ ಸೇರಿ  ಸುಮಾರು ೪೦ ಬಿಲಿಯ ಡಾಲರಿನಷ್ಟು ನಮ್ಮ ಅಮೂಲ್ಯ ಸಂಪತ್ತಿನ  ಪಾಶ್ಚಾತ್ಯರಿಂಗೆ ವರ್ಷಂಪ್ರತಿ ದಾನ ಮಾಡಿದ ಹಾಂಗಾತು.  ಭಾರತ-ಪಾಕಿಸ್ತಾನಂಗಳ  ವಿಭಜಿಸಿದ ಕುತಂತ್ರದ ಮೂಲ ಉದ್ದೇಶ ಇದೇ.  ಇದರ ಅರ್ಥ ಮಾಡಿಗೊಂಬಲೆ ಪ್ರಬುದ್ಧತೆ ಬೇಕು.  ಕೌರವ-ಪಾಂಡವರ ಹಾಂಗಿಪ್ಪ ಬದ್ಧ ವೈರಿಗಳೂ ಈ ವಿಷಯವ ಅರ್ಥ ಮಾಡಿಗೊಂಡಿತ್ತಿದ್ದವು ಹೇಳುದು ಗಮನಿಸೆಕ್ಕಾದ ಸಂಗತಿ. ನಮ್ಮ ನಮ್ಮೊಳವೇ ಆದರೆ, ಎಂಗೊ ೧೦೦ ಜನ, ನಿಂಗೊ ೫  ಜನ.  ಆದರೆ ಹೆರಾಣವು ಬಂದರೆ, ನಾವು ೧೦೫ ಜನ ಹೇಳುವ ಸಾಂಘಿಕ ಸ್ಪೂರ್ತಿ ಅವರತ್ರೆ ಇತ್ತದು ಪುರಾಣದ ಕಥೆಲಿ ಓದಿದ ನೆಂಪು.

ಭಾರತದ ಆರ್ಥಿಕ ಪ್ರಗತಿಯ ನೋಡಿ  ಪಾಕಿಸ್ತಾನದವಕ್ಕೆ ಅಸೂಯೆ ಆವುತ್ತಾ ಇಕ್ಕು.  ಅಲ್ಲಿ  ಮುಖ್ಯ ವಾಹಿನಿಲಿಪ್ಪವಕ್ಕೆ ತಮ್ಮ ಗಡಿಂದ ಇತ್ಲಾಗಿ  ಇಪ್ಪ ಸಂಬಂಧಿಕರ ಕಾಂಬಲೆ ಅತಿಯಾದ ಕಾತರತೆ ಇಕ್ಕು. ನೆರೆಕರೆಯ ಸಂಬಂಧ ಒಳ್ಳೆದಿರೆಕು ಹೇಳುವ ತೀವ್ರ ಆಶೆ ಇಕ್ಕು.   ಸಂಬಂಧ ಸುಧಾರಿಸಿದರೆ ತಮ್ಮ ಉದ್ದೇಶ ಹಾಳಪ್ಪ ಕಾರಣ, ಭಾರತ-ಪಾಕಿಸ್ತಾನಂಗೊ ಹೇಂಗಾರು ಯುದ್ಧದ ಹಾದಿ ಹಿಡಿವ ಹಾಂಗೆ ಮಾಡಿ, ಯುದ್ಧಾನಂತರದ ಕುರುಕ್ಷೇತ್ರಲ್ಲಿ ತಮ್ಮ ಕಾರುಬಾರು ಮಾಡುವ ಉಗ್ರಗಾಮಿ ಗುಂಪುಗಳ ಯೋಜನೆ ಸಫಲ ಆಗದ್ದ ಹಾಂಗೆ ನೋಡಿಗೊಳೆಕ್ಕಾದ್ದು ಅತಿ ಮುಖ್ಯ.  ರಾಜಕೀಯ, ಸಾಮಾಜಿಕ ಮತ್ತು ಆರ್ಥಿಕ ದೃಷ್ಟಿಕೋಣಂಗಳಲ್ಲಿ ಅಷ್ಟು ವ್ಯತ್ಯಾಸದ ಧೋರಣೆ ಮಡಿಕ್ಕೊಂಡಿತ್ತ ಪಶ್ಚಿಮ-ಪೂರ್ವ ಜರ್ಮನಿಗೊ ಒಂದಪ್ಪಲೆ ಎಡಿಗಾದರೆ, ಭಾರತ-ಪಾಕಿಸ್ತಾನ ಒಂದಪ್ಪಲೆ ಏಕೆ ಸಾಧ್ಯ ಇಲ್ಲೆ ?  ಹೀಂಗಾದರೆ, ನಮ್ಮ ಮಧ್ಯೆ  ಮೂಗು ತೂರಿಸಿ ಬೇಳೆ ಬೇಯಿಸಿಗೊಂಬ ಚೀನಾದ  ಸೀಂತ್ರಿ ಬುದ್ಧಿಗುದೇ ಕಡಿವಾಣ ಹಾಕ್ಲೆಡಿಗು. ಏನಿದ್ದರೂ ನಮ್ಮದು ರಕ್ತ ಸಂಬಂಧ, ಚೀನಾ ಮತ್ತು ಪಾಶ್ಚಾತ್ಯರು ನವಗೆ ಪರಕೀಯರು ಹೇಳುವ ಸತ್ಯವ ಎರಡೂ ದೇಶದ ಜನರಿಂಗೆ ಅರ್ಥ ಮಾಡಿಸುವ ರಾಜಕೀಯ ಮುತ್ಸದ್ದಿತನ ಬೇಕಪ್ಪದು.  ಭಾರತ-ಪಾಕಿಸ್ತಾನ ವಿಲೀನ ಆಗಿ, ಇಂದಿಸ್ತಾನದ ಉದಯ ಆದರೆ, ನಾವು ಜಗತ್ತಿನ ಅತಿ ದೊಡ್ಡ ಅರ್ಥವ್ಯವಸ್ಥೆಯಾಗಿ ಮುಂದೆ ಬಪ್ಪಲೆ ಹೆಚ್ಚು ಸಮಯ ಬೇಡ.

(ಇನ್ನೂ ಇದ್ದು...)

- ಬಾಪಿ / ೧೩.೦೮.೨೦೦೯

No comments: