ರಾಮಜ್ಜನ ಬಗ್ಗೆ ನೀನು ಕಳುಹಿಸಿದ ಲೇಖನ ಅದರ ಮರುದಿನ ರಂಗಮೂರ್ತಿಯ ಭಾಜಪದ ಸಭೆಯ ವರದಿಯ ಸುದ್ದಿ ಪತ್ರಿಕೆಲಿ ಓದಿದೆ. ನೀನು ಹೇಳಿದಾಂಗೆ ಎದುರು ನೋಟಕ್ಕೆ ರಾಮಜ್ಜನ ಮರುಳು ಹೇಳಿ ಕಂಡರೂ ರೆಜ್ಜ ಅಸಮಾಧಾನದ ಹೊಗೆ ಇಲ್ಲದ್ದೆ ಇಲ್ಲೆ ಹೇಳಿ ಎನ್ನ ಎಂಬೋಣ. ಶಕುಂತಲಾ ಶೆಟ್ಟಿ ಸರಿ ಮಾಡಿದ್ದೋ ಅಥವಾ ತಪ್ಪು ಮಾಡಿದ್ದೋ, ಭಾಜಪ ಎಲ್ಲರನ್ನೂ ಹೊಂದಿಸಿಗೊಂಡು ಹೋಪಲ್ಲಿ ಸೋತಿದು. ಇದು ಭಾಜಪಕ್ಕೆ ಒಂದು ಹೊಡೆತವೇ. ಇನ್ನು ನಳಿನ್ ಕುಮಾರ್ ಕಟೀಲ್ ಹೇಂಗೆ ಹೇಳಿ ಗೊಂತಿಲ್ಲೆ.
ಇಬ್ಬರ ಜಗಳಂದ ಪ್ರಜಾಪ್ರಭುತ್ವ, ಸಾಮಾಜಿಕ ಬೆಳವಣಿಗೆ ಹಿಂದೆ ಬೀಳ್ತಾ ಇದ್ದು. ಮನೆಯ ಸಮಸ್ಯೆಯನ್ನೇ ಬಗೆಹರುಸಲೆ ಕಷ್ಟ ಬಪ್ಪವು ಇನ್ನು ಯಾವಗ ಸಮಾಜದ ಬಗೆ ತಲೆಕೆಡಿಸಿಗೊಂಬಲೆ ಸಮಯ ಇದ್ದು? ಅಲ್ಲದ್ದೆ, ಗಾಂಧಿ ವಂಶ ಪಾರಂಪರ್ಯದ ಬಗ್ಗೆ ಮಾತಾಡಿಗೊಂಡಿದ್ದ ಯಡಿಯೂರಪ್ಪ ಅವನ ಮಗನ ಕಣಕ್ಕೆ ಇಳಿಸಿದ್ದು ಒಂದು ವಿಪರ್ಯಾಸ.
ಇಲ್ಲಿ ಆರು ಸರಿ ಆರು ತಪ್ಪು ?? ಎನಗಂತೂ ಅರ್ಥ ಆವ್ತಿಲ್ಲೆ.
ತಲೆಕೆಡಿಸಿಗೊಂಡರೆ ಸುಮ್ಮನೆ ತಲೆಬೆಶಿ ಆವ್ತು.
-ರಾಜಣ್ಣ
Subscribe to:
Post Comments (Atom)
No comments:
Post a Comment