Thursday, March 19, 2009

Re: politics vs business

ತತ್ವ,ನಿಷ್ಟೆ ಎನ್ನ ಲೆಕ್ಕಲ್ಲಿ ಮಾತೃಭೂಮಿಗೆ ಬಿಟ್ಟರೆ ರಾಜಕೀಯಕ್ಕೆ ಮಾತ್ರ ಅನ್ವಯಿಸಲಕ್ಕಷ್ಟೇ. ಅದೇ ವೃತ್ತಿಯ ಬಗ್ಗೆ ಮಾತನಾಡ್ತರೆ ವಯಕ್ತಿಕ ನಿಲುವು ಹಾಂಗೂ ಉದ್ದೇಶ ಹೆಚ್ಚಿಗೆ ಬತ್ತು. ಅದಕ್ಕೇ ಕೆಲಸದ ಜಾತಕಲ್ಲಿ career objective ಹೇಳಿ ಹಾಕುದು. ಇಲ್ಲಿ ತತ್ವದ ಅನ್ವಯ ಆವ್ತಿಲ್ಲೆ, ಕೇಳ್ತವೂ ಇಲ್ಲೆ.

ಜನಾರ್ಧನ ಸ್ವಾಮಿಯ ಬಗ್ಗೆ ಕೇಳಿದ್ದೆ. ನಿನಗೆ ನೆನಪಿದ್ದೋ ಇಲ್ಲೆಯೋ.. ಕಳುದ ಸರ್ತಿ ರವಿಕೃಷ್ಣಾ ರೆಡ್ಡಿ ಹೇಳುವ ಪರದೇಸಿ ಕನ್ನಡಿಗ ಜಯನಗರಲ್ಲಿ ಹೀಂಗೆಯೇ ಚುನಾವಣೆಗೆ ನಿಂತಿದ್ದಿದ್ದ. ಅವಂಗೆ ಕೇವಲ ೨೪೪ ಓಟು ಪಕ್ಷೇತರ ಆಗಿ ನಿಂದದಕ್ಕೆ ಸಿಕ್ಕಿತ್ತಿದ್ದು. ಈ ಸರ್ತಿ ಜನಾರ್ಧನ ಸ್ವಾಮಿ ಭಾಜಪಂದ ನಿಲ್ಲುವ ಕಾರಣ ಗೆಲ್ಲುವ ಸಾಧ್ಯತೆ ಇದ್ದು. ಆದರೆ ಗೆದ್ದ ಮತ್ತೆ ಈ ರಾಜಕೀಯದ ಚೋಳಿಲ್ಲಿ ಹೇಂಗೆ ಈಜುತ್ತಾ.., ಅದರ ಮತ್ತೆ ಅವ ಎಷ್ಟು ಪ್ರಭಾವಿ ಆವ್ತ ಹೇಳುವ ಕುತೂಹಲ ಎನಗಿದ್ದು. ಎಂತದೇ ಆದರೂ ಒಳ್ಳೆದಾಗಲಿ ಹೇಳಿ ಎನ್ನ ಹಾರೈಕೆ.

ರವಿಕೃಷ್ಣಾರೆಡ್ಡಿಯ ಬಗ್ಗೆ ಆಸಕ್ತಿ ಇದ್ದರೆ http://www.ravikrishnareddy.com/kannada.html

- ರಾಜಣ್ಣ

No comments: