Thursday, March 19, 2009

ತತ್ವ-ನಿಷ್ಠೆ

ತತ್ವ, ನಿಷ್ಠೆ ಸಮಾಜದ ಎಲ್ಲ ವರ್ಗಂಗೊಕ್ಕೂ ಸಮಾನವಾಗಿ ಅನ್ವಯಿಸೆಕ್ಕಾದ ವಿಷಯ ಹೇಳಿ ಎನ್ನ ನಂಬಿಕೆ. ಜೀವನದ ಮೌಲ್ಯಂಗೊ ಕಾಲ ಕ್ರಮೇಣ ಕಮ್ಮಿ ಆವುತ್ತಾ ಬಂದು ಎಂತ ಮಾಡಿರೂ ಆವುತ್ತು ಹೇಳುವ ಭಾವನೆ ಜನರಲ್ಲಿ ಬಂದು ಹೋಯಿದು. ಇದು ವಿಷಾದನೀಯವೇ ಸರಿ. ವಿಪ್ರೋ / ಇನ್ಫೋಸಿಸ್ ಇತ್ಯಾದಿಯವಕ್ಕೂ ಸತ್ಯಂ, ರಿಲಯೆನ್ಸ್ ಹಾಂಗಿಪ್ಪವಕ್ಕೂ ವ್ಯತ್ಯಾಸ ಇಲ್ಲೆಯೋ ? ಆದರೆ ತಪ್ಪು-ಸರಿಗಳ ವಿವೇಚನೆಯ ಕ್ರಮ ಸಾವಿರ ವರ್ಷ ಮೊದಲು ಹೇಂಗಿತ್ತೋ ಈಗಳೂ ಹಾಂಗೆಯೇ ಇದ್ದು. ಒಳ್ಳೆಯವು ಕೆಟ್ಟವರ ಸಂಖ್ಯೆ ಮತ್ತು ಪ್ರಮಾಣ ಹೆಚ್ಚು- ಕಮ್ಮಿ ಆಗಿಪ್ಪಲೂ ಸಾಕು.
ಗಮನಿಸೆಕ್ಕಾದ ಸಂಗತಿ ಎಂತ ಹೇಳಿರೆ, ಕಂಪೆನಿಗಳಲ್ಲಿ ಕೆಲಸಕ್ಕೆ ಸೇರುವಗ ತತ್ವ-ನಿಷ್ಠೆಯ ವಿಷಯ ಬಾಯಿ ಬಿಟ್ಟು ಕೇಳದ್ದೆ ಇಪ್ಪಲೂ ಸಾಕು. ಪ್ರತಿ ಹೊಸ ವ್ಯಕ್ತಿಯ ಕೆಲಸಕ್ಕೆ ತೆಕ್ಕೊಂಬಗಳೂ ಅವನ ಚರಿತ್ರೆಯ ಗುಪ್ತವಾಗಿ ವಿಚಾರಿಸುವ ಕ್ರಮ ಇದ್ದು - ಸತ್ಯಂನ ಹಾಂಗಿಪ್ಪ ಕಂಪೆನಿಗಳಲ್ಲಿಯೂ ! ಕಂಪೆನಿ ಹೇಳುವ ನಿರ್ಜೀವ ವಸ್ತುವಿನ ಅಸ್ತಿತ್ವ, ಪರಿಚಯ, ಬೆಳವಣಿಗೆ ಅಪ್ಪದು ಅದರ ಗುರಿ, ನಿರ್ದೇಶಕರ ಕ್ಷಮತೆ, ಕೆಲಸಗಾರರ ಶ್ರಮಂಗಳಿಂದ. ವಿಪ್ರೊ ಕಂಪೆನಿಲಿ ಯಾವುದೇ ಗೋಲು-ಮಾಲು ಮಾಡಿರೆ ಸಹಿಸುತ್ತಿಲ್ಲೆ ಹೇಳುವ ಧ್ಯೇಯ ವಾಕ್ಯ ಎಲ್ಲೊರಿಂಗೂ ಸ್ಪಷ್ಟವಾಗಿ ಗೊಂತಿಪ್ಪ ಕಾರಣ, ಅಲ್ಲಿ ಅತ್ಯಂತ ಹೆಚ್ಚಿನ ಪಾರದರ್ಶಕ ವ್ಯವಸ್ಥೆ ಇದ್ದು. ಅಲ್ಲದ್ದೆ, ಆ ಕಂಪೆನಿಗೆ ಹಾಗೂ ಪ್ರೇಮ್ ಜಿಗೆ ಸಮಾಜಲ್ಲಿ ಸ್ಥಾನ ಇದ್ದು. ಇಷ್ಟು ಗೌರವ ಅಂಬಾನಿಗೊಕ್ಕೆ ಇಲ್ಲೆ ಏಕೆ ?

ಎನ್ನ ದೊಂಡೆ ಒಣಗಿದ ಕಾರಣ, ಸದ್ಯಕ್ಕೆ ಎನ್ನ ವಾದ ನಿಲ್ಸುತ್ತೆ ! ಮತ್ತು ಹೆರಾಣ ಕೋಣೆಲಿ ಗುರಿಕ್ಕಾರನ ಹಾಂಗೆ ಕಾಲಿನ ಮೇಲೆ ಕಾಲು ಹಾಕಿ ಕೂದುಗೊಂಡು ದೊಡ್ಡಸ್ವರಲ್ಲಿ "ಒಂದು ಚಾಯ" ಹೇಳಿಕ್ಕಿ ಮೆಲ್ಲಂಗೆ ಒಳ ಹೋಗಿ ಆನೇ ಮಾಡಿ ಕುಡಿತ್ತೆ !
-ಬಾಪಿ

No comments: