Tuesday, March 17, 2009

ಸ್ವಾಭಿಮಾನಿಗಳ ಗೋಳು

ಒಂದು ಹಂತಂದ ಮುಂದೆ ಬೆಳೆಯೆಕ್ಕಾದರೆ, ಸಿದ್ಧಾಂತದ ಒಟ್ಟಿಂಗೆ, ಸದ್ಯದ ರಾಜಕಾರಣದೊಟ್ಟಿಂಗೆ ರಾಜಿ ಮಾಡಿಗೊಳ್ಳೆಕ್ಕಪ್ಪದು ಅವಶ್ಯ ಆವುತ್ತು.  ಭಾಜಪದ್ದುದೆ ಇದೇ ಸಮಸ್ಯೆ. ಪಕ್ಷಕ್ಕಾಗಿ ದುಡಿದ ಕಾರ್ಯಕರ್ತರು ಸಾಮಾಜಿಕವಾಗಿ ದೊಡ್ಡ ಜನ ಆಗಿ ಗೆಲ್ಲುವ ಅಭ್ಯರ್ಥಿಗಳಾಗಿ ಬೆಳೆವವರೆಗೆ ಕಾಯೆಕ್ಕಾದರೆ, ಶತಮಾನವೇ ಕಳೆದು ಹೋಕು.  ಅಥವಾ, ಇದು ಯಾವಾಗಂಗೂ ಸಾಧ್ಯ ಆಗದ್ದೇ ಇಪ್ಪಲೂ ಸಾಕು !  ಹಾಂಗಾಗಿ ಬೇರೆ ಪಕ್ಷಂಗಳಲ್ಲಿ ತಯಾರಾದ  ಗೆಲ್ಲುವ ಅಭ್ಯರ್ಥಿಗಳ ಆಮದು ಮಾಡಿಗೊಂಬದು ಅನಿವಾರ್ಯ ಆವುತ್ತು.  ಹೀಂಗೆ ಬಪ್ಪವರಲ್ಲಿ ಕೆಲವು ಅಸಭ್ಯರೂ, ತಲೆಹೋಕರೂ ಇಕ್ಕು. ಇಂತಹ ಸಂದರ್ಭಲ್ಲಿ ಮೊದಲಿಂದ ಪಕ್ಷಲ್ಲಿದ್ದವಕ್ಕೆ ತಮ್ಮ ಕಡೆಗಣಿಸಿದ್ದವು ಹೇಳಿ ಕಾಣ್ತು.  ಇದು ಸಹಜವಾದರೂ, ಆಢಳಿತ ಪಕ್ಷ ಆಯೆಕ್ಕಾದರೆ, ಇಂತಹ  ರಾಜಿಗೊಕ್ಕೆ ತಯಾರು ಬೇಕು.  ಇಲ್ಲದ್ದರೆ, ಕಮ್ಯೂನಿಷ್ಟರ ಹಾಂಗೆ ಸಾಮಾನ್ಯ ಮಟ್ಟಿನ ಫಲಿತಾಂಶ ಸಿಕ್ಕುಗಷ್ಟೆ.   ಜನಸಂಘವೇ ಎಷ್ಟೋ ವರ್ಷ  ಸಂಸತ್ತಿಲ್ಲಿ ಏಕವ್ಯಕ್ತಿ ಪ್ರತಿನಿಧಿತ್ವದ ಪಕ್ಷವಾಗಿ ಇತ್ತಿಲ್ಲೆಯೋ ?

ನಮ್ಮ ದೇಶ ಪ್ರಜಾಪ್ರಭುತ್ವ ಆದರುದೇ, ಆಢಳಿತ ಸುಸೂತ್ರವಾಗಿ ಮಾಡೆಕ್ಕಾದರೆ, ನಾಯಕನಾದವಂಗೆ  ಸರ್ವಾಧಿಕಾರ ಇದ್ದರೆ ಮಾಂತ್ರ ಸಾಧ್ಯ ಹೇಳುದು ಯಾವಾಗಲೋ ನಿರ್ಧಾರ ಆದ ಸಂಗತಿ.  ಇಂದಿರಾ ಗಾಂಧಿ, ಸೋನಿಯ ಗಾಂಧಿ ಹಾಂಗಿಪ್ಪವು ಇದರ ದುರುಪಯೋಗ ಮಾಡಿದವು, ಮೋದಿ ಮಾತ್ರ ಸದುಪಯೋಗ ಮಾಡಿಗೊಂಡ . ಯೆಡ್ಯೂರಪ್ಪಂಗೆ ವಿರೋಧ ಪಕ್ಷಲ್ಲಿಪ್ಪಗ ಹೋರಾಟ ಮಾಡಿ ತೋರಿಸಿದ ನಾಯಕತ್ವದ  ಗುಣಂಗಳ ಮುಖ್ಯಮಂತ್ರಿಯಾಗಿ ತೋರುಸುಲೆ ಎಡಿತ್ತಿಲ್ಲೆ ಹೇಳುದು ದಿನ ನಿತ್ಯದ ಗೊಂದಲಂಗಳಿಂದ ಗೊಂತಾವುತ್ತು.   ಮತ್ತೆ, ಗುಜರಾತಿನ ಪರಿಸ್ಥಿತಿಯೇ ಬೇರೆ, ಕರ್ನಾಟಕದ್ದೇ ಬೇರೆ.  ಮೋದಿಯ ಅನುಕರಣೆ ಮಾಡುವವು ಅವನಷ್ಟೇ ವರ್ಚಸ್ಸು, ಯೋಗ್ಯತೆ ತಮಗೂ ಇದ್ದು ಹೇಳಿ  ಮೊದಲು ಸಾಬೀತು ಮಾಡೆಕ್ಕು.   ಈ ಎಲ್ಲಾ ಅನಿಶ್ಚಿತತೆ, ಗೊಂದಲಂಗಳ ಹೊರತಾಗಿಯೂ, ಯೆಡ್ಯೂರಪ್ಪನ ಕೂರಿಸಿದ ಮೇಲೆ ಅವಂಗೆ ಆಢಳಿತದ ಸಂಪೂರ್ಣ ಸ್ವಾತಂತ್ರ್ಯ ಇರೆಕು.  ಇಲ್ಲದ್ರೆ, ಕೆಲಸ ಮಾಡುದಾದರೂ ಹೇಂಗೆ ಪ್ರತಿಯೊಂದಕ್ಕೂ ರಾಮಜ್ಜನ ಹಾಂಗೆ ನಿವೃತ್ತರಾಗಿ ಮನೆಲಿ ಕೂದುಗೊಂಡಿಪ್ಪವರ ತೃಪ್ತಿ ಪಡಿಸೆಕ್ಕು ಹೇಳಿರೆ ಕಷ್ಟದ ಕೆಲಸ.  ನಿಜ ಹೇಳ್ತರೆ, ಬೊಬ್ಬೆ ಹಾಕುವವರಲ್ಲಿ ಹೆಚ್ಚಿನವು ಎಪ್ಪತ್ತು ವರ್ಷ ದಾಂಟಿದ ಜವ್ವನಿಗರೇ !

ಅಂತೂ ಇಂದ್ರಾಣ ಪರಿಸ್ಥಿತಿಲಿ, ಅಧಿಕಾರಕ್ಕೆ ಬರೆಕ್ಕಾದರೆ ಒಂದೊಂದು ಸೀಟುದೇ ಮುಖ್ಯವಾದ ಕಾರಣ, ಗೆಲ್ಲುವ ಸಾಮರ್ಥ್ಯ ಇಪ್ಪ ಅಭ್ಯರ್ಥಿಗೇ ಖಾಯಸ್ಸು.  ಉಳಿದವು ಸುಮ್ಮನೆ ಕೂಪದೇ ನಿಃಸ್ವಾರ್ಥದ ಧೋರಣೆ.  ಹಾಂಗಾಗಿ, ರಾಮಜ್ಜ ವೃದ್ಧಾಪ್ಯಲ್ಲಿ ಮಾಡುವ ಈ ಕಾರುಬಾರು ಸ್ವಾರ್ಥದ ಕೆಲಸ ಹೇಳಿಯೇ ಹೇಳೆಕ್ಕಾವುತ್ತು.  ಶಕುಂತಲಾ ಶೆಟ್ಟಿಗೆ ಅನ್ಯಾಯ ಆಗಿಪ್ಪಲೂ ಸಾಕು. ಆದರೆ, ಇಡೀ ರಾಜ್ಯ ಅಥವಾ ದೇಶಕ್ಕಿಂತ ಒಬ್ಬ ವ್ಯಕ್ತಿಯೇ ಮುಖ್ಯ ಹೇಳುವ ನಮುನೆಯ  ಸ್ವಾಭಿಮಾನಂದ ಆರಿಂಗೂ ಪ್ರಯೊಜನ ಇಲ್ಲೆ.  ಇವು ಗೆಲ್ಲುಲೆ ಇಲ್ಲೆ ಹೇಳುದು ಮೊದಲೇ ಗೊಂತಿಪ್ಪ ವಿಷಯ.  ಹಾಂಗಾರೆಸ್ಪರ್ಧೆ ಮಾಡುದು ಪಕ್ಷದ ಅಭ್ಯರ್ಥಿಯ ಸೋಲುಸುವ  ಉದ್ದೇಶಂದ ಮಾತ್ರ  ಹೇಳುದು ಸ್ಪಷ್ಟ.  ಇದಕ್ಕಾಗಿಯೇ  ಪೆದಂಬು ಹೇಳುವ  ಶಬ್ದ ನಿಘಂಟಿಲ್ಲಿ   ಸೇರಿ ಗೊಂಡದು  ! ಹಿಂದುಗಳಲ್ಲಿಪ್ಪ ಈ ರೀತಿಯ ವಿಭಜನಾತ್ಮಕಆತ್ಮಘಾತಕ ಮತ್ತು ವಿವೇಚನಾಹೀನ ನಡವಳಿಕೆಯೇ ಇಂದು ಮುಸ್ಲಿಮರು ಇಷ್ಟು ಬಾಲ ಬಿಚ್ಚುಲೆ ಕಾರಣ.    ರಾಮಜ್ಜನ ನಿಷ್ಕಳಂಕ ಸಾರ್ವಜನಿಕ ಜೀವನದ  ಕೊನೆ ಹಂತಲ್ಲಿ ಹೀಂಗಿಪ್ಪ ನಿರ್ಧಾರದ ಅಗತ್ಯ ಇತ್ತಿಲ್ಲೆ ಹೇಳುವ ಅಭಿಪ್ರಾಯ ಹೊಂದಿಪ್ಪ ಸುಮಾರು ಜನರಲ್ಲಿ ಆನುದೇ ಒಬ್ಬ.       

-ಬಾಪಿ 

No comments: