Saturday, March 28, 2009

ಜಾಗೋರೇ..

೬೦ ವರ್ಷಗಳಿಂದ ಸ್ವತಂತ್ರ ದೇಶವಾಗಿದ್ದುಕೊಂಡು ತನ್ನ ದೇಶದ ಪ್ರಜೆಗಳ ಒಂದು ಪಟ್ಟಿಯಾಗಲೀ, ಪ್ರಜೆಗೊಕ್ಕೆ ಒಂದು ಖಾಯಂ ಗುರುತಿನ ಚೀಟಿಯಾಗಲೀ ಇಲ್ಲದ್ದಿಪ್ಪ ಅಸಹ್ಯ,ಅನಾಗರಿಕ, ದಗಲ್ ಬಾಜಿ ಪ್ರಜಾಪ್ರಭುತ್ವಕ್ಕೆ ಭಾರತ ಹೇಳಿ ಹೆಸರು.  ತಲೆತಲಾಂತರಂದ ಈ ದೇಶಲ್ಲಿಪ್ಪವಕ್ಕೆ  ಸಾವಿರ ಬಗೆಯ,  ವಾಕರಿಕೆ ಬಪ್ಪಷ್ಟು ಕೊಳಕ್ಕು ಸರಕಾರಿ ಅರ್ಜಿ  ನಮೂನೆಗಳ ಭರ್ತಿ ಮಾಡಿದರೂ ವರ್ಷಗಟ್ಳೆ ಮತದಾರರ ಪಟ್ಟಿಲಿ ಹೆಸರು ಸೇರಿಸಿಗೊಂಬಲೆ ಎಡಿಯದ್ದೆ ಒದ್ದಾಡುವ ಪರಿಸ್ಥಿತಿ ಇದ್ದರೆ, ನಡುರಾತ್ರೆ ಬಾಂಗ್ಲಾದೇಶಂದ ಬೇಲಿನುಸುಳಿ ಬಂದವಕ್ಕೆ ಅವು ಮರುದಿನ ಉದಿಯಪ್ಪಗ ಎದ್ದು ಚಾಯ ಕುಡಿವಂದ ಮೊದಲೇ ಅವಿಪ್ಪ  ಕೊಳಚೆಪ್ರದೇಶಕ್ಕೆ  ಹುಡುಕ್ಕಿಗೊಂಡು ಹೋಗಿ ಮತದಾರರ ಗುರುತಿನ ಚೀಟಿ, ಪಡಿತರ ಚೀಟಿ ಇತ್ಯಾದಿ ಸಕಲ ಸವಲತ್ತುಗಳನ್ನೂ   ಕೊಡುದಲ್ಲದ್ದೆ, ಕಾಲು ಹಿಡುದು ನಮಸ್ಕಾರ ಮಾಡಿ ಅಲ್ಲಾಹುವಿನ ಆಶೀರ್ವಾದಕ್ಕೆ ಪಾತ್ರರಪ್ಪ  ಅಸಾಮಾನ್ಯ ಸಾಮಾಜಿಕ ಸೇವೆಯ ದೃಶ್ಯ ಭಾರತ ಬಿಟ್ಟು ಬೇರೆಲ್ಲಿ ನೋಡ್ಳೆ ಸಿಕ್ಕುಗು ?  ಇಂತ ಸೇವೆಯ ಸ್ವೀಕರಿಸುವ  ಬಾಂಗ್ಲಾದೇಶೀ ಅಕ್ರಮ ವಲಸಿಗರು  ಅದೆಂತ ಪುಣ್ಯ ಮಾಡಿರೆಕು !

ಹೀಂಗೆ ನುಸುಳಿ ಬಂದ "ನಿವಾಸಿ ಅ-ಭಾರತೀಯ"ರ ಸಂಖ್ಯೆ  ಈಗಾಗಲೇ ೨ ಕೋಟಿಯಷ್ಟಕ್ಕಡ.  ಗುಂಪಿನಲ್ಲಿ ಗೋವಿಂದ ಹೇಳಿ ನಮ್ಮೊಳಗೊಂದಾದ ಇವು ನಮ್ಮ ವ್ಯವಸ್ಥೆ ಮೇಲೆ ಎಷ್ಟು ಹೊರೆ ಹೇಳುದರ ವಿವರಿಸುದು ಕಷ್ಟ.  ಯಾವುದೇ ವಿದ್ಯಾಭ್ಯಾಸ, ಅರ್ಹತೆ  ಇಲ್ಲದ್ದ ಇವರ ಕೊಡುಗೆ ಆದರೂ ಎಂತದು ?   ಅಂದಂದಿನ ಊಟಕ್ಕೇ ಗತಿ ಇಲ್ಲದ್ದಿಪ್ಪಗ, ಒಂದು ಸಣ್ಣ ಆಮಿಷ ತೋರಿಸಿದರೂ ಭೂಗತದೊರೆಗಳ ಅಥವಾ ಭಯೋತ್ಪಾದಕರ ಸಹವರ್ತಿಗಳಾಗಿ ಸೇರಿಗೊಂಬಲೆ ಒಪ್ಪಿಗೊಂಗು.   "ಬಡವರಾದ ಮುಸ್ಲಿಮರು"  ಹೇಳುವ ಇವರ ಪರಿಚಯವೇ ಒಂದು ಸ್ಪೋಟಕ ವಸ್ತುವಿನ ಹಾಂಗೆ ಕಾಣ್ತು.  ಇನ್ನು,  ಈ ಕಾಟು ಕಾಂಗ್ರೆಸ್ ಮತ್ತು ಕಮ್ಯುನಿಷ್ಟರು  ಇಪ್ಪಲ್ಲಿ ವರೆಗೆ ಹೀಂಗಿಪ್ಪವರ ದೇಶಂದ ಹೆರಹಾಕುದು ಅಸಾಧ್ಯ.

ಭಾರತೀಯ ಪ್ರಜೆಗೊಕ್ಕೆಲ್ಲಾ  ಖಾಯಂ ಗುರುತಿನ ಚೀಟಿ ಮತ್ತು ಬೇಲಿ ನುಗ್ಗಿ ಬಪ್ಪವರ  ಮೇಲೆ ಕಠಿಣ ಕ್ರಮಂಗಳ ಬಗ್ಗೆ ಅಡ್ವಾಣಿ  ಹೇಳಿಕೆ ಕೊಟ್ಟದು ಸ್ವಾಗತಾರ್ಹ. ನಮ್ಮ ನಿರ್ಧಾರಂಗೊ ಯಾವತ್ತೂ ನಿರ್ಣಾಯಕವಾಗಿರಲಿ.  ಯಾವುದೋ ಇಟಲಿ ದೇಶಲ್ಲಿ ತಿಂಬಲೆ ಗತಿ ಇಲ್ಲದ್ದೆ  ತಿರಿಗಿಗೊಂಡಿದ್ದು   ಇಲ್ಲಿಗೆ ಬಂದು ಅನಿರೀಕ್ಷಿತವಾಗಿ ದೊಡ್ಡ ರಾಣಿಯಾದ ವ್ಯಕ್ತಿಯ ಸೂತ್ರದ ಗೊಂಬೆಗಳ ಹಾಂಗೆ ವ್ಯವಹರಿಸುವ ಸ್ವಾಭಿಮಾನ-ಶೂನ್ಯ ಕಾಂಗ್ರೆಸಿಗರಿಂದ ಎಂತ ಅಪೇಕ್ಷೆ ಮಾಡ್ಳೆಡಿಗು ? ಇವು ೬೦ ವರ್ಷ ಮಾಡಿದ ಅನಾಹುತ ಸಾಕು.  ಜಾಗೋರೇ ಇಂಡಿಯಾ !!
-ಬಾಪಿ

No comments: