Wednesday, March 18, 2009

politics vs business

ರಾಜಕೀಯದವಕ್ಕೆ ಕಂಪೆನಿಲಿ ಕೊಡುವ ಹಾಂಗೇ ಒಳ್ಳೆ ಸಂಬಳ ಕೊಟ್ಟು ಉತ್ತರದಾಯಿತ್ವ ಬಪ್ಪ ಹಾಂಗೆ ಮಾಡಿರೆ, ಸುಮಾರು ಸಮಸ್ಯೆಗೊಕ್ಕೆ ಪರಿಹಾರ ಸಿಕ್ಕುಗು. ಚುನಾವಣೆಯ ಖಡ್ಡಾಯವಾಗಿ ಸಂಪೂರ್ಣ ಸರಕಾರಿ ಖರ್ಚಿಲ್ಲಿಯೇ ನಡೆಶೆಕ್ಕು. ಅಂಬಗ, ಲಂಚ ತಿಂಬದು ತನ್ನಷ್ಟಕ್ಕೇ ಕಮ್ಮಿ ಅಕ್ಕು. ರಾಜಕೀಯವ ವೃತ್ತಿಪರ ದೃಷ್ಟಿಂದ ನೋಡಿದವರಲ್ಲಿ ಚಂದ್ರಬಾಬು ನಾಯ್ಡು ಮೊತ್ತ ಮೊದಲನೆಯವ. ಸದ್ಯಕ್ಕೆ, ಮೋದಿ ಎಲ್ಲೋರಿಂದಲೂ ಮುಂದೆ ಇದ್ದ. ಕ್ರಮೇಣ, ಎಲ್ಲ ರಾಜಕಾರಣಿಗಳ ವರ್ತನೆಯೂ ಇದೇ ರೀತಿ ಬದಲಕ್ಕು ಹೇಳಿ ಎನ್ನ ನಂಬಿಕೆ. ತತ್ವ ಮತ್ತು ನಿಷ್ಠೆಯ ವಿಷಯ ರಾಜಕೀಯದವಕ್ಕೆ ಅನ್ವಯ ಅಪ್ಪಷ್ಟೇ ಕಂಪೆನಿಗೊಕ್ಕೂ ಆವುತ್ತು - ಏಕೆ ಹೇಳಿರೆ, ಎರಡು ವೃತ್ತಿಯವಕ್ಕೂ "ಸಮಾಜ ಸೇವೆ"ಯ ಗುರಿ ಇದ್ದು.

ಅಮೇರಿಕಲ್ಲಿತ್ತ ಜನಾರ್ದನ ಸ್ವಾಮಿ ಹೇಳುವವ ಸಾವಿರಾರು ಡಾಲರು ಸಂಪಾದನೆಯ ಕೆಲಸ ಬಿಟ್ಟು ಬಂದು ಇಲ್ಲಿ ರಾಜಕೀಯಕ್ಕೆ ಸೇರಿ ಚಿತ್ರದುರ್ಗಂದ ಭಾಜಪ ಪರವಾಗಿ ಚುನಾವಣೆಗೆ ಸ್ಪರ್ಧಿಸುತ್ತಾ ಇದ್ದ. ಹೀಂಗಿಪ್ಪವರ ಸಂಖ್ಯೆ ಹೆಚ್ಚಾಗಲಿ. ನಾವೆಲ್ಲ ಮಾತಾಡ್ಳಕ್ಕಷ್ಟೆ, ಕಾರ್ಯಲ್ಲಿ ಸೊನ್ನೆ !
ಬಾಪಿ

1 comment:

ದಿವ್ಯಾ said...

bhOjanakaalalli raajakeeya maathadudara ottinge, Baapiya sangeetha suruLigaLannoo, RaajaNNErna patangaLannoo haaki !

-Divya