Tuesday, March 17, 2009

ಉ: ಸ್ವಾಭಿಮಾನಿಗಳ ಗೋಳು

ಅಪ್ಪಚ್ಚಿ,

ನೀನು ಬರದ ಈ ನೀತಿಯ ಓದುವಾಗ ನೇರವಾಗಿ ಸಂಬಂಧಿಸಲಾಗದ್ರೂ ’ದರೋಡೆ ಮಾಡಿ ಶ್ರೀಮಂತ ಆಗು’ ಹೇಳಿದ ಹಾಂಗೆ ಆತು. ಊರಿಲ್ಲಿ ಭಾಜಪ ಗೆಲ್ಲುಲೆ ಇನ್ನೊಂದು ಕಾರಣ ಕಾಂಗ್ರೆಸ್ಸಿನವರ ಒಳಜಗಳ. ಕಳುದ ಸರ್ತಿ ಪ್ರಸಾದ ಭಂಡಾರಿಯ ಹೆಂಡತ್ತಿ ಅದು ಮಾಡಿದ ಪೂರ್ವ ಕೆಲಸಂದ ಅಂತೂ ಗೆದ್ದಿದಿಲ್ಲೆ. ಪ್ರಸಾದ ಭಂಡಾರಿಯ ಪ್ರಭಾವ, ಭಾಜಪ , ಕಾಂಗ್ರೆಸ್ಸಿಗರ ಹಳೆಜಗಳ - ಇದರಿಂದ ಗೆದ್ದತ್ತಷ್ಟೇ. ಇನ್ನು ಶಕುಂತಲಾ ಶೆಟ್ಟಿಯ ವಿಷಯ ಹೇಳ್ತರೆ, ರೆಜ್ಜ ಆದರೂ ಕ್ಷೇತ್ರಕ್ಕೆ ಕೆಲಸ ಮಾಡಿದ್ದು. (ಡಿವಿಯ ಸುದ್ದಿ ಬಿಡುವ). ಆದ ಕಾರಣ ರಾಮಜ್ಜ ಅದರ ಹಿಂದೆ ನಿಂದದಾಯ್ಕು ಹೇಳಿ ಎನ್ನ ಅಂಬೋಣ.

ವಿಷಯ ಎಂತದೇ ಇರಲಿ, ಆರು ಸರಿಯೋ ತಪ್ಪೋ, ನೇರವಾಗಿ ಮಾತನಾಡದ್ದೆ ಅವರ ಇವರ ಪತ್ರಿಕೆಲಿ ಮಾತನಾಡಿ ಹಳಸಿ ವಾಸನೆ ಬಪ್ಪ ಪದ್ದತಿ ಸರಿ ಅಲ್ಲ. ದೊಡ್ಡಣ್ಣನ ಹಾಂಗೆ ಭಾಜಪ ವರ್ತುಸೆಕು. ನಳಿನ್ ಕುಮಾರ್ ನ ಆಯ್ಕೆ ಮಾಡುವಾಗ ಈ ಸ್ವಾಭಿಮಾನಿಗಳ ಆಹ್ವಾನಿಸಿ ಮಾತನಾಡಿ ಒಂದು ಸಮ್ಮತಲ್ಲಿ ನಿರ್ಣಯಕ್ಕೆ ಬರೆಕಿತ್ತು. ಈಗಳೂ ಕಾಲ ಮಿಂಚಿದ್ದಿಲ್ಲೆ. ಒಂದು ವಿಷಯವ ದೊಡ್ಡ ಗಾತ್ರಲ್ಲಿ ನೋಡಿದರೆ ಇದೆಲ್ಲ ಕ್ಷುಲ್ಲಕ ಹೇಳಿ ಕಾಣ್ತು ಎನಗೆ.

ರಾಜಣ್ಣ

No comments: